ಹಿಮಪಾತದಲ್ಲಿ ಸಿಲುಕಿದ ಏಳು ಮಂದಿ ಭಾರತೀಯ ಯೋಧರು
Team Udayavani, Feb 7, 2022, 10:15 PM IST
ನವದೆಹಲಿ: ಅರುಣಾಚಲ ಪ್ರದೇಶದ ಹಿಮಚ್ಛಾದಿತ ಪ್ರದೇಶವಾದ ಕೆಮರ್ ಸೆಕ್ಟರ್ನಲ್ಲಿ ಸೋಮವಾರ ಹಿಮಪಾತ ಸಂಭವಿಸಿದ್ದು, ಅದರಲ್ಲಿ ಏಳು ಮಂದಿ ಭಾರತೀಯ ಯೋಧರು ಸಿಲುಕಿಕೊಂಡಿದ್ದಾರೆ.
ಪರಿಹಾರ ಕಾರ್ಯಾಚರಣೆ ಭರದಿಂದ ಸಾಗುತ್ತಿದ್ದು, ಸೋಮವಾರ ರಾತ್ರಿಯಾದರೂ ಹಿಮದೊಳಗೆ ಹುದುಗಿಹೋಗಿರುವ ಯೋಧರು ಪತ್ತೆಯಾಗಿರಲಿಲ್ಲ.
ಅತಿ ಎತ್ತರದ ಕೆಮಂಗ್ ಸೆಕ್ಟರ್ನಲ್ಲಿ ಪಹರೆಯಲ್ಲಿ ನಿರತರಾಗಿದ್ದ ಯೋಧರ ತಂಡ, ಹಿಮಪಾತಕ್ಕೆ ಸಿಲುಕಿದೆ. ಹಲವಾರು ಅಡಿಗಳಷ್ಟು ಆಳದಲ್ಲಿ ಯೋಧರು ಸಿಲುಕಿರಬಹುದಾಗಿದ್ದು ಅವರನ್ನು ಹೊರತೆಗೆಯುವ ಕಾರ್ಯಾಚರಣೆ ಕೈಗೊಳ್ಳಲಾಗಿದೆ. ಇಂಥ ಕಾರ್ಯಾಚರಣೆಯಲ್ಲಿ ಈ ಹಿಂದೆ ಪಾಲ್ಗೊಂಡಿದ್ದ ಅನುಭವಿರುವ ನಿಷ್ಣಾತರನ್ನೂ ಕರೆಯಿಸಿಕೊಳ್ಳಲಾಗಿದೆ ಎಂದು ಭಾರತೀಯ ಸೇನೆ ತಿಳಿಸಿದೆ.
ಕಳೆದ ಕೆಲವು ದಿನಗಳಿಂದ ಕೆಮರ್ ಸೆಕ್ಟರ್ನಲ್ಲಿ ಪ್ರತಿಕೂಲ ಹವಾಮಾನವಿತ್ತು. ಅದರ ನಡುವೆಯೇ ಸೈನಿಕರು ತಮ್ಮ ನಿತ್ಯದ ಕರ್ತವ್ಯ ನಿಭಾಯಿಸುತ್ತಿದ್ದರು. ಅದರ ನಡುವೆಯೇ ಈ ಅವಘಡ ಸಂಭವಿಸಿದೆ ಎಂದು ಸೇನೆ ಹೇಳಿ ದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.