ದೀಪಾವಳಿ: ಹಬ್ಬದಾಚರಣೆಗೆ ಹಲವು ನೆಪ!


Team Udayavani, Nov 3, 2021, 10:00 AM IST

deepavali 1

ದೀಪಾವಳಿ ಎಂದಾಕ್ಷಣ ನೆನಪಾಗುವುದು ಉರಿಯುವ ದೀಪ, ಪೂಜೆ, ಪಟಾಕಿ ಸದ್ದು, ಜೊತೆಗೆ ಕಣ್ಣು ಹಾಯಿಸಿದಲ್ಲೆಲ್ಲಾ ಕಾಣುವ, ಕಣ್ಣಿಗೆ ಮುದ ನೀಡುವ ಗೂಡು ದೀಪಗಳು. ಹಬ್ಬದ ವಾತಾವರಣ ಕತ್ತಲೆಯಿಂದ ಬೆಳಕಿನೆಡೆಗೆ… ಅಜ್ಞಾನದಿಂದ ಜ್ಞಾನದೆಡೆಗೆ ಸಾಗುತ್ತಾ, ಸದಾ ಉರಿಯುತ್ತಾ ಎಲ್ಲರ ಪಾಲಿನ ಬೆಳಕಾಗಬೇಕು ಎಂಬ ಸಂದೇಶ ಸಾರುತ್ತದೆ.

ದೀಪಾವಳಿ ಎಂದರೆ ಮತ್ತೆ ನೆನಪಾಗುವುದು ನಮ್ಮ ಬಾಲ್ಯ ಹಾಗೂ ನಮ್ಮ ಹಾಸ್ಟೆಲ್ ದಿನಗಳು. ಹಾಸ್ಟೆಲ್ ನಲ್ಲಿದ್ದಾಗಿನ ಸಂಭ್ರಮವನ್ನು ಎಷ್ಟೇ ವರ್ಷ ಕಳೆದರೂ ಮರೆಯಲಾಗದು. ಪಟಾಕಿ ಇಲ್ಲದಿದ್ದರೂ ನಮ್ಮ ಇಡೀ ಕಟ್ಟಡಕ್ಕೆ ಮಾಡುತ್ತಿದ್ದ ದೀಪದ ಅಲಂಕಾರವನ್ನು ನೋಡುವುದೇ ಅದ್ಭುತವಾಗಿತ್ತು. ಆ ಸಂಭ್ರಮದ ಜೊತೆಗೆ ತುಳಸಿ ಪೂಜೆಯ ದಿನ ಶ್ರೀದೇವಿಯ ಪೂಜೆ ಹಾಸ್ಟೆಲ್ನಲ್ಲಿ ಹಬ್ಬದ ವಾತಾವರಣ ಮೂಡಿಸುತ್ತಿತ್ತು. ನಮ್ಮಲ್ಲಿ ಸಂತೋಷ, ಸಂಭ್ರಮ ತರುವ ದೀಪಾವಳಿಯ ಹಿನ್ನೆಲೆಯೂ ಕುತೂಹಲಕರವಾಗಿದೆ.

ದೀಪಗಳ ಹಬ್ಬದ ಮಹತ್ವ ಹೀಗಿದೆ…
ದೀಪಾವಳಿ (ದೀಪಗಳ ಸಾಲು) ದೀಪಗಳಿಂದ ದೀಪಗಳನ್ನು ಹಚ್ಚುವ ಹಬ್ಬ. ಇದನ್ನು ವಿಕ್ರಮಶಕೆಯ ವರ್ಷದ ಕೊನೆಯಲ್ಲಿ ಆಚರಿಸಲಾಗುತ್ತದೆ. ವಿಕ್ರಮಶಕೆ ಉತ್ತರ ಭಾರತದಲ್ಲಿ ಉಪಯೋಗಿಸಲ್ಪಡುವುದರಿಂದ ಅಲ್ಲಿ ದೀಪಾವಳಿ ಹೊಸ ವರ್ಷದ ಹಬ್ಬವೂ ಹೌದು. ಭಾರತದಲ್ಲಿ ಸಾಂಪ್ರದಾಯಿಕವಾಗಿ ಪಂಚಾಂಗ ಚಂದ್ರಮಾನವನ್ನು ಅವಲಂಬಿಸಿವೆ. ಅಂದರೆ ಆಶ್ವಯುಜ ಮಾಸ ಕೃಷ್ಣಪಕ್ಷದ ಚತುರ್ದಶಿ, ಅಮಾವಾಸ್ಯೆ ಹಾಗೂ ಕಾರ್ತಿಕ ಮಾಸ ಶುಕ್ಲಪಕ್ಷದ ಪಾಡ್ಯ – ಈ ದೀಪಾವಳಿಯ ದಿನ ಇಡೀ ದೇಹಕ್ಕೆ ಎಣ್ಣೆ ಸ್ನಾನವನ್ನು ಮಾಡುತ್ತೇವೆ ಏಕೆಂದರೆ ಇದು ನಮ್ಮ ಆರೋಗ್ಯಕ್ಕೆ ಹಾಗೂ ನರನಾಡಿಗಳ ರಕ್ತ ಚಲನೆಗೆ ಸಹಕಾರಿಯಾಗಿದೆ. ಯಾವುದೇ ಚರ್ಮದ ತೊಂದರೆ ಇದ್ದರು ವಾಸಿಮಾಡುವಲ್ಲಿ ಇದು ಸಹಕಾರಿಯಾಗಿದೆ.

ವಿಭಿನ್ನ ಹಿನ್ನೆಲೆಗಳು
ವಿವಿಧ ಸ್ಥಳಗಳಲ್ಲಿ ವಿವಿಧ ಪೌರಾಣಿಕ ಇತಿಹಾಸ ಹೊಂದಿರುವ ಹಬ್ಬಈ ದೀಪಾವಳಿ. ಏಳು ಪ್ರಮುಖ ಪೌರಾಣಿಕ ಹಿನ್ನೆಲೆಗಳ ಬಗ್ಗೆ ನಮಗೆ ತಿಳಿದಿರಲೇಬೇಕು. ಮೊದಲನೆಯದು ಉತ್ತರ ಭಾರತದಲ್ಲಿ ದೀಪಾವಳಿಯನ್ನು ʼರಾಮ ಅಯೋಧ್ಯೆಗೆ ಹಿಂತಿರುಗಿದ ದಿನʼ ಎಂದು ಆಚರಿಸಲಾಗುತ್ತದೆ. ರಾಮ ಅಯೋಧ್ಯೆಗೆ ಹಿಂದಿರುಗಿದಾಗ ಪ್ರಜೆಗಳು ದೀಪಗಳನ್ನು ಹಚ್ಚಿ ಆರತಿಯನ್ನು ಬೆಳಗ್ಗೆ ರಂಗೋಲಿಯನ್ನು ಹಾಕಿ ಶ್ರೀರಾಮಚಂದ್ರನ ಸ್ವಾಗತಿಸಿದರಂತೆ. ಭಾರತದ ಅನೇಕ ಕಡೆಗಳಲ್ಲಿ ಈ ದಿನದಂದು ಲಕ್ಷ್ಮಿ ಪೂಜೆಯನ್ನೂ ಮಾಡಲಾಗುತ್ತದೆ.

ಇದನ್ನೂ ಓದಿ:- ತುಮಕೂರು : ಡೆತ್ ನೋಟ್ ಬರೆದಿಟ್ಟು ನೇಣಿಗೆ ಕೊರಳೊಡ್ಡಿದ ಅಪ್ಪು ಅಭಿಮಾನಿ

ವ್ಯಾಪಾರಿಗಳು ಈ ದಿನವನ್ನು ʼಹೊಸವರ್ಷʼ ಎಂದು ಪರಿಗಣಿಸುತ್ತಾರೆ. ವ್ಯಾಪಾರದಲ್ಲಿ ಲಾಭ ಗಳಿಸಲು ವರಮಹಾಲಕ್ಷ್ಮಿಯನ್ನು ಪೂಜಿಸಲಾಗುತ್ತದೆ. ಹಾಗೆ ಬಂಗಾಳ, ಬಿಹಾರ ಹೀಗೆ ಕೆಲವು ಕಡೆಗಳಲ್ಲಿ ದೀಪಾವಳಿಯಂದು ಮಧ್ಯರಾತ್ರಿಯಿಂದ ಬೆಳಗ್ಗೆವರೆಗೆ ಕಾಳಿ ಪೂಜೆ ನೆರವೇರಿಸುತ್ತಾರೆ. ಪಾರ್ವತಿ ದೇವಿಯು ದುಷ್ಟಸಂಹಾರಕ್ಕಾಗಿ ಕಾಳಿ ಅವತಾರ ತಾಳಿದ್ದಾರೆ ಎಂದು ನಂಬುತ್ತಾರೆ.

ಇನ್ನು ಸಿಕ್ಕರು ಕೂಡ ದೀಪಾವಳಿ ಆಚರಿಸುತ್ತಾರೆ. ಸಿಕ್ಕರ ಆರನೇ ಧರ್ಮಗುರು, ಅಂದರೆ ಗುರುಗೋವಿಂದನ 62 ಹಿಂದೂ ರಾಜರನ್ನು ಜೈಲಿನಿಂದ ಬಿಡುಗಡೆ ಮಾಡಲಾಯಿತು, ಈ ಸಮಯದಲ್ಲಿ ಪ್ರಜೆಗಳು ಅವರನ್ನು ದೀಪಗಳನ್ನು ಹಚ್ಚಿ ಸ್ವಾಗತಿಸಿದರೆಂಬ ನಂಬಿಕೆಯಿದೆ. ಇನ್ನು ಮಹಾವೀರನು ದೀಪಾವಳಿಯಂದು ಮೋಕ್ಷ ಪಡೆದರು ಎಂಬ ನಂಬಿಕೆ ಕೂಡ ಅನೇಕರಲ್ಲಿ ಇದೆ. ಅಂತೂ ಬದುಕಿನ ಅಂಧಕಾರವನ್ನು ಹೋಗಲಾಡಿಸಿ ಬೆಳಕು ಮೂಡುವಂತೆ ಹಬ್ಬವನ್ನು ಭಕ್ತಿ ಶ್ರದ್ಧೆಗಳಿಂದ ಆಚರಿಸುವುದು ಪರಂಪರೆಯಾಗಿದೆ.

ಈ ರೀತಿ ಹಬ್ಬದ ಮಹತ್ವ ತಿಳಿದು ದೀಪಾವಳಿಯನ್ನು ಆಚರಿಸೋಣ. ಹೊರದೇಶದಿಂದ ಬರುವ ಪಟಾಕಿಗಳನ್ನು ತ್ಯಜಿಸಿ ಸ್ವದೇಶಿ ಪಟಾಕಿಗಳನ್ನು ಜಾಗರೂಕತೆಯಿಂದ ಬಳಸೋಣ. ಉರಿದು ಆರುವ ಮಧ್ಯೆ ಪ್ರಜ್ವಲಿಸಿ ಬೇರೆಯವರಿಗೆ ಬೆಳಕಾಗುವ ದೀಪದಂತೆ ನಾವು ಕೂಡ ಬೇರೆಯವರ ಬಾಳಲ್ಲಿ ಬೆಳಕಾಗಿ ಅಂಧಕಾರ ಹೋಗಲಾಡಿಸುವಲ್ಲಿ ಮುಖ್ಯಪಾತ್ರ ವಾಗಿರಬೇಕು.

– ಪ್ರಜ್ವಲ್ ಸಿ
ದ್ವಿತೀಯ ಬಿಎ, ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರು

ಟಾಪ್ ನ್ಯೂಸ್

9-uv-fusion

Importance: ಅನ್ನದ ಒಂದು ಅಗುಳಿನ ಮಹತ್ವ …

Sandalwood; ಟ್ರೆಂಡ್‌ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ

Sandalwood; ಟ್ರೆಂಡ್‌ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ

Traffic jam: ತುಮಕೂರು, ಮೈಸೂರು ರಸ್ತೇಲಿ ಟ್ರಾಫಿಕ್‌ ಜಾಮ್‌!

Traffic jam: ತುಮಕೂರು, ಮೈಸೂರು ರಸ್ತೇಲಿ ಟ್ರಾಫಿಕ್‌ ಜಾಮ್‌!

b y vijayendra

LokSabha; ರಾಹುಲ್ ಗಾಂಧಿಯನ್ನು ರಾಜ್ಯಕ್ಕೆ ಹೆಚ್ಚೆಚ್ಚು ಕರೆಯಿಸಬೇಕು: ವಿಜಯೇಂದ್ರ‌ ವ್ಯಂಗ್ಯ

ಸಲ್ಮಾನ್ ಮನೆ ಬಳಿ ಗುಂಡಿನ ದಾಳಿ: ಲಾರೆನ್ಸ್ ಬಿಷ್ಣೋಯ್ ಸಹೋದರನ ವಿರುದ್ಧ ಲುಕ್ ಔಟ್ ನೋಟಿಸ್

ಸಲ್ಮಾನ್ ಮನೆ ಬಳಿ ಗುಂಡಿನ ದಾಳಿ: ಲಾರೆನ್ಸ್ ಬಿಷ್ಣೋಯ್ ಸಹೋದರನ ವಿರುದ್ಧ ಲುಕ್ ಔಟ್ ನೋಟಿಸ್

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-weqwqewqwq

Bha ಸ್ವದೇಶಿ ವ್ಯವಸ್ಥೆ ; ನಮ್ಮ ಪಾದರಕ್ಷೆಗಳಿಗೆ ನಮ್ಮ ಅಳತೆ: ‘ಭ’ ಗಾತ್ರ ವ್ಯವಸ್ಥೆ!

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

17-voting

Vote: ಮತದಾನದ ಮಹತ್ವ

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

9-uv-fusion

Importance: ಅನ್ನದ ಒಂದು ಅಗುಳಿನ ಮಹತ್ವ …

8-uv-fusion

UV Fusion: ಅತಿಯಾದ ಒಲವು ಒಳಿತಲ್ಲ

MP Tejaswi Surya: ಸಂಸದ ತೇಜಸ್ವಿ ಸೂರ್ಯ ವಿರುದ್ಧ ದೂರು

MP Tejaswi Surya: ಸಂಸದ ತೇಜಸ್ವಿ ಸೂರ್ಯ ವಿರುದ್ಧ ದೂರು

Bengaluru: ಬೂತ್‌ನಲ್ಲಿ ಕುಸಿದ ಮಹಿಳೆಗೆ ಜೀವದಾನ

Bengaluru: ಬೂತ್‌ನಲ್ಲಿ ಕುಸಿದ ಮಹಿಳೆಗೆ ಜೀವದಾನ

Sandalwood; ಟ್ರೆಂಡ್‌ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ

Sandalwood; ಟ್ರೆಂಡ್‌ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.