ಕೈಗಾರಿಕೆಗಳನ್ನು ಅಡಕತ್ತರಿಯಲ್ಲಿ ನಿಲ್ಲಿಸಿದ ಪಾಲಿಕೆ ಆಸ್ತಿ ತೆರಿಗೆ!

ಖಾತಾ ಸಿಗಬೇಕಾದರೆ ಪಾಲಿಕೆ ತೆರಿಗೆ ಪಾವತಿಗೆ ಸೂಚನೆ

Team Udayavani, Apr 18, 2022, 9:58 AM IST

cooperation

ಮಹಾನಗರ: ಕೊರೊನಾ ಸಂಕಷ್ಟದಿಂದ ಪಾರಾಗಿ ವ್ಯಾಪಾರ-ವಹಿ ವಾಟು ಚೇತರಿಕೆ ಕಾಣುತ್ತಿರುವ ಸಂದರ್ಭದಲ್ಲಿಯೇ ಮಂಗಳೂರು ಪಾಲಿಕೆಯ ಸ್ವಯಂ ಘೋಷಿತ ಆಸ್ತಿ ತೆರಿಗೆ (ಎಸ್‌ಎಎಸ್‌) ನಿಯಮಾವಳಿಯು ಇದೀಗ ಬೈಕಂಪಾಡಿಯ ಕೈಗಾರಿಕೆಗಳನ್ನು ಅಡಕತ್ತರಿಯಲ್ಲಿ ನಿಲ್ಲಿಸಿದೆ!

ಕೆಐಎಡಿಬಿಗೆ ವಾರ್ಷಿಕವಾಗಿ ಹಣ ಪಾವತಿ ಮಾಡುತ್ತಿದ್ದ ಕೈಗಾರಿಕೆಗಳು ಇದೀಗ ಖಾತಾ ಪಡೆಯಲು ಪಾಲಿಕೆ ಯನ್ನು ವಿಚಾರಿಸಿದರೆ 2008ರಿಂದ ತಮ್ಮ ಸ್ವಯಂಘೋಷಿತ ಆಸ್ತಿ ತೆರಿಗೆ ಬಾಕಿ ಉಳಿಸಿ ಕೊಂಡ ಸಂಗತಿ ಮುನ್ನೆಲೆಗೆ ಬಂದಿದೆ. ಬ್ಯಾಂಕ್‌ ಲೋನ್‌, ಕೈಗಾರಿಕೆ ಮಾರಾಟ ಸಹಿತ ಕೆಲವು ಸಂದರ್ಭಕ್ಕೆ ಅಗತ್ಯವಾಗಿರುವ ಖಾತಾ ಪಡೆಯಲು ಇದೀಗ ಕೈಗಾರಿಕೆಯವರು ತೆರಿಗೆ ಹೊರೆ ಎದುರಿಸುತ್ತಿದ್ದಾರೆ.

ಏನಿದು ಸಮಸ್ಯೆ?

ಪಾಲಿಕೆ ವ್ಯಾಪ್ತಿಯಲ್ಲಿ ಇ-ಖಾತಾ ಮಾಡ ಬೇಕಾದ ಹಿನ್ನೆಲೆಯಲ್ಲಿ ಕೆಲವು ಕೈಗಾರಿಕೆ ಗಳ ಮಾಲಕರು ಪಾಲಿಕೆಗೆ ಬಂದಾಗ ಆಶ್ಚರ್ಯ ಕಾದಿತ್ತು. 2008ರಿಂದ ಸ್ವಯಂ ಘೋಷಿತ ಆಸ್ತಿ ತೆರಿಗೆ ಜಾರಿಗೆ ಬಂದಿದ್ದು, ಬೈಕಂಪಾಡಿ ವ್ಯಾಪ್ತಿಯ ಕೈಗಾರಿಕೆಗಳು ಇದನ್ನು ಪಾವತಿಸಿಲ್ಲ; ಹೀಗಾಗಿ ಇ ಖಾತಾ ಸಿಗಬೇಕಾದರೆ 2008 ರಿಂದ ಇಲ್ಲಿಯವರೆಗೆ ದಂಡ ಸಹಿತ ಆಸ್ತಿ ತೆರಿಗೆ ಪಾವತಿಸಬೇಕು. ಇಲ್ಲವಾದರೆ ಖಾತಾ ಸಹಿತ ಯಾವುದೇ ಪ್ರಯೋಜನ ಲಭಿಸುವುದಿಲ್ಲ.

2 ವರ್ಷ ಪಾವತಿಗೆ ಅವಕಾಶ ಕೊಡಿ

2008ರಿಂದ ತೆರಿಗೆ ಪಾವತಿಸುವುದಾದರೆ ಕೈಗಾರಿಕೆಗಳು ಲಕ್ಷಾಂತರ ರೂ. ಪಾವತಿಸ ಬೇಕು; ಸದ್ಯ ಕೈಗಾರಿಕೆಗಳು ಸಂಕಷ್ಟ ಕಾಲ ದಿಂದ ಚೇತರಿಕೆಗೆ ಬರುವ ಹಂತದಲ್ಲಿವೆ. ಈ ವೇಳೆ ತೆರಿಗೆ ಹೊರೆ ಸರಿಯಲ್ಲ. ಸರಕಾರದ ಅಂಗ ಸಂಸ್ಥೆ ಕೆಐಎಡಿಬಿಗೆ ವಾರ್ಷಿಕವಾಗಿ ಕೈಗಾರಿಕೆಯಿಂದ ಹಣ ನೀಡಲಾಗುತ್ತಿದೆ. ಇಷ್ಟಿದ್ದರೂ 2 ವರ್ಷಗಳ ತೆರಿಗೆ ಪಾವತಿಸಿದರೆ ಖಾತಾ ನೀಡುವಂತೆ ಎಂದು ಕೈಗಾರಿಕೆಯವರು ಪಾಲಿಕೆಯನ್ನು ಕೋರಿದ್ದಾರೆ.

ಬಂದ್‌ ಮಾಡಬೇಕಾದ ಪರಿಸ್ಥಿತಿ

ಭಾರತೀಯ ಕೈಗಾರಿಕೆ ಒಕ್ಕೂಟದ ಮಂಗಳೂರು ಘಟಕದ ಅಧ್ಯಕ್ಷ ಗೌರವ್‌ ಹೆಗ್ಡೆ ಅವರು ‘ಸುದಿನ’ ಜತೆಗೆ ಮಾತನಾಡಿ, ಬೈಕಂಪಾಡಿಯಲ್ಲಿ ಕೆಐಎಡಿಬಿ ವ್ಯಾಪ್ತಿಯ ಕೈಗಾರಿಕೆ ಪ್ರದೇಶದ ಎಲ್ಲ ನಿರ್ವಹಣೆಯನ್ನು ಕೆಐಎಡಿಬಿಯೇ ನಡೆಸುತ್ತಿದೆ. ಅನುಮೋದನೆ ಕೂಡ ಅಲ್ಲಿಂದಲೇ ಪಡೆಯಲಾಗುತ್ತಿದೆ. ಪಾಲಿಕೆ ಡೋರ್‌ ನಂಬರ್‌ ಕೂಡ ನೀಡಿಲ್ಲ. ಹೀಗಾಗಿ ಪಾಲಿಕೆಗೆ ತೆರಿಗೆ ಪಾವತಿ ವಿಚಾರ ಬಂದಿಲ್ಲ. ಆದರೆ ಪಾಲಿಕೆಗೆ ಗರಿಷ್ಠ ನೀರಿನ, ತ್ಯಾಜ್ಯ ತೆರಿಗೆಯನ್ನು ಕೈಗಾರಿಕೆಗಳು ಪಾವತಿ ಸುತ್ತಿವೆ. ಇದೀಗ ಖಾತಾ ಪಡೆಯುವ ಸಂದರ್ಭ ಪಾಲಿಕೆಯಿಂದ ತೆರಿಗೆ ಪಾವತಿಸುವ ಬಗ್ಗೆ ಸೂಚನೆ ಬಂದಿದೆ. 2008ರಿಂದ ಇಲ್ಲಿಯವರೆಗೆ ದಂಡ ಸಹಿತ ತೆರಿಗೆ ಪಾವತಿಸಿದರೆ ಕೋಟ್ಯಂತರ ರೂ. ನೀಡಿ ಬೈಕಂಪಾಡಿಯ ಕೈಗಾರಿಕೆಗಳು ಮುಚ್ಚಬೇಕಾಗುತ್ತದೆ. 20 ಸಾವಿರ ಉದ್ಯೋಗಿಗಳು ಬೀದಿಗೆ ಬರುವ ಪರಿಸ್ಥಿತಿ ಇದೆ. ಹೀಗಾಗಿ ಕೈಗಾರಿಕೆಗಳಿಗೆ ತೆರಿಗೆಯಲ್ಲಿ ರಿಯಾಯಿತಿ ನೀಡಿ 2 ವರ್ಷಗಳ ತೆರಿಗೆ ಪಾವತಿಸಿದರೆ ಖಾತಾ ನೀಡಲು ಅನುಕೂಲ ಕಲ್ಪಿಸಬೇಕಾಗಿದೆ’ ಎಂದರು.

ತೆರಿಗೆ ರಿಯಾಯಿತಿಗೆ ಮನವಿ

ಕೈಗಾರಿಕೆಗಳು ಈಗತಾನೆ ಚೇತರಿಕೆಯ ಹಂತಕ್ಕೆ ಬರುತ್ತಿವೆ. ಈ ಸಂದರ್ಭ ಖಾತಾ ಪಡೆಯುವ ಕಾರಣದಿಂದ ಪಾಲಿಕೆಯನ್ನು ಸಂಪರ್ಕಿಸಿದರೆ ಎಸ್‌ಎಎಸ್‌ ಬಾಕಿ ಇರುವುದನ್ನು ಪಾವತಿಸಲು ತಿಳಿಸಿರುವುದು, ಕೈಗಾರಿಕೆಯವರಿಗೆ ದೊಡ್ಡ ಹೊಡೆತ ನೀಡಿದೆ. ಕೆಐಎಡಿಬಿಗೆ ನಿಯಮಿತವಾಗಿ ನಾವು ಹಣ ಪಾವತಿ ಮಾಡಿದ್ದೇವೆ. ಆದರೆ ಈಗ ಪಾಲಿಕೆಯಿಂದ ತೆರಿಗೆ ಹೊರೆ ಬಿದ್ದಿದೆ. ಸಾವಿರಾರು ಉದ್ಯೋಗಿಗಳಿಗೆ ಅವಕಾಶ ಕಲ್ಪಿಸಿದ ಕೈಗಾರಿಕೆಗಳ ರಕ್ಷಣೆಗಾಗಿ ತೆರಿಗೆಯಲ್ಲಿ ರಿಯಾಯಿತಿ ಪ್ರಕಟಿಸಬೇಕಾಗಿದೆ. 2 ವರ್ಷಗಳ ತೆರಿಗೆ ಪಾವತಿಸಲು ನಾವು ಬದ್ಧರಾಗಿದ್ದೇವೆ. -ಐಸಾಕ್‌ ವಾಜ್‌, ಅಧ್ಯಕ್ಷರು, ಕೆನರಾ ಇಂಡಸ್ಟ್ರೀಸ್‌ ಅಸೋಸಿಯೇಶನ್‌

ಟಾಪ್ ನ್ಯೂಸ್

Hebri ತೆಂಕೂಲ: ಆಲಮಡ್ಡಿ ಮೇಣ ಸಂಗ್ರಹಿಸುತ್ತಿದ್ದವರ ಸೆರೆ

Hebri ತೆಂಕೂಲ: ಆಲಮಡ್ಡಿ ಮೇಣ ಸಂಗ್ರಹಿಸುತ್ತಿದ್ದವರ ಸೆರೆ

Veerappa Moily ಯುಪಿಎ ಬರ ಪರಿಹಾರ ಬಾಕಿ ಇಟ್ಟಿರಲಿಲ್ಲ

Veerappa Moily ಯುಪಿಎ ಬರ ಪರಿಹಾರ ಬಾಕಿ ಇಟ್ಟಿರಲಿಲ್ಲ

Dakshina Kannada ಚೆಕ್‌ಪೋಸ್ಟ್‌ ಕಾರ್ಯ ನಿರ್ವಹಣೆಗೆ ಡಿಸಿ ಸೂಚನೆ

Modi (2)

PM Modi ಸ್ಪರ್ಧೆಗೆ ನಿರ್ಬಂಧ: ದಿಲ್ಲಿ ಹೈಕೋರ್ಟ್‌ ನಕಾರ

Ullal ಲೈಂಗಿಕ ಕಿರುಕುಳ: ಪೋಕ್ಸೋ ಪ್ರಕರಣ; ಇಬ್ಬರು ವಶಕ್ಕೆ

Ullal ಲೈಂಗಿಕ ಕಿರುಕುಳ: ಪೋಕ್ಸೋ ಪ್ರಕರಣ; ಇಬ್ಬರು ವಶಕ್ಕೆ

Kundapura: ಪಾದಚಾರಿಗೆ ಬೈಕ್‌ ಢಿಕ್ಕಿ

Kundapura: ಪಾದಚಾರಿಗೆ ಬೈಕ್‌ ಢಿಕ್ಕಿ

Mangaluru; ಪ್ರಯಾಣಿಕರ ಗಮನಕ್ಕೆ; ಹಲವು ರೈಲುಗಳ ಸೇವೆಯಲ್ಲಿ ವ್ಯತ್ಯಯ

Mangaluru; ಪ್ರಯಾಣಿಕರ ಗಮನಕ್ಕೆ; ಹಲವು ರೈಲುಗಳ ಸೇವೆಯಲ್ಲಿ ವ್ಯತ್ಯಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

“ಕೃಷಿ ರಕ್ಷಣೆಗಾಗಿ ಆಯುಧ ಹಿಂಪಡೆಯಿರಿ’: ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌

“ಕೃಷಿ ರಕ್ಷಣೆಗಾಗಿ ಆಯುಧ ಹಿಂಪಡೆಯಿರಿ’: ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌

Dakshina Kannada ಚೆಕ್‌ಪೋಸ್ಟ್‌ ಕಾರ್ಯ ನಿರ್ವಹಣೆಗೆ ಡಿಸಿ ಸೂಚನೆ

Ullal ಲೈಂಗಿಕ ಕಿರುಕುಳ: ಪೋಕ್ಸೋ ಪ್ರಕರಣ; ಇಬ್ಬರು ವಶಕ್ಕೆ

Ullal ಲೈಂಗಿಕ ಕಿರುಕುಳ: ಪೋಕ್ಸೋ ಪ್ರಕರಣ; ಇಬ್ಬರು ವಶಕ್ಕೆ

Mangaluru; ಪ್ರಯಾಣಿಕರ ಗಮನಕ್ಕೆ; ಹಲವು ರೈಲುಗಳ ಸೇವೆಯಲ್ಲಿ ವ್ಯತ್ಯಯ

Mangaluru; ಪ್ರಯಾಣಿಕರ ಗಮನಕ್ಕೆ; ಹಲವು ರೈಲುಗಳ ಸೇವೆಯಲ್ಲಿ ವ್ಯತ್ಯಯ

MITE; ಎಐ ಜಗತ್ತಿನಲ್ಲಿ ಪ್ರತಿದಿನ ಕಲಿಯುವ ಅನಿವಾರ್ಯ: ಪ್ರೊ| ಬಿ. ರವಿ

MITE; ಎಐ ಜಗತ್ತಿನಲ್ಲಿ ಪ್ರತಿದಿನ ಕಲಿಯುವ ಅನಿವಾರ್ಯ: ಪ್ರೊ| ಬಿ. ರವಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Hebri ತೆಂಕೂಲ: ಆಲಮಡ್ಡಿ ಮೇಣ ಸಂಗ್ರಹಿಸುತ್ತಿದ್ದವರ ಸೆರೆ

Hebri ತೆಂಕೂಲ: ಆಲಮಡ್ಡಿ ಮೇಣ ಸಂಗ್ರಹಿಸುತ್ತಿದ್ದವರ ಸೆರೆ

Veerappa Moily ಯುಪಿಎ ಬರ ಪರಿಹಾರ ಬಾಕಿ ಇಟ್ಟಿರಲಿಲ್ಲ

Veerappa Moily ಯುಪಿಎ ಬರ ಪರಿಹಾರ ಬಾಕಿ ಇಟ್ಟಿರಲಿಲ್ಲ

anna 2

Hate speech: ಅಣ್ಣಾಮಲೈ ವಿಚಾರಣೆಗೆ ತಡೆ ವಿಸ್ತರಣೆ

“ಕೃಷಿ ರಕ್ಷಣೆಗಾಗಿ ಆಯುಧ ಹಿಂಪಡೆಯಿರಿ’: ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌

“ಕೃಷಿ ರಕ್ಷಣೆಗಾಗಿ ಆಯುಧ ಹಿಂಪಡೆಯಿರಿ’: ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌

UGC

UGC;ಉಪನ್ಯಾಸಕರ ಅರ್ಹತಾ ಪರೀಕ್ಷೆ ಜೂ.18ಕ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.