ನೌಕೆ ತಯಾರಿಕ ಹಬ್ ಆಗಲಿದೆ ಭಾರತ : ICGS ಕಾರ್ಯಕ್ರಮದಲ್ಲಿ ರಕ್ಷಣ ಸಚಿವ ರಾಜನಾಥ್ ಸಿಂಗ್
Team Udayavani, Aug 28, 2021, 11:55 PM IST
ಚೆನ್ನೈ: ಇಡೀ ವಿಶ್ವದಲ್ಲೇ ಒಂದು ಅತ್ಯು ತ್ತಮ ಸಮರ ನೌಕೆ ನಿರ್ಮಾಣ ಕೇಂದ್ರ ವಾಗುವ ಅದ್ಭುತ ಅವಕಾಶಗಳನ್ನು ಭಾರತ ಹೊಂದಿದೆ. ಅದಕ್ಕೆ ಬೇಕಾದ ಎಲ್ಲ ಸೌಕರ್ಯಗಳನ್ನು ನಮ್ಮ ಸರಕಾರ ಈಗಾಗಲೇ ಕಲ್ಪಿಸಿದೆ ಎಂದು ರಕ್ಷಣ ಸಚಿವ ರಾಜನಾಥ್ ಸಿಂಗ್ ತಿಳಿಸಿದ್ದಾರೆ.
ದೇಶೀಯವಾಗಿ ತಯಾರಿಸಲಾಗಿರುವ “ವಿಗ್ರಹ’ ಗಸ್ತು ನೌಕೆಯನ್ನು ಭಾರತೀಯ ಕರಾವಳಿ ರಕ್ಷಕ ಪಡೆಯ (ಐಸಿಜಿಎಸ್) ಸೇವೆಗೆ ನಿಯೋಜಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತ ನಾಡಿದ ಅವರು ಈ ವಿಷಯ ತಿಳಿಸಿದರು. “ಇಡೀ ವಿಶ್ವದಲ್ಲಿ ಎಲ್ಲ ದೇಶಗಳೂ ತಮ್ಮ ರಕ್ಷಣ ವೆಚ್ಚವನ್ನು ಅಗಾಧವಾಗಿ ಹೆಚ್ಚಿಸಿಕೊಂಡಿವೆ. ಮುಂದಿನ ಎರಡು ವರ್ಷಗಳಲ್ಲಿ ವಿಶ್ವದ ಒಟ್ಟಾರೆ ರಕ್ಷಣ ವೆಚ್ಚ 15 ಸಾವಿರ ಕೋಟಿ ರೂ.ಗಳನ್ನು ಮೀರುತ್ತದೆ. ಇದನ್ನು ಮನಗಂಡು ನಮ್ಮ ಸರಕಾರ, ಭಾರತವನ್ನು ವಿಶ್ವದ ದೊಡ್ಡ ಸಮರ ನೌಕೆಗಳ ನಿರ್ಮಾಣ ತಾಣವನ್ನಾಗಿಸಲು ಅಗತ್ಯವಾದ ಎಲ್ಲ ನಿಯಮಗಳನ್ನು ಜಾರಿಗೊಳಿಸಿದೆ’ ಎಂದಿದ್ದಾರೆ.
ಕರಾವಳಿ ರಕ್ಷಕ ಪಡೆಗೆ ಸೇರಿಸಲಾದ “ವಿಗ್ರಹ’ ಗಸ್ತು ನೌಕೆಯನ್ನು ಲಾರ್ಸೆನ್ ಆ್ಯಂಡ್ ಟರ್ಬೊ ಕಂಪೆನಿಯು ಪೂರೈಸಿದೆ. ಐಸಿಜಿಎಸ್ಗೆ ಸೇರ್ಪಡೆಯಾದ ಒಟ್ಟು 7 ನೌಕೆಗಳ ಪೈಕಿ ಕೊನೆಯ ನೌಕೆ ಇದಾಗಿದೆ. ಸುಧಾರಿತ ಟೆಕ್ನಾಲಜಿ ರೇಡಾರ್ ಗಳು, ನೇವಿಗೇಶನ್ ಮತ್ತು ಸಂವಹನ ಉಪಕರಣಗಳು, ಯಾವುದೇ ರೀತಿಯ ಪ್ರತಿಕೂಲ ಪರಿಸ್ಥಿತಿಯಲ್ಲೂ ಕಾರ್ಯನಿರ್ವಹಿಸಬಲ್ಲ ಸೆನ್ಸರ್ ಗಳು ಮತ್ತು ಯಂತ್ರಗಳು ಇದರಲ್ಲಿವೆ. ಸಮುದ್ರದಲ್ಲಿ ತೈಲ ಸೋರಿಕೆಯನ್ನು ನಿಯಂತ್ರಣಕ್ಕೆ ತರುವ ಸಾಧನವನ್ನೂ ಅಳವಡಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pune; ಖ್ಯಾತ ಬಿಲ್ಡರ್ ಒಬ್ಬರ 17 ವರ್ಷದ ಪುತ್ರನ ಪೋರ್ಷೆ ಕಾರಿಗೆ ಇಬ್ಬರು ಬಲಿ
CRPF exits;ಮೇ 20 ರಿಂದ ಸಿಐಎಸ್ಎಫ್ ತುಕಡಿಗಳಿಂದ ಸಂಸತ್ತಿಗೆ ಭದ್ರತೆ
Panaji: ಅಪಾಯಕಾರಿ ಮರ ಕಡಿಯಲು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಸೂಚನೆ
Election; ಮೋದಿ ನೇತೃತ್ವದ ‘ನವ ಭಾರತ’ಕ್ಕೆ ಮದರಸಾಗಳ ಅಗತ್ಯವಿಲ್ಲ: ಹಿಮಂತ ಬಿಸ್ವಾ ಶರ್ಮಾ
Air India Express ವಿಮಾನದ ಇಂಜಿನ್ ನಲ್ಲಿ ಬೆಂಕಿ; ಬೆಂಗಳೂರಿನಲ್ಲಿ ತುರ್ತು ಭೂಸ್ಪರ್ಶ