ಬೆತ್‌ ಮೂನಿ ಅಜೇಯ ಸೆಂಚುರಿ; ಆಸ್ಟ್ರೇಲಿಯ ಸರಣಿ ಜಯಭೇರಿ


Team Udayavani, Sep 25, 2021, 12:27 AM IST

Untitled-1

ಮಕಾಯ್: ಕೊನೆಯ ಕ್ಷಣದ ನಾಟಕೀಯ ಹಾಗೂ ನೋಬಾಲ್‌ ವಿದ್ಯಮಾನದ ಬಳಿಕ ಆಸ್ಟ್ರೇಲಿಯ ವಿರುದ್ಧದ 2ನೇ ಏಕದಿನ ಪಂದ್ಯವನ್ನು ಭಾರತ ಅಂತಿಮ ಎಸೆತದಲ್ಲಿ ಕಳೆದುಕೊಂಡಿದೆ. ಸರಣಿ ಸಮಬಲದ ಅವಕಾಶ ಕೈಚೆಲ್ಲಿದೆ.

ಮೊದಲು ಬ್ಯಾಟಿಂಗ್‌ ನಡೆಸಿದ ಭಾರತ 7 ವಿಕೆಟಿಗೆ 274 ರನ್‌ ಪೇರಿಸಿತು. 2018ರಲ್ಲಿ ಆಸ್ಟ್ರೇಲಿಯದ ಗೆಲುವಿನ ಓಟ ಆರಂಭಗೊಂಡ ಬಳಿಕ ಅವರೆದುರು ದಾಖಲಾದ ಅತ್ಯಧಿಕ ಮೊತ್ತ ಇದಾಗಿದೆ. ಆದರೆ ಇದನ್ನು ಉಳಿಸಿಕೊಳ್ಳಲು ಮಿಥಾಲಿ ಪಡೆಯಿಂದ ಸಾಧ್ಯವಾಗಲಿಲ್ಲ. ಆರಂಭಿಕ ಆಟಗಾರ್ತಿ ಬೆತ್‌ ಮೂನಿ ಅವರ ಅಜೇಯ 125 ರನ್‌ (133 ಎಸೆತ, 12 ಬೌಂಡರಿ) ಸಾಹಸದಿಂದ ಆಸ್ಟ್ರೇಲಿಯ 5 ವಿಕೆಟಿಗೆ 275 ರನ್‌ ಪೇರಿಸಿ ಜಯ ಸಾಧಿಸಿತು.

ಮೊದಲ ಓವರ್‌ನಲ್ಲೇ ವಿಕೆಟ್‌ ಉದುರಿಸಿಕೊಂಡ ಆಸೀಸ್‌, ಒಂದು ಹಂತದಲ್ಲಿ 4 ವಿಕೆಟಿಗೆ 52 ರನ್‌ ಮಾಡಿ ತೀವ್ರ ಸಂಕಟದಲ್ಲಿತ್ತು. ಆದರೆ ಮೂನಿ-ಟಹ್ಲಿಯಾ ಮೆಕ್‌ಗ್ರಾತ್‌ (74) 5ನೇ ವಿಕೆಟಿಗೆ 126 ರನ್‌ ಸೂರೆಗೈದು ಹೋರಾಟವನ್ನು ಜಾರಿಯಲ್ಲಿರಿಸಿದರು. ಬಳಿಕ ಮೂನಿ-ನಿಕೋಲಾ ಕ್ಯಾರಿ (ಅಜೇಯ 39) ಸೇರಿಕೊಂಡು ಭಾರತದ ಕೈಯಿಂದ ಗೆಲುವು ಕಸಿದರು.

ಅಂತಿಮ ಓವರ್ ಗೊಂದಲ

ಜೂಲನ್‌ ಪಾಲಾದ ಅಂತಿಮ ಓವರ್‌ನಲ್ಲಿ ಆಸೀಸ್‌ ಜಯಕ್ಕೆ 13 ರನ್‌ ಬೇಕಿತ್ತು. ಆದರೆ 2 ನೋಬಾಲ್‌, ಒಂದು ಓವರ್‌ ತ್ರೋ ಭಾರತಕ್ಕೆ ಮುಳುವಾಯಿತು. ಅಂತಿಮ ಎಸೆತದಲ್ಲಿ ಕ್ಯಾರಿ ಕ್ಯಾಚ್‌ ಕೊಟ್ಟಾಗ ಭಾರತ ಗೆಲುವಿನ ಸಂಭ್ರಮ ಆಚರಿಸಿತಾದರೂ ತೃತೀಯ ಅಂಪಾಯರ್‌ ಇದನ್ನು ನೋಬಾಲ್‌ ಎಂದು ಘೋಷಿಸಿದರು. ಇದರ ಲಾಭವೆತ್ತಿದ ಆಸೀಸ್‌ ಮತ್ತೆರಡು ರನ್‌ ತೆಗೆದು ಸತತ 26ನೇ ಗೆಲುವಿನ ಸಂಭ್ರಮ ಆಚರಿಸಿತು.

ಭಾರತದ ಬೃಹತ್‌ ಮೊತ್ತಕ್ಕೆ ಕಾರಣವಾದದ್ದು ಸ್ಮತಿ ಮಂಧನಾ ಅವರ 19ನೇ ಅರ್ಧ ಶತಕ (86) ಹಾಗೂ ಅವರು ನಡೆಸಿದ ಎರಡು ಅಮೋಘ ಜತೆಯಾಟ. ಮೊದಲ ವಿಕೆಟಿಗೆ ಶಫಾಲಿ ವರ್ಮ (22) ಅವರೊಂದಿಗೆ 74 ರನ್‌, ರಿಚಾ ಘೋಷ್‌ (44) ಜತೆ 4ನೇ ವಿಕೆಟಿಗೆ 76 ರನ್‌ ಪೇರಿಸಿದರು.

ಸಂಕ್ಷಿಪ್ತ ಸ್ಕೋರ್: ಭಾರತ-7 ವಿಕೆಟಿಗೆ 274 (ಮಂಧನಾ 86, ರಿಚಾ 44, ಪೂಜಾ 29, ಜೂಲನ್‌ ಔಟಾಗದೆ 28, ಮೆಕ್‌ಗ್ರಾತ್‌ 45ಕ್ಕೆ 3, ಮೊಲಿನಾಕ್ಸ್‌ 28ಕ್ಕೆ 2). ಆಸ್ಟ್ರೇಲಿಯ-50 ಓವರ್‌ಗಳಲ್ಲಿ 5 ವಿಕೆಟಿಗೆ 275 (ಮೂನಿ ಔಟಾಗದೆ 125, ಮೆಕ್‌ಗ್ರಾತ್‌ 74, ಕ್ಯಾರಿ ಔಟಾಗದೆ 39, ಮೇಘನಾ 38ಕ್ಕೆ 1, ಜೂಲನ್‌ 40ಕ್ಕೆ 1). ಪಂದ್ಯಶ್ರೇಷ್ಠ: ಬೆತ್‌ ಮೂನಿ.

ಟಾಪ್ ನ್ಯೂಸ್

19

Malpe ಬೀಚ್‌: ಸಮುದ್ರ ಪಾಲಾಗತ್ತಿದ್ದ ಬಾಲಕನ ರಕ್ಷಣೆ

18

Kaup: ಕೆಲಸಕ್ಕಾಗಿ ಬಂದಿದ್ದ ಯುವತಿ ನಾಪತ್ತೆ

20-one-plus

One Plusನ ಹೊಸ ಫೋನ್ ನಾರ್ಡ್ ಸಿಇ4: ಏನೇನಿದೆ ಇದರಲ್ಲಿ?

16-

Chikkaballapur: ಕೃಷಿ ಹೊಂಡದಲ್ಲಿ ಈಜಲು ಹೋಗಿ ಇಬ್ಬರು ವಿದ್ಯಾರ್ಥಿಗಳು ಸಾವು

13

Gangolli: ಮಹಿಳೆಗೆ ಬೈಕ್‌ ಢಿಕ್ಕಿ; ಗಾಯ

HDK ಹೇಳುತ್ತಿದ್ದದ್ದು ಪ್ರಜ್ವಲ್‌ ಪೆನ್‌ಡ್ರೈವ್‌ ಇರಬೇಕು: ಜಮೀರ್‌

HDK ಹೇಳುತ್ತಿದ್ದದ್ದು ಪ್ರಜ್ವಲ್‌ ಪೆನ್‌ಡ್ರೈವ್‌ ಇರಬೇಕು: ಜಮೀರ್‌

15-hunsur

Hunsur: ಕುಡಿತದ ಚಟಕ್ಕೆ ಯುವಕ ಬಲಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

IPL 2024; ಅತಿಯಾದ ಸಂಭ್ರಮಾಚರಣೆ ಮಾಡಿದ ಹರ್ಷಿತ್ ರಾಣಾಗೆ ಭಾರಿ ಶಿಕ್ಷೆ

IPL 2024; ಅತಿಯಾದ ಸಂಭ್ರಮಾಚರಣೆ ಮಾಡಿದ ಹರ್ಷಿತ್ ರಾಣಾಗೆ ಭಾರಿ ಶಿಕ್ಷೆ

T20 World Cup; ಭಾರತ ತಂಡ ಪ್ರಕಟ; ಅವಕಾಶ ಪಡೆದ ಪಾಂಡ್ಯ, ಪಂತ್, ಸ್ಯಾಮ್ಸನ್20

T20 World Cup; ಭಾರತ ತಂಡ ಪ್ರಕಟ; ಅವಕಾಶ ಪಡೆದ ಪಾಂಡ್ಯ, ಪಂತ್, ಸ್ಯಾಮ್ಸನ್

T20 ವಿಶ್ವಕಪ್‌ ಇಂಗ್ಲೆಂಡ್‌ ತಂಡ ಪ್ರಕಟ: ವರ್ಷದ ಬಳಿಕ ಸ್ಟಾರ್‌ ಬೌಲರ್‌ ತಂಡಕ್ಕೆ ಕಂಬ್ಯಾಕ್

T20 ವಿಶ್ವಕಪ್‌ ಇಂಗ್ಲೆಂಡ್‌ ತಂಡ ಪ್ರಕಟ: ವರ್ಷದ ಬಳಿಕ ಸ್ಟಾರ್‌ ಬೌಲರ್‌ ತಂಡಕ್ಕೆ ಕಂಬ್ಯಾಕ್

ಬ್ಯಾಟಿಂಗ್‌ – ಬೌಲಿಂಗ್‌ ಎರಡರಲ್ಲೂ ಬಲಿಷ್ಠ: T20 ವಿಶ್ವಕಪ್‌ಗೆ ದಕ್ಷಿಣ ಆಫ್ರಿಕಾ ಪ್ರಕಟ

ಬ್ಯಾಟಿಂಗ್‌ – ಬೌಲಿಂಗ್‌ ಎರಡರಲ್ಲೂ ಬಲಿಷ್ಠ: T20 ವಿಶ್ವಕಪ್‌ಗೆ ದಕ್ಷಿಣ ಆಫ್ರಿಕಾ ಪ್ರಕಟ

1-wqeewqe

Mumbai Indians ವಿರುದ್ಧ ತವರಿನ ಅಂಗಳ: ರಾಹುಲ್‌ಗೆ ಮಹತ್ವದ ಪಂದ್ಯ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

19

Malpe ಬೀಚ್‌: ಸಮುದ್ರ ಪಾಲಾಗತ್ತಿದ್ದ ಬಾಲಕನ ರಕ್ಷಣೆ

18

Kaup: ಕೆಲಸಕ್ಕಾಗಿ ಬಂದಿದ್ದ ಯುವತಿ ನಾಪತ್ತೆ

20-one-plus

One Plusನ ಹೊಸ ಫೋನ್ ನಾರ್ಡ್ ಸಿಇ4: ಏನೇನಿದೆ ಇದರಲ್ಲಿ?

16-

Chikkaballapur: ಕೃಷಿ ಹೊಂಡದಲ್ಲಿ ಈಜಲು ಹೋಗಿ ಇಬ್ಬರು ವಿದ್ಯಾರ್ಥಿಗಳು ಸಾವು

13

Gangolli: ಮಹಿಳೆಗೆ ಬೈಕ್‌ ಢಿಕ್ಕಿ; ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.