ತಂದೆ-ತಾಯಿ ದೇವರು ಕೊಟ್ಟ ವರ


Team Udayavani, Mar 16, 2021, 4:10 PM IST

parents

ಅಮ್ಮ ಮಗುವನ್ನು ಒಂಬತ್ತು ತಿಂಗಳು ತನ್ನ ಗರ್ಭದಲ್ಲಿರಿಸಿ,ತನ್ನ ಕಂದಮ್ಮನಿಗೆ ಏನೂ ತೊಂದರೆಯಾಗದಂತೆ ನೋಡಿಕೊಳ್ಳುವಳು.

ಅದೇ ಗರ್ಭದಲ್ಲಿರುವ ಮಗುವಿಗೆ ಉಸಿರಾಗಿರುವ ಅಪ್ಪ ನಿಜಕ್ಕೂ ಗ್ರೇಟ್‌! ಅಮ್ಮ ಕೇವಲ ತನ್ನ ಗರ್ಭದಲ್ಲಿರುವ ಮಗುವಿಗಾಗಿ ಕಷ್ಟ-ನೋವುಗಳನ್ನು ಸಹಿಸಿಕೊಂಡರೆ, ಅಪ್ಪ ತನ್ನ ಹೆಂಡತಿಯನ್ನು,ಗರ್ಭದಲ್ಲಿರುವ ಮಗುವಿನ ಕ್ಷೇಮವನ್ನೂ ಎಚ್ಚರದಿಂದ ನೋಡಿಕೊಳ್ಳುವನು ಅನ್ನೋದು ಸತ್ಯ. ಅಪ್ಪ ತನ್ನ ಮಗುವಿಗಾಗಿ ತನ್ನ ಜೀವನವನ್ನೇ ಮುಡಿಪಾಗಿಟ್ಟಿರುತ್ತಾನೆ. ತನ್ನ ಆಸೆ-ಕನಸುಗಳನ್ನೆಲ್ಲ ಬದಿಗೊತ್ತಿ ತನ್ನ ಆಸೆಗಳನ್ನು ಮಗುವಿಗೆ ನೀಡುತ್ತಾನೆ.

ಅಮ್ಮ ತನ್ನ ಮಗುವನ್ನು ಕಂಕುಳಲ್ಲಿ ಹೊತ್ತು ಊರನ್ನು ತೋರಿಸುವಳು. ಆದರೆ ಅಪ್ಪ ತನ್ನ ಹೆಗಲ ಮೇಲೆ ಹೊತ್ತುಕೊಂಡು ಇಡೀ ಊರನ್ನು ತೋರಿಸುವನು.ಇವರಿಬ್ಬರ ನಡುವೆ ವ್ಯತ್ಯಾಸವೇನೆಂದರೆ ಅಮ್ಮ ತೋರಿಸೋದು ಕೇವಲ ಊರಿನ ಅಂಗಡಿಗಳು, ಜನರನ್ನು. ಆದರೆ ಅಪ್ಪ ತಾನು ಸೇವಕನಂತೆ ನೀನು ರಾಜನಂತೆ ಯಾವಾಗಲೂ ಊರನ್ನು ಅಂಬಾರಿಯಲ್ಲೇ ನೋಡಬೇಕು ಅನ್ನೋ ಆಸೆ ಅಪ್ಪನದ್ದು! ಇಷ್ಟೊಂದು ಅಪ್ಪನ ಬಗ್ಗೆ ಯಾಕಾಗಿ ಹೇಳುತ್ತಿದ್ದೇನೆಂದರೆ, ಇತ್ತೀಚಿನ ದಿನಗಳಲ್ಲಿ ಅಪ್ಪ-ಮಕ್ಕಳ ಪ್ರೀತಿ ದೂರವಾಗುತ್ತಿರುವುದು. ಅಪ್ಪ ತನ್ನ ಮಗುವನ್ನು ಹೆಗಲ ಮೇಲೆ ಹೊತ್ತು ಆಡಿಸದಿದ್ದರೂ ತನ್ನ ಮಗುವಿನ ಬಗ್ಗೆ ಕಾಳಜಿ ವಹಿಸುತ್ತಿರುವುದು ಕಡಿಮೆಯಾಗುತ್ತಿದೆ.

ತಂದೆ-ಮಗನ ಸಂಬಂಧದಲ್ಲಿ ಬಿರುಕು ಕಾಣಿಸಿಕೊಳ್ಳಲು ಬಾಲ್ಯದಲ್ಲಿ ಮಗನನ್ನು ತಂದೆ ಹೇಗೆ ರೂಪಿಸಿದ್ದ್ದದಾನೆ ಎನ್ನುವುದು ಮುಖ್ಯ ಕಾರಣವಾಗುತ್ತದೆ. ವಯಸ್ಸಿಗೆ ಬಂದ ಮಗ ಎದುರಾಡುತ್ತಾನೆಂದರೆ ಅವನಿಗೆ ಬಾಲ್ಯದಲ್ಲಿ ಸರಿಯಾದ ಮಾರ್ಗದರ್ಶನ ದೊರೆತಿಲ್ಲ ಎಂದರ್ಥ. ಪುತ್ರನ ಬೆಳವಣಿಗೆಯ ಪ್ರತಿಯೊಂದು ಹಂತದಲ್ಲಿ, ಅವನಲ್ಲಿ ಪ್ರೀತಿ-ವಿಶ್ವಾಸ, ಹಿರಿಯರ ಬಗ್ಗೆ ಗೌರವ ಮುಂತಾದ ಗುಣಗಳನ್ನು ಬೆಳೆಸುವ ಜವಾಬ್ದಾರಿ ತಂದೆಯದ್ದು.

ಅನೇಕ ತಂದೆಯಂದಿರು ತಮ್ಮ ಕೆಲಸದ ಒತ್ತಡಗಳಿಂದಾಗಿ ಮಗನೊಂದಿಗೆ ಸಂವಹನವನ್ನು ಬೆಳೆಸಿಕೊಳ್ಳುವುದಿಲ್ಲ. ಆಗ ತಂದೆಯಿಂದ ಮಗ ಭಾವನಾತ್ಮಕವಾಗಿ ದೂರಾಗುತ್ತಾನೆ. ಹೀಗಾಗದಂತೆ ನೋಡಿಕೊಳ್ಳಲು ತಂದೆಯಾದವನು ಮುಂಚಿನಿಂದಲೇ ಪ್ರಯತ್ನಿಸಬೇಕು. ತನ್ನ ಕೆಲಸ-ಕಾರ್ಯಗಳ ಮಧ್ಯೆಯೂ ಮಗನಿಗಾಗಿ ಕೆಲವು ನಿಮಿಷಗಳನ್ನು ಮೀಸಲಿಡಬೇಕು. ಇಂತಹ ಸಂವಹನದಿಂದ ಪರಸ್ಪರ ತಿಳಿವಳಿಕೆ ಹೆಚ್ಚುತ್ತದೆ.

ಕೆಲವು ಶ್ರೀಮಂತ ತಂದೆಯಂದಿರು ಮಗನ ಮೇಲಿನ ಅತಿಯಾದ ಪ್ರೀತಿಯಿಂದ ರಕ್ಷಿತ ವಾತಾವರಣದಲ್ಲಿ ಮಗನನ್ನು ಬೆಳೆಸುತ್ತಾರೆ. ಆದರೆ ಆ ಮಗುವಿಗೆ ಮುಂದೆ ಆತ್ಮವಿಶ್ವಾಸ ಬೆಳೆಸಿಕೊಳ್ಳುವುದು ತುಂಬಾನೇ ಕಷ್ಟ ಅವರನ್ನ ಮುದ್ದು ಮಾಡಿ ಸಾಕಿದರೆ ಸಾಲದು ಒಳ್ಳೆಯ ಬುದ್ದಿ, ನಡೆನುಡಿ, ಒಳ್ಳೆಯ ಗುಣಗಳನ್ನು ಕಲಿಸಬೇಕು.


-ಸದಾಶಿವ ಬಿ. ಎನ್‌., ಎಂ.ಜಿ.ಎಂ. ಕಾಲೇಜು ಉಡುಪಿ

ಟಾಪ್ ನ್ಯೂಸ್

1-eewqeqwe

Constitution ಬದಲಿಸಲು ಕಾಂಗ್ರೆಸ್‌ಗೆ ಅವಕಾಶ ಕೊಡಲ್ಲ: ಪಿಎಂ ಮೋದಿ

1-sahil

Betting app case: ಬಂಧನ ಮುನ್ನ ಹುಬ್ಬಳ್ಳಿಗೆ ಬಂದಿದ್ಧ ನಟ ಸಾಹಿಲ್‌!

BJP Symbol

OBC ಮೀಸಲು ರದ್ದು ಮಾಡಲು ಕಾಂಗ್ರೆಸ್‌ ಯತ್ನ: ಬಿಜೆಪಿ ಪ್ರತಿಭಟನೆ

Khalisthan

Canada ಪಿಎಂ ಟ್ರಾಡೋ ಆಗಮನಕ್ಕೆ ಖಲಿಸ್ಥಾನಿ ಘೋಷಣೆಗಳ ಸ್ವಾಗತ!

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು

Ullal: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆಗೆ ಶರಣು

Ullal: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆಗೆ ಶರಣು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-rishab-pant

Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್‌ ಪಂತ್‌

17-amrutheshwara

Amruthapura: ಅಮೃತಪುರವೆಂಬ ಅದ್ಭುತ ತಾಣ

16-summer-palace-1

Summer Palace: ಷಾಹಿ ಸುಲ್ತಾನರ ಬೇಸಗೆ ಅರಮನೆ

18-

UV Fusion: ತೇರು ಬೀದಿಗೆ ಬಂದಿದೆ

15

UV Fusion: ಜೀವನವನ್ನು ಪ್ರೀತಿಸೋಣ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-eewqeqwe

Constitution ಬದಲಿಸಲು ಕಾಂಗ್ರೆಸ್‌ಗೆ ಅವಕಾಶ ಕೊಡಲ್ಲ: ಪಿಎಂ ಮೋದಿ

1-sahil

Betting app case: ಬಂಧನ ಮುನ್ನ ಹುಬ್ಬಳ್ಳಿಗೆ ಬಂದಿದ್ಧ ನಟ ಸಾಹಿಲ್‌!

BJP Symbol

OBC ಮೀಸಲು ರದ್ದು ಮಾಡಲು ಕಾಂಗ್ರೆಸ್‌ ಯತ್ನ: ಬಿಜೆಪಿ ಪ್ರತಿಭಟನೆ

Khalisthan

Canada ಪಿಎಂ ಟ್ರಾಡೋ ಆಗಮನಕ್ಕೆ ಖಲಿಸ್ಥಾನಿ ಘೋಷಣೆಗಳ ಸ್ವಾಗತ!

bjp-congress

E.C.ನೋಟಿಸ್‌ಗೆ ಉತ್ತರಿಸಲು ಸಮಯ ಕೇಳಿದ ಬಿಜೆಪಿ, ಕಾಂಗ್ರೆಸ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.