ರೈಲು ಮಾದರಿಯ ಶಾಲೆಗೆ ಬೇಕಿದೆ ಕೊಠಡಿಗಳು

8 ವಿದಾರ್ಥಿಗಳಿದ್ದ ನಾಗೂರು ಸ.ಹಿ.ಪ್ರಾ. ಶಾಲೆಯಲ್ಲೀಗ 129 ಮಕ್ಕಳು

Team Udayavani, Oct 9, 2021, 5:25 AM IST

ರೈಲು ಮಾದರಿಯ ಶಾಲೆಗೆ ಬೇಕಿದೆ ಕೊಠಡಿಗಳು

ಬೈಂದೂರು: 2018ರಲ್ಲಿ ಕೇವಲ ಎಂಟು ಮಕ್ಕಳಿದ್ದು ಮುಚ್ಚುವ ಹಂತಕ್ಕೆ ಬಂದಿದ್ದ ಅರ್ಧ ಶತಮಾನ ಇತಿಹಾಸವಿರುವ ಶಾಲೆಯೊಂದು ಊರಿನವರು ಮತ್ತು ಶಿಕ್ಷಣ ಪ್ರೇಮಿಗಳ ಪ್ರಯತ್ನದಿಂದ ಪುನರ್‌ ಜನ್ಮ ಪಡೆದಿದೆ. ಆದರೆ ಕೊಠಡಿ ಸೇರಿದಂತೆ ಒಂದನೇ ತರಗತಿಗೆ ಆಂಗ್ಲ ಮಾಧ್ಯಮ ಹಾಗೂ ಕೆಲವೊಂದು ಅಗತ್ಯ ಸೌಕರ್ಯಗಳನ್ನು ಒದಗಿಸಿಕೊಟ್ಟರೆ ಶಾಲೆಯ ಅಭಿವೃದ್ಧಿಗೆ ಸಹಕಾರಿಯಾಗಲಿದೆ..

ಮುಚ್ಚುವ ಹಂತಕ್ಕೆ ತಲುಪಿದ್ದ ಶಾಲೆ
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಿಂದೂಸ್ಥಾನಿ ನಾಗೂರು (ಉರ್ದು) ಇಲ್ಲಿ ಕೇವಲ 8 ವಿದ್ಯಾರ್ಥಿಗಳಿದ್ದ ಕಾರಣ 2018-19ರಲ್ಲಿ ಈ ಶಾಲೆಯನ್ನು ಇಲಾಖೆ ಬೇರೆ ಶಾಲೆಯೊಂದಿಗೆ ವಿಲೀನಕ್ಕೆ ಮುಂದಾಗಿತ್ತು. ಆದರೆ ಈ ಶಾಲೆಯನ್ನು ಉಳಿಸಿಕೊಳ್ಳಬೇಕೆಂದು ಊರ ಹಿರಿಯರು, ಶಿಕ್ಷಣಾಭಿಮಾನಿಗಳು, ಮುಖ್ಯ ಶಿಕ್ಷಕರು ಮತ್ತು ಶಿಕ್ಷಕರ ಬಳಗ ಪಣ ತೊಟ್ಟಿದ್ದರು. ಇದರ ಪರಿಣಾಮ ಎಸ್‌. ಡಿ.ಎಂ.ಸಿ. ಜತೆಗೆ ಎಸ್‌.ಡಿ.ಸಿ. ರಚನೆಗೊಂಡು ಶಾಲೆಗೆ ಸ್ವಂತ ವಾಹನ ಸೌಲಭ್ಯ, ಪೀಠೊಪಕರಣ, ಶಾಲೆಗೆ ರೈಲು ಮಾದರಿ ಬಣ್ಣ , ತಾತ್ಕಾಲಿಕ ಭೌತಿಕ ವ್ಯವಸ್ಥೆ ಕಲ್ಪಿಸಿ, ಮನೆ ಮನೆಗೆ ತೆರಳಿ ಶಾಲೆಗೆ ಮಕ್ಕಳನ್ನು ಸೇರಿಸುವ ಪ್ರಯತ್ನದಲ್ಲಿ ಯಶಸ್ವಿಯಾಗಿತ್ತು.

ಶಾಲೆಗೆ ಕೊಠಡಿ ,ಶಿಕ್ಷಕರ ಕೊರತೆ
ಮೇಲಧಿಕಾರಿಗಳಿಗೆ ಶಾಲೆಗೆ ಕೊಠಡಿ, ಶಿಕ್ಷಕರ ಆವಶ್ಯಕತೆಯಿದೆ ಎನ್ನುವ ಮನವಿ ನೀಡಲಾಗಿದೆ. ಆದರೆ ಇದುವರೆಗೆ ಹೊಸ ಕೊಠಡಿ ನಿರ್ಮಾಣವಾಗಿಲ್ಲ ಮತ್ತು ಶಿಕ್ಷಕರನ್ನು ನೀಡಿಲ್ಲ. ಅಲ್ಲದೇ ಒಂದನೇ ತರಗತಿ ಆಂಗ್ಲ ಮಾಧ್ಯಮ ವಿಭಾಗಕ್ಕೆ ಬೇಡಿಕೆ ಇಟ್ಟಿದ್ದರೂ ಫಲಪ್ರದವಾಗಿಲ್ಲ.

2023ಕ್ಕೆ 50 ವರ್ಷಗಳ ಸಂಭ್ರಮ
1ನೇ ತರಗತಿಯಲ್ಲಿ 43 ವಿದ್ಯಾರ್ಥಿಗಳು, 2ನೇ ತರಗತಿಯಲ್ಲಿ 30 ವಿದ್ಯಾರ್ಥಿಗಳು, 3ನೇ ತರಗತಿಯಲ್ಲಿ 20 ವಿದ್ಯಾರ್ಥಿಗಳು, 4ನೇ ತರಗತಿಯಲ್ಲಿ 7 ವಿದ್ಯಾರ್ಥಿಗಳು, 5ನೇ ತರಗತಿಯಲ್ಲಿ 5 ವಿದ್ಯಾರ್ಥಿಗಳು, 6ನೇ ತರಗತಿಯಲ್ಲಿ 13 ವಿದ್ಯಾರ್ಥಿಗಳು, 7ನೇ ತರಗತಿ ಯಲ್ಲಿ 12 ವಿದ್ಯಾರ್ಥಿಗಳಿದ್ದಾರೆ.

ಇದನ್ನೂ ಓದಿ:ನಬಾರ್ಡ್  ಯೋಜನೆಗಳಿಗೆ ಹೆಚ್ಚಿನ ಅನುದಾನಕ್ಕಾಗಿ ಕೇಂದ್ರಕ್ಕೆ ಮನವಿ : ಮುಖ್ಯಮಂತ್ರಿ ಬೊಮ್ಮಾಯಿ

ಬೇಡಿಕೆಗಳು
– ಶಾಲೆಗೆ 4 ಕೊಠಡಿಗಳು ಆವಶ್ಯಕ.
– ನಾಲ್ವ ರು ಶಿಕ್ಷಕರ ಆವಶ್ಯಕತೆಯಿದೆ.
– ಶಾಲೆಗೆ ಗ್ರಂಥಾಲಯ ಬೇಕಿದೆ.
– ಪ್ರಯೋಗಾಲಯ ಅಗತ್ಯವಿದೆ.
– ಪುಟಾಣಿಗಳಿಗೆ ಬಾಲವನ ನಿರ್ಮಿಸಬೇಕಿದೆ.

ತುರ್ತು ಕೊಠಡಿ ಅಗತ್ಯ
ಸಾರ್ವಜನಿಕ ಶಿಕ್ಷಣ ಇಲಾಖೆ 2018- 19ರಲ್ಲಿ ಮಕ್ಕಳ ಕೊರತೆಯನ್ನು ಕಂಡು ಶಾಲೆಯ ವಿಲೀನಕ್ಕೆ ಮುಂದಾಗಿತ್ತು. ವಿವಿಧ ಸಮಿತಿ ನಿರ್ಮಿಸಿಕೊಂಡು ಮಕ್ಕಳನ್ನು ಶಾಲೆಗೆ ಕರೆತರುವಲ್ಲಿ ಯಶಸ್ವಿಯಾಗಿದ್ದೇವೆ. ಈಗ ಇರುವ ಕೊಠಡಿಗಳು ಕೇವಲ 4 ತರಗತಿ ನಡೆಸಲು ಸಾಕಾಗುತ್ತಿಲ್ಲ ಎನ್ನುವುದು ಶಿಕ್ಷಕರ ಅಭಿಪ್ರಾಯವಾಗಿದೆ.
-ಮಹಮ್ಮದ್‌ ರಫೀಕ್‌, ಎಸ್‌.ಡಿ.ಸಿ. ಅಧ್ಯಕ್ಷರು

ಶಾಲೆಗೀಗ ಪುನರ್‌ ಜನ್ಮ
ಶಾಲೆಯನ್ನು ಮುಚ್ಚಿಬಿಡುತ್ತಿದ್ದ ಸಂದರ್ಭದಲ್ಲಿ ವಿವಿಧ ಸಮಿತಿ ಹಾಗೂ ಊರವರ ನೆರವಿನಿಂದ ಶಾಲೆಗೀಗ ಪುನರ್‌ ಜನ್ಮ ಬಂದಿದೆ. ಮಕ್ಕಳ ದಾಖಲಾತಿ ಹೆಚ್ಚಿದ್ದು ಶಿಕ್ಷಕರ ಅಗತ್ಯವಿದೆ.
-ರವೀಂದ್ರ ಶ್ಯಾನುಭಾಗ್‌, ಎಸ್‌.ಡಿ.ಎಂ.ಸಿ. ಅಧ್ಯಕ್ಷರು

ಶಾಲೆಗೀಗ ಪುನರ್‌ ಜನ್ಮ
ಶಾಲೆಯ ಒಟ್ಟು 189 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು ಹೆಚ್ಚುವರಿ ಕೊಠಡಿಗಳು ಮತ್ತು ಶಿಕ್ಷಕರ ಅವಶ್ಯಕತೆಯಿದೆ.ಈ ಬಗ್ಗೆ ಈಗಾಗಲೇ ಶಿಕ್ಷಣಾಧಿಕಾರಿಗಳಿಗೆ ಮತ್ತು ಸಂಬಂಧಪಟ್ಟ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಲಾಗಿದೆ.
-ವಿಶ್ವನಾಥ ಪೂಜಾರಿ, ಮುಖ್ಯ ಶಿಕ್ಷಕರು

-ಅರುಣ ಕುಮಾರ್‌ ಶಿರೂರು

ಟಾಪ್ ನ್ಯೂಸ್

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Sullia ಮನೆಯಿಂದ ನಗ, ನಗದು ಕಳವು

Sullia ಮನೆಯಿಂದ ನಗ, ನಗದು ಕಳವು

Uppinangady ಸೇನೆಯ ಐಟಿಬಿಪಿ ವಿಭಾಗಕ್ಕೆ ಡಾ| ಗೌತಮ್‌ ರೈ ಸೇರ್ಪಡೆ

Uppinangady ಸೇನೆಯ ಐಟಿಬಿಪಿ ವಿಭಾಗಕ್ಕೆ ಡಾ| ಗೌತಮ್‌ ರೈ ಸೇರ್ಪಡೆ

IPL 2024; ಮುಂಬೈ ವಿರುದ್ಧ ಭರ್ಜರಿ ಗೆಲುವು; ಮೂರಕ್ಕೇರಿದ ರಾಹುಲ್‌ ಪಡೆ

IPL 2024; ಮುಂಬೈ ವಿರುದ್ಧ ಭರ್ಜರಿ ಗೆಲುವು; ಮೂರಕ್ಕೇರಿದ ರಾಹುಲ್‌ ಪಡೆ

Sullia ಮರ ಕಡಿಯುತ್ತಿದ್ದಾಗ ದುರ್ಘ‌ಟನೆ; ಮರಗಳ ನಡುವೆ ಸಿಲುಕಿ ವ್ಯಕ್ತಿ ಸಾವು

Sullia ಮರ ಕಡಿಯುತ್ತಿದ್ದಾಗ ದುರ್ಘ‌ಟನೆ; ಮರಗಳ ನಡುವೆ ಸಿಲುಕಿ ವ್ಯಕ್ತಿ ಸಾವು

yogi adityanath

Kolkatta; ಸಂಪತ್ತು ಹಂಚಿಕೆ ಮಾಡುತ್ತೇವೆ: ಉ.ಪ್ರ.ಸಿಎಂ ಯೋಗಿ ಘೋಷಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

19

Malpe ಬೀಚ್‌: ಸಮುದ್ರ ಪಾಲಾಗತ್ತಿದ್ದ ಬಾಲಕನ ರಕ್ಷಣೆ

18

Kaup: ಕೆಲಸಕ್ಕಾಗಿ ಬಂದಿದ್ದ ಯುವತಿ ನಾಪತ್ತೆ

13

Gangolli: ಮಹಿಳೆಗೆ ಬೈಕ್‌ ಢಿಕ್ಕಿ; ಗಾಯ

12

Karkala: ಹಿಮ್ಮುಖ ಚಲಿಸಿದ ಟಿಪ್ಪರ್‌; ಸ್ಕೂಟರ್‌ ಜಖಂ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Sullia ಮನೆಯಿಂದ ನಗ, ನಗದು ಕಳವು

Sullia ಮನೆಯಿಂದ ನಗ, ನಗದು ಕಳವು

Uppinangady ಸೇನೆಯ ಐಟಿಬಿಪಿ ವಿಭಾಗಕ್ಕೆ ಡಾ| ಗೌತಮ್‌ ರೈ ಸೇರ್ಪಡೆ

Uppinangady ಸೇನೆಯ ಐಟಿಬಿಪಿ ವಿಭಾಗಕ್ಕೆ ಡಾ| ಗೌತಮ್‌ ರೈ ಸೇರ್ಪಡೆ

IPL 2024; ಮುಂಬೈ ವಿರುದ್ಧ ಭರ್ಜರಿ ಗೆಲುವು; ಮೂರಕ್ಕೇರಿದ ರಾಹುಲ್‌ ಪಡೆ

IPL 2024; ಮುಂಬೈ ವಿರುದ್ಧ ಭರ್ಜರಿ ಗೆಲುವು; ಮೂರಕ್ಕೇರಿದ ರಾಹುಲ್‌ ಪಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.