ಆರೋಗ್ಯ ಕಾರ್ಡ್‌ ನೋಂದಣಿ ಚುರುಕು: ಉಡುಪಿ ಜಿಲ್ಲೆಗೆ ಪ್ರಥಮ ಸ್ಥಾನ

ಈಗ ಹೊಸ ನಿಯಮದಿಂದ ಕಾರ್ಡ್‌ಗೆ ಬೇಡಿಕೆ ಹೆಚ್ಚಿದೆ.

Team Udayavani, Dec 29, 2021, 10:40 AM IST

ಆರೋಗ್ಯ ಕಾರ್ಡ್‌ ನೋಂದಣಿ ಚುರುಕು: ಉಡುಪಿ ಜಿಲ್ಲೆಗೆ ಪ್ರಥಮ ಸ್ಥಾನ

ದಾವಣಗೆರೆ: ಖಾಸಗಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ಪಡೆಯಲು ವೈದ್ಯರ ಶಿಫಾರಸು ಪತ್ರದೊಂದಿಗೆ ಆಯುಷ್ಮಾನ್‌ ಭಾರತ್‌-ಆರೋಗ್ಯ ಕರ್ನಾಟಕ ಕಾರ್ಡ್‌ (ಎಬಿ-ಎಆರ್‌ಕೆ ) ಒಂದೇ ಸಾಕು ಎನ್ನುವ ರಾಜ್ಯ ಸರಕಾರದ ಇತ್ತೀಚಿನ ನಿಯಮದಿಂದ ರಾಜ್ಯದಲ್ಲಿ ಆರೋಗ್ಯ ಕಾರ್ಡ್‌ ನೋಂದಣಿ ಪ್ರಕ್ರಿಯೆ ಚುರುಕು ಪಡೆದಿದೆ.

ಖಾಸಗಿ ಆಸ್ಪತ್ರೆಗಳಲ್ಲಿ ಮೊದಲು ಉಚಿತ ಚಿಕಿತ್ಸೆ ಪಡೆಯಲು ಎಬಿ-ಎಆರ್‌ಕೆ ಕಾರ್ಡ್‌ನೊಂದಿಗೆ ಬಿಪಿಎಲ್‌ ಕಾರ್ಡ್‌, ಆಧಾರ್‌ ಕಾರ್ಡ್‌ ಸೇರಿ ಇನ್ನಿತರ ದಾಖಲೆಗಳನ್ನು ಕೇಳಲಾಗುತ್ತಿತ್ತು. ತುರ್ತು ಸಂದರ್ಭ ಈ ಎಲ್ಲ ದಾಖಲೆಗಳನ್ನು ನೀಡಲಾಗದು ಎನ್ನುವ ಕಾರಣಕ್ಕಾಗಿ ಅನೇಕರು ಎಬಿ-ಎಆರ್‌ಕೆ ಕಾರ್ಡ್‌ ಮಾಡಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದರು. ಆದರೆ ಈಗ ಹೊಸ ನಿಯಮದಿಂದ ಕಾರ್ಡ್‌ಗೆ ಬೇಡಿಕೆ ಹೆಚ್ಚಿದೆ.

ಆರೋಗ್ಯ ಇಲಾಖೆ ಅಂಕಿ-ಅಂಶಗಳನ್ನು ಗಮನಿಸಿದರೆ ರಾಜ್ಯದಲ್ಲಿ ಎಬಿ-ಎಆರ್‌ಕೆ ಕಾರ್ಡ್‌ ನೋಂದಣಿ ಆಮೆಗತಿಯಲ್ಲಿ ಸಾಗಿದೆ. ಯೋಜನೆ (2018ರಿಂದ) ಆರಂಭವಾದಾಗಿನಿಂದ ಇಲ್ಲಿಯವರೆಗೆ ಕಾರ್ಡ್‌ ಮಾಡಿಸಿಕೊಂಡವರ ಸಂಖ್ಯೆ ಶೇ. 25ನ್ನೂ ದಾಟಿಲ್ಲ. ಸರಕಾರ ಈಗ ಖಾಸಗಿ ಆಸ್ಪತ್ರೆಯವರು ಚಿಕಿತ್ಸೆ ನೀಡುವಾಗ ಆಯುಷ್ಮಾನ್‌ ಭಾರತ್‌-ಆರೋಗ್ಯ ಕರ್ನಾಟಕ ಆರೋಗ್ಯ ಕಾರ್ಡ್‌ ಒಂದನ್ನೇ ಪರಿಗಣಿಸಬೇಕು, ಉಳಿದ ದಾಖಲೆಗಳಿಗಾಗಿ ಒತ್ತಡ ಹೇರಬಾರದೆಂಬ ಹೊಸ ನಿಯಮ ಮಾಡಿದ್ದರಿಂದ ಕಳೆದೆರಡು ವಾರಗಳಿಂದ ಕಾರ್ಡ್‌ ಮಾಡಿಸಿಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಿದೆ.

ಇತರ ಜಿಲ್ಲೆಗಳ ಪ್ರಗತಿ ಇಂತಿದೆ
ಉತ್ತರಕನ್ನಡ ಜಿಲ್ಲೆ ಶೇ. 42, ಮಂಡ್ಯ ಶೇ. 40, ಶಿವಮೊಗ್ಗ ಶೇ. 39, ದಕ್ಷಿಣ ಕನ್ನಡ ಶೇ. 37, ಹಾಸನ ಶೇ. 33, ರಾಮನಗರ ಶೇ. 33, ಬೆಂಗಳೂರು ಗ್ರಾಮಾಂತರ ಶೇ. 27, ಚಾಮರಾಜನಗರ ಶೇ.25, ಮೈಸೂರು ಶೇ.23, ಬೆಳಗಾವಿ ಶೇ. 20, ಚಿತ್ರದುರ್ಗ ಶೇ. 20, ತುಮಕೂರು ಶೇ. 20, ಧಾರವಾಡ ಶೇ. 19, ಬಾಗಲಕೋಟೆ ಶೇ. 18, ದಾವಣಗೆರೆ ಶೇ. 18, ಹಾವೇರಿ ಶೇ. 17, ಯಾದಗಿರಿ ಶೇ. 17, ಕೊಪ್ಪಳ ಶೇ. 17, ಚಿಕ್ಕಬಳ್ಳಾಪುರ ಶೇ. 17, ಬೀದರ್‌ ಶೇ. 17, ಗದಗ ಶೇ. 16, ವಿಜಯಪುರ ಶೇ. 16, ಕೋಲಾರ ಶೇ. 15, ಕಲಬುರಗಿ ಶೇ. 14, ಬಳ್ಳಾರಿ ಶೇ. 12, ಬೆಂಗಳೂರು ನಗರ ಶೇ. 12, ರಾಯಚೂರು ಶೇ. 10.

ಇದನ್ನೂ ಓದಿ:ಝೊಮ್ಯಾಟೊದಲ್ಲಿ ಕೋಟಿ ಮೋಮೋಸ್‌ ಆರ್ಡರ್‌; ಭಾರತದಲ್ಲಿ ಬಿರಿಯಾನಿಗೇ ಫ‌ಸ್ಟ್‌ ಪ್ಲೇಸ್‌

ಆರೋಗ್ಯ ಇಲಾಖೆ ಅಂಕಿ-ಅಂಶದ ಪ್ರಕಾರ ರಾಜ್ಯದ ಒಟ್ಟು ಏಳು ಕೋಟಿಯಷ್ಟು (2020ಕ್ಕೆ ಆಧರಿಸಿ) ಜನಸಂಖ್ಯೆಯಲ್ಲಿ ಕೇವಲ ಒಂದೂವರೆ ಕೋಟಿಯಷ್ಟು ಜನ ಮಾತ್ರ ಆರೋಗ್ಯ ಕಾರ್ಡ್‌ ಪಡೆದಿದ್ದು, ಶೇ. 21ರಷ್ಟು ಮಾತ್ರ ಪ್ರಗತಿಯಾಗಿದೆ. ಆರೋಗ್ಯ ಇಲಾಖೆ ಒಟ್ಟು ಜನಸಂಖ್ಯೆಯನ್ನು ಆಧರಿಸಿ ಕಾರ್ಡ್‌ಗಳ ಪ್ರಗತಿ ಉಲ್ಲೇಖೀಸಿದ್ದು, ರಾಜ್ಯದ ಬಿಪಿಎಲ್‌ ಕುಟುಂಬದವರನ್ನಷ್ಟೇ ಪರಿಗಣಿಸಿ ಲೆಕ್ಕ ಹಾಕಿದರೆ ರಾಜ್ಯದಲ್ಲಿ ಎಬಿ-ಎಆರ್‌ಕೆ ಕಾರ್ಡ್‌ ಮಾಡಿಸಿಕೊಂಡವರ ಪ್ರಮಾಣ ಸರಾಸರಿ ಶೇ. 40 ಮೀರುವುದಿಲ್ಲ. ಆದರೆ ಈಗ ತುರ್ತು ಸಂದರ್ಭ ಯಾವುದೇ ವಿಳಂಬವಿಲ್ಲದೇ ಖಾಸಗಿ ಆಸ್ಪತ್ರೆಗಳು ಚಿಕಿತ್ಸೆ ನೀಡುವಂತಾಗಲು ಸರಕಾರ, ಎಬಿ-ಎಆರ್‌ಕೆ ಕಾರ್ಡ್‌ ಒಂದನ್ನೇ ದಾಖಲೆಯಾಗಿ ಪಡೆಯಬೇಕು ಎಂಬ ನಿಯಮ ಮಾಡಿದ್ದರಿಂದ ಕಾರ್ಡ್‌ ನೋಂದಣಿಯಲ್ಲಿ ಚೇತರಿಕೆ ಕಂಡುಬಂದಿದೆ.

ಜಿಲ್ಲಾವಾರು ಪ್ರಗತಿ
ಆರೋಗ್ಯ ಇಲಾಖೆ (ಡಿಸೆಂಬರ್‌ 16ವರೆಗಿನ) ಮಾಹಿತಿ ಪ್ರಕಾರ ಎಬಿಎಆರ್‌ಕೆ ಕಾರ್ಡ್‌ ಮಾಡಿಸುವಲ್ಲಿ ಉಡುಪಿ ಜಿಲ್ಲೆ ಶೇ. 65ರಷ್ಟು ಸಾಧನೆ ಮಾಡಿ ರಾಜ್ಯದಲ್ಲಿ ಪ್ರಥಮ ಸ್ಥಾನದಲ್ಲಿದೆ. ಕೊಡಗು ಜಿಲ್ಲೆ ಶೇ. 58, ಚಿಕ್ಕಮಗಳೂರು ಜಿಲ್ಲೆ ಶೇ. 43ರಷ್ಟು ಜನ ಎಬಿಎಆರ್‌ಕೆ ಕಾರ್ಡ್‌ ಮಾಡಿಕೊಂಡಿದ್ದು, ಕ್ರಮವಾಗಿ ದ್ವಿತೀಯ ಹಾಗೂ ತೃತೀಯ ಸ್ಥಾನದಲ್ಲಿವೆ. ರಾಯಚೂರು, ಬೆಂಗಳೂರು ನಗರ ಹಾಗೂ ಬಳ್ಳಾರಿ ಜಿಲ್ಲೆಗಳು ಕಾರ್ಡ್‌ ನೋಂದಣಿಯಲ್ಲಿ ಕೊನೆಯ ಸ್ಥಾನದಲ್ಲಿವೆ.

ಟಾಪ್ ನ್ಯೂಸ್

Panamburu ಮಂಗಳೂರಿಗೆ ಬಂತು 8ನೇ ಬೃಹತ್‌ ಪ್ರವಾಸಿ ಹಡಗು

Panamburu ಮಂಗಳೂರಿಗೆ ಬಂತು 8ನೇ ಬೃಹತ್‌ ಪ್ರವಾಸಿ ಹಡಗು

Ramalinga reddy 2

BJP ಒಂದಂಕಿಗೆ ಕುಸಿತ: ಸಚಿವ ರಾಮಲಿಂಗಾ ರೆಡ್ಡಿ ಭವಿಷ್ಯ

ನಮ್ಮ ದುಡಿಮೆ ನಿಮ್ಮ ಮಕ್ಕಳಿಗಾಗಿ: ಪ್ರಧಾನಿ ಮೋದಿ

Election Campaign; ನಮ್ಮ ದುಡಿಮೆ ನಿಮ್ಮ ಮಕ್ಕಳಿಗಾಗಿ: ಪ್ರಧಾನಿ ಮೋದಿ

NEET Exam ಕರಾವಳಿಯಲ್ಲಿ ಸುಸೂತ್ರವಾಗಿ ನಡೆದ “ನೀಟ್‌’ ಪರೀಕ್ಷೆ

NEET Exam ಕರಾವಳಿಯಲ್ಲಿ ಸುಸೂತ್ರವಾಗಿ ನಡೆದ “ನೀಟ್‌’ ಪರೀಕ್ಷೆ

mamata

Sandeshkhali ವೀಡಿಯೋ ಬಹಿರಂಗ: ಬಿಜೆಪಿ-ಟಿಎಂಸಿ ನಡುವೆ ತೀವ್ರ ವಾಗ್ಯುದ್ಧ

ಮತ ಪ್ರಮಾಣ ಹೆಚ್ಚಿಸಲು ಶಾಮಿಯಾನ, ಫ್ಯಾನು, ನೀರು…!

ಮತ ಪ್ರಮಾಣ ಹೆಚ್ಚಿಸಲು ಶಾಮಿಯಾನ, ಫ್ಯಾನು, ನೀರು…!

JDS ಜತೆ ಮೈತ್ರಿ ಮುರಿದುಕೊಳ್ಳುವುದಿಲ್ಲ: ಯಡಿಯೂರಪ್ಪ

JDS ಜತೆ ಮೈತ್ರಿ ಮುರಿದುಕೊಳ್ಳುವುದಿಲ್ಲ: ಯಡಿಯೂರಪ್ಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7-knee

Knee: ಮೊಣಗಂಟು ಸಮಸ್ಯೆ: ನಿಮ್ಮ ರೋಗಿಗಳಿಗೆ ಅರ್ಥ ಮಾಡಿಕೊಳ್ಳಲು ಸಹಾಯ ಮಾಡುವುದು ಹೇಗೆ?

6-Fibromyalgia

Fibromyalgia: ಫೈಬ್ರೊಮಯಾಲ್ಜಿಯಾ ಜತೆಗೆ ಜೀವನ

4-heart-diseases

Heart Diseases: ಮಹಿಳೆಯರಲ್ಲಿ ಹೃದ್ರೋಗಗಳು: ಇದು ವಿಭಿನ್ನ!

14-health-1

Autism: ಸ್ವಲೀನತೆ: ಹಾಗೆಂದರೇನು?

12-health

Ankylosing Spondylitis: ಹಾಗೆಂದರೇನು ? ಕಾರಣವೇನು ? ಚಿಕಿತ್ಸೆ ಹೇಗೆ

MUST WATCH

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

ಹೊಸ ಸೇರ್ಪಡೆ

Panamburu ಮಂಗಳೂರಿಗೆ ಬಂತು 8ನೇ ಬೃಹತ್‌ ಪ್ರವಾಸಿ ಹಡಗು

Panamburu ಮಂಗಳೂರಿಗೆ ಬಂತು 8ನೇ ಬೃಹತ್‌ ಪ್ರವಾಸಿ ಹಡಗು

Ramalinga reddy 2

BJP ಒಂದಂಕಿಗೆ ಕುಸಿತ: ಸಚಿವ ರಾಮಲಿಂಗಾ ರೆಡ್ಡಿ ಭವಿಷ್ಯ

ನಮ್ಮ ದುಡಿಮೆ ನಿಮ್ಮ ಮಕ್ಕಳಿಗಾಗಿ: ಪ್ರಧಾನಿ ಮೋದಿ

Election Campaign; ನಮ್ಮ ದುಡಿಮೆ ನಿಮ್ಮ ಮಕ್ಕಳಿಗಾಗಿ: ಪ್ರಧಾನಿ ಮೋದಿ

NEET Exam ಕರಾವಳಿಯಲ್ಲಿ ಸುಸೂತ್ರವಾಗಿ ನಡೆದ “ನೀಟ್‌’ ಪರೀಕ್ಷೆ

NEET Exam ಕರಾವಳಿಯಲ್ಲಿ ಸುಸೂತ್ರವಾಗಿ ನಡೆದ “ನೀಟ್‌’ ಪರೀಕ್ಷೆ

mamata

Sandeshkhali ವೀಡಿಯೋ ಬಹಿರಂಗ: ಬಿಜೆಪಿ-ಟಿಎಂಸಿ ನಡುವೆ ತೀವ್ರ ವಾಗ್ಯುದ್ಧ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.