ಭಾರತೀಯ ಕುವರಿ ಅದಿತಿಗೆ ಮೈಕ್ರೋಸಾಫ್ಟ್ ನಿಂದ ಒಲಿದು ಬಂತು 22ಲಕ್ಷ ರೂ!ಯಾಕೆ?ಇಲ್ಲಿದೆ ಮಾಹಿತಿ
Team Udayavani, Jun 29, 2021, 9:25 PM IST
ನವ ದೆಹಲಿ : ಭಾರತತೀಯ ಕುವರಿ, 20 ವರ್ಷದ ಸೈಬರ್ ಸೆಕ್ಯುರಿಟಿ ವಿಶ್ಲೇಷಕಿ ಮತ್ತು ಎಥಿಕಲ್ ಹ್ಯಾಕರ್ ಅದಿತಿ ಸಿಂಗ್ ಮೈಕ್ರೋಸಾಫ್ಟ್ ನಿಂದ ಬರೋಬ್ಬರಿ 22 ಲಕ್ಷ ರೂಪಾಯಿಗಳನ್ನು ಬಹುಮಾನವನ್ನಾಗಿ ಪಡೆದಿದ್ದಾರೆ.
ಮೈಕ್ರೋಸಾಫ್ಟ್ ನ ಅಜೂರ್ ಕ್ಲೌಡ್ ಸಿಸ್ಟಂ ನಲ್ಲಿನ ದೋಷವನ್ನು ಪತ್ತೆಹಚ್ಚಿದ್ದಕ್ಕಾಗಿ ಟೆಕ್ ದೈತ್ಯ ಸಂಸ್ಥೆ ಇಷ್ಟು ದೊಡ್ಡ ಮೊತ್ತವನ್ನು ಬಹುಮಾನವಾಗಿ ನೀಡಿದೆ.
2 ತಿಂಗಳ ಹಿಂದೆ ಸಾಮಾಜಿಕ ಜಾಲತಾಣಗಳ ದೈತ್ಯ ಸಂಸ್ಥೆ ಫೇಸ್ ಬುಕ್ ನಲ್ಲಿ ಕೂಡ ಇದೇ ರೀತಿಯ ದೋಷವನ್ನು ಪತ್ತೆ ಹಚ್ಚಿಕೊಟ್ಟಿದ್ದಕ್ಕಾಗಿ ಅದಿತಿಗೆ 5.5 ಲಕ್ಷ ರೂಪಾಯಿಗಳನ್ನು ಫೇಸ್ ಬುಕ್ ನೀಡಿತ್ತು ಎಂದು ವರದಿ ತಿಳಿಸಿದೆ.
ಇದನ್ನೂ ಓದಿ : ಭಾರತೀಯ ಪುರಾತತ್ವ ಸರ್ವೇಕ್ಷಣಾ ಕಛೇರಿ ವಿಜಯಪುರಕ್ಕೆ ಸ್ಥಳಾಂತರವಾಗಲಿ : ಯತ್ನಾಳ್ ಆಗ್ರಹ
ಈ ಬಗ್ಗೆ ಪ್ರತಿಕ್ರಿಯಿಸಿದ ಅದಿತಿ, ಎರಡೂ ಕಂಪೆನಿಗಳು ರಿಮೋಟ್ ಕೋಡ್ ಎಕ್ಸಿಕ್ಯೂಶನ್ (ಆರ್ ಸಿ ಇ) ದೋಷವನ್ನು ಹೊಂದಿದ್ದವು, ಇದು ತುಲನಾತ್ಮಕವಾಗಿ ಹೊಸದು ಮತ್ತು ಪ್ರಸ್ತುತ ಈ ಬಗ್ಗೆ ಹೆಚ್ಚಿನ ಗಮನವನ್ನು ನೀಡುತ್ತಿಲ್ಲ. ಅಂತಹ ದೋಷಗಳ ಮೂಲಕ, ಹ್ಯಾಕರ್ ಗಳು ಆಂತರಿಕ ವ್ಯವಸ್ಥೆಗಳಿಗೆ ಪ್ರವೇಶವನ್ನು ಪಡೆಯಬಹುದು. ಎಂದು ಅವರು ಹೇಳಿದರು.
ವಿಶೇಷವೆಂದರೆ, ಸುಮಾರು 2 ತಿಂಗಳ ಹಿಂದೆ ಅದಿತಿ ಮೈಕ್ರೋಸಾಫ್ಟ್ ಅಜೂರ್ ನಲ್ಲಿ ಆರ್ ಸಿ ಇ ದೋಷವನ್ನು ಪತ್ತೆ ಹಚ್ಚಿದ್ದರು. ಆದಾಗ್ಯೂ ಕಂಪನಿಗೆ ದೋಷದ ಬಗ್ಗೆ ತಿಳಿಸಿದ್ದರೂ ಕೂಡ ಕಂಪನಿಯು ವ್ಯವಸ್ಥೆಯ ಅಸುರಕ್ಷಿತ ಆವೃತ್ತಿಯನ್ನು ಯಾರಾದರೂ ಡೌನ್ ಲೋಡ್ ಮಾಡಿದ್ದಾರೆಯೇ ಎಂದು ಪರಿಶೀಲಿಸುವಲ್ಲಿ ನಿರತರಾಗಿದ್ದರಿಂದ ಯಾವುದೇ ರೀತಿಯ ಪ್ರತಿಕ್ರಿಯೆ ದೊರಕಿರಲಿಲ್ಲ ಎಂದು ವರದಿಯಾಗಿದೆ.
ಆರ್ ಸಿ ಇ ದೋಷದ ಹಿಂದಿನ ಕಾರಣವನ್ನು ವಿವರಿಸಿದ ಅದಿತಿ, ಕೋಡ್ ನನ್ನು ನೇರವಾಗಿ ಬರೆಯುವ ಬದಲು ಡೆವಲಪರ್ ಗಳು ಮೊದಲು ‘ನೋಡ್ ಪ್ಯಾಕೇಜ್ ಮ್ಯಾನೇಜರ್’ ನನ್ನು ಡೌನ್ ಲೋಡ್ ಮಾಡಿಕೊಳ್ಳಬೇಕು. “ಡೆವಲಪರ್ ಗಳು ಎನ್ ಪಿ ಎಂ ಹೊಂದಿದ ನಂತರವೇ ಕೋಡ್ ಗಳನ್ನು ಬರೆಯಬೇಕು” ಎಂದು ಹೇಳಿದ್ದಾರೆ.
ಇನ್ನು, ಮೇಕ್ರೋಸಾಫ್ಟ್ ಹಾಗೂ ಪೇಸ್ ಬುಕ್ ಸಂಸ್ಥೆಗಳ ಮೆಚ್ಚಗೆಗೆ ಪಾತ್ರವಾಗಿದ್ದು ಮಾತ್ರವಲ್ಲದೇ, ಹಾರ್ವರ್ಡ್ ವಿಶ್ವವಿದ್ಯಾಲಯ, ಕೊಲಂಬಿಯಾ ವಿಶ್ವವಿದ್ಯಾಲಯ, ಸ್ಟ್ಯಾನ್ ಫೋರ್ಡ್ ವಿಶ್ವವಿದ್ಯಾಲಯ, ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಿಂದ ಮೆಚ್ಚುಗೆಯ ಪತ್ರಗಳನ್ನು ಸಹ ಪಡೆದಿದ್ದಾರೆ. ಮಾತ್ರವಲ್ಲದೇ, ಗೂಗಲ್ ಹಾಲ್ ಆಫ್ ಫೇಮ್ನಲ್ಲಿ ಸಹ ಹೈಲೈಟ್ ಆಗಿದ್ದಾರೆ.
ಇದನ್ನೂ ಓದಿ : ಹೊರಗುತ್ತಿಗೆ ಸಿಬ್ಬಂದಿಗೆ ನಿಯಮಿತವಾಗಿ ವೇತನ ನೀಡದಿದ್ದರೆ ಶಿಸ್ತುಕ್ರಮ : ಸಚಿವ ಸುಧಾಕರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್ ಮೆಟ್ಟಿಲೇರಿದ ಪ್ರಕರಣ, ಏನಿದು?
Reliance Jio Profit; ರಿಲಯನ್ಸ್ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ
History TV18ನಲ್ಲಿ ವಿಶ್ವದ ಮೊದಲ ಬ್ರೈಲ್ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ
HP ಯಿಂದ AI ಆಧಾರಿತ ಎರಡು ಹೊಸ ಲ್ಯಾಪ್ ಟಾಪ್ ಬಿಡುಗಡೆ
Digital: ಇನ್ನು ಯುಪಿಐ ಮೂಲಕ ನಗದು ಜಮೆಗೆ ಅವಕಾಶ
MUST WATCH
ಹೊಸ ಸೇರ್ಪಡೆ
ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ
Ranveer Singh : ʼಹನುಮಾನ್ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್ ಸಿಂಗ್ ನಟನೆ?
Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ
ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ
Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ