ಯಶಸ್ಸು ನಮ್ಮದಾಗ ಬೇಕಾದರೆ ಸ್ವಪ್ರಯತ್ನ ಮುಖ್ಯ


Team Udayavani, Nov 20, 2021, 6:05 AM IST

ಯಶಸ್ಸು ನಮ್ಮದಾಗ ಬೇಕಾದರೆ ಸ್ವಪ್ರಯತ್ನ ಮುಖ್ಯ

ಜಗತ್ತಿನಲ್ಲಿರುವ ಪ್ರತಿಯೊಬ್ಬರೂ ಒಂದಲ್ಲ ಒಂದು ರೀತಿಯ ಯಶಸ್ಸಿಗಾಗಿ ಹಾತೊರೆಯುತ್ತಾರೆ. ಯಶಸ್ಸೆಂಬುದು ಹಣಕೊಟ್ಟು ಖರೀದಿಸುವಂಥದ್ದಲ್ಲ ಅಥವಾ ಯಾರೋ ನಮಗೆ ದಾನವಾಗಿ ನೀಡುವಂತದ್ದೂ ಅಲ್ಲ. ಯಶಸ್ಸಿನ ಸೂತ್ರವಿರುವುದು ಬರೀ ಸ್ವ ಪ್ರಯತ್ನದಲ್ಲಿ. ಸಾಧನೆಯ ಬಗೆಗಿನ ಕನಸುಗಳನ್ನು ನಾವು ಕಾಣುತ್ತೇವೆಯಾದರೂ ಅವು ಗಳನ್ನು ನನಸಾಗಿಸಲು ಪ್ರಯತ್ನವನ್ನೇ ಮಾಡುವುದಿಲ್ಲ. ನಮ್ಮ ಕನಸುಗಳನ್ನು ಸಾಕಾರಗೊಳಿಸಲು ಯಾರು ಸಹಾಯ ಮಾಡಿಯಾರೆಂಬ ನಿರೀಕ್ಷೆಯಲ್ಲಿಯೇ ದಿನ ಕಳೆಯುತ್ತಿರುತ್ತೇವೆ. ಪುಸ್ತಕಗಳನ್ನು ಓದುವುದರಿಂದ, ಅನುಭವ ಇದೆ ಎಂದ ಮಾತ್ರಕ್ಕೆ ಯಶಸ್ಸು ದೊರಕುವುದಿಲ್ಲ. ಸಾಧಕರ ಸಾಧನೆಯ ಮಾರ್ಗಗಳು, ನಡೆದು ಬಂದ ರೀತಿಗಳು ನಮಗೆ ಪ್ರೇರಣೆ ಯಾಗಬೇಕು ಮಾತ್ರವಲ್ಲದೆ ಆವುಗಳ ಅನುಷ್ಠಾನವೂ ಕೂಡ.

ಮನೆಯಂಗಳದಲ್ಲಿ ಆಡುತ್ತಿರುವ ಮಗು ಕಾಲು ಜಾರಿ ಬೀಳುತ್ತದೆ. ಬಿದ್ದ ಕೂಡಲೇ ಅದು ತನ್ನ ಸುತ್ತಮುತ್ತಲೆಲ್ಲ ಒಮ್ಮೆ ಕಣ್ಣು ಹಾಯಿಸುತ್ತದೆ. ಅಲ್ಲಿ ಯಾರಾದರೂ ಇದ್ದರೆ ಅದು ಕೂಡಲೇ ಅಳಲು ಪ್ರಾರಂಭಿಸುತ್ತದೆ. ಅದೇ ಮಗು ಆ ಕ್ಷಣದಲ್ಲಿ ತನ್ನ ಸುತ್ತಮುತ್ತ ಯಾರೂ ಇಲ್ಲದಿದ್ದಾಗ ಒಮ್ಮೆ ಭಯಗೊಂಡರೂ ನಿಧಾನಕ್ಕೆ ಮೇಲೆದ್ದು ಮುನ್ನಡೆಯುತ್ತದೆ.

ಇದು ಪ್ರತಿಯೊಬ್ಬರಿಗೂ ಅನ್ವಯಿಸುವ ಮಾತು. ನಮಗೆ ಯಾರಾದರೂ ಸಹಾಯ ಮಾಡುವವರು ಇದ್ದಾಗ ನಾವು ಸ್ವಪ್ರಯತ್ನವನ್ನೇ ಮಾಡುವುದಿಲ್ಲ. ಮನಸ್ಸು ಮತ್ತು ನಮ್ಮ ಚಟುವಟಿಕೆಗಳು ನಿಷ್ಕ್ರಿಯವಾಗಿರುತ್ತವೆ. ಕಠಿನ ಪರಿಸ್ಥಿತಿಗಳಲ್ಲಿ ಸಿಕ್ಕಿ ಬಿದ್ದಾಗ, ಯಾರಿಂದಲೂ ನೆರವು ದೊರಕದಿದ್ದಾಗ ನಮ್ಮಲ್ಲಿರುವ ಪ್ರಯತ್ನಶೀಲ ಮನಸ್ಸು ಜಾಗೃತವಾಗುತ್ತದೆ. ಪ್ರತೀ ಕ್ಷಣ ಮೈ-ಮನಸ್ಸು ಚಟುವಟಿಕೆಗಳ ಗೂಡಾಗಿರುತ್ತದೆ.
ಕಠಿನ ಪರಿಶ್ರಮಕ್ಕೆ ತಕ್ಕ ಪ್ರತಿಫ‌ಲ ಸಿಕ್ಕೇ ಸಿಗುತ್ತದೆ. ಪ್ರಯತ್ನವೇ ಮಾಡದೇ ಫ‌ಲಿತಾಂಶದೆಡೆ ಕಣ್ಣು ಹಾಯಿಸು ವುದು ಸರಿಯಲ್ಲ. ಯಶಸ್ಸು ನಮ್ಮದಾಗ ಬೇಕಾದರೆ ಸ್ವಪ್ರಯತ್ನವೂ ಅಷ್ಟೇ ಮುಖ್ಯ ವಾಗಿರುತ್ತದೆ. ಆತ್ಮವಿಶ್ವಾಸ ಹಾಗೂ ಸ್ವ-ಪ್ರಯತ್ನ ಯಶಸ್ಸಿನ ಗುಟ್ಟು ಎಂಬು ದನ್ನು ನಾವೆಲ್ಲರೂ ಮೊದಲು ಅರಿತು ಕೊಳ್ಳಬೇಕು. ಆದ್ದರಿಂದ ತಾಳ್ಮೆಯಿಂದ ಕೆಲಸ ಕಾರ್ಯಗಳನ್ನು ನಿರ್ವಹಿಸಬೇಕು. ಒಂದರ್ಥದಲ್ಲಿ ತಾಳ್ಮೆಯು ನಮ್ಮ ಯಶಸ್ಸಿನ ಪರಿಪಾಠವನ್ನು ಸಹ ಗ್ರಹಿಸುತ್ತದೆ ಎನ್ನಬಹುದು.

ಇದನ್ನೂ ಓದಿ:ಬಡವರು, ದಲಿತರು, ರೈತರ ಬಗ್ಗೆ ಇಂದಿರಾಗಾಂಧಿ ಕಳಕಳಿ ಅಪಾರ

ಬಹುತೇಕ ಜನರು ಯಶಸ್ಸಿನ ಬಾಗಿಲಿನವರೆಗೆ ಬಂದು ಕೊನೇ ಕ್ಷಣದಲ್ಲಿ ತಮ್ಮ ಪ್ರಯತ್ನವನ್ನು ಕೈ ಚೆಲ್ಲಿ ಬಿಡುತ್ತಾರೆ. ಯಶಸ್ಸಿಗೆ ಕೊಂಚ ದೂರದಲ್ಲಿರುವಾಗ ವೈಫ‌ಲ್ಯಕ್ಕೆ ಹೆದರಿ ಪಲಾಯನ ಮಾಡ ಬೇಡಿ. ಯಶಸ್ಸಿನ ಪ್ರತಿಯೊಂದು ಕಥೆಯೂ ಸೋಲಿನ ಕಥೆಯೂ ಆಗಿರಬಹುದು. ಅದೇ ರೀತಿ ಸೋಲಿನ ಪ್ರತಿಯೊಂದು ಕಥೆಯೂ ದೊಡ್ಡ ಪ್ರಮಾಣದ ಯಶಸ್ಸಿಗೆ ಮೆಟ್ಟಿಲಾಗಬಹುದು. ನೀವು ಸೋಲಿನ ಪ್ರಮಾಣವನ್ನು ದ್ವಿಗುಣಗೊಳಿಸಿದಷ್ಟು ಯಶಸ್ಸಿಗೆ ಹತ್ತಿರವಾಗುತ್ತೀರಿ. ಹಾಗೆಂದು ಪ್ರಯತ್ನ ಪಡದೆ ಸೋಲಿನತ್ತ ಸಾಗಬೇಡಿ. ಯಶಸ್ಸಿಗೆ ಬೇಕಾದ ಅವಿರತ ಪ್ರಯತ್ನ ನಿಮ್ಮದಾಗಿರಲಿ.

ಯಶಸ್ಸು ಎಂಬ ಯಾತ್ರೆ ಬಂಡಿಯಲ್ಲಿ ಸಾಗುವ ಮುನ್ನ ಜೀವನದಲ್ಲಿ ಒಮ್ಮೆ ಯಾದರೂ ಅವಮಾನಕ್ಕೆ ಒಳಗಾಗಲೇ ಬೇಕು. ಏಕೆಂದರೆ ಅವಮಾನವನ್ನು ಮಾಡಿಸಿ ಕೊಳ್ಳದೆ ಸಮ್ಮಾನ ಮಾಡಿಸಿ ಕೊಂಡ ವರು ಈ ಜಗತ್ತಿನಲ್ಲಿ ಯಾರು ಇಲ್ಲ. ಅವಮಾನವಾದಾಗಲೇ ನಿಮ್ಮ ಆತ್ಮಸಾಕ್ಷಿಗೆ ನೋವಾಗುತ್ತದೆ. ಆತ್ಮ ಸಾಕ್ಷಿಗೆ ನೋವಾದಾಗಲೇ ನಿಮ್ಮಲ್ಲಿ ಜವಾ ಬ್ದಾರಿ ಮತ್ತಷ್ಟು ಹೆಚ್ಚುತ್ತದೆ. ಅವಮಾನ ವಾದಾಗಲೇ ಸಮ್ಮಾನ ಸಿಗುತ್ತದೆ. ಅವಮಾನವಾದಾಗಲೇ ಏನಾದರೂ ಒಂದನ್ನು ಸಾಧಿಸಬೇಕು ಎಂಬ ಕಿಚ್ಚು ಎದೆ ಯಲ್ಲಿ ಹೊತ್ತಿ ಕೊಳ್ಳುತ್ತದೆ. ಹಾಗಾಗಿ ಅವಮಾನ, ಅನುಮಾನ, ಸಮ್ಮಾನ ಈ 3 ಸೂತ್ರಗಳನ್ನು ಅನುಸರಿಸಿದಾಗಲೇ ಅಂತಿಮವಾಗಿ ಯಶಸ್ಸು ಕಾಣಲು ಸಾಧ್ಯ.

ಸತತವಾಗಿ ಪ್ರಯತ್ನಿಸಿದರೆ ಎಲ್ಲರಿಗೂ ಯಶಸ್ಸು ಲಭಿಸುತ್ತದೆ. ಹಲವಾರು ಸಾಧಕರು ಮತ್ತು ಮಹಾನ್‌ ವ್ಯಕ್ತಿಗಳು ಸಾಧನೆಯ ಶಿಖರವನ್ನು ತಲುಪಿದ್ದು ತಮ್ಮ ಸ್ವಪ್ರಯತ್ನ ದಿಂದಲೇ. ದೃಢವಾದ ಮನಸ್ಸು ಸ್ಪಷ್ಟ ಗುರಿ ತಿವಿಕ್ರಮನಂತಹ ಛಲವಿದ್ದರೆ ಯಶಸ್ಸು ಬಿಸಿಲ್ಗುದುರೆಯಲ್ಲ. ಜೀವನ ಸಾಗರದಲ್ಲಿ ಸ್ವ ಪ್ರಯತ್ನದ ಯಾನ ಸಾಗುತಿರಲಿ ಯಶಸ್ಸಿನ ದಿಗಂತದೆಡೆಗೆ.

-ಸೌಮ್ಯಾ, ಕಾರ್ಕಳ

ಟಾಪ್ ನ್ಯೂಸ್

IPL 2024; ಲಕ್ನೋ, ಹೈದ್ರಾಬಾದ್‌ ಸೆಣಸು; ಗೆಲ್ಲುವ ತಂಡಕ್ಕೆ ಪ್ಲೇಆಫ್ ಸ್ಥಾನ ಬಹುತೇಕ ಖಚಿತ

IPL 2024; ಲಕ್ನೋ, ಹೈದ್ರಾಬಾದ್‌ ಸೆಣಸು; ಗೆಲ್ಲುವ ತಂಡಕ್ಕೆ ಪ್ಲೇಆಫ್ ಸ್ಥಾನ ಬಹುತೇಕ ಖಚಿತ

ಜಾನುವಾರುಗಳಿಗೆ ಮೇವು; ಹಸುರು ಹುಲ್ಲಿನ ಬದಲು ತರಕಾರಿ ಸಿಪ್ಪೆ ಬಳಕೆ

ಜಾನುವಾರುಗಳಿಗೆ ಮೇವು; ಹಸುರು ಹುಲ್ಲಿನ ಬದಲು ತರಕಾರಿ ಸಿಪ್ಪೆ ಬಳಕೆ

Dina Bhavishya

ಅನಿರೀಕ್ಷಿತ ಯಶಸ್ಸು..ಅನಿರೀಕ್ಷಿತ ಪ್ರಗತಿ… ಅನಿರೀಕ್ಷಿತ ಧನಪ್ರಾಪ್ತಿ

ಯಳಬೇರು: ಮರವೇರಿದ ಮೊಬೈಲ್‌!ಮರದ ಎತ್ತರದಲ್ಲಿ ನೆಟ್‌ವರ್ಕ್‌ ಸಂಪರ್ಕ; ಅಲ್ಲಿಂದ ಹಾಟ್‌ಸ್ಪಾಟ್‌

ಯಳಬೇರು: ಮರವೇರಿದ ಮೊಬೈಲ್‌!ಮರದ ಎತ್ತರದಲ್ಲಿ ನೆಟ್‌ವರ್ಕ್‌ ಸಂಪರ್ಕ; ಅಲ್ಲಿಂದ ಹಾಟ್‌ಸ್ಪಾಟ್‌

12-madikeri

Madikeri: ಅತ್ಯಾಚಾರಿಗೆ ಕಠಿಣ ಸಜೆ

ಲೋಕಸಭೆ ಮುಗಿಯಿತು, ಪರಿಷತ್‌ ಹಣಾಹಣಿ ಆರಂಭ

Election; ಲೋಕಸಭೆ ಮುಗಿಯಿತು, ಪರಿಷತ್‌ ಹಣಾಹಣಿ ಆರಂಭ

needs 400 seats to avoid Babri lock to Mandir: PM Modi

Loksabha; ಮಂದಿರಕ್ಕೆ ಬಾಬರಿ ಲಾಕ್‌ ಬೀಳದಿರಲು 400 ಸೀಟು ಬೇಕು: ಪ್ರಧಾನಿ ಮೋದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Water Corridor: ಭಾರತಕ್ಕೆ ಅಗತ್ಯವಿದೆ ವಿಶೇಷ ವಾಟರ್‌ ಕಾರಿಡಾರ್‌!

Water Corridor: ಭಾರತಕ್ಕೆ ಅಗತ್ಯವಿದೆ ವಿಶೇಷ ವಾಟರ್‌ ಕಾರಿಡಾರ್‌!

ಮಣಿಪಾಲ ಸಂಸ್ಥೆಗಳಿಗೆ ಜಾಗತಿಕ ಸ್ಥಾನ ಕಲ್ಪಿಸಿದ ಡಾ|ರಾಮದಾಸ್‌ ಪೈ

ಮಣಿಪಾಲ ಸಂಸ್ಥೆಗಳಿಗೆ ಜಾಗತಿಕ ಸ್ಥಾನ ಕಲ್ಪಿಸಿದ ಡಾ|ರಾಮದಾಸ್‌ ಪೈ

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

1-weqwqewqwq

Bha ಸ್ವದೇಶಿ ವ್ಯವಸ್ಥೆ ; ನಮ್ಮ ಪಾದರಕ್ಷೆಗಳಿಗೆ ನಮ್ಮ ಅಳತೆ: ‘ಭ’ ಗಾತ್ರ ವ್ಯವಸ್ಥೆ!

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

MUST WATCH

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

ಹೊಸ ಸೇರ್ಪಡೆ

IPL 2024; ಲಕ್ನೋ, ಹೈದ್ರಾಬಾದ್‌ ಸೆಣಸು; ಗೆಲ್ಲುವ ತಂಡಕ್ಕೆ ಪ್ಲೇಆಫ್ ಸ್ಥಾನ ಬಹುತೇಕ ಖಚಿತ

IPL 2024; ಲಕ್ನೋ, ಹೈದ್ರಾಬಾದ್‌ ಸೆಣಸು; ಗೆಲ್ಲುವ ತಂಡಕ್ಕೆ ಪ್ಲೇಆಫ್ ಸ್ಥಾನ ಬಹುತೇಕ ಖಚಿತ

ಜಾನುವಾರುಗಳಿಗೆ ಮೇವು; ಹಸುರು ಹುಲ್ಲಿನ ಬದಲು ತರಕಾರಿ ಸಿಪ್ಪೆ ಬಳಕೆ

ಜಾನುವಾರುಗಳಿಗೆ ಮೇವು; ಹಸುರು ಹುಲ್ಲಿನ ಬದಲು ತರಕಾರಿ ಸಿಪ್ಪೆ ಬಳಕೆ

Dina Bhavishya

ಅನಿರೀಕ್ಷಿತ ಯಶಸ್ಸು..ಅನಿರೀಕ್ಷಿತ ಪ್ರಗತಿ… ಅನಿರೀಕ್ಷಿತ ಧನಪ್ರಾಪ್ತಿ

ಯಳಬೇರು: ಮರವೇರಿದ ಮೊಬೈಲ್‌!ಮರದ ಎತ್ತರದಲ್ಲಿ ನೆಟ್‌ವರ್ಕ್‌ ಸಂಪರ್ಕ; ಅಲ್ಲಿಂದ ಹಾಟ್‌ಸ್ಪಾಟ್‌

ಯಳಬೇರು: ಮರವೇರಿದ ಮೊಬೈಲ್‌!ಮರದ ಎತ್ತರದಲ್ಲಿ ನೆಟ್‌ವರ್ಕ್‌ ಸಂಪರ್ಕ; ಅಲ್ಲಿಂದ ಹಾಟ್‌ಸ್ಪಾಟ್‌

12-madikeri

Madikeri: ಅತ್ಯಾಚಾರಿಗೆ ಕಠಿಣ ಸಜೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.