20 ಬೆಡ್ ಆಕ್ಸಿಜನೇಟೆಡ್ ಆಸ್ಪತ್ರೆ ನಾಳೆ ಉದ್ಘಾಟನೆ
Team Udayavani, May 29, 2021, 9:14 PM IST
ಹುಣಸೂರು: ಕೋವಿಡ್ ಕೇರ್ ಸೆಂಟರ್ನಲ್ಲಿ ಸಿಗ್ಮಾ ಆಸ್ಪತ್ರೆಸಹಕಾರದಲ್ಲಿ 20 ಹಾಸಿಗೆಗಳ ಆಕ್ಸಿಜನೇಟೆಡ್ ಆಸ್ಪತ್ರೆ ಆರಂಭಿಸಲಾಗುವುದೆಂದು ಸಂಸದ ಪ್ರತಾಪಸಿಂಹ ತಿಳಿಸಿದರು.ನಗರದ ಆಂಜನೇಯ ದೇವಾಲಯದ ಬಳಿಯಲ್ಲಿ ಸಮಾಜಕಲ್ಯಾಣ ಇಲಾಖೆ ಹಾಸ್ಟೆಲ್ನಲ್ಲಿ ಸಿಗ್ಮಾ ಆಸ್ಪತ್ರೆ ವತಿಯಿಂದ ಆರಂಭಿ ಸಲುದ್ದೇಶಿಸಿರುವ ಆಸ್ಪತ್ರೆಯಲ್ಲಿನ ವ್ಯವಸ್ಥೆಯನ್ನುಪರಿಶೀಲಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಭಾನುವಾರ ಅಧಿಕಾರಿಗಳ ಸಭೆ ನಡೆಸಲಿದ್ದಾರೆ.ಅಂದೇ ಇಲ್ಲಿ ಆಸ್ಪತ್ರೆ ಉದ್ಘಾಟಿಸಲಿದ್ದಾರೆ ಎಂದು ಸಂಸದರುತಿಳಿಸಿದರು.ತಾಲೂಕಿನ ಸೋಂಕಿತರು ಹೆಚ್ಚಿರುವ ಕಟ್ಟೆಮಳಲವಾಡಿಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಗ್ರಾಮದಲ್ಲಿ ನಡೆಯುತ್ತಿರುವ ಸವೇ ವೀಕ್ಷಿಸಿದರು,
ಗಾವಡಗೆರೆ, ಬಿಳಿಗೆರೆ, ಮುಳ್ಳೂರುಗ್ರಾಪಂಗಳಿಗೆ ಭೇಟಿ ನೀಡಿದ್ದ ಸಂಸದರು ಮನೆ-ಮನೆ ಸಮೀಕ್ಷೆಬಗ್ಗೆ ಮಾಹಿತಿ ಪಡೆದುಕೊಂಡರು.ನಂತರ ಇತ್ತೀಚೆಗೆ ಕೊರೊನಾದಿಂದ ನಿಧನರಾದ ಬಿಜೆಪಿಹಿರಿಯ ಮುಖಂಡ ರಾಜೇಂದ್ರ ಮನೆಗೆ ಭೇಟಿ ನೀಡಿಕುಟುಂಬದವರಿಗೆ ಸಾಂತ್ವನ ಹೇಳಿದರು.
ಈ ವೇಳೆ ಚಿಕ್ಕಸ್ವಾಮಿ, ಬಿಳಿಗೆರೆ, ಮುಳ್ಳೂರು, ಹಳೇಬೀಡುಗ್ರಾಪಂ ಅಧ್ಯಕ್ಷರಾದ ಮೋಹನ್, ಮಹೇಶ್, ಜಯಲಕ್ಷ್ಮೀಮಹದೇವ್, ತಾಲೂಕು ಬಿಜೆಪಿ ಅಧ್ಯಕ್ಷ ಹಳ್ಳದಕೊಪ್ಪಲುನಾಗಣ್ಣಗೌಡ, ಮುಖಂಡರಾದ ಕಾಂತರಾಜು, ಯೋಗಾನಂದಕುಮಾರ್, ವಿವೇಕಾನಂದ, ಸಾಯಿನಾಥ್, ವೀರೇಶರಾವ್ಬೋಬಡೆ, ಅರಗುಮಂಜುನಾಥ್, ನಾಗೇಂದ್ರ, ನಿಂಗರಾಜಮಲ್ಲಾಡಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.