ಭಾರತೀಯತೆ ಒಪ್ಪದವರು ಇಲ್ಲಿರಬೇಕಿಲ್ಲ: ಅದಮಾರು ಶ್ರೀ
Team Udayavani, Apr 17, 2022, 6:20 AM IST
ರಾಯಚೂರು: ಭಾರತೀಯತೆಗೆ ಯಾರೆಲ್ಲ ವಿರೋಧ ಮಾಡುತ್ತಾರೋ ಅವರು ಇಲ್ಲಿರುವ ಅಗತ್ಯವಿಲ್ಲ. ಇಲ್ಲಿನ ನೆಲ-ಜಲ-ಗಾಳಿ ಬಳಸು ವವರೆಲ್ಲ ಭಾರತೀಯರೇ ಎಂದು ಅದಮಾರು ಪೀಠದ ಶ್ರೀ ವಿಶ್ವಪ್ರಿಯ ತೀರ್ಥರು ಅಭಿಪ್ರಾಯಪಟ್ಟರು.
ನಗರದಲ್ಲಿ ಶನಿವಾರ ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, ಎಲ್ಲರೂ ಒಂದಾಗಿ, ಚೆನ್ನಾಗಿ ಬದುಕಬೇಕೆಂಬ ಭಾವನೆ ಕೇವಲ ಹಿಂದೂಗಳು ಮಾಡಿದರೆ ಸಾಲದು; ಎಲ್ಲ ಧರ್ಮೀಯರು ಮಾಡಬೇಕು. ಈಚೆಗೆ ಸಮಾಜದಲ್ಲಿ ನಡೆಯುತ್ತಿರುವ ಧಾರ್ಮಿಕ ಬೆಳವಣಿಗೆಗಳು ಸಮಾಜಕ್ಕೆ ಮಾರಕವಾದದ್ದು. ಇಲ್ಲಿ ನಾವು ಯಾರನ್ನೂ ದೂರಿ ಪ್ರಯೋಜನವಿಲ್ಲ. ಇದು ನನ್ನ ದೇಶ ಎಂಬ ಭಾವನೆ ಪ್ರತಿಯೊಬ್ಬ ಹಿಂದೂವಿನ ಮನಸ್ಸಿಗೆ ಬರಬೇಕು ಎಂದರು.
ಈ ಮಣ್ಣಲ್ಲಿ ಇರುವವರು, ಇಲ್ಲಿ ಉಸಿರಾಡುವವರು, ನೀರು ಕುಡಿಯುವವರು, ಆಹಾರ ಸೇವಿಸುವವರೆಲ್ಲರೂ ಭಾರತೀಯರೇ ಎನ್ನುವುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಅಂಥವರಿಗೆ ಹಿಂದೂ ಗಳು ಮನದಟ್ಟು ಮಾಡಬೇಕು. ನೀವೂ ಬದುಕಬೇಕು, ನಾವೂ ಬದುಕಬೇಕು ಎಂಬ ವಾತಾವರಣ ಸೃಷ್ಟಿಸಬೇಕು. ಅಂದಾಗ ಮಾತ್ರ ನಮ್ಮ ದೇಶ ಇಡೀ ವಿಶ್ವಕ್ಕೆ ಮಾದರಿಯಾಗಲು ಸಾಧ್ಯ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Thirthahalli ಕುಪ್ಪಳ್ಳಿ; ಮನೆಗೆ ಆಕಸ್ಮಿಕ ಬೆಂಕಿ: ಅಪಾರ ಹಾನಿ!
ಎಲ್ಲಾ ಶೆಡ್ಯೂಲ್ ಮುಗಿದ ಬಳಿಕವಷ್ಟೇ ʼKGF -3ʼ.. ಬಿಗ್ ಅಪ್ಡೇಟ್ ಕೊಟ್ಟ ನಿರ್ದೇಶಕ ನೀಲ್
Goa ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮತದಾನ ಆಗಿದೆ: ಸಿಎಂ ಪ್ರಮೋದ್ ಸಾವಂತ್
ತೆಕ್ಕಟ್ಟೆ: ಅಪಾಯದಲ್ಲಿದ್ದ ನವಿಲಿನ ರಕ್ಷಣೆ
Tulu Movie: ಕತಾರ್ ನಲ್ಲಿ ವಿಜೃಂಭಿಸಿದ ತುಳು ಚಿತ್ರ “ತುಡರ್”