ಅಕಾಲಿಕ ಮಳೆಗೆ ನಲುಗಿದ ಜನತೆ-ಬೆಳೆಯೂ ತತ್ತರ


Team Udayavani, Nov 22, 2021, 11:45 AM IST

6rain

ಕಲಬುರಗಿ: ಹಿಂಗಾರು ಹಂಗಾಮಿನ ಮಳೆಗಳೆಲ್ಲ ಮುಗಿದಿದ್ದು, ಅಕಾಲಿಕವಾಗಿ ಅದರಲ್ಲೂ ವಾಯುಭಾರ ಕುಸಿತದಿಂದ ಎದುರಾಗಿರುವ ಮಳೆಗೆ ಬಿಸಿಲು ನಾಡು ತತ್ತರಿಸಿದ್ದು, ಅಳಿದುಳಿದ ವಾಣಿಜ್ಯ ಬೆಳೆ ತೊಗರಿ ಮತ್ತಷ್ಟು ನಷ್ಟ ಹೊಂದುವಂತಾಗಿದೆ.

ಹಿಂಗಾರಿನ ಕೊನೆ ಮಳೆ ವಿಶಾಖ ಮಳೆ ಎರಡು ದಿನದ ಹಿಂದೆಯಷ್ಟೇ ಮುಗಿದಿದ್ದು, ಈಗ ಯಾವುದೇ ಮಳೆಯಿಲ್ಲ. ಮಳೆಗಳೆಲ್ಲ ಮುಗಿದ ನಂತರ ನವೆಂಬರ್‌ ತಿಂಗಳಲ್ಲಿ ಮಳೆ ಬಂದಿರುವುದೇ ಅಪರೂಪ. ಒಂದು ವೇಳೆ ಬಂದರೂ ಧಾರಾಕಾರ ಮಳೆ ಸುರಿದಿಲ್ಲ. ಆದರೆ ರವಿವಾರ ಮೋಡ ಕವಿದ ವಾತಾವರಣ ನಡುವೆ ಧಾರಾಕಾರ ಮಳೆ ಸುರಿದಿದೆ.

ಮಳೆಗೆ ಜೋಳ, ಕಡಲೆ ಸಹ ನೀರಲ್ಲಿ ನಿಲ್ಲುವಂತಾಗಿದೆ. ಕಲಬುರಗಿ ಮಹಾನಗರದಲ್ಲಿ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಒಟ್ಟಾರೆ ರವಿವಾರ ದಿನವಿಡಿ ತುಂತುರು ಮಳೆ ಹಾಗೂ ಮೋಡ ಕವಿದ ವಾತಾವರಣದಿಂದ ಜನ ತೊಂದರೆಗೆ ಒಳಗಾಗಿದ್ದು ಕಂಡು ಬಂತು. ಅತಿವೃಷ್ಟಿಯಿಂದ ಈಗಾಗಲೇ ಅರ್ಧಕ್ಕಿಂತ ಹೆಚ್ಚಿನ ಭೂಮಿಯ ತೊಗರಿ ಬೆಳೆ ನೆಟೆರೋಗಕ್ಕೆ ತುತ್ತಾಗಿದೆ.

ವಿಪರ್ಯಾಸವೆಂದರೆ ಎರಡ್ಮೂರು ಸಲ ಕೀಟನಾಶಕ ಸಿಂಪಡಣೆ ಮಾಡಿದ ಮೇಲೆ ತೊಗರಿ ಬೆಳೆ ಒಣಗಿದೆ. ಹೀಗಾಗಿ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ಇನ್ನೂ ಎರಡ್ಮೂರು ವಾರ ಕಾಯ್ದರೆ ತೊಗರಿ ಕಟಾವಿಗೆ ಬರುತ್ತದೆ. ಆದರೆ ಅಕಾಲಿಕ ಮಳೆಗೆ ತೊಗರಿ ಸಂಪೂರ್ಣ ನಾಶವಾಗುವಂತಾಗಿದೆ.

ತೊಗರಿ ಹೂವು ಬಾಡಿದ್ದರೆ, ಕಾಯಿ ಹಿಡಿದಿದ್ದ ತೊಗರಿ ನೆಟೆರೋಗಕ್ಕೆ ಒಳಗಾಗಿದೆ. ಉಳಿದಂತೆ ಕಡಲೆ, ಜೋಳಕ್ಕೆ ಮಳೆ ಸ್ವಲ್ಪ ಅನುಕೂಲವಾಗಿದೆ ಎನ್ನಬಹುದು. ಮಳೆ ಇನ್ನಷ್ಟು ಬಂದರೆ ಜೋಳಕ್ಕೂ ಕುತ್ತಾಗುತ್ತದೆ. ಅಕಾಲಿಕ ಮಳೆಯಿಂದ ಜನರು ಸಹ ತೊಂದರೆಗೆ ಒಳಗಾಗಿದ್ದಾರೆ. ಶೀತ ಗಾಳಿಯಿಂದ ಹಲವರು ರೋಗಗಳಿಗೆ ಒಳಗಾಗುವಂತೆ ಮಾಡಿದೆ. ಒಟ್ಟಾರೆ ಈ ಅಕಾಲಿಕ ಮಳೆ ಹಲವಾರು ಅನಾಹುತಗಳಿಗೆ ಎಡೆ ಮಾಡಿಕೊಟ್ಟಿದೆ. ಇನ್ನೊಂದೆಡೆ ಮಳೆ ಬಂದರೆ ತರಕಾರಿ ಬೆಲೆ ಕಡಿಮೆಯಾಗಬೇಕು. ಆದರೆ ದಿನೇ-ದಿನೇ ಬೆಲೆ ಹೆಚ್ಚಳವಾಗುತ್ತಿದೆ ಎಂದು ಗ್ರಾಹಕರು ಅಳಲು ತೋಡಿಕೊಳ್ಳುತ್ತಿದ್ದಾರೆ.

ಟಾಪ್ ನ್ಯೂಸ್

Terror 2

LOC; ದೇಶಕ್ಕೆ ನುಸುಳಲು 70 ಉಗ್ರರು ಸಜ್ಜು: ಕಾಶ್ಮೀರ ಡಿಜಿಪಿ ರಶ್ಮಿ

1-wewq-ewqewq

Hyderabad ಇನ್ನು ಮುಂದೆ ತೆಲಂಗಾಣಕ್ಕಷ್ಟೇ ರಾಜಧಾನಿ

police crime

West Bengal ಬಿಜೆಪಿಯ ಮುಸ್ಲಿಂ ಕಾರ್ಯಕರ್ತನ ಬರ್ಬರ ಹತ್ಯೆ

1-wq-wewqe

T20 World Cup; ಪಪುವಾ ನ್ಯೂ ಗಿನಿಯ ವಿರುದ್ಧ ವಿಂಡೀಸ್‌ ಗೆ 5 ವಿಕೆಟ್ ಗಳ ಜಯ

Udupi: ಐತಿಹಾಸಿಕ ರಂಗು ಪಡೆದ ವಿಧಾನ ಪರಿಷತ್‌ ಚುನಾವಣೆ..

Udupi: ಐತಿಹಾಸಿಕ ರಂಗು ಪಡೆದ ವಿಧಾನ ಪರಿಷತ್‌ ಚುನಾವಣೆ..

Mansoon: ರಾಜ್ಯ ಕರಾವಳಿಗೆ ಪ್ರವೇಶ ಪಡೆದ ಮುಂಗಾರು… 4 ದಿನ “ಎಲ್ಲೋ ಅಲರ್ಟ್‌’

Mansoon: ರಾಜ್ಯ ಕರಾವಳಿಗೆ ಪ್ರವೇಶ ಪಡೆದ ಮುಂಗಾರು… 4 ದಿನ “ಎಲ್ಲೋ ಅಲರ್ಟ್‌’

ಮಡಿಕೇರಿ: ಈ ಬಾರಿಯೂ ಮಳೆ ಕೊರತೆ ಸಾಧ್ಯತೆ: ಪ್ರವಾಹ, ಭೂಕುಸಿತ ಪರಿಸ್ಥಿತಿ ಇಲ್ಲ: ಪ್ರಕಾಶ್‌

ಮಡಿಕೇರಿ: ಈ ಬಾರಿಯೂ ಮಳೆ ಕೊರತೆ ಸಾಧ್ಯತೆ: ಪ್ರವಾಹ, ಭೂಕುಸಿತ ಪರಿಸ್ಥಿತಿ ಇಲ್ಲ: ಪ್ರಕಾಶ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wewqeewe

Congress; ಖರ್ಗೆ ಪರಮಾಪ್ತ ಜಗದೇವ ಗುತ್ತೇದಾರ್ ಗೆ ಪರಿಷತ್ ಟಿಕೆಟ್

Kalaburgi; ವಿಪಕ್ಷದವರು ಕೇಳಿದ ಮಾತ್ರಕ್ಕೆ ಸಚಿವರು ರಾಜೀನಾಮೆ‌ ನೀಡಬೇಕೆ: ಪ್ರಿಯಾಂಕ್ ಖರ್ಗೆ

Kalaburgi; ವಿಪಕ್ಷದವರು ಕೇಳಿದ ಮಾತ್ರಕ್ಕೆ ಸಚಿವರು ರಾಜೀನಾಮೆ‌ ನೀಡಬೇಕೆ: ಪ್ರಿಯಾಂಕ್ ಖರ್ಗೆ

371(ಜೆ)ಕಲಂಗೆ ವಿರೋಧಿಸುವವರ ವಿರುದ್ಧ ಕಲಬುರಗಿಯಲ್ಲಿ ಭಾರಿ ಪ್ರತಿಭಟನೆ

371(ಜೆ)ಕಲಂಗೆ ವಿರೋಧಿಸುವವರ ವಿರುದ್ಧ ಕಲಬುರಗಿಯಲ್ಲಿ ಭಾರಿ ಪ್ರತಿಭಟನೆ

10-kalburgi

Kalaburagi: ಹಣ ಡಬಲ್ ಮಾಡಿ ಬಹುಕೋಟಿ‌ ವಂಚನೆ: ಇಬ್ಬರು ಆರೋಪಿಗಳು ನ್ಯಾಯಾಲಯಕ್ಕೆ ಶರಣು

1-kalburgi

ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿಕಾರಿ ಆತ್ಮಹತ್ಯೆ ಪ್ರಕರಣ;ನಾಗೇಂದ್ರ ವಜಾಕ್ಕೆ ಬಿಜೆಪಿ ಆಗ್ರಹ

MUST WATCH

udayavani youtube

ಹೆರ್ಗದಲ್ಲಿ 40 ಅಡಿ ಆಳದ ಬಾವಿಗೆ ಬಿದ್ದ ಕರುವಿನ ರಕ್ಷಣೆ

udayavani youtube

ಇಡ್ಲಿ ವಡೆ, ಶಾವಿಗೆ ಬಾತ್ ಗೆ ಹೆಸರುವಾಸಿಯಾದ ಹೋಟೆಲ್

udayavani youtube

ಒಡವೆ ಖರೀದಿಸುವ ನೆಪದಲ್ಲಿ ಮೂರುವರೆ ಲಕ್ಷ ಮೌಲ್ಯದ ಒಡವೆ ಕದ್ದ ಖತರ್ನಾಕ್ ಅಜ್ಜಿ

udayavani youtube

ರಘುಪತಿ ಭಟ್ ಅವರ ಮನದಾಳದ ಮಾತು

udayavani youtube

ರಘುಪತಿ ಭಟ್ ಅವರ ಮನದಾಳದ ಮಾತು

ಹೊಸ ಸೇರ್ಪಡೆ

1-asdasdas

Tamil actor ಕರುಣಾಸ್‌ ಬಳಿ 40 ಬುಲೆಟ್‌ಗಳು ಪತ್ತೆ!

mob

WhatsApp ನಲ್ಲಿ ಶೀಘ್ರ ಚಾಟ್‌ ಫಿಲ್ಟರ್‌ ಅಪ್‌ಡೇಟ್‌?

Vimana 2

Again ವಿಮಾನಕ್ಕೆ ಬಾಂಬ್‌ ಬೆದರಿಕೆ: ವಾರದಲ್ಲಿ 4ನೇ ಘಟನೆ

Terror 2

LOC; ದೇಶಕ್ಕೆ ನುಸುಳಲು 70 ಉಗ್ರರು ಸಜ್ಜು: ಕಾಶ್ಮೀರ ಡಿಜಿಪಿ ರಶ್ಮಿ

1-wewq-ewqewq

Hyderabad ಇನ್ನು ಮುಂದೆ ತೆಲಂಗಾಣಕ್ಕಷ್ಟೇ ರಾಜಧಾನಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.