ಯಕ್ಷಗಾನ ಕಲಾವಿದರ ನೋವಿಗೆ ಭರವಸೆ ಬೆಳಕು ನೀಡಿತು ‘ಸೆಲ್ಕೋ’


Team Udayavani, Jun 24, 2021, 9:47 AM IST

selko-2

ಶಿರಸಿ: ಕಳೆದ ಒಂದುವರೆ ವರ್ಷದಿಂದ ಕೊರೋನಾದ ಗಂಭೀರ ಸಮಸ್ಯೆ ಎದುರಿಸುತ್ತಿರುವ ಸಾಂಸ್ಕೃತಿಕ ಕ್ಷೇತ್ರದ ನೋವಿಗೆ ಸ್ಪಂದಿಸುವ, ಭರವಸೆಯ ಬೆಳಕು ನೀಡುವಲ್ಲಿ ಸೆಲ್ಕೋ ಫೌಂಡೇಶನ್ ಸದ್ದಿಲ್ಲದೇ ಒಂದು ಹೆಜ್ಜೆ ಮುಂದಿಟ್ಟಿದೆ.

ಮ್ಯಾಗ್ಸತ್ಸೇ ಪ್ರಶಸ್ತಿ ಪುರಸ್ಕೃತ ಹರೀಶ ಹಂದೆ ಅವರ ನೇತೃತ್ವದ ಸೆಲ್ಕೋ ಫೌಂಡೇಶನ್ ಶಕ್ತಿ ಆಧಾರಿತವಾಗಿ ಸಮಾಜದಲ್ಲಿ ಬದುಕಿನ ಭರವಸೆಯನ್ನು ಮೂಡಿಸುತ್ತಿದೆ. ಹೊಸ ಹೊಸ ಆವಿಷ್ಕರ, ಉದ್ಯಮ ಸ್ಥಾಪನೆಗೆ ನೆರವು, ಕಲೆ ಹಾಗೂ ಗ್ರಾಮೀಣ ಗುಡಿಕೈಗಾರಿಕೆ ಉಳಿಸಿ ಬೆಳಸುವ ದೃಷ್ಟಿಯಿಂದ, ಆರೋಗ್ಯ ಉಪಕರಣಗಳನ್ನು ಒದಗಿಸುವ ಜೊತೆಗೆ ಕಡಿಮೆ ಇಂಧನ ಬಳಸಿ ಪರಿಸರ ಉಳಿಸುವ ಅನುಪಮ ಕಾರ್ಯಕ್ಕೂ ಮುಂದಾಗಿದೆ.

ಈ ಸೆಲ್ಕೋ ಫೌಂಡೇಶನ್ ಉತ್ತರ ಕನ್ನಡದ ಯಲ್ಲಾಪುರದಲ್ಲಿ ಹೆರಿಗೆ ಆಸ್ಪತ್ರೆಗೆ ಸಂಪೂರ್ಣ ಸೋಲಾರ್ ಅಳವಡಿಕೆ, ಬೆಂಗಳೂರಿನಲ್ಲಿ ನೂರು ಬೆಡ್‌ನ ಆಸ್ಪತ್ರೆ ಸ್ಥಾಪನೆಗೆ ಪ್ರಮುಖ ಸಹಭಾಗಿತ್ವ ಸೇರಿದಂತೆ ಅನೇಕ ರಚನಾತ್ಮಕ, ಸಮಾಜಕ್ಕೆ ಕೆಳ ಸ್ಥರದಲ್ಲಿ ಸ್ಪಂದಿಸುವ ಕಾರ್ಯ ಮಾಡುತ್ತಿದೆ.

ಸಂಕಷ್ಟಕ್ಕೆ ಸ್ಪಂದನೆ:

ಕೊರೋನಾ ಸಂಕಷ್ಟದಿಂದ ಯಕ್ಷಗಾನದ ವೃತ್ತಿ ಮೇಳ, ಹವ್ಯಾಸಿ ಮೇಳಗಳಲ್ಲಿ ತೊಡಗಿಕೊಂಡ, ಅದನ್ನೇ ವೃತ್ತಿಯಾಗಿಸಿಕೊಂಡ ಕಲಾವಿದರುಗಳಿಗೆ ಏನು ಮಾಡಬೇಕು ಎಂಬ ಸ್ಥಿತಿ ನಿರ್ಮಾಣ ಆಗಿತ್ತು. ಕಲೆಯ ಬದುಕು ಬಿಟ್ಟರೆ, ವೇಷ ಬಳಿದುಕೊಂಡು ರಾತ್ರಿಯನ್ನು ಹಗಲಾಗಿಸಿ ಜಗಮಗಿಸುವ ಸಾಂಸ್ಕೃತಿಕ ಔತಣ ನೀಡುವ ಸಾಂಪ್ರದಾಯಿಕ ಕಲಾವಿದರಿಗೆ ಕೊರೋನಾ ಪ್ರದರ್ಶನಕ್ಕೆ ತೊಡಕಾಗಿ ತಣ್ಣೀರು ಬಟ್ಟೆ ನೀಡಿತ್ತು.

ಅನೇಕರು ಬದಲೀ ಉದ್ಯೋಗ ಕೂಡ ನೋಡಿಕೊಳ್ಳಲೂ ಆಗದೇ ಸಂಕಷ್ಟಕ್ಕೆ ತಲುಪಿತ್ತು. ರಂಗದಲ್ಲಿ ರಾಜನಾಗಿ, ಹಾಸ್ಯದಲ್ಲಿ ನಗಿಸಿದ ಕಲಾವಿದನಾಗಿ ಮಿಂಚಿದವರಿಗೆ ಕರೋನಾ ಬರೆ ಸಿಡಿಲಾಗಿತ್ತು. ಈ ನೋವನ್ನು ಸ್ವತಃ ಯಕ್ಷಗಾನ, ತಾಳಮದ್ದಲೆ ಕಲಾವಿದರೂ ಆಗಿ ಅರಿತ ಸೆಲ್ಕೋ ಫೌಂಡೇಶನ್‌ನ ಸಿಇಓ ಮೋಹನ ಹೆಗಡೆ ಸಾಧ್ಯವಿದ್ದ ಜನರಿಗೆ ನೆರವಾಗುವ ಸಂಕಲ್ಪ ತೊಟ್ಟರು. ಹಂದೆ ಅವರ ಕಲಾ ಪ್ರೀತಿ ಇಲ್ಲಿ ಭರವಸೆಯ ಬೆಳಕಾಗಿಸುವಲ್ಲಿ ನೆರವಾಯಿತು.

ಕಳೆದ ವರ್ಷದ ಪ್ರಥಮ ಕೋವಿಡ್ ಅಲೆಗೆ ಸುಮಾರು 120 ಜನ ಯಕ್ಷಗಾನ ಹಾಗೂ ಇತರ ವಿಭಾಗದ ಕಲಾವಿದರಿಗೆ ಫೌಂಡೇಶನ್ ಸರಾಸರಿ 5 ಸಾವಿರ ರೂ. ನಂತೆ ನೆರವಾಯಿತು. ಕಳೆದ ವರ್ಷ ಜೂನ್‌ದಲ್ಲಿ ಆರೋಗ್ಯ ಸಮಸ್ಯೆ ಇದ್ದವರಿಗೆ, ನಿವೃತ್ತಿ ಅಂಚಿನಲ್ಲಿ ಇದ್ದವರಿಗೆ, ಯುವ ಕಲಾವಿದರಿಗೆ, ಆರ್ಥಿಕ ಅನಿವಾರ್‍ಯತೆ ಇದ್ದವರಿಗೆ ನೆರವಿನ ಹಸ್ತ ಚಾಚಿ ಯಾವುದೇ ಪ್ರಚಾರ ಬಯಸದೇ ಮುಂದಡಿ ಇಟ್ಟಿತು. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಹಾಗೂ ಇತರ ಪ್ರದೇಶದ ಯಕ್ಷಗಾನ ಕಲಾವಿದರಿಗೆ ನೆರವಾಯಿತು.

ಕಳೆದ ವರ್ಷ ಯಕ್ಷಗಾನ ವೇಷಧಾರಿಗಳು, ವೇಷ ಭೋಷಣ ಕಲಾವಿದರು, ಹಿಮ್ಮೇಳ ಕಲಾವಿದರು ಸಹಿತ ಹಲವರಿಗೆ ನೆರವಾದರೆ ಈ ಬಾರಿ ಕೂಡ ೧೦೦ರಷ್ಟು ಕಲಾವಿದರಿಗೆ ಸ್ವತಃ ಮುಂದೆ ಬಂದು ನೆರವಾಗುತ್ತಿದೆ. ಇನ್ನೂ ಅಧಿಕ ಕಲಾವಿದರು ಸಂಕಷ್ಟದಲ್ಲಿ ಇದ್ದಾರೆ. ಎಲ್ಲರಿಗೆ ನೆರವಾಗುವ ಆಸಕ್ತಿ ಇದ್ದರೂ ಒಂದು ಚೌಕಟ್ಟಿನಲ್ಲಿ ಕಾರ್ಯ ನಿರ್ವಹಿಸಬೇಕಾಗಿದೆ ಎಂದೂ ಹೇಳುತ್ತಾರೆ ಮೋಹನ್ ಹೆಗಡೆ.

ಯಕ್ಷಗಾನದಂತ ಸಾಂಪ್ರದಾಯಿಕ ಕಲೆಯನ್ನು ಉಳಿಸಿ, ಉತ್ತೇಜಿಸಬೇಕಾಗಿದೆ. ಈ ಕಾರಣದಿಂದ ನಮ್ಮ ಕಾಣಿಕೆ ಸಲ್ಲಿಸಿದ್ದೇವೆ.

– ಮೋಹನ್ ಹೆಗಡೆ ಹೆರವಟ್ಟ, ಸೆಲ್ಕೋ ಫೌಂಡೇಶನ್ ಸಿಇಓ

ಕಲಾವಿದರ ಸಂಕಷ್ಟಕ್ಕೆ ಸ್ಪಂದಿಸುವ ಸೆಲ್ಕೋ ಯಾವುದೇ ಪ್ರಚಾರ, ಪ್ರತಿಫಲ ಬಯಸದೇ ಕೆಲಸ ಮಾಡುತ್ತಿರುವದು ಮಾದರಿ.

– ಕೇಶವ ಹೆಗಡೆ‌ ಕೊಳಗಿ,‌ಪ್ರಸಿದ್ದ ಭಾಗವತ

ಟಾಪ್ ನ್ಯೂಸ್

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

14

Tollywood: ಅಧಿಕೃತವಾಗಿ ರಿವೀಲ್‌ ಆಯಿತು ‘ಕಲ್ಕಿ 2898 ಎಡಿʼ ಸಿನಿಮಾದ ರಿಲೀಸ್‌ ಡೇಟ್

Mumbai 26/11 ದಾಳಿಯ ವಕೀಲ ಉಜ್ವಲ್‌ ನಿಕಮ್‌ ಗೆ ಬಿಜೆಪಿ ಟಿಕೆಟ್‌, ಪೂನಮ್‌ ಗೆ ಕೊಕ್?

Mumbai 26/11 ದಾಳಿಯ ವಕೀಲ ಉಜ್ವಲ್‌ ನಿಕಮ್‌ ಗೆ ಬಿಜೆಪಿ ಟಿಕೆಟ್‌, ಪೂನಮ್‌ ಗೆ ಕೊಕ್?

s suresh kumar

Bellary; ಕಾಂಗ್ರೆಸ್ ಪಕ್ಷದ ಚಿಹ್ನೆ ಚೊಂಬಿಗೆ ಬದಲಾಗಿದೆ: ಸುರೇಶ್ ಕುಮಾರ್ ವ್ಯಂಗ್ಯ

13

Sandalwood: ಜಪಾನ್‌ನಲ್ಲಿ ಈ ದಿನ ರಿಲೀಸ್‌ ಆಗಲಿದೆ ‘777 ಚಾರ್ಲಿʼ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ

Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ

ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ

ಕಾರವಾರ: “ವಿಕಲಚೇತನರು ಮತಗಟ್ಟೆಗೆ ಬರಲು ಉಚಿತ ವಾಹನ ವ್ಯವಸ್ಥೆ’‌

ಕಾರವಾರ: “ವಿಕಲಚೇತನರು ಮತಗಟ್ಟೆಗೆ ಬರಲು ಉಚಿತ ವಾಹನ ವ್ಯವಸ್ಥೆ’‌

Modi 3

PM Modi ಏ.28ರಂದು ಉತ್ತರಕನ್ನಡಕ್ಕೆ?; ಯಲ್ಲಾಪುರದಲ್ಲಿ ಬಹಿರಂಗ ಸಮಾವೇಶ?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

14

Tollywood: ಅಧಿಕೃತವಾಗಿ ರಿವೀಲ್‌ ಆಯಿತು ‘ಕಲ್ಕಿ 2898 ಎಡಿʼ ಸಿನಿಮಾದ ರಿಲೀಸ್‌ ಡೇಟ್

Mumbai 26/11 ದಾಳಿಯ ವಕೀಲ ಉಜ್ವಲ್‌ ನಿಕಮ್‌ ಗೆ ಬಿಜೆಪಿ ಟಿಕೆಟ್‌, ಪೂನಮ್‌ ಗೆ ಕೊಕ್?

Mumbai 26/11 ದಾಳಿಯ ವಕೀಲ ಉಜ್ವಲ್‌ ನಿಕಮ್‌ ಗೆ ಬಿಜೆಪಿ ಟಿಕೆಟ್‌, ಪೂನಮ್‌ ಗೆ ಕೊಕ್?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.