ನೆರೆಮನೆಯ ಸಾಕು ಪ್ರಾಣಿಗಳಿಗೆ ವಿಷ ಹಾಕುತ್ತಿದ್ದ ವ್ಯಕ್ತಿ : ಪ್ರಕರಣ ದಾಖಲು
Team Udayavani, Jan 13, 2022, 11:49 AM IST
ಮಂಗಳೂರು: ನೆರೆ ಮನೆಯ ನಾಯಿ, ಬೆಕ್ಕುಗಳನ್ನು ವಿಷ ಹಾಕಿ ಕೊಲ್ಲುತ್ತಿದ್ದಾರೆಂದು ಆರೋಪಿಸಿ ನಗರದ ವೆಲೆನ್ಸಿಯಾ ನಿವಾಸಿ ಮನೋಹರ ಪಾಯಸ್ ವಿರುದ್ಧ ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುಮಾರು 3-4 ವರ್ಷಗಳಿಂದ ನಾಯಿ, ಬೆಕ್ಕುಗಳಿಗೆ ವಿಷ ಹಾಕಿ ಕೊಲ್ಲುತ್ತಿದ್ದಾರೆ. ಒಂದು ವಾರದ ಹಿಂದೆ ಕೂಡ ನಾಯಿ, ಬೆಕ್ಕುಗಳನ್ನು ವಿಷವಿಟ್ಟು ಕೊಂದಿದ್ದು ಬುಧವಾರ ಮೆಲ್ವಿಲ್ ಪಿಂಟೋ ಅವರ ನಾಯಿ ಕೂಡ ವಿಷಕಾರಿ ಸತ್ತು ಹೋಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.