ಆ್ಯಂಬುಲೆನ್ಸ್ ಟೆಂಡರ್ ರದ್ದತಿಗೆ ಹೊಣೆ ಯಾರು?
Team Udayavani, Jun 2, 2021, 3:40 PM IST
ಬೆಂಗಳೂರು: ಸಂಚಾರ ದಟ್ಟಣೆ ಮಧ್ಯೆರೋಗಿಗಳು ಅಥವಾ ಗಾಯಾಳುಗಳನ್ನು ಆಸ್ಪತ್ರೆಗೆಸಾಗಿಸುವಾಗ ಆ್ಯಂಬುಲೆನ್ಸ್ಗಳ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಲು “ಅತ್ಯಾಧುನಿಕತಂತ್ರಜ್ಞಾನ ಆಧಾರಿತ ಆ್ಯಂಬುಲೆನ್ಸ್ ನಿರ್ವಹಣಾವ್ಯವಸ್ಥೆ’ ಜಾರಿಗೆ ಕರೆಯಲಾಗಿದ್ದ ಟೆಂಡರ್ರದ್ದುಪಡಿಸಿದ ಸರ್ಕಾರದ ಧೋರಣೆಗೆಅಸಮಾಧಾನವ್ಯಕ್ತಪಡಿಸಿ ರುವ ಹೈಕೋರ್ಟ್,”ಯಾವುದೇ ಕಾರಣವಿಲ್ಲದೇಜನೋಪಯೋಗಿಟೆಂಡರ್ರದ್ದುಪಡಿಸಿರುವುದಕ್ಕೆಯಾರುಹೊಣೆ” ಎಂದುಪ್ರಶ್ನಿಸಿದೆ.
ಈ ಕುರಿತು ಭಾರತ್ ಪುನರುತ್ಥಾನ ಟ್ರಸ್ಟ್ಸಲ್ಲಿಸಿರುವ ಸಾರ್ವಜನಿಕಹಿತಾಸಕ್ತಿಅರ್ಜಿಯನ್ನುಮಂಗಳವಾರ ವಿಚಾರಣೆ ನಡೆಸಿದ ಮುಖ್ಯನ್ಯಾಯಮೂರ್ತಿ ಎ.ಎಸ್. ಓಕ್ ನೇತೃತ್ವದವಿಭಾಗೀಯ ನ್ಯಾಯಪೀಠ ಸರ್ಕಾರದ ಧೋರಣೆಗೆ ಅಸಮಾಧಾನ ವ್ಯಕ್ತಪಡಿಸಿತು.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲವೆಂಕಟೇಶ್ ದಳವಾಯಿ ವಾದ ಮಂಡಿಸಿ,ಸರ್ಕಾರವು ಏಕಾಏಕಿ ಟೆಂಡರ್ ಹಿಂಪಡೆದಿದೆ.ಅದಕ್ಕೆ ಸಕಾರಣವೂ ನೀಡಿಲ್ಲ. ಪ್ರಕರಣಕೋರ್ಟ್ನಲ್ಲಿಬಾಕಿಯಿದೆ.ಆದರೂಕೋರ್ಟ್ ಅನುಮತಿ ಇಲ್ಲದೇ ಟೆಂಡರ್ ರದ್ದುಪಡಿಸಲಾಗಿದೆ.ಹೊಸದಾಗಿ ಟೆಂಡರ್ಕರೆಯು ವುದಾಗಿ ಹೇಳಿದ್ದ ಸರ್ಕಾರ, ಆ ಪ್ರಕ್ರಿಯೆ ಮುಂದು ವರಿಸಿಲ್ಲ.ಹೀಗಾಗಿ, ಕೋರ್ಟ್ನಲ್ಲಿ ಪ್ರಕರಣ ವಿಚಾರಣೆ ಬಾಕಿಯಿರುವ ಮಾಹಿತಿ ಇದ್ದರೂ ಟೆಂಡರ್ ರದ್ದುಪಡಿಸಲಾಯಿತೇ? ಅಥವಾ ಮಾಹಿತಿ ಇಲ್ಲದೇ ಟೆಂಡರ್ ರದ್ದುಪಡಿಸಲಾಗಿದೆಯೇ?ಎಂಬಬಗ್ಗೆ ಪ್ರಮಾಣ ಪತ್ರ ಸಲ್ಲಿಸಲು ಸರ್ಕಾರಕ್ಕೆ ನಿರ್ದೇಶಿಸಬೇಕುಎಂದು ಕೋರಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಡ್ವೋಕೇಟ್ ಜನರಲ್ ಪ್ರಭುಲಿಂಗ ಕೆ. ನಾವದಗಿ, ನ್ಯಾಯಾಲಯ ದಲ್ಲಿ ಪ್ರಕರಣ ವಿಚಾರಣಾಹಂತದಲ್ಲಿ ಇರುವುದರಿಂದ ಹೊಸ ಪ್ರಕ್ರಿಯೆನಡೆಸಿಲ್ಲ. ಈ ಬಗ್ಗೆ ಸರ್ಕಾರದ ವತಿ ಯಿಂದಪ್ರಮಾಣಪತ್ರ ಸಲ್ಲಿಸಲಾಗುವುದು ಎಂದರು.
ಟೆಂಡರ್ ಪ್ರಕ್ರಿಯೆ ರ್ಪೂಣಗೊಂಡಿದ್ದರೆ ಈವೇಳೆಗಾಗಲೇ ಆ್ಯಂಬುಲೆನ್ಸ್ ಲಭ್ಯವಾಗುತ್ತಿತ್ತು.ಕೋವಿಡ್-19 ಸಂಕಷ್ಟ ಪರಿಸ್ಥಿತಿಯಲ್ಲಿರೋಗಿಗಳಿಗೆ ಸಹಾಯವಾಗುತ್ತಿತ್ತು ಎಂದುಹೇಳಿದ ನ್ಯಾಯಪೀಠ, ಜೂ.24ರೊಳಗೆಪ್ರಮಾಣ ಸಲ್ಲಿಸುವಂತೆ ಸರ್ಕಾರಕ್ಕೆ ಸೂಚಿಸಿವಿಚಾರಣೆಮುಂದೂಡಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಕ್ರೈಂ ತಡೆಗೆ ರಾತ್ರಿ ಗಸ್ತು ಹೆಚ್ಚಳ; ದಯಾನಂದ್
Bengaluru: ಮೆಟ್ರೋ ಶೌಚದಲ್ಲಿ ಕ್ಯೂಆರ್ ಕೋಡ್ ಅಂಟಿಸಿದ್ದ ಉದ್ಯಮಿ ಸೆರೆ
Bengaluru: ಗ್ರಾಹಕನ ಗುಪ್ತಾಂಗ ಮುಟ್ಟಿ ಡೆಲಿವರಿ ಬಾಯ್ ನೀಚ ಕೃತ್ಯ
ಚಾಕೋಲೆಟ್ ಕೊಡ್ತೇನೆಂದು ಮನೆಗೆ ಕರೆದು ಬಾಲಕಿಗೆ ಲೈಂಗಿಕ ದೌರ್ಜನ್ಯ: ಇಬ್ಬರು ಬಂಧನ
Bengaluru: ಚೆಕ್ ದುರ್ಬಳಕೆ; ಕ್ಯಾಷಿಯರ್, ಎಲ್ಐಸಿ ಏಜೆಂಟ್ಗೆ ಜೈಲು
MUST WATCH
ಹೊಸ ಸೇರ್ಪಡೆ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ
Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು
Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ