ರಾತ್ರೋರಾತ್ರಿ 4.20 ಲಕ್ಷ ರೂ. ಮೌಲ್ಯದ 21 ಕ್ವಿಂಟಾಲ್ ಅಡಕೆ ಕಳ್ಳತನ
Team Udayavani, Feb 6, 2022, 7:58 PM IST
ಸಾಗರ: ಪಕ್ಕದ ಮನೆಯವನ ಅಂಗಳದಲ್ಲಿ ಒಣಗಿಸಿದ್ದ 62 ಮೂಟೆಗಳಷ್ಟು ಸಿಪ್ಪೆಗೋಟು ಅಡಕೆಯನ್ನು ರಾತ್ರೋರಾತ್ರಿ ಕಳ್ಳತನ ಮಾಡಿದ ಪ್ರಕರಣ ತಾಲೂಕಿನ ತಾಳಗುಪ್ಪ ಸಮೀಪದ ತಲವಾಟ ಗ್ರಾಮದಲ್ಲಿ ನಡೆದಿದೆ. ಸುಮಾರು 21 ಕ್ವಿಂಟಾಲ್ಗಳಷ್ಟು ಅಡಕೆ ಕಳ್ಳತನ ಆಗಿರಬಹುದು ಎಂದು ಅಂದಾಜಿಲಾಗಿದ್ದು, ಈ ಅಡಕೆಯ ಮೌಲ್ಯ 4.20 ಲಕ್ಷ ರೂ. ಆಗಬಹುದು ಎಂದು ಅಂದಾಜಿಸಲಾಗಿದೆ.
ತಲವಾಟ ಗ್ರಾಮದ ಮೋಹನ ನಾಗಾನಾಯ್ಕ ಹಾಗೂ ನೆರೆಮನೆಯಲ್ಲಿರುವ ಮಾವ ಕನ್ನಪ್ಪ ಶಂಬುಲಿಂಗ ನಾಯ್ಕ ಅವರು ತಮ್ಮ ತಮ್ಮ ತೋಟದ ಗೋಟಡಿಕೆಯನ್ನು ಪಕ್ಕದ ಮನೆಯವರಾದ ಸತ್ಯನಾರಾಯಣ ನಾಗಾನಾಯ್ಕ ಅವರ ಖಾಲಿ ಜಾಗದಲ್ಲಿ ಒಣಗಿಸಿದ್ದರು. ಅಡಕೆ ಸುಲಿ ಕೆಲಸ ಮುಗಿಸಿ ಮರುದಿನ ಬೆಳಗ್ಗೆ ನೋಡಿದಾಗ ಮೋಹನ್ ಅವರಿಗೆ ಸೇರಿದ ಸುಮಾರು 45 ಚೀಲ ಹಾಗೂ ಕನ್ನಪ್ಪ ಅವರಿಗೆ ಸೇರಿದ ಸುಮಾರು 17 ಚೀಲ ಸಿಪ್ಪೇಗೋಟು ಕಳುವಾಗಿರುವುದು ಬೆಳಕಿಗೆ ಬಂದಿದೆ. ಪ್ರಕರಣ ಬುಧವಾರ ರಾತ್ರಿ ನಡೆದಿದೆ. ಮೋಹನ್ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಇದನ್ನೂ ಓದಿ : ರಸ್ತೆಯಲ್ಲೇ ಇಂಡಕ್ಟಿವ್ ಚಾರ್ಜಿಂಗ್ ಮೂಲಕ ಇಲೆಕ್ಟ್ರಿಕ್ ಕಾರುಗಳು ಚಾರ್ಜ್!
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.