ಟಗರು ಸಾಕಾಣಿಕೆಯಿಂದ ಖುಲಾಯಿಸಿದ ಅದೃಷ್ಟ
Team Udayavani, Nov 27, 2021, 1:42 PM IST
ಮುದಗಲ್ಲ: ಕೃಷಿಯಲ್ಲಿ ನಷ್ಟ ಅನುಭವಿಸಿದ ತಂದೆ-ತಾಯಿ ನೋಡಿದ ಮಗ ಟಗರು ಸಾಕಾಣಿಕೆಯನ್ನೇ ಉಪ ಕಸಬು ಮಾಡಿಕೊಳ್ಳುವ ಮೂಲಕ ವರ್ಷಕ್ಕೆ ಸುಮಾರು 10 ಲಕ್ಷ ರೂ. ಸಂಪಾದಿಸುವ ಮೂಲಕ ಇತರರಿಗೆ ಮಾದರಿಯಾಗಿದ್ದಾನೆ.
ಇದು ಪಟ್ಟಣ ಸಮೀಪದ ಹೆಗ್ಗಾಪುರ ತಾಂಡಾ ನಿವಾಸಿ ಸುರೇಶ ಬಾಪಣ್ಣ ಅವರ ಯಶೋಗಾಥೆ. ಸುರೇಶ ಆರಂಭದಲ್ಲಿ 30 ಟಗರು ಮರಿ ಸಾಕಾಣಿಕೆ ಮಾಡಿ 6 ತಿಂಗಳಲ್ಲಿ ಎರಡು ಲಕ್ಷ ಲಾಭ ಪಡೆದಿದ್ದ. ನಂತರ ತಮ್ಮ ಹೊಲದಲ್ಲಿಯೇ ಬೃಹತ್ ತಗಡಿನ ಶೆಡ್ ನಿರ್ಮಿಸಿ 100ರಿಂದ 150 ಟಗರು ಮರಿ ಸಾಕುತ್ತಿದ್ದಾನೆ.
ಕಳೆದ ಎರಡು ವರ್ಷದಿಂದ ಪ್ರತಿ ಆರು ತಿಂಗಳಿಗೆ 100-120 ಟಗರು ಮರಿಗಳನ್ನು ಸಾಕಾಣಿಕೆ ಮಾಡಿ ಆರು ತಿಂಗಳಿಗೊಮ್ಮೆ ಮಾರಾಟ ಮಾಡುತ್ತಾನೆ. 5ರಿಂದ 6 ಸಾವಿರ ರೂ.ಗಳಂತೆ ಟಗರು ಮರಿ ಖರೀದಿಸಿ ಆರು ತಿಂಗಳ ನಂತರ 14 ರಿಂದ 15 ಸಾವಿರಕ್ಕೆ ಮಾರುವ ಮೂಲಕ ಕೈ ತುಂಬಾ ಹಣ ಪಡೆಯುತ್ತಿದ್ದಾನೆ.
ಟಗರಿನ ಮರಿಗಳಿಗೆ ಶೇಂಗಾ, ತೊಗರಿ ಮೇವು, ಹಸಿ-ಒಣ ಮೇವಿನ ಜತೆ ಬೆಳಗ್ಗೆ ಮೆಕ್ಕೆಜೋಳ ನೀಡಲಾಗುತ್ತದೆ. ವೈದ್ಯರ ಸಲಹೆ ಪಡೆದು ಕುರಿ, ಮೇಕೆಗಳಿಗೆ ಉತ್ತಮ ಆಹಾರ, ಔಷಧ ಮತ್ತು ಸಮಯಕ್ಕೆ ಸರಿಯಾಗಿ ಲಸಿಕೆ ಹಾಕಿದರೆ ಎಂತಹ ವಾತಾವರಣದಲ್ಲೂ ಟಗರು ಸಾಕಬಹುದು ಎನ್ನುತ್ತಾರೆ ನಾಗಲಾಪುರ ಪಶು ಆಸ್ಪತ್ರೆ ವೈದ್ಯ ಪ್ರಭು.
ಇದನ್ನೂ ಓದಿ:ಒಮಿಕ್ರಾನ್ ಭೀತಿ ; ವಿಮಾನ ಸಂಚಾರ ಸ್ಥಗಿತಗೊಳಿಸಲು ಪ್ರಧಾನಿಗೆ ಕೇಜ್ರಿವಾಲ್ ಮನವಿ
ಒಟ್ಟಿನಲ್ಲಿ ಕೊರೊನಾ ಸಂಕಷ್ಟದಲ್ಲಿ ಕೆಲಸಗಳೇ ಸಿಗದ ಪರಿಸ್ಥಿತಿ ಉಂಟಾಗಿದ್ದು, ಸುರೇಶ ಟಗರು ಮರಿ ಮೂಲಕ ಜೀವನದಲ್ಲಿ ಯಶಸ್ಸು ಕಾಣಲು ಹೊಸ ಮಾರ್ಗ ಕಂಡುಕೊಂಡಿದ್ದಾನೆ.
ಪ್ರತಿ ಟಗರು ಮರಿಗೆ 1ರಿಂದ 2 ಸಾವಿರ ರೂ. ಖರ್ಚು ಬರುತ್ತದೆ. ಹೊಲಕ್ಕೆ ಕೊಟ್ಟಿಗೆ ಗೊಬ್ಬರ ಸಿಗುತ್ತದೆ. ಇದನ್ನು ರೈತರಿಗೆ ಮಾರಿದರೂ ಪ್ರತಿ ಟ್ರ್ಯಾಕ್ಟರ್ಗೆ 6 ಸಾವಿರ ರೂ. ದೊರೆಯುತ್ತದೆ. -ಸುರೇಶ, ಟಗರು ಮರಿ ಸಾಕಾಣಿಕೆದಾರರು
ನಿರುದ್ಯೋಗಿ ಯುವಕನಿಗೆ ಕುರಿ ಸಾಕಾಣಿಕೆ ಮಾಡಲು ಸಲಹೆ ನೀಡಿದ್ದೆ. ಆತ ತನ್ನ ಛಲ ಹಾಗೂ ಪರಿಶ್ರಮದಿಂದ ಬದುಕು ಕಟ್ಟಿಕೊಂಡಿದ್ದಾನೆ. -ಟಿ.ಆರ್. ನಾಯ್ಕ, ನಿವೃತ್ತ ಡಿಐಜಿಪಿ, ಆಶಿಹಾಳ ತಾಂಡಾ
-ದೇವಪ್ಪ ರಾಠೊಡ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
PM ಮೋದಿ ಸ್ಟೇಟ್ಸ್ ಮ್ಯಾನ್ ಅಲ್ಲ, ಸೇಲ್ಸ್ಮ್ಯಾನ್: ಬಿ.ಕೆ ಹರಿಪ್ರಸಾದ್
Bidar; ಹಣ ಹಂಚುವ ದೂರು: ನಾಗಮಾರಪಳ್ಳಿ ಮನೆಯಲ್ಲಿ ಪರಿಶೀಲನೆ
Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ
ಕೇಂದ್ರದಿಂದ 3454 ಕೋಟಿ ರೂ. ಬರ ಪರಿಹಾರ; ರಾಜ್ಯಕ್ಕೆ ಸಂದ ಜಯ: ಈಶ್ವರ ಖಂಡ್ರೆ
B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್ವೈ ಗರಂ
MUST WATCH
ಹೊಸ ಸೇರ್ಪಡೆ
ಈ ಪೆನ್ಡ್ರೈವ್ನಲ್ಲಿರುವ ವಿಡಿಯೋ ನಿಜ: ನಾನು, ಹೀರೊಯಿನ್ ಸೇರಿ ಮಾಡಿದ ವಿಡಿಯೋ ಇದು; ಪ್ರಥಮ್
Neha ಹತ್ಯೆ ಪ್ರಕರಣ ಮುಚ್ಚಿ ಹಾಕುವ ಯತ್ನ ನಡೆಯುತ್ತಿದೆ: ಸರಕಾರದ ವಿರುದ್ಧ ಆರ್.ಅಶೋಕ್ ಕಿಡಿ
Fake Video: ಅಮಿತ್ ಶಾ ನಕಲಿ ವಿಡಿಯೋ ಪ್ರಕರಣ… ಓರ್ವ ಬಂಧನ, 3 ವಿಪಕ್ಷ ನಾಯಕರಿಗೆ ನೊಟೀಸ್
Sandalwood: ಇದು ನಿಜಕ್ಕೂ ಫ್ಯಾಮಿಲಿ ಡ್ರಾಮಾ!
Lok Sabha Polls: ಈ ಬಾರಿಯ ಲೋಕಸಭಾ ಚುನಾವಣೆಗೆ ಪ್ರಿಯಾಂಕಾ ಗಾಂಧಿ ಸ್ಪರ್ಧಿಸಲ್ಲ… ವರದಿ