ಅಂಚೆ ಇಲಾಖೆಯ ಸಣ್ಣ ಹೂಡಿಕೆಗಳ ಯೋಜನೆ:
ಮೂರನೇ ತ್ರೈಮಾಸಿಕ ಬಡ್ಡಿದರಗಳನ್ನು ಪರಿಶೀಲಿಸಿ.
Team Udayavani, Oct 4, 2021, 4:40 PM IST
Representative Image used
ಹೊಸ ದೆಹಲಿ:- ನರೇಂದ್ರ ಮೋದಿ ಸರ್ಕಾರವು ಸಾರ್ವಜನಿಕ ಭವಿಷ್ಯ ನಿಧಿ, ಹಿರಿಯ ನಾಗರಿಕರ ಯೋಜನೆ ಮತ್ತು ಸುಕನ್ಯಾ ಸಮೃದ್ಧಿ ಯೋಜನೆಗಳು 2021-22 ಇವುಗಳ ಮೂರನೇ ತ್ರೈಮಾಸಿಕ ಬಡ್ಡಿದರಗಳನ್ನು ಯಥಾ ಪ್ರಕಾರ ಮುಂದುವರಿಸಲು ನಿರ್ಧರಿಸಿದೆ.
ಹಿರಿಯ ನಾಗರಿಕರ ಪಂಚವಾರ್ಷಿಕ ಯೋಜನೆಗಳ ಬಡ್ಡಿ ದರವು ಶೇ. 7.4 ದಲ್ಲೇ ಉಳಿಸಲಾಗಿದೆ. ಇವು ತ್ರೈಮಾಸಿಕವಾಗಿ ಪಾವತಿಸಲಾಗುವ ಹಿರಿಯ ನಾಗರಿಕರ ಉಳಿತಾಯ ಯೋಜನೆಯಾಗಿದೆ.
ಇದನ್ನೂ ಓದಿ;- ಶ್ರೀರಂಗಪಟ್ಟಣ : ಸಚಿವ ಅಶೋಕ್ ಕಾರಿಗೆ ಅಡ್ಡ ಮಲಗಿ ರೈತರ ಪ್ರತಿಭಟನೆ
ಈ ಹಿಂದೆ ಇದ್ದಂತೆ ರಾಷ್ಟೀಯ ಉಳಿತಾಯ ಖಾತೆಗಳ ಬಡ್ಡಿದರವನ್ನು ಶೇ. 4 ದಂತೆ ಮುಂದುವರಿಸಲಾಗಿದೆ. ಧೀರ್ಘಾವಧಿ ಹೂಡಿಕೆಗಳು ಅಂದರೆ, 5 ಅಥವಾ ಹೆಚ್ಚು ವರ್ಷಗಳ ಠೇವಣಿಗೆ ಶೇ. 5.5 ರಿಂದ 6.7 ವರೆಗೆ ಬಡ್ಡಿ ನೀಡಲಾಗುವುದು. ಹಾಗೆಯೇ ಆರ್ ಡಿ ಠೇವಣಿಯ ಬಡ್ಡಿದರವನ್ನು ಶೇ. 5.8ಕ್ಕೇರಿಸಲಾಗಿದೆ.
ಹಲವು ರಾಷ್ಟ್ರೀಯ ಠೇವಣೆ ಯೋಜನೆಗಳಿಗೆ ಅನ್ವಯವಾಗುವ ಬಡ್ಡಿದರಗಳ ಮಾಹಿತಿ ಈ ಕೆಳಗಿನಂತಿವೆ:-
ಕ್ರ.ಸಂ | ಯೋಜನೆಗಳು | ಬಡ್ಡಿದರಗಳು | ಪಾವತಿಯ ಕಾಲಾವಧಿ |
01. | ಅಂಚೆ ಉಳಿತಾಯ ಖಾತೆ | 4.0 | ವಾರ್ಷಿಕ |
02. | ವಾರ್ಷಿಕ ಹೂಡಿಕೆ | 5.5(ವಾರ್ಷಿಕ ಬಡ್ಡಿ- ರೂ. 561 on Rs. 10000 ಹೂಡಿಕೆ) | ತ್ರೈಮಾಸಿಕ |
03. | ದ್ವಿ ವಾರ್ಷಿಕ | 5.5(ವಾರ್ಷಿಕ ಬಡ್ಡಿ ರೂ. 561 on Rs. 10000 ಹೂಡಿಕೆ) | ತ್ರೈಮಾಸಿಕ |
04. | ಮೂರು ವರ್ಷಗಳ ಯೋಜನೆ | 5.5(ವಾರ್ಷಿಕ ಬಡ್ಡಿ ರೂ.. 561 on Rs. 10000 ಹೂಡಿಕೆ) | ತ್ರೈಮಾಸಿಕ |
05. | 5 ವರ್ಷಗಳ ಯೋಜನೆ | 6.7(ವಾರ್ಷಿಕ ಬಡ್ಡಿ ರೂ.. 687 on Rs. 10000 ಹೂಡಿಕೆ) | ತ್ರೈಮಾಸಿಕ |
06. | 5 ಆರ್ಡಿ | 5.8 | ತ್ರೈಮಾಸಿಕ |
07. | ಹಿರಿಯ ನಾಗರಿಕರ ಯೋಜನೆ | 7.4(ತ್ರೈಮಾಸಿಕ ಬಡ್ಡಿದರ Rs. 185 on Rs. 10000 ಹೂಡಿಕೆ) | ತ್ರೈಮಾಸಿಕ ಮತ್ತು ಪಾವತಿಸಿದಂತೆ |
08. | ತಿಂಗಳ ಹೂಡಿಕೆ | 6.6(ತಿಂಗಳ ಬಡ್ಡಿ. Rs. 55 on Rs. 10000 ಹೂಡಿಕೆ) | ಮಾಸಿಕ ಮತ್ತು ಪಾವತಿಸಿದಂತೆ |
09. | ಎನ್ಎಸ್ಸಿ | 6.8 | ವಾರ್ಷಿಕ |
10. | ಪಿಪಿಎಪ್ | 7.1 | ವಾರ್ಷಿಕ |
11. | ಕಿಸಾನ್ ವಿಕಾಸ್ ಪತ್ರ | 6.9 | ವಾರ್ಷಿಕ |
12. | ಸುಕನ್ಯ ಸಮೃದ್ಧಿ ಯೋಜನೆ | 7.6 | ವಾರ್ಷಿಕ |
ಜನವರಿ 2022 ರಿಂದ 1- ಅಕ್ಟೋಬರ್ -2022ರ ವರೆಗಿನ ಯೋಜನೆಗಳಿಗೆ ಈ ಬದಲಾವನೆಗಳು ಅನ್ವಯಿಸುತ್ತವೆ. 1- ಅಕ್ಟೋಬರ್- 2021 ರಿಂದ 31 – ಡಿಸೆಂಬರ್ 2021 ವರೆಗಿನ ಅವಧಿಯಲ್ಲಿ ಆರಂಭವಾದ ಯೋಜನೆಗಳ ಬಡ್ಡಿದರಕ್ಕೆ ಈ ಬದಲಾವಣೆಗಳು ಅನ್ವಯಿಸುವುದಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Share Market Business: ಷೇರು ವಹಿವಾಟು-ದಕ್ಷಿಣ ಭಾರತ ಮಹಿಳೆಯರೇ ಮುಂಚೂಣಿಯಲ್ಲಿದ್ದಾರೆ!
Stock Market- 4ನೇ ಹಂತದ ಮತದಾನ: ಬಾಂಬೆ ಷೇರುಪೇಟೆ ಸೂಚ್ಯಂಕ 750 ಅಂಕ ಕುಸಿತ
Election result ಅನಿಶ್ಚಿತತೆ: 1,062 ಅಂಕ ಕುಸಿದ ಸೆನ್ಸೆಕ್ಸ್
Air India: ಪೈಲಟ್ ಗಳ ಸಾಮೂಹಿಕ ರಜೆ-70ಕ್ಕೂ ಅಧಿಕ ಏರ್ ಇಂಡಿಯಾ ವಿಮಾನ ಸಂಚಾರ ರದ್ದು
Share Market; ರೇಖಾ ಜುಂಜುನ್ವಾಲಾಗೆ ಒಂದೇ ದಿನ 800 ಕೋಟಿ ರೂ. ನಷ್ಟ!
MUST WATCH
ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ
ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು
ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ
ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್ಪಟೇಲ್ ಹೇಳಿಕೆ
ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ
ಹೊಸ ಸೇರ್ಪಡೆ
Gundmi Toll Plaza ಸ್ಥಳೀಯರಿಗೆ ಟೋಲ್ ಬರೆ; ಟೋಲ್ಗೆ ಮುತ್ತಿಗೆ; ರಸ್ತೆ ತಡೆ ಪ್ರತಿಭಟನೆ
Election data ಏರಿಕೆ ಬಗ್ಗೆ ಪ್ರತಿಕ್ರಿಯಿಸಿ: ಇಸಿಗೆ ಸುಪ್ರೀಂ
D.K. ಜಿಲ್ಲೆಯಲ್ಲಿ ಗುಡುಗು ಸಹಿತ ಉತ್ತಮ ಮಳೆ; ಇನ್ನೂ ನಾಲ್ಕು ದಿನ “ಎಲ್ಲೋ ಅಲರ್ಟ್’
Malpe ದೋಣಿಗಳು ಢಿಕ್ಕಿಯಾಗಿ ಮುಳುಗಡೆ; ಐವರು ಮೀನುಗಾರರ ರಕ್ಷಣೆ
Chhattisgarh; ನಿಲ್ಲದ ನಕ್ಸಲ್ ಬೇಟೆ: ಓರ್ವನ ಹತ್ಯೆ