ಬಂಟ್ವಾಳ : ನೀರೆತ್ತಲು ಹೋಗಿದ್ದ ನವ ವಿವಾಹಿತೆ ಬಾವಿಗೆ ಬಿದ್ದು ಸಾವು
Team Udayavani, May 30, 2022, 1:11 AM IST
ಬಂಟ್ವಾಳ : ತೆರೆದ ಬಾವಿಯಿಂದ ನೀರೆತ್ತಲು ಹೋಗಿದ್ದ ನವ ವಿವಾಹಿತೆ ಆಕಸ್ಮಿಕವಾಗಿ ನೀರಿಗೆ ಬಿದ್ದು ಮೃತಪಟ್ಟ ಘಟನೆ ರವಿವಾರ ಕಲ್ಲಡ್ಕದ ಕೆ.ಸಿ.ರೋಡು ಬಳಿ ಸಂಭವಿಸಿದೆ.
ಕೆ.ಸಿ. ರೋಡು ನಿವಾಸಿ, ಇಬ್ರಾಹಿಂ ತೌಸೀರ್ ಅವರ ಪತ್ನಿ ಮುನೀಝಾ(20) ಮೃತರು. ಮೂಲತಃ ಬಿ.ಸಿ.ರೋಡಿನ ತಲಪಾಡಿ ನಿವಾಸಿ, ಫರಂಗಿಪೇಟೆ ಸಮೀಪದ ಅಮ್ಮೆಮ್ಮಾರ್ನಲ್ಲಿ ವಾಸವಿದ್ದ ಮುಹಮ್ಮದ್ ಅವರ ಪುತ್ರಿಯಾಗಿರುವ ಮುನೀಝಾ ಅವರನ್ನು ಎರಡು ತಿಂಗಳ ಹಿಂದೆಯಷ್ಟೇ ಇಬ್ರಾಹಿಂ ತೌಸೀರ್ಗೆ ವಿವಾಹ ಮಾಡಿಕೊಡಲಾಗಿತ್ತು.
ಮುನೀಝಾ ರವಿವಾರ ಬೆಳಗ್ಗೆ ಮನೆಗೆ ನೀರು ತರುವುದಕ್ಕಾಗಿ ಹೋದಾಗ ಆಕಸ್ಮಿಕವಾಗಿ ಕಾಲು ಜಾರಿ ನೀರಿಗೆ ಬಿದ್ದು ಮೃತಪಟ್ಟಿದ್ದಾರೆ. ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.