ಹೆಮ್ಮೆಯ ಮಲೆನಾಡು… ಬದುಕೆಂಬುದು ನೆನಪಿನ ದೋಣಿ ಇದ್ದ ಹಾಗೆ…

ಮತ್ತೆ ಕೆಲಸ ಶುರುವಾಗುವುದು ದವಡೆ ಹಲ್ಲಿಗೂ ಮತ್ತು ವೀಳ್ಯದೆಲೆ,ಅಡಿಕೆಗೆ ಯುದ್ಧ ಆರಂಭವಾದಗಲೆ

Team Udayavani, Nov 29, 2021, 10:30 AM IST

ಹೆಮ್ಮೆಯ ಮಲೆನಾಡು… ಬದುಕೆಂಬುದು ನೆನಪಿನ ದೋಣಿ ಇದ್ದ ಹಾಗೆ…

ಮಲೆನಾಡು ಎಂದ ಕೂಡಲೇ ನೆನಪಾಗುವುದು ಹಚ್ಚ ಹಸಿರಾದ ಬೆಟ್ಟ-ಗುಡ್ಡಗಳು, ಭವ್ಯವಾದ ಶಿಲ್ಪಕಲೆಯುಳ್ಳ ದೇವಸ್ಥಾನಗಳು, ಪ್ರಾಣಿ ವರ್ಗ ಹಾಗೂ ಅಲ್ಲಿನ ಶ್ರೀಮಂತ ಹೃದಯದ ಜನರು. ಮಲೆನಾಡ ಜನರ ಬದುಕಿನ ಶೈಲಿಗೂ ಇಲ್ಲಿಗೂ ಅಜಗಜಾಂತರ ವ್ಯತ್ಯಾಸವಿದೆ. ಮಲೆನಾಡು ಹಸಿರು ತೋರಣಗಳ ನಾಡು. ಅಲ್ಲಿ ಕೃಷಿಯಲ್ಲಿ ತೊಡಗುವವರ ಸಂಖ್ಯೆ ಹೆಚ್ಚು. ಉದಾ ; ಕರಾವಳಿಯಲ್ಲಿ ಮೀನುಗಾರಿಕೆ ಹೇಗೋ ಅಲ್ಲಿ ಕೃಷಿಯೂ ಹಾಗೆ, ಒಂದೂರಿನಲ್ಲಿ 100 ಮನೆ  ಇದೆಯೆಂದಾದರೆ ಅದರಲ್ಲಿ 80ರಷ್ಟು  ಮನೆಯವರು ಹೊಲ, ಗದ್ದೆ,ತೋಟ ಹೊಂದಿರುತ್ತಾರೆ. ಮನೆಯಲ್ಲಿ ತಮ್ಮದೇ ಆದ ಸ್ವಲ್ಪಮಟ್ಟಿಗೆ ತೋಟ ಅಥವಾ ಗದ್ದೆ ಇದ್ದರೂ ಕೂಡ ಊರಿನ ಎಸ್ಟೇಟ್ ಗಳಿಗೆ ಹೋಗಿಕೊಂಡು ಹೊಟ್ಟೆ ತುಂಬಿಸಿಕೊಳ್ಳುತ್ತಾರೆ.

ಮಲೆನಾಡಿನ ಯಾವುದೇ ಮನೆಗಳಿಗೆ ಭೇಟಿ ಕೊಟ್ಟರೆ ಸುಮ್ಮನೆ ಕೂತು ಕಾಲಹರಣ ಮಾಡುವಂತಿಲ್ಲ, ಏಕೆಂದರೆ ಪ್ರತಿಯೊಂದು ಮನೆಯೂ ಒಂದಕ್ಕಿಂತ ಒಂದು ವಿಭಿನ್ನ ಹಾಗೂ ವೀಕ್ಷಣೀಯವಾಗಿದೆ. ವಿಭಿನ್ನವಾದ ವಿನ್ಯಾಸದೊಂದಿಗೆ ಮನೆಗೆ ಬರುವವರನ್ನು ತನ್ನೊಡಲಿಗೆ ಸೇರಿಸಿಕೊಳ್ಳುತ್ತದೆ. ಮಲೆನಾಡಿಗರಿಗೆ ಅದಕ್ಕಿಂತ ದೊಡ್ಡ ಆಸ್ತಿ ಇನ್ನೊಂದಿಲ್ಲ ಎಂದರೆ ತಪ್ಪಾಗದು.

ಅಲ್ಲಿನ ಜನರಿಗೆ ಬೆಳಗಾಗುವುದು ಮನೆಯ ಕೋಳಿ ಕೊಕ್ಕೊಕ್ಕೋ ಎಂದು ರಾಗ ಹಾಕಿದಾಗಲೆ. ಮುಂಜಾನೆ ಮನೆಯ ಕುಬೇರರಿಗೆ ತಿನ್ನಲು ಹುಲ್ಲು ತಂದು ಹಾಕಿ ಮೇವಿಗೆ ಬಿಟ್ಟರೆ ಮತ್ತೆ ಕೆಲಸ ಶುರುವಾಗುವುದು ದವಡೆ ಹಲ್ಲಿಗೂ ಮತ್ತು ವೀಳ್ಯದೆಲೆ,ಅಡಿಕೆಗೆ ಯುದ್ಧ ಆರಂಭವಾದಗಲೆ. ಗದ್ದೆಯಲ್ಲೊ, ತೋಟದಲ್ಲೊ ಬೆವರು ಸುರಿಸಿ ಬಂದರೆ ಮನೆಯಲ್ಲಿ ಬೆಲ್ಲಕ್ಕೆ ನೀರು ಹಾಕಿದಂತೆ ಮಾಡಿದ ಕಾಫಿಯನ್ನು ಕುಡಿಯುತ್ತಾರೆ.

ಮಳೆಗಾಲದ ಸಂದರ್ಭದಲ್ಲಿ ಮಲೆನಾಡು  ಸ್ವರ್ಗದ ದ್ವಾರ ಬಾಗಿಲಿನಂತೆ  ಕಾಣುತ್ತಿರುತ್ತದೆ. ಆ ಸಮಯದಲ್ಲಿ ಪಟಪಟನೆ ಹಂಚಿನ ಮೇಲೆ ಬೀಳುವ ಮಳೆಗೆ ಹಲಸಿನ ಹಬ್ಬಳ ಮುರಿಯುವ ಮಜವೇ ಬೇರೆ. ಮನೆಯ ಅಂಗಳದಲ್ಲಿ ಬಿಟ್ಟರೆ ಇನ್ನುಳಿದ ಕಡೆ ನದಿಯೋ, ಜಲಪಾತವು ಹರಿಯುತ್ತಿರುತ್ತದೆ. ಅಣಬೆ ಎಂದರೆ ಎಲ್ಲರೂ  ಕೇಳಿರಲಿಕ್ಕಿಲ್ಲ, ನಿಮಗೆ ಅರ್ಥವಾಗುವಂತೆ (ಮಶ್ರೂಮ್ ) ನಾಯಿಕೊಡೆಯನ್ನು ಹುಡುಕುವುದು ಸಿಲಿಕಾನ್ ಸಿಟಿ ಟ್ರಾಫಿಕ್ ನಲ್ಲಿ ತಿಂಡಿ ತಿಂದು ಮುಗಿಸಿದಷ್ಟು ಸುಲಭದ ಕೆಲಸ. ಗದ್ದೆಯಂಚಿನಲ್ಲಿ ಹಾಳು ಬಿದ್ದ ಜಾಗದಲ್ಲಿ ಹುಟ್ಟಿರುತ್ತದೆ.

ಎಂದಿನಂತೆ ಅಲ್ಲಿಗೂ ಇಲ್ಲಿಗೂ ತುಂಬಾ ವ್ಯತ್ಯಾಸವಿದೆ, ಇಲ್ಲಿ ಮನೆಗಳಿಗೆ ಕಂಪೌಂಡ್ ಏರಿಸಿದ್ದಾರೆ, ಅಲ್ಲಿ ಅಚ್ಚುಕಟ್ಟಾದ ತಂತಿಬೇಲಿ, ಮನೆ ಎದುರಿಗೆ ಇಲ್ಲಿ ಸಿಮೆಂಟಿನ ಹಾಸಿಗೆ, ಅಲ್ಲಿ ಹಸಿರು ಬಳ್ಳಿಗಳು ಎದ್ದು ನಿಂತಿರುತ್ತವೆ, ಇಲ್ಲಿ ತಿನ್ನಲು ಜೊತೆಗೆ ಜಾಮ್ ಅಥವಾ ಸಾಸ್ ಇದ್ದರೆ, ಅಲ್ಲಿ ಚಗಳಿ ಇರುವೆ ಚಟ್ನಿ ಹೀಗೆ ಹೇಳುತ್ತ ಹೋದರೆ ಮುಗಿಯದಷ್ಟಿದೆ.

ಬದುಕೆಂಬುದು ನೆನಪಿನ ದೋಣಿ ಇದ್ದ ಹಾಗೆ ಅದು ಮಧ್ಯದಲ್ಲಿ ಮುಳುಗಿ ಹೋಗಬಹುದು ಅಥವಾ ದಡಸೇರಲು ಬಹುದು. ಬದುಕು ಕೊನೆಗೊಳ್ಳುವ ಮೊದಲು ಆದಷ್ಟು ಸಿಹಿ ಕಹಿ ನೆನಪುಗಳು ಉಳಿದು ಅಳಿದು ಹೋಗುತ್ತವೆ. ಆದರೆ ಕಲ್ಲು-ಸಕ್ಕರೆಯಂಥ ಸಿಹಿನೆನಪು ಬದುಕಿನಲ್ಲಿ  ಉಳಿಯಬೇಕಾದರೆ ನೀವು ಒಮ್ಮೆ ಮಲೆನಾಡಿಗೆ ಕಾಲಿಡಲೇ ಬೇಕು.

ರಾಹುಲ್, ಎಂಜಿಎಂ ಕಾಲೇಜು ಉಡುಪಿ

ಟಾಪ್ ನ್ಯೂಸ್

prachanda-nepal

Nepal; 4ನೇ ಬಾರಿಗೆ ವಿಶ್ವಾಸಮತ ಗೆದ್ದ ಪ್ರಧಾನಿ ಪ್ರಚಂಡ

1-wqwewqeewqe

RSS ಸದಸ್ಯ ನಾನು ಎಂದ ಕಲ್ಕತ್ತಾ ಹೈಕೋರ್ಟ್ ನಿವೃತ್ತ ಜಡ್ಜ್

5, 8, 9ನೇ ತರಗತಿ ಮಕ್ಕಳ ಸಂಕಟಕ್ಕೆ ಪರಿಹಾರ

5, 8, 9ನೇ ತರಗತಿ ಮಕ್ಕಳ ಸಂಕಟಕ್ಕೆ ಪರಿಹಾರ

Heavy Rain ಮಳೆಗಾಲದ ವಾತಾವರಣ; ಪೂರ್ವ ಮುಂಗಾರು ಚುರುಕು

Heavy Rain ಮಳೆಗಾಲದ ವಾತಾವರಣ; ಪೂರ್ವ ಮುಂಗಾರು ಚುರುಕು

1-modi

Varanasi; 25000 ಮಹಿಳೆಯರ ಜತೆ ಸ್ವಕ್ಷೇತ್ರದಲ್ಲಿ ಪಿಎಂ ಸಂವಾದ

ನೇತ್ರಾವತಿಯಲ್ಲಿ ಹರಿವು ಏರಿಕೆ; ತುಂಬೆಗೆ ಎಎಂಆರ್‌ ನೀರು

Mangaluru ನೇತ್ರಾವತಿಯಲ್ಲಿ ಹರಿವು ಏರಿಕೆ; ತುಂಬೆಗೆ ಎಎಂಆರ್‌ ನೀರು

MOdi (3)

Odisha ರಾಜ್ಯ ಸರಕಾರವು ಭ್ರಷ್ಟರ ಹಿಡಿತಕ್ಕೆ ಸಿಲುಕಿದೆ: ಪಿಎಂ ಮೋದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bengaluru ಎಷ್ಟೇ ಮಳೆ ಬಂದರೂ ಪಂದ್ಯ ನಡೆಸಬಹುದು; ಏನಿದು ಚಿನ್ನಸ್ವಾಮಿಯ ಸಬ್ ಏರ್ ಸಿಸ್ಟಂ?

Bengaluru ಎಷ್ಟೇ ಮಳೆ ಬಂದರೂ ಪಂದ್ಯ ನಡೆಸಬಹುದು; ಏನಿದು ಚಿನ್ನಸ್ವಾಮಿಯ ಸಬ್ ಏರ್ ಸಿಸ್ಟಂ?

World War III Cinema: ಜಗತ್ತಿನಲ್ಲಿ 3ನೇ ಮಹಾಯುದ್ಧ ಘಟಿಸಿದರೆ ಏನಾಗಬಹುದು? ಹೇಗಾಗಬಹುದು?

World War III Cinema: ಜಗತ್ತಿನಲ್ಲಿ 3ನೇ ಮಹಾಯುದ್ಧ ಘಟಿಸಿದರೆ ಏನಾಗಬಹುದು? ಹೇಗಾಗಬಹುದು?

ಟೀಂ ಇಂಡಿಯಾದಲ್ಲೂ ರೋಹಿತ್ ಕೆರಿಯರ್ ಮುಗಿಸಿದ್ರಾ ಹಾರ್ದಿಕ್ ಪಾಂಡ್ಯ? ಏನಿದು ವರದಿ

ಟೀಂ ಇಂಡಿಯಾದಲ್ಲೂ ರೋಹಿತ್ ಕೆರಿಯರ್ ಮುಗಿಸಿದ್ರಾ ಹಾರ್ದಿಕ್ ಪಾಂಡ್ಯ? ಏನಿದು ವರದಿ

World Mother’s Day 2024: ಅಮ್ಮನಾಗಿ ಅಮ್ಮನನ್ನು ಅರಿತಾಗ….

World Mother’s Day 2024: ಅಮ್ಮನಾಗಿ ಅಮ್ಮನನ್ನು ಅರಿತಾಗ….

Bado Badi Hoye Hoye.. ಎಲ್ಲಿ ನೋಡಿದರೂ ಈ ಹಾಡಿನದ್ದೇ ಹವಾ.. ಇದನ್ನು ಹಾಡಿದವರು ಯಾರು?

Bado Badi Hoye Hoye.. ಎಲ್ಲಿ ನೋಡಿದರೂ ಈ ಹಾಡಿನದ್ದೇ ಹವಾ.. ಇದನ್ನು ಹಾಡಿದವರು ಯಾರು?

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

police USA

China ಶಾಲೆಯಲ್ಲಿ ಚಾಕು ಇರಿತ: 5 ಮಂದಿಗೆ ಗಾಯ

prachanda-nepal

Nepal; 4ನೇ ಬಾರಿಗೆ ವಿಶ್ವಾಸಮತ ಗೆದ್ದ ಪ್ರಧಾನಿ ಪ್ರಚಂಡ

1-wqwewqeewqe

RSS ಸದಸ್ಯ ನಾನು ಎಂದ ಕಲ್ಕತ್ತಾ ಹೈಕೋರ್ಟ್ ನಿವೃತ್ತ ಜಡ್ಜ್

5, 8, 9ನೇ ತರಗತಿ ಮಕ್ಕಳ ಸಂಕಟಕ್ಕೆ ಪರಿಹಾರ

5, 8, 9ನೇ ತರಗತಿ ಮಕ್ಕಳ ಸಂಕಟಕ್ಕೆ ಪರಿಹಾರ

Heavy Rain ಮಳೆಗಾಲದ ವಾತಾವರಣ; ಪೂರ್ವ ಮುಂಗಾರು ಚುರುಕು

Heavy Rain ಮಳೆಗಾಲದ ವಾತಾವರಣ; ಪೂರ್ವ ಮುಂಗಾರು ಚುರುಕು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.