ವೀರಪ್ಪನ್ ಕಾರ್ಯಾಚರಣೆ ಕಥೆ ಹೇಳುವ ಶ್ರೀನಿವಾಸ್ ಜೀಪ್
Team Udayavani, May 7, 2022, 8:25 PM IST
ಚಾಮರಾಜನಗರ: ಡಿಸಿಎಫ್ ಪಿ. ಶ್ರೀನಿವಾಸ್ಚಾಮರಾಜನಗರದ ಜನತೆಗೆ ಚಿರಪರಿಚಿತ ಹೆಸರು.ನರಹಂತಕ ವೀರಪ್ಪನ್ನನ್ನು ವಶಕ್ಕೆ ಪಡೆದು ವಿಚಾರಣೆನಡೆಸಿದ ಏಕೈಕ ಅಧಿಕಾರಿ ಅವರು. ಮೊದಲಿಗೆಚಾಮರಾಜನಗರದಲ್ಲಿ ಉಪಅರಣ್ಯ ಸಂರಕ್ಷಣಾಧಿಕಾರಿ(ಡಿಸಿಎಫ್) ಆಗಿದ್ದ ಪಿ.ಶ್ರೀನಿವಾಸ್ ನಂತರ ವೀರಪ್ಪನ್ವಿರುದ್ಧದ (ಎಸ್ಟಿಎಫ್)ಕಾರ್ಯ ಪಡೆಯಲ್ಲಿ ಕರ್ತವ್ಯನಿರ್ವಹಿಸಿ, ಅದೇ ವೀರಪ್ಪನ್ನಿಂದ ಭೀಕರವಾಗಿ ಹತ್ಯೆಗೀಡಾದರು.
ಅವರು ಬಳಸಿದ್ದ ಜೀಪ್ಅನ್ನು ಜಿಲ್ಲೆಯ ಕೊಳ್ಳೇಗಾಲದಡಿಸಿಎಫ್ ಕಚೇರಿಯ ನೂತನ ಅತಿಥಿ ಗೃಹದ ಆವರಣದಲ್ಲಿ ನವೀಕರಿಸಿ ಸಂರಕ್ಷಿಸಲಾಗಿದ್ದು ಸಾರ್ವಜನಿಕರವೀಕ್ಷಣೆಗೆ ಇಡಲಾಗಿದೆ.ಕೊಳ್ಳೇಗಾಲದ ಉಪ ಅರಣ್ಯ ಸಂರಕ್ಷಣಾಧಿಕಾರಿಕಚೇರಿ ಆವರಣದಲ್ಲಿದ್ದ ಅರಣ್ಯ ಇಲಾಖೆ ಅತಿಥಿಗೃಹವನ್ನು ಇತ್ತೀಚೆಗೆ ನವೀಕರಿಸಿ ಉದ್ಘಾಟನೆ ಮಾಡ ಲಾಗಿದೆ. ಆ ಅತಿಥಿ ಗೃಹಕ್ಕೆ ಡಿಸಿಎಫ್ ದಿ.ಪಿ. ಶ್ರೀನಿವಾಸ್ಅವರ ಹೆಸರಿಡಲಾಗಿದೆ. ಅಲ್ಲಿ ಅವರ ಪುತ್ಥಳಿಯನ್ನೂನಿರ್ಮಿಸಲಾಗಿದೆ. ಇದನ್ನು ಪುಟ್ಟದೊಂದು ವಸ್ತುಸಂಗ್ರಹಾಲಯವಾಗಿಸುವ ಉದ್ದೇಶವನ್ನೂ ಹೊಂದಲಾಗಿದೆ. ಅದರ ಮೊದಲ ಹಂತವಾಗಿ ಶ್ರೀನಿವಾಸ್ಅವರು ಬಳಸುತ್ತಿದ್ದ ವಸ್ತುಗಳು, ಅವರ ವಿವಿಧಫೋಟೋಗಳನ್ನು ಪ್ರದರ್ಶಿಸಲಾಗಿದೆ. ಅಲ್ಲದೇ ಅವರಹೆಸರಿನಲ್ಲಿ ಗ್ರಂಥಾಲಯವನ್ನೂ ಸಹ ಸ್ಥಾಪಿಸಲಾಗಿದೆ.
ಶ್ರೀನಿವಾಸ್ ಬಳಸುತ್ತಿದ್ದ ಜೀಪಿನ ನವೀಕರಣ: ಈವಸ್ತುಗಳಲ್ಲಿ ನೋಡುಗರ ಗಮನ ಸೆಳೆಯುವುದು ಪಿ.ಶ್ರೀನಿವಾಸ್ ಅವರು ಬಳಸುತ್ತಿದ್ದ ಮಹೀಂದ್ರಾ ಜೀಪ್.ವೀರಪ್ಪನ್ ಸೆರೆ ಕಾರ್ಯಾಚರಣೆಯಲ್ಲಿದ್ದಾಗ ಪಿ.ಶ್ರೀನಿವಾಸ್ ಅವರು ಬಳಸುತ್ತಿದ್ದ ಕೆ.ಎ. 10 ಜಿ 1ಸಂಖ್ಯೆಯ ಜೀಪು ಕೆಟ್ಟು ಹಾಳಾಗಿತ್ತು. ಆ ಜೀಪು ಮಲೆಮಹದೇಶ್ವರ ಬೆಟ್ಟದ ಆಚೆ ಇರುವ ಪಾಲಾರ್ ವಲಯಅರಣ್ಯಾಧಿಕಾರಿ ಕಚೇರಿಯ ಆವರಣದಲ್ಲಿದ್ದುಜೀರ್ಣಾವಸ್ಥೆ ತಲುಪಿತ್ತು.ಇದನ್ನು ಅರಣ್ಯ ಇಲಾಖೆ ಅಧಿಕಾರಿಗಳು 1.10 ಲಕ್ಷರೂ. ವೆಚ್ಚದಲ್ಲಿ ದುರಸ್ತಿ ಮಾಡಿಸಿ, ನವೀಕರಿಸಿದ್ದಾರೆ. ಈನವೀಕೃತ ಜೀಪನ್ನು ಅತಿಥಿ ಗೃಹದ ಆವರಣದಲ್ಲಿಇಡಲಾಗಿದ್ದು, ನೋಡು ಗರ ಗಮನ ಸೆಳೆಯುತ್ತಿದೆ.ಉಪಯೋಗಕ್ಕೆ ಬಾರ ದಂತಿದ್ದ ಜೀಪನ್ನು ಸಂಪೂರ್ಣದುರಸ್ತಿಪಡಿಸ ಲಾಗಿದ್ದು, ಚಾಲನಾ ಸ್ಥಿತಿಗೆ ತರಲಾಗಿದೆ.ನೋಡಲು ಹೊಚ್ಚ ಹೊಸದಾಗಿ ಕಾಣುತ್ತಿದೆ.
ಅತಿಥಿ ಗೃಹದ ಆವರಣದಲ್ಲಿ ಆಧುನಿಕ ಮಾದರಿಯಲ್ಲಿ ಶೆಡ್ ನಿರ್ಮಿಸಲಾಗಿದ್ದು, ಅದರಲ್ಲಿ ಜೀಪ್ನಿಲ್ಲಿಸಲಾಗಿದೆ. ಅದರ ಮುಂದಿನ ಫಲಕದಲ್ಲಿ ಈಜೀಪಿನ ವಿವರ ಹಾಕಲಾಗಿದೆ. ಸಾರ್ವಜನಿಕರು ಈಜೀಪನ್ನು ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ.
ಕೆ.ಎಸ್.ಬನಶಂಕರ ಆರಾಧ್ಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Road Mishap; ಬೈಕ್-ಪಿಕ್ ಅಪ್ ಢಿಕ್ಕಿ; ಬೈಕ್ ಸವಾರ ಸ್ಥಳದಲ್ಲೇ ಸಾವು
Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ
Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು
MUST WATCH
ಹೊಸ ಸೇರ್ಪಡೆ
Shivamogga; ಮಾಜಿ ಸಿಎಂಗಳ ಕುಟುಂಬ ಕಾಳಗಕ್ಕೆ ಈಶ್ವರಪ್ಪ ರಂಗು!
ಇವರ ಬದುಕಿನ ಬಂಡಿಗೆ ಆತ್ಮವಿಶ್ವಾಸ-ಛಲವೇ ಚಕ್ರಗಳು! ಇರುವುದೊಂದೇ ಕಾಲು, ಇರುವುದೊಂದೇ ಬದುಕು
ವರದಿ, ವೀಡಿಯೋ ಪ್ರಕಟಿಸದಂತೆ ನಿರ್ಬಂಧಕಾಜ್ಞೆ ತಂದ ಈಶ್ವರಪ್ಪ ಪುತ್ರ
Daily Horoscope: ಉದ್ಯೋಗದಲ್ಲಿ ಜವಾಬ್ದಾರಿಗಳ ಸಮರ್ಥ ನಿರ್ವಹಣೆ
Missing Case ಉಪ್ಪಿನಂಗಡಿ: ತಾಯಿ-ಮಗು ನಾಪತ್ತೆ; ಪ್ರಕರಣ ದಾಖಲು