ಪಣಂಬೂರು: ಕೇರಳ ನೋಂದಣಿಯ ಮೀನುಗಾರಿಕಾ ದೋಣಿಗೆ ಹಡಗು ಡಿಕ್ಕಿ: ಮೂವರು ಸಾವು, 9 ಮಂದಿ ನಾಪತ್ತೆ
Team Udayavani, Apr 14, 2021, 7:26 PM IST
ಪಣಂಬೂರು : ನವಮಂಗಳೂರು ಬಂದರಿನಿಂದ 43 ನಾಟಿಕಲ್ ಮೈಲ್ ದೂರ ಸಮುದ್ರದಲ್ಲಿ ಎ.13ರಂದು ನಸುಕಿನ ವೇಳೆ ನಡೆದ ದೊಡ್ಡ ದುರಂತವೊಂದರಲ್ಲಿ ನವೀ ಮುಂಬೈ ಕಡೆಗೆ ಕಂಟೈನರ್ ಸಾಗಾಟ ನಡೆಸುತ್ತಿದ್ದ ಸಿಂಗಾಪುರ ಧ್ವಜ ಹೊಂದಿದ ಹಡಗೊಂದು ಕೇರಳ ನೋಂದಣಿ ಹೊಂದಿದ್ದ ಮೀನುಗಾರಿಕಾ ದೋಣಿಗೆ ಢಿಕ್ಕಿ ಹೊಡೆದ ಪರಿಣಾಮ ಮೂವರು ಸಾವನ್ನಪ್ಪಿ, 9 ಮಂದಿ ಮೀನುಗಾರರು ನಾಪತ್ತೆಯಾಗಿದ್ದಾರೆ.
ಪಶ್ಚಿಮ ಬಂಗಾಳ ಮೂಲದ ಸುನಿಲ್ ದಾಸ್ ಮತ್ತು ತಮಿಳ್ನಾಡಿನ ವೆಲು ಮುರುಗನ್ ರಾಮಲಿಂಗನ್ ಎಂಬವರನ್ನು ರಕ್ಷಿಸಲಾಗಿದೆ. ಮೃತರಲ್ಲಿ ಪೈಕಿ ಮಾಣಿಕ್ಯದಾಸ್ ಮತ್ತು ಅಲೆಗ್ಸಾಂಡರ್ ಎಂಬವರ ಗುರುತು ಹಿಡಿಯಲಾಗಿದ್ದು,ಇನ್ನೋರ್ವನ ಗುರುತು ಪತ್ತೆಯಾಗಿಲ್ಲ.
ತಮಿಳುನಾಡಿನ ರಾಮನಾಥಪುರದ ಪಳನಿ, ಪಾಲಮುರುಗನ್, ಮಾಣಿಕ್ಯವೇಣು, ಪಶ್ಚಿಮ ಬಂಗಾಳದ ತೆಂನ್ಸನ್ ಎಂದು ತಿಳಿದು ಬಂದಿದ್ದು ಉಳಿದವರ ಮಾಹಿತಿ ಕಲೆ ಹಾಕಲಾಗುತ್ತಿದೆ.
ರಭಾ ಹೆಸರಿನ ಮೀನುಗಾರಿಕಾ ಬೋಟ್ ಕೇರಳದ ಕೋಝಿಕೋಡ್ ಜಿಲ್ಲೆಯ ಬೇಪೋರ್ ಬಂದರಿನಿಂದಎ.11ರಂದು ಆಳ ಸಮುದ್ರ ಮೀನುಗಾರಿಕೆಗೆ ಹೊರಟಿತ್ತು. ಇದರಲ್ಲಿ ತಮಿಳುನಾಡು ಮತ್ತು ಬಂಗಾಳ ಮೂಲದ ಕಾರ್ಮಿಕರಿದ್ದರು.
ಇದನ್ನೂ ಓದಿ :ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಮಳೆಯಿಂದ ಜನಜೀವನ ಅಸ್ತವ್ಯಸ್ತ: ಸಿಡಿಲು ಬಡಿದು ಮಹಿಳೆ ಸಾವು
ಘಟನೆ ಮಾಹಿತಿ ಪಡೆದ ತಕ್ಷಣ ಇಂಡಿಯನ್ ಕೋಸ್ಟ್ ಗಾರ್ಡ್ ತನ್ನ ಪಡೆಗಳನ್ನು ಕಾರ್ಯಾಚರಣೆಗೆ ಇಳಿಸಿದ್ದು,ನೌಕಾ ಪಡೆಯ ತಿಲ್ಲಂಗ್ಚಾಂಗ್, ಕಲ್ಪೆನಿ ಹಡುಗಳು, ಸುಭದ್ರಾ ಹಡಗುಗಳೊಂದಿಗೆ ತಜ್ಞ ಮುಳುಗಾರರು, ಡಾನ್ಛ್ಯರ್ ವಿಮಾನವನ್ನು ಶೋಧಕ್ಕಾಗಿ ದುರಂತಕ್ಕೀಡಾದ ಪ್ರದೇಶಕ್ಕೆ ಕಳಿಸಿತ್ತು. ನಾಪತ್ತೆಯಾದವರಿಗಾಗಿ ಶೋಧ ಕಾರ್ಯ ಮುಂದುವರೆಸಲಾಗಿದೆ.
ಕರಾವಳಿ ಕಾವಲು ಪಡೆಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ತನಿಖೆ ನಡೆಯುತ್ತಿದೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
IPL 2024; ಲಕ್ನೋ, ಹೈದ್ರಾಬಾದ್ ಸೆಣಸು; ಗೆಲ್ಲುವ ತಂಡಕ್ಕೆ ಪ್ಲೇಆಫ್ ಸ್ಥಾನ ಬಹುತೇಕ ಖಚಿತ
ಜಾನುವಾರುಗಳಿಗೆ ಮೇವು; ಹಸುರು ಹುಲ್ಲಿನ ಬದಲು ತರಕಾರಿ ಸಿಪ್ಪೆ ಬಳಕೆ
ಅನಿರೀಕ್ಷಿತ ಯಶಸ್ಸು..ಅನಿರೀಕ್ಷಿತ ಪ್ರಗತಿ… ಅನಿರೀಕ್ಷಿತ ಧನಪ್ರಾಪ್ತಿ
ಯಳಬೇರು: ಮರವೇರಿದ ಮೊಬೈಲ್!ಮರದ ಎತ್ತರದಲ್ಲಿ ನೆಟ್ವರ್ಕ್ ಸಂಪರ್ಕ; ಅಲ್ಲಿಂದ ಹಾಟ್ಸ್ಪಾಟ್
Madikeri: ಅತ್ಯಾಚಾರಿಗೆ ಕಠಿಣ ಸಜೆ