ಜಾಯಿಕಾಯಿ ಬೆಳೆ ಕಡಿಮೆ ಖರ್ಚು, ಅಧಿಕ ಲಾಭ

ಬೀಜದಿಂದ ಹುಟ್ಟಿದ ಸಸಿಗಳು 5ರಿಂದ 6 ವರ್ಷಗಳಲ್ಲಿ ಫ‌ಸಲು ನೀಡುತ್ತವೆ.

Team Udayavani, Jul 16, 2021, 3:04 PM IST

ಜಾಯಿಕಾಯಿ ಬೆಳೆ ಕಡಿಮೆ ಖರ್ಚು, ಅಧಿಕ ಲಾಭ

ಜಾಯಿಕಾಯಿ ಬಹು ವಾರ್ಷಿಕ ದೀರ್ಘ‌ಕಾಲಿಕ ಬೆಳೆ. ಒಂದೇ ಮರದಲ್ಲಿ ಜಾಯಿಕಾಯಿ ಮತ್ತು ಪತ್ರೆ (ಜಾಯಿ ಪತ್ರೆ) ಎಂಬ ಎರಡು ಪ್ರಮುಖ ಸಂಬಾರ ಪದಾರ್ಥಗಳಿರುವುದು ಇದರ ವಿಶೇಷ. ಇವುಗಳಿಗೆ ವರ್ಷದ ಎಲ್ಲ ಸಮಯದಲ್ಲೂ ಬಹುಬೇಡಿಕೆ ಇರುತ್ತವೆ. ಜಾಯಿಕಾಯಿ ನಿತ್ಯಹರಿದ್ವರ್ಣದಿಂದ ಕೂಡಿದ ಸುಮಾರು ಮಧ್ಯಮ ಗಾತ್ರದಷ್ಟು ಬೆಳೆಯಬಲ್ಲ ಮರ.

ಉಪಯೋಗ
ಜಾಯಿಕಾಯಿಯ ತಿರುಳು ಮತ್ತು ಪತ್ರೆಯನ್ನು ಅಡುಗೆಗಳಲ್ಲಿ ಸಂಬಾರ ಪದಾರ್ಥವಾಗಿ, ಸಿಹಿ ತಿಂಡಿ, ಪಾನೀಯಗಳಲ್ಲಿ ಸುವಾಸನೆಯ ವೃದ್ಧಿಗಾಗಿ, ಔಷಧ, ಸುಗಂಧ ದ್ರವ್ಯ, ಶ್ಯಾಂಪೂ, ಸೋಪು, ಕೀಟನಾಶಕಗಳ ತಯಾರಿಯಲ್ಲೂ ಬಳಸಲಾಗುತ್ತದೆ. ಜಾಯಿಕಾಯಿ ಹಣ್ಣಿನ ಹೊರಭಾಗದ ಹೊಂಬಣ್ಣದ ಸಿಪ್ಪೆಯನ್ನು ಬಳಸಿ ಜ್ಯಾಮ್‌, ಉಪ್ಪಿನ ಕಾಯಿ, ತಂಬ್ಳಿ ಇತ್ಯಾದಿಗಳನ್ನು ಮಾಡುತ್ತಾರೆ.

ಜಾಯಿಕಾಯಿ ಕಾಡು ಉತ್ಪನ್ನ ವರ್ಗಕ್ಕೆ ಸೇರಿರುವುದರಿಂದ ಇದಕ್ಕೆ ವಿಶೇಷ ಆರೈಕೆ ಕೂಡ ಅಗತ್ಯವಿಲ್ಲ. ಜಾಯಿಕಾಯಿ ಮರ ಏಕಲಿಂಗದ ಹೂ ಬಿಡುವ ಸಸ್ಯ ವರ್ಗಕ್ಕೆ ಸೇರಿದ್ದು, ಇದರಲ್ಲಿ ಗಂಡು ಮತ್ತು ಹೆಣ್ಣು ಎಂಬ ಪ್ರತ್ಯೇಕ ಗಿಡಗಳಿವೆ. ಸುಮಾರು 100ರಿಂದ 150 ವರ್ಷಗಳ ಕಾಲ ಜಾಯಿಕಾಯಿ ಮರಗಳು ಬಾಳ್ವಿಕೆ ಬರುತ್ತವೆ. ಇದಕ್ಕೆ ಖರ್ಚು ಕಡಿಮೆ, ಆದಾಯ ಅಧಿಕ.

ಹವಾಮಾನ, ಮಣ್ಣು
ಜಾಯಿಕಾಯಿ ಮೂಲತಃ ಉಷ್ಣ ವಲಯದಲ್ಲಿ ಬೆಳೆಯುವ ಸಸ್ಯ. ಸುಮಾರು. ಶೇ. 10ರಷ್ಟು ನೆರಳಿದ್ದರೆ ಉತ್ತಮ. ಸದಾ ತೇವಾಂಶವಿರುವ ಕೆಂಪು, ಕಪ್ಪು ಮಣ್ಣುಗಳಲ್ಲಿ ಇದನ್ನು ನಾಟಿ ಮಾಡಬಹುದು. ಜಾಯಿಕಾಯಿ ಸಸಿ ನೆಡಲು ಜೂನ್‌- ಜುಲೈ ತಿಂಗಳುಗಳು ಸೂಕ್ತ ಕಾಲ. ಕಸಿ ಕಟ್ಟುವುದಾದರೆ
ಆಗಸ್ಟ್- ಸೆಪ್ಟಂಬರ್‌ ಅವಧಿ ಉತ್ತಮ. ಕಸಿ ಕಟ್ಟಿದ ಗಿಡವನ್ನು ಮುಂದಿನ ವರ್ಷ ನಾಟಿ ಮಾಡುವ ವರೆಗೆ ಕಸಿ ಕಟ್ಟಿದ ಜಾಗದವರೆಗೆ ಮಣ್ಣಿನಿಂದ ಮುಚ್ಚಿ ನೆಡಬೇಕು.

ಗೊಬ್ಬರ
ಜಾಯಿಕಾಯಿಗೆ ಗೊಬ್ಬರವಾಗಿ ಆಡಿನ ಹಿಕ್ಕೆ, ಹಟ್ಟಿಗೊಬ್ಬರ, ನೆಲಗಡಲೆ ಹಿಂಡಿ, ಕಹಿಬೇವಿನ ಹಿಂಡಿ, ಸುಡುಮಣ್ಣು, ಬೂದಿ, ಎರೆಹುಳ ಗೊಬ್ಬರ ಇತ್ಯಾದಿಗಳನ್ನು ಬಳಸಬಹುದು.

ಕೃಷಿ ಹೇಗೆ ?
ನಾಟಿ ಮಾಡುವಾಗ ಒಂದೂವರೆ ಅಡಿಗಿಂತ ಹೆಚ್ಚು ಎತ್ತರ ಬೆಳೆದಿರುವ ಗಿಡಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಎರಡು ಅಡಿ ಉದ್ದ , ಅಗಲ ಮತ್ತು ಆಳದ ಗುಂಡಿ ತೋಡಿ ಅದಕ್ಕೆ ಸ್ವಲ್ಪ ಸುಡು ಮಣ್ಣು, ಕಹಿ ಬೇವಿನ ಹಿಂಡಿ ಹಾಕಿ ಗಿಡ ನೆಟ್ಟು ಬುಡಕ್ಕೆ ಸ್ವಲ್ಪ ಹಟ್ಟಿಗೊಬ್ಬರ ಹಾಕಬೇಕು.

ಒಂದು ಗಿಡದಿಂದ ಇನ್ನೊಂದಕ್ಕೆ 6ರಿಂದ 8 ಅಡಿ ಅಂತರವಿರಲಿ. ಮಳೆ ಸರಿಯಾಗಿ ಬರದಿದ್ದರೆ ಎರಡು ದಿನಗಳಿಗೊಮ್ಮೆ ನೀರುಣಿಸಬೇಕು. ವರ್ಷಕ್ಕೆ ಎರಡು ಬಾರಿ ಗೊಬ್ಬರ ನೀಡಿದರೆ ಗಿಡ ಬೇಗನೆ ಫ‌ಸಲು ಸಿಗುವುದು. ಗಂಡು ಗಿಡಗಳ ಹಾವಳಿ ತಡೆಯಲು ಕಸಿ ಕಟ್ಟಿಯೂ ಹೊಸಗಿಡಗಳನ್ನು ಬೆಳೆಸುತ್ತಾರೆ. ಕಸಿ ಗಿಡಗಳು ಪೊದೆಯಂತೆ ಬೆಳೆಯುತ್ತವೆ. ಬೀಜದಿಂದ ಹುಟ್ಟಿದ ಗಿಡಗಳು ಎತ್ತರಕ್ಕೆ ಬೆಳೆದು ದೊಡ್ಡ
ಮರವಾಗಿ ಹೆಚ್ಚು ಇಳುವರಿ ನೀಡುತ್ತವೆ. ಕಸಿ ಗಿಡ ಮೂರಿಂದ ನಾಲ್ಕು ವರ್ಷಗಳಲ್ಲಿ ಫ‌ಲ ನೀಡಿದರೆ, ಬೀಜದಿಂದ ಹುಟ್ಟಿದ ಸಸಿಗಳು 5ರಿಂದ 6 ವರ್ಷಗಳಲ್ಲಿ ಫ‌ಸಲು ನೀಡುತ್ತವೆ. ಮರ ಬಲಿತ ಹಾಗೆ ಕಾಯಿ ಬಿಡುವ ಪ್ರಮಾಣ ಹೆಚ್ಚುತ್ತದೆ.

ಇದು ಅತಿಯಾದ ಬಿಸಿಲನ್ನು ಸಹಿಸುವುದಿಲ್ಲ. ರೋಗ, ಕೀಟ ಬಾಧೆ ಕಡಿಮೆ. ಸಾಮಾನ್ಯವಾಗಿ ಮೇಯಿಂದ ಆಗಸ್ಟ್‌ ತಿಂಗಳುಗಳಲ್ಲಿ ಫ‌ಸಲು ನೀಡುತ್ತವೆ. ಅದರಲ್ಲಿ ಜೂನ್‌- ಜುಲೈ ತಿಂಗಳುಗಳಲ್ಲಿ ಪ್ರಮಾಣ ಹೆಚ್ಚು. ಹಣ್ಣಿನೊಳಗೆ ಸುಂದರವಾದ ಕೆಂಪು ಬಣ್ಣದ ಪತ್ರೆಯನ್ನು ಕಾಣಬಹುದು.

ಮರದಲ್ಲಿ ಹಣ್ಣಾಗಿ ಬಿರಿದ ಕಾಯಿಗಳು ತನ್ನಷ್ಟಕ್ಕೇ ಕೆಳಕ್ಕೆ ಬೀಳುತ್ತವೆ. ಇವುಗಳನ್ನು ಹೆಕ್ಕಿ ಪತ್ರೆ ಹಾಗೂ ಕಾಯಿ  ಬೇರ್ಪಡಿಸಿ, ಒಣಗಿಸಿ ಬಳಿಕ ಮಾರಾಟ ಮಾಡಲಾಗುತ್ತದೆ. ಮಳೆಗಾಲದಲ್ಲಿ ಬೀಳುವಾಗ ಪತ್ರೆ ಹಾಳಾಗುವುದರಿಂದ ಪ್ರತಿ 2-3 ದಿನಗಳಿಗೊಮ್ಮೆ ಕೊಯ್ಲು ಮಾಡಬೇಕಾಗುತ್ತದೆ.

ಟಾಪ್ ನ್ಯೂಸ್

kharge

LS Polls: ಮತದಾರರಿಂದ ಪ್ರೋತ್ಸಾಹದಾಯಕ ಮತದಾನ… ಕಾಂಗ್ರೆಸ್ ನತ್ತ ಜನರ ಒಲವು: ಖರ್ಗೆ

11

Hubballi: ಒಂದೇ ಕುಟುಂಬದ 96 ಸದಸ್ಯರಿಂದ ಮತದಾನ

Pen Drive ಹಂಚಿದವರ ವಿರುದ್ಧ ಯಾಕೆ ಎಸ್ಐಟಿ ಕ್ರಮ ಕೈಗೊಳ್ಳಲಿಲ್ಲ: ಜಿ.ಟಿ ದೇವೇಗೌಡ ಪ್ರಶ್ನೆ

Pen Drive ಹಂಚಿದವರ ವಿರುದ್ಧ ಯಾಕೆ ಎಸ್ಐಟಿ ಕ್ರಮ ಕೈಗೊಳ್ಳಲಿಲ್ಲ: ಜಿ.ಟಿ ದೇವೇಗೌಡ ಪ್ರಶ್ನೆ

ಪಾಕಿಸ್ತಾನಕ್ಕೆ ನುಗ್ಗಿ ಹೊಡೆಯುತ್ತೇವೆ ಎಂದವರಿಗೆ ಪ್ರಜಲ್ ತರಲಾಗದೇ: ಸಚಿವ ಶಿವಾನಂದ

ಪಾಕಿಸ್ತಾನಕ್ಕೆ ನುಗ್ಗಿ ಹೊಡೆಯುತ್ತೇವೆ ಎಂದವರಿಗೆ ಪ್ರಜಲ್ ತರಲಾಗದೇ: ಸಚಿವ ಶಿವಾನಂದ

Politics: ಸಿದ್ದರಾಮಯ್ಯ, ಪರಮೇಶ್ವರ ಅವರ ಸಿಡಿಯೂ ಮುಂದೆ ಬರಬಹುದು; ಜಾರಕಿಹೊಳಿ‌

Politics: ಸಿದ್ದರಾಮಯ್ಯ, ಪರಮೇಶ್ವರ ಅವರ ಸಿಡಿಯೂ ಮುಂದೆ ಬರಬಹುದು; ಜಾರಕಿಹೊಳಿ‌

8

UP: ಪತಿಯ ಕೈಕಾಲು ಕಟ್ಟಿ ಖಾಸಗಿ ಅಂಗವನ್ನು ಸಿಗರೇಟ್‌ನಿಂದ ಸುಟ್ಟು ಚಿತ್ರಹಿಂಸೆ: ಪತ್ನಿ ಬಂಧನ

Lok Sabha Election: ಮತ ಚಲಾಯಿಸಲು ಜರ್ಮನಿಯಿಂದ ಹುಟ್ಟೂರಿಗೆ ಬಂದ ಯುವತಿ

Lok Sabha Election: ಮತ ಚಲಾಯಿಸಲು ಜರ್ಮನಿಯಿಂದ ಬನಹಟ್ಟಿಗೆ ಬಂದ ಯುವತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7-knee

Knee: ಮೊಣಗಂಟು ಸಮಸ್ಯೆ: ನಿಮ್ಮ ರೋಗಿಗಳಿಗೆ ಅರ್ಥ ಮಾಡಿಕೊಳ್ಳಲು ಸಹಾಯ ಮಾಡುವುದು ಹೇಗೆ?

6-Fibromyalgia

Fibromyalgia: ಫೈಬ್ರೊಮಯಾಲ್ಜಿಯಾ ಜತೆಗೆ ಜೀವನ

4-heart-diseases

Heart Diseases: ಮಹಿಳೆಯರಲ್ಲಿ ಹೃದ್ರೋಗಗಳು: ಇದು ವಿಭಿನ್ನ!

14-health-1

Autism: ಸ್ವಲೀನತೆ: ಹಾಗೆಂದರೇನು?

12-health

Ankylosing Spondylitis: ಹಾಗೆಂದರೇನು ? ಕಾರಣವೇನು ? ಚಿಕಿತ್ಸೆ ಹೇಗೆ

MUST WATCH

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

ಹೊಸ ಸೇರ್ಪಡೆ

kharge

LS Polls: ಮತದಾರರಿಂದ ಪ್ರೋತ್ಸಾಹದಾಯಕ ಮತದಾನ… ಕಾಂಗ್ರೆಸ್ ನತ್ತ ಜನರ ಒಲವು: ಖರ್ಗೆ

11

Hubballi: ಒಂದೇ ಕುಟುಂಬದ 96 ಸದಸ್ಯರಿಂದ ಮತದಾನ

Pen Drive ಹಂಚಿದವರ ವಿರುದ್ಧ ಯಾಕೆ ಎಸ್ಐಟಿ ಕ್ರಮ ಕೈಗೊಳ್ಳಲಿಲ್ಲ: ಜಿ.ಟಿ ದೇವೇಗೌಡ ಪ್ರಶ್ನೆ

Pen Drive ಹಂಚಿದವರ ವಿರುದ್ಧ ಯಾಕೆ ಎಸ್ಐಟಿ ಕ್ರಮ ಕೈಗೊಳ್ಳಲಿಲ್ಲ: ಜಿ.ಟಿ ದೇವೇಗೌಡ ಪ್ರಶ್ನೆ

ಪಾಕಿಸ್ತಾನಕ್ಕೆ ನುಗ್ಗಿ ಹೊಡೆಯುತ್ತೇವೆ ಎಂದವರಿಗೆ ಪ್ರಜಲ್ ತರಲಾಗದೇ: ಸಚಿವ ಶಿವಾನಂದ

ಪಾಕಿಸ್ತಾನಕ್ಕೆ ನುಗ್ಗಿ ಹೊಡೆಯುತ್ತೇವೆ ಎಂದವರಿಗೆ ಪ್ರಜಲ್ ತರಲಾಗದೇ: ಸಚಿವ ಶಿವಾನಂದ

Politics: ಸಿದ್ದರಾಮಯ್ಯ, ಪರಮೇಶ್ವರ ಅವರ ಸಿಡಿಯೂ ಮುಂದೆ ಬರಬಹುದು; ಜಾರಕಿಹೊಳಿ‌

Politics: ಸಿದ್ದರಾಮಯ್ಯ, ಪರಮೇಶ್ವರ ಅವರ ಸಿಡಿಯೂ ಮುಂದೆ ಬರಬಹುದು; ಜಾರಕಿಹೊಳಿ‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.