ಕ್ರಿಯಾಶೀಲ ರಂಗಭೂಮಿಯಿಂದ ಸಶಕ್ತ ಸಮಾಜ ನಿರ್ಮಾಣ

ಮಕ್ಕಳ ರಂಗಭೂಮಿಯನ್ನೂ ಒಳಗೊಂಡು ರಂಗ ಕ್ಷೇತ್ರದಲ್ಲಿ ಗಣನೀಯ ಪ್ರಗತಿ ಸಾಧಿಸಿದೆ

Team Udayavani, May 18, 2022, 6:28 PM IST

ಕ್ರಿಯಾಶೀಲ ರಂಗಭೂಮಿಯಿಂದ ಸಶಕ್ತ ಸಮಾಜ ನಿರ್ಮಾಣ

ಹಾನಗಲ್ಲ: ಮಕ್ಕಳ ರಂಗಭೂಮಿ ಕ್ರಿಯಾಶೀಲವಾದರೆ ಶಾಲಾ ಶಿಕ್ಷಣದ ಜೊತೆಗೆ ಸಾಂಸ್ಕೃತಿಕ ಶಿಕ್ಷಣವೂ ಲಭಿಸಿ ಸಶಕ್ತ ಸಾಮಾಜಿಕ ಪರಿಸರ ನಿರ್ಮಾಣ ಸಾಧ್ಯ ಎಂದು ಪುರಸಭೆ ಅಧ್ಯಕ್ಷ ನಾಗಪ್ಪ ಸವದತ್ತಿ ಹೇಳಿದರು.

ಶ್ರೀ ಕುಮಾರೇಶ್ವರ ಬಯಲು ರಂಗಮಂದಿರಲ್ಲಿ ರಂಗಸಂಗಮ ಕಲಾ ಸಂಘ ಆಯೋಜಿಸಿದ್ದ ಕಾಮನಬಿಲ್ಲು ಮಕ್ಕಳ ರಂಗ ತರಬೇತಿ ಸಮಾರೋಪ ಹಾಗೂ ಶಿಬಿರಾರ್ಥಿಗಳಿಂದ ಪಂಜರ ಶಾಲೆ ನಾಟಕ ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಆಧುನಿಕ ತಂತ್ರಜ್ಞಾನದ ಸದುಪಯೋಗಕ್ಕೆ ಲಕ್ಷ್ಯ ವಹಿಸಬೇಕು. ಮಕ್ಕಳ ಕೈಗೆ ಮೊಬೈಲ್‌ ನೀಡುತ್ತಿರುವುದೇ ಬಹುತೇಕ ಮಕ್ಕಳನ್ನು ಒಳ್ಳೆಯ ಶಿಕ್ಷಣದಿಂದ ದೂರ ಮಾಡುತ್ತಿದೆ. ಸಾಂಸ್ಕೃತಿಕ ವಾತಾವರಣಕ್ಕಾಗಿ ರಂಗಭೂಮಿ ಸೇರಿದಂತೆ ಸಾಂಸ್ಕೃತಿಕ ಪರಿಸರ ಒದಗಿಸುವುದು ಈಗಿನ ಅಗತ್ಯ ಎಂದರು.

ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಪ್ರೊ| ಮಾರುತಿ ಶಿಡ್ಲಾಪುರ ಮಾತನಾಡಿ, ಹಾನಗಲ್ಲ ತಾಲೂಕಿನ ಶೇಷಗಿರಿ ಈಗ ರಾಜ್ಯದಲ್ಲಿಯೇ ರಂಗ ಸಂಭ್ರಮದ ಕ್ರಿಯಾಶೀಲ ಕೇಂದ್ರವಾಗಿ ಮಕ್ಕಳ ರಂಗಭೂಮಿಯನ್ನೂ ಒಳಗೊಂಡು ರಂಗ ಕ್ಷೇತ್ರದಲ್ಲಿ ಗಣನೀಯ ಪ್ರಗತಿ ಸಾಧಿಸಿದೆ. ದಿ| ಸಿ.ಎಂ. ಉದಾಸಿ ಅವರ ದೂರದೃಷ್ಟಿಯ ಶ್ರೀ ಕುಮಾರೇಶ್ವರ ಬಯಲು ರಂಗಮಂದಿರದಲ್ಲಿ ವರ್ಷವಿಡೀ ರಂಗ ಪ್ರದರ್ಶನಗಳು ನಡೆಯಲು ಸಂಘಟಿತವಾಗಿ ರಂಗಪ್ರಿಯರು ಕೆಲಸ ಮಾಡಬೇಕೆಂದು ಹೇಳಿದರು.

ಮಾಜಿ ಶಾಸಕ ಶಿವರಾಜ ಸಜ್ಜನರ, ರಾಜಶೇಖರಗೌಡ್ರು ಕಟ್ಟೇಗೌಡ್ರ, ಸಾಹಿತಿ ಶಿವಾನಂದ ಕ್ಯಾಲಕೊಂಡ, ನಿರಂಜನ ಗುಡಿ, ಸಿಪಿಐ ಶಿವಶಂಕರ ಗಣಾಚಾರಿ, ತಾಲೂಕು ವೈದ್ಯಾಧಿಕಾರಿ ಡಾ| ಕೆ.ಲಿಂಗರಾಜ, ವೈದ್ಯಾಧಿಕಾರಿ ಡಾ| ಉಮಾದೇವಿ ಹಿರೇಮಠ, ಗಂಗಾಧರ ಚಿಕ್ಕಣ್ಣನವರ, ಉಮೇಶ ಮಾಳಗಿ, ಉದ್ಯಮಿ ಇಷ್ಟಲಿಂಗ ಸಾಲವಟಗಿ, ಕಲಾವಿದರಾದ ಸಿದ್ದಪ್ಪ ರೊಟ್ಟಿ, ದೇವಿಪ್ರಸಾದ, ರಾಮಕೃಷ್ಣ , ಮುಖ್ಯೋಪಾಧ್ಯಾಯ ಎಸ್‌.ಎ. ಮುಲ್ಲಾ, ಕರಬಸಪ್ಪ ಗೊಂದಿ, ಸಂಗೀತ ಕಲಾವಿದ ಜಗದೀಶ ಮಡಿವಾಳರ ಅತಿಥಿಗಳಾಗಿ ಭಾಗವಹಿಸಿದ್ದರು.

ರವಿಂದ್ರನಾಥ ಟ್ಯಾಗೋರ್‌ ಅವರ ಕಥೆ ಆಧರಿಸಿದ ಬಿ.ವಿ.ಕಾರಂತ ಅವರ ಪಂಜರಶಾಲೆ ನಾಟಕವು ಜಗದೀಶ ಕಟ್ಟಿಮನಿ ನಿರ್ದೇಶನ, ಹರೀಶ ಗುರಪ್ಪನವರ ಬೆಳಕಿನ ನಿರ್ವಹಣೆ, ಜಗದೀಶ ಮಡಿವಾಳರ ತಂಡದ ಸಂಗೀತ ಸಂಯೋಜನೆ, ಬಸವರಾಜ ವಾಲ್ಮೀಕಿ, ಜ್ಞಾನೇಶ ಕಲಾಲ, ಹರ್ಷ, ಕಾರ್ತಿಕ ಆವರ ನಿರ್ವಹಣೆಯಲ್ಲಿ ಪ್ರದರ್ಶನಗೊಂಡಿತು.

ಬದುಕೇ ಒಂದು ನಾಟಕ. ನಾಟಕಗಳಲ್ಲೂ ಕೂಡ ಬದುಕನ್ನೇ ಬಿಂಬಿಸಲಾಗುತ್ತದೆ. ಇಂದು ಸಾಂಸ್ಕೃತಿಕ ಪರಿಸರ ಹಾಳಾಗುತ್ತಿದೆ ಎಂದು ಕೊರಗುವ ಬದಲು ರಂಗಭೂಮಿ ಹಾಗೂ ಸಾಹಿತ್ಯ ಸಾಂಸ್ಕೃತಿಕ ಚಟುವಟಿಕೆಗಳಿಗೆ ಪ್ರೋತ್ಸಾಹಿಸುವ ಅಗತ್ಯವಿದೆ. ಮಕ್ಕಳಿಗೆ ಕಲಿಯುವಿಕೆ ಸಹಜವಾಗಿರುತ್ತದೆ.ಅವರಲ್ಲಿ ರಂಗ ಪ್ರೀತಿ ಬೆಳೆಸಬೇಕು. ನಾಟಕ ಕಲೆಗಳ ರಾಜ. ಇದೇ ನಿಜವಾದ ಬದುಕಿನ ಶಿಕ್ಷಣ.
ದೀಪಾ ಗೋನಾಳ, ಸಾಹಿತಿ

ಟಾಪ್ ನ್ಯೂಸ್

yogi-2

Congress ಪಕ್ಷದಲ್ಲಿ ಔರಂಗಜೇಬನ ಆತ್ಮ ಸೇರಿಕೊಂಡಿದೆ: ಸಿಎಂ ಯೋಗಿ ವಾಗ್ದಾಳಿ

1-qewwqeqqw

RSS ಕೂಡ ನಕಲಿ ಎಂದು ನಾಳೆ ಮೋದಿ ಹೇಳಬಹುದು : ಉದ್ಧವ್ ಠಾಕ್ರೆ ಕಿಡಿ

Gangavathi ಸಾಣಾಪೂರ ಕೆರೆಯಲ್ಲಿ ಮುಳುಗಿ ಯುವಕ ಮೃತ್ಯು

Gangavathi ಸಾಣಾಪೂರ ಕೆರೆಯಲ್ಲಿ ಮುಳುಗಿ ಯುವಕ ಮೃತ್ಯು

drowned

Vedganga ನದಿಯಲ್ಲಿ ಮುಳುಗಿ ನಾಲ್ವರು ಮೃತ್ಯು:ಇಬ್ಬರು ಬೆಳಗಾವಿಯವರು

Priyanka Gandhi

Election; ಪ್ರಧಾನಿ ಮೋದಿ ಯಾಕೆ ಮಂಗಳಸೂತ್ರ,ಧರ್ಮದ ಮೇಲೆ ಮತ ಕೇಳುತ್ತಾರೆ: ಪ್ರಿಯಾಂಕಾ ಗಾಂಧಿ

raghu bhat

Congress ಗಾಡ್ ಫಾದರ್ ಸಂಸ್ಕೃತಿ ಬಿಜೆಪಿಗೆ ಬಂದಿದೆ: ರಘುಪತಿ ಭಟ್

1-asasa

Cat ರಕ್ಷಣೆಗೆ ಭಾರೀ ಕಾರ್ಯಾಚರಣೆ ; ಕೊನೆಗೆ ಆಗಿದ್ದೆ ಬೇರೆ!: ವೈರಲ್ ವಿಡಿಯೋ ನೋಡಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lokayukta

Haveri; ಇಸ್ಪೀಟ್ ಆಟಕ್ಕೆ ಲಂಚ:ಪಿಎಸ್ಐ, ಕಾನ್ ಸ್ಟೆಬಲ್ ಲೋಕಾಯುಕ್ತ ಬಲೆಗೆ

ಶಿಕ್ಷಕ ವೃತ್ತಿ ಅತ್ಯಂತ ಪವಿತ್ರ: ಚಕ್ರವರ್ತಿ ಸ್ವಾಮೀಜಿ

ಶಿಕ್ಷಕ ವೃತ್ತಿ ಅತ್ಯಂತ ಪವಿತ್ರ: ಚಕ್ರವರ್ತಿ ಸ್ವಾಮೀಜಿ

ಅಬ್ಬಾ…ತರಕಾರಿ ಬಲು ದುಬಾರಿ..! ಗ್ರಾಹಕರ ಜೇಬಿಗೆ ಕತ್ತರಿ

ಅಬ್ಬಾ…ತರಕಾರಿ ಬಲು ದುಬಾರಿ..! ಗ್ರಾಹಕರ ಜೇಬಿಗೆ ಕತ್ತರಿ

ಬ್ಯಾಡಗಿ- ಮದುವೆ ಮೂಲ ಅರ್ಥ ಕಳೆದುಕೊಳ್ತಿದೆ: ಸ್ವಾಮೀಜಿ

ಬ್ಯಾಡಗಿ- ಮದುವೆ ಮೂಲ ಅರ್ಥ ಕಳೆದುಕೊಳ್ತಿದೆ: ಸ್ವಾಮೀಜಿ

LS Polls: ಮನೆ ಯಜಮಾನನ್ನು ಕಳೆದುಕೊಂಡ ದುಖ:ದ ನಡುವೆ ಮತ ಚಲಾಯಿಸಿದ ಕುಟುಂಬ ಸದಸ್ಯರು

LS Polls: ಮನೆ ಯಜಮಾನನ್ನು ಕಳೆದುಕೊಂಡ ದುಃಖದ ನಡುವೆ ನಡುವೆ ಮತ ಚಲಾಯಿಸಿದ ಕುಟುಂಬ ಸದಸ್ಯರು

MUST WATCH

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

ಹೊಸ ಸೇರ್ಪಡೆ

yogi-2

Congress ಪಕ್ಷದಲ್ಲಿ ಔರಂಗಜೇಬನ ಆತ್ಮ ಸೇರಿಕೊಂಡಿದೆ: ಸಿಎಂ ಯೋಗಿ ವಾಗ್ದಾಳಿ

1-qewwqeqqw

RSS ಕೂಡ ನಕಲಿ ಎಂದು ನಾಳೆ ಮೋದಿ ಹೇಳಬಹುದು : ಉದ್ಧವ್ ಠಾಕ್ರೆ ಕಿಡಿ

Gangavathi ಸಾಣಾಪೂರ ಕೆರೆಯಲ್ಲಿ ಮುಳುಗಿ ಯುವಕ ಮೃತ್ಯು

Gangavathi ಸಾಣಾಪೂರ ಕೆರೆಯಲ್ಲಿ ಮುಳುಗಿ ಯುವಕ ಮೃತ್ಯು

1-wqewqewe

Ramanagara; ಅಪ್ರಾಪ್ತ ಮಕ್ಕಳ ಮೈಯನ್ನು ಕಾದ ಕಬ್ಬಿಣದಿಂದ ಸುಟ್ಟ ಮದ್ಯವ್ಯಸನಿ ತಂದೆ

drowned

Vedganga ನದಿಯಲ್ಲಿ ಮುಳುಗಿ ನಾಲ್ವರು ಮೃತ್ಯು:ಇಬ್ಬರು ಬೆಳಗಾವಿಯವರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.