ರಾಜ್ಯಗಳೂ ವ್ಯಾಟ್‌ ಇಳಿಕೆ ಮಾಡಿ ನಿರಾಳತೆ ನೀಡಲಿ


Team Udayavani, May 23, 2022, 6:15 AM IST

ರಾಜ್ಯಗಳೂ ವ್ಯಾಟ್‌ ಇಳಿಕೆ ಮಾಡಿ ನಿರಾಳತೆ ನೀಡಲಿ

ಏರುತ್ತಿರುವ ಹಣದುಬ್ಬರವನ್ನು ನಿಯಂತ್ರಣ ಮಾಡಿ ಜನಸಾಮಾನ್ಯರಿಗೆ ನಿರಾಳತೆ ನೀಡಬೇಕು ಎಂಬ ಉದ್ದೇಶದಿಂದ ಕೇಂದ್ರ ಸರಕಾರ ಶನಿವಾರ, ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲಿನ ಅಬಕಾರಿ ಸುಂಕ ಇಳಿಕೆ ಮಾಡಿರುವುದು ಉತ್ತಮ ಬೆಳವಣಿಗೆ. ತೈಲೋತ್ಪನ್ನ ವಸ್ತುಗಳ ಜತೆಗೆ ದೇಶದ ಆರ್ಥಿಕತೆ ಸಮ್ಮಿಳನಗೊಂಡಿರುವುದರಿಂದಲೇ ಈ ವಸ್ತುಗಳ ಬೆಲೆ ಏರಿದ ತತ್‌ಕ್ಷಣ ಜನಸಾಮಾನ್ಯರ ಮೇಲೆ ನಾನಾ ರೀತಿಯಲ್ಲಿ ಅಡ್ಡಪರಿಣಾಮಗಳು ಶುರುವಾಗುತ್ತವೆ. ಅಂದರೆ ಸಾರಿಗೆಯಿಂದ ಹಿಡಿದು, ಮನೆಗೆ ಬರುವ ದಿನಸಿ ವಸ್ತುಗಳ ಬೆಲೆಯೂ ಗಗನಮುಖೀಯಾಗುವ ಆತಂಕ ಈ ತೈಲ ಬೆಲೆ ಹೆಚ್ಚಳದ ಹಿಂದಿದೆ. ಹೀಗಾಗಿಯೇ ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆಏರುಮುಖಿಯಾದೊಡನೆ ಶ್ರೀಸಾಮಾನ್ಯ ಆತಂಕಕ್ಕೆ ಬೀಳುತ್ತಾನೆ. ಆತನ ಕಿಸೆಯಿಂದಲೂ ಹೆಚ್ಚಿನ ಹಣ ವೆಚ್ಚವಾಗುತ್ತದೆ.

ಇದಷ್ಟೇ ಅಲ್ಲ, ಅತ್ತ ರಷ್ಯಾ ಮತ್ತು ಉಕ್ರೇನ್‌ ನಡುವಿನ ಸಮರವೂ ಜಾಗತಿಕ ಅರ್ಥವ್ಯವಸ್ಥೆಯನ್ನು ಹಾಳು ಮಾಡಿದೆ. ವಿಚಿತ್ರವೆಂದರೆ, ಉಭಯ ದೇಶಗಳ ನಡುವಿನ ಸಮರದಿಂದಾಗಿ ಕಪ್ಪು ಸಮುದ್ರದ ಸರಕು ಸಾಗಣೆ ಮಾರ್ಗವೇ ಮುಚ್ಚಿದ್ದು, ಜಾಗತಿಕ ಪೂರೈಕೆ

ಸರಪಳಿಯೂ ಕಡಿತಗೊಂಡಿದೆ. ಹೀಗಾಗಿಯೇ ಅಗತ್ಯ ವಸ್ತುಗಳ ಬೆಲೆಯೂ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಲೇ ಇದೆ.

ಹಣದುಬ್ಬರ ನಿಯಂತ್ರಣದ ಕಾರಣದಿಂದಾಗಿ ಈ ಮಾಸಾಂತ್ಯದ ಆರಂಭದಲ್ಲಿ ಆರ್‌ಬಿಐ ರೆಪೋ ಬೆಲೆ ಏರಿಕೆ ಮಾಡಿತ್ತು. ಈ ಮೂಲಕ ಜನರ ಖರೀದಿ ಸಾಮರ್ಥ್ಯವನ್ನು ಕೊಂಚ ಇಳಿಸುವ ಪ್ರಯತ್ನ ಮಾಡಿತ್ತು. ಅಂದರೆ ರೆಪೋ ಬೆಲೆ ಏರಿದ ಕೂಡಲೇ ಬ್ಯಾಂಕ್‌ಗಳು ಸಾಲದ ಮೇಲಿನ ಬಡ್ಡಿ ಏರಿಸುತ್ತವೆ. ಹಾಗೆಯೇ ಠೇವಣಿ ಬಡ್ಡಿ ಬೆಲೆವೂ ಹೆಚ್ಚುವುದರಿಂದ ಜನ ಉಳಿತಾಯದತ್ತ ಹೆಚ್ಚು ಗಮನಕೊಡುತ್ತಾರೆ ಎಂಬ ಆಶಯ ಇಲ್ಲಿದೆ. ಇನ್ನು ಹಣದುಬ್ಬರವನ್ನು ಮತ್ತಷ್ಟು ಇಳಿಕೆ ಮಾಡುವ ಸಂಬಂಧ ಕೇಂದ್ರ ಸರಕಾರ, 2ನೇ ಶಮನಕಾರಿ ಮಾರ್ಗವನ್ನು ಹಿಡಿದಿದೆ. ಅದೆಂದರೆ ತೈಲೋತ್ಪನ್ನಗಳ ಬೆಲೆ ಇಳಿಕೆ ಮಾಡುವುದು. ಶನಿವಾರ ಸಂಜೆ ಪ್ರತೀ ಲೀ. ಪೆಟ್ರೋಲ್‌ ಮೇಲೆ 9.50 ರೂ. ಮತ್ತು ಡೀಸೆಲ್‌ ಮೇಲೆ 7 ರೂ. ಇಳಿಕೆ ಮಾಡಲಾಗಿದೆ. ಜತೆಗೆ ರೈತರಿಗೆ ನೀಡಲಾಗುವ ರಸಗೊಬ್ಬರದ ಮೇಲಿನ ಸಬ್ಸಿಡಿ ಅನುದಾನ ದುಪ್ಪಟ್ಟು ಏರಿಕೆ, ಕಬ್ಬಿಣ, ಉಕ್ಕು, ಪ್ಲಾಸ್ಟಿಕ್‌ ಮೇಲಿನ ಕಸ್ಟಮ್‌ ಸುಂಕವನ್ನು ಇಳಿಸಿದೆ. ಇವೆಲ್ಲವೂ ಒಂದಕ್ಕೊಂದು ಸಂಬಂಧ ಹೊಂದಿರುವುದರಿಂದ ಹಣದುಬ್ಬರ ಪ್ರಮಾಣ ಇಳಿಕೆಯಾಗಬಹುದು ಎಂದೇ ನಿರೀಕ್ಷಿಸಲಾಗಿದೆ.

ಈಗ ಕೇಂದ್ರ ಸರಕಾರವೇನೋ ತನ್ನ ಕೈಲಾದ ಪ್ರಯತ್ನ ಮಾಡಿದೆ. ಇದರ ಜತೆಗೆ ರಾಜ್ಯಗಳೂ ತಮ್ಮ ಪಾಲಿನ ವ್ಯಾಟ್‌ ಇಳಿಕೆ ಮಾಡುವತ್ತ ಗಮನ ಹರಿಸಬೇಕು. ಈಗಾಗಲೇ ಕೇರಳ, ರಾಜಸ್ಥಾನ, ಒಡಿಶಾ,

ಮಹಾರಾಷ್ಟ್ರ ರಾಜ್ಯಗಳು ಒಂದಷ್ಟು ವ್ಯಾಟ್‌ ಇಳಿಕೆ ಮಾಡಿವೆ. ಇದರಲ್ಲಿ ಕೆಲವು ರಾಜ್ಯಗಳು ನವೆಂಬರ್‌ನಲ್ಲಿ ಅಬಕಾರಿ ಸುಂಕ ಇಳಿಸಿದಾಗ ತೈಲ ಬೆಲೆ ಕಡಿತ ಮಾಡಿರಲಿಲ್ಲ. ಈಗ ಈ ರಾಜ್ಯಗಳೇ ಎಚ್ಚೆತ್ತುಕೊಂಡು

ಮೊದಲಿಗೆ ಕಡಿತ ಮಾಡಿವೆ. ಹಾಗೆಯೇ ಇವೆಲ್ಲವೂ ಬಿಜೆಪಿಯೇತರ ಸರ್ಕಾರವಿರುವ ರಾಜ್ಯಗಳು.

ಹಾಗೆಯೇ, ಕರ್ನಾಟಕವೂ ಸೇರಿದಂತೆ ಬಿಜೆಪಿ ಆಡಳಿತವಿರುವ ರಾಜ್ಯಗಳೂ ಈಗ ವ್ಯಾಟ್‌ ಕಡಿತ ಮಾಡಬೇಕು. ತೈಲ ಬೆಲೆ ಇಳಿಕೆ

ಯಾದರೆ, ಇತರೆ ಅಗತ್ಯ ವಸ್ತುಗಳ ಬೆಲೆ ಇಳಿಕೆಯಾಗುವ ಸಾಧ್ಯತೆಯೂ ಹೆಚ್ಚು. ಹೀಗಾಗಿ ಈ ಕಡೆ ರಾಜ್ಯ ಸರಕಾರ ಗಮನ ನೀಡಬೇಕು.

ಟಾಪ್ ನ್ಯೂಸ್

Puttur: ಮನೆಯಿಂದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವು

Puttur: ಮನೆಯಿಂದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವು

Subramanya: ಕಸ ವಿಲೇವಾರಿ ವಾಹನ ಚರಂಡಿಗೆ

Subramanya: ಕಸ ವಿಲೇವಾರಿ ವಾಹನ ಚರಂಡಿಗೆ

Hebri ತೆಂಕೂಲ: ಆಲಮಡ್ಡಿ ಮೇಣ ಸಂಗ್ರಹಿಸುತ್ತಿದ್ದವರ ಸೆರೆ

Hebri ತೆಂಕೂಲ: ಆಲಮಡ್ಡಿ ಮೇಣ ಸಂಗ್ರಹಿಸುತ್ತಿದ್ದವರ ಸೆರೆ

Veerappa Moily ಯುಪಿಎ ಬರ ಪರಿಹಾರ ಬಾಕಿ ಇಟ್ಟಿರಲಿಲ್ಲ

Veerappa Moily ಯುಪಿಎ ಬರ ಪರಿಹಾರ ಬಾಕಿ ಇಟ್ಟಿರಲಿಲ್ಲ

Dakshina Kannada ಚೆಕ್‌ಪೋಸ್ಟ್‌ ಕಾರ್ಯ ನಿರ್ವಹಣೆಗೆ ಡಿಸಿ ಸೂಚನೆ

Modi (2)

PM Modi ಸ್ಪರ್ಧೆಗೆ ನಿರ್ಬಂಧ: ದಿಲ್ಲಿ ಹೈಕೋರ್ಟ್‌ ನಕಾರ

Ullal ಲೈಂಗಿಕ ಕಿರುಕುಳ: ಪೋಕ್ಸೋ ಪ್ರಕರಣ; ಇಬ್ಬರು ವಶಕ್ಕೆ

Ullal ಲೈಂಗಿಕ ಕಿರುಕುಳ: ಪೋಕ್ಸೋ ಪ್ರಕರಣ; ಇಬ್ಬರು ವಶಕ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-eweweqwe

Voting:ಹಿರಿಯ ನಾಗರಿಕರೇ ಮಾದರಿ

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಸುದೀರ್ಘ‌ ಕಾಲ ನೀತಿಸಂಹಿತೆ: ಸೂಕ್ತ ಪರಾಮರ್ಶೆ ಅಗತ್ಯ

Editorial: ಸುದೀರ್ಘ‌ ಕಾಲ ನೀತಿಸಂಹಿತೆ: ಸೂಕ್ತ ಪರಾಮರ್ಶೆ ಅಗತ್ಯ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Puttur: ಮನೆಯಿಂದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವು

Puttur: ಮನೆಯಿಂದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವು

Subramanya: ಕಸ ವಿಲೇವಾರಿ ವಾಹನ ಚರಂಡಿಗೆ

Subramanya: ಕಸ ವಿಲೇವಾರಿ ವಾಹನ ಚರಂಡಿಗೆ

Hebri ತೆಂಕೂಲ: ಆಲಮಡ್ಡಿ ಮೇಣ ಸಂಗ್ರಹಿಸುತ್ತಿದ್ದವರ ಸೆರೆ

Hebri ತೆಂಕೂಲ: ಆಲಮಡ್ಡಿ ಮೇಣ ಸಂಗ್ರಹಿಸುತ್ತಿದ್ದವರ ಸೆರೆ

Veerappa Moily ಯುಪಿಎ ಬರ ಪರಿಹಾರ ಬಾಕಿ ಇಟ್ಟಿರಲಿಲ್ಲ

Veerappa Moily ಯುಪಿಎ ಬರ ಪರಿಹಾರ ಬಾಕಿ ಇಟ್ಟಿರಲಿಲ್ಲ

anna 2

Hate speech: ಅಣ್ಣಾಮಲೈ ವಿಚಾರಣೆಗೆ ತಡೆ ವಿಸ್ತರಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.