ತನ್ನ ತಾಯಿಯನ್ನೇ ಕೊಂದ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಿದ ನ್ಯಾಯಾಲಯ
Team Udayavani, Jul 11, 2021, 8:46 PM IST
ನವದೆಹಲಿ: ಆ ಪಾಪಿ, ತನ್ನ ತಾಯಿಯನ್ನೇ ಕೊಂದಿದ್ದ! ಅಷ್ಟೇ ಅಲ್ಲ, ಆಕೆಯ ದೇಹವನ್ನು ಛಿದ್ರಗೊಳಿಸಿ ದೇಹದ ಭಾಗಗಳನ್ನು ಹೊರತಗೆದಿದ್ದ! ಇಂಥ ಭೀಭತ್ಸ ಕೃತ್ಯ ಎಸಗಿದ್ದ ಸುನಿಲ್ ರಾಮ ಕುಚ್ಕೋವಾರಿಗೆ ಕೊಲ್ಹಾಪುರದ ನ್ಯಾಯಾಲಯ ನೇಣು ಶಿಕ್ಷೆ ವಿಧಿಸಿದೆ.
ಇದು 2017ರಲ್ಲಿ ನಡೆದ ಘಟನೆ. ಕಲ್ಲು ಗಣಿಗಾರಿಕೆಯೊಂದರಲ್ಲಿ ಕೂಲಿಯಾಳಾಗಿ ದುಡಿಯುತ್ತಿದ್ದ ಸುನಿಲ್, ಮದ್ಯವ್ಯಸನಿಯಾಗಿದ್ದು ತನ್ನ ಚಟಕ್ಕಾಗಿ ತಾಯಿಯನ್ನು ಹಣಕ್ಕಾಗಿ ಪೀಡಿಸುತ್ತಿದ್ದ. ಆಕೆಗೆ ಬರುತ್ತಿದ್ದ ಪಿಂಚಣಿ ಹಣವನ್ನೆಲ್ಲಾ ನೀಡುವಂತೆ ಜಗಳವಾಡುತ್ತಿದ್ದ. ಒಂದು ದಿನ ಜಗಳ ಅತಿರೇಕಕ್ಕೆ ಹೋಗಿ, ಆಕೆಯನ್ನು ಬರ್ಬರವಾಗಿ ಹತ್ಯೆಗೈದು ಆತ ಆಕೆಯ ದೇಹದ ಭಾಗಗಳನ್ನು ಹೊರತೆಗೆದಿದ್ದ.
ಇದನ್ನೂ ಓದಿ : ಯೂಥ್ ಕ್ಯಾನ್ ಲೀಡ್ ಅಭಿಯಾನಕ್ಕೆ ಸಂಸದ ತೇಜಸ್ವೀ ಸೂರ್ಯ ಚಾಲನೆ
ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ನ್ಯಾಯಪೀಠ, “ಇದು ಭಾರತೀಯ ಸಮಾಜದ ಆತ್ಮಸಾಕ್ಷಿಯನ್ನೇ ಬಡಮೇಲು ಮಾಡುವಂತಿದ್ದು, ತಾಯ್ತನಕ್ಕೆ ಅವಮಾನಿಸುವಂತಿದೆ’ ಎಂದು ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.