ಪಿಎಫ್ಐ ಕೂಡ ಆರ್ಎಸ್ಎಸ್ನಂತೆ : ಬಿಹಾರ ಆರ್ ಜೆಡಿ ಮುಖ್ಯಸ್ಥನ ವಿರುದ್ಧ ಆಕ್ರೋಶ
Team Udayavani, Jul 24, 2022, 1:44 PM IST
ಪಾಟ್ನಾ : ಪಿಎಫ್ಐ ಸಂಘಟನೆಯು ಕೂಡ ಆರ್ಎಸ್ಎಸ್ನಂತೆ, ಅವರೂ ತಮ್ಮ ಸಮುದಾಯಕ್ಕೆ ಸೇವೆ ಸಲ್ಲಿಸಲು ಬಯಸುತ್ತಾರೆ ಆದರೆ ನೀವು ಅವರನ್ನು ದೇಶವಿರೋಧಿಗಳು ಎಂದು ಏಕೆ ಕರೆಯುತ್ತೀರಿ ಎಂದು ಬಿಹಾರ ರಾಷ್ಟ್ರೀಯ ಜನತಾ ದಳದ ಮುಖ್ಯಸ್ಥ ಜಗದಾನಂದ್ ಸಿಂಗ್ ಹೇಳಿಕೆ ನೀಡಿದ್ದು, ಸಂಘ ಪರಿವಾರದ ಆಕ್ರೋಶಕ್ಕೆ ಗುರಿಯಾಗಿದೆ.
ಪಾಟ್ನಾದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಸಂವಾದದ ಸಂದರ್ಭದಲ್ಲಿ, ಅಪಾಯಕಾರಿ ವ್ಯಕ್ತಿಗಳನ್ನು ಪಾಕಿಸ್ತಾನಿ ಏಜೆಂಟ್ಗಳೆಂದು ಭದ್ರತಾ ಪಡೆಗಳು ಬಂಧಿಸಿದಾಗ, ಅವರೆಲ್ಲರೂ ಆರ್ಎಸ್ಎಸ್ & ಹಿಂದೂ ಗಳು ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘದೊಂದಿಗೆ ಸಂಬಂಧ ಹೊಂದಿದ್ದಾರೆ ಎಂದು ಆರೋಪಿಸಿದ್ದಾರೆ.
ಕಳೆದ ವಾರ ಫುಲ್ವಾರಿ ಷರೀಫ್ ಶಂಕಿತ ಭಯೋತ್ಪಾದನಾ ಘಟಕವನ್ನು ಭೇದಿಸುವುದಕ್ಕೆ ಸಂಬಂಧಿಸಿದ ಪ್ರಶ್ನೆಗಳಿಗೆ ಪ್ರತಿಕ್ರಿಯೆಯಾಗಿ ಈ ಹೇಳಿಕೆಗಳನ್ನು ನೀಡಿದ್ದಾರೆ.
ಜಗದಾನಂದ ಸಿಂಗ್ ಅವರು ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ವಿರುದ್ಧವೂ ಕಿಡಿ ಕಾರಿ, ಅವರಿಗೆ ಇನ್ನು ಮುಂದೆ ರಾಜಕೀಯ ಶಕ್ತಿ ಇಲ್ಲ. ಅವರು ಲಾಲು ಪ್ರಸಾದ್ ಅವರ ಸಹಾಯವನ್ನು ತೆಗೆದುಕೊಳ್ಳುತ್ತಾರೆ ಮತ್ತು ಕೆಲವೊಮ್ಮೆ ಪ್ರಧಾನಿ ನರೇಂದ್ರ ಮೋದಿಯವರ ಸಹಾಯವನ್ನು ತೆಗೆದುಕೊಳ್ಳುತ್ತಾರೆ. ಅವರು ಜಯ ಪ್ರಕಾಶ್ ನಾರಾಯಣ್ ಮತ್ತು ಕರ್ಪೂರಿ ಠಾಕೂರ್ ಅವರ ಸಮಾಜವಾದಿ ಕ್ರಾಂತಿಯ ಉತ್ಪನ್ನ. ಆದರೆ ಈಗ ತಮ್ಮ ಎಲ್ಲಾ ಸಿದ್ಧಾಂತಗಳೊಂದಿಗೆ ರಾಜಿ ಮಾಡಿಕೊಂಡಿದ್ದಾರೆ ಮತ್ತು ಕೋಮುವಾದಿ ಶಕ್ತಿಯೊಂದಿಗೆ ಕುಳಿತಿದ್ದಾರೆ ಎಂದರು.
“ಬಿಜೆಪಿ ಮತ್ತು ಜೆಡಿಯು ಒಂದಾಗಿರುವುದು ಅಧಿಕಾರ ಅನುಭವಿಸಲು ಮಾತ್ರ. ಸಾರ್ವಜನಿಕರೊಂದಿಗೆ ಯಾವುದೇ ಸಂಬಂಧವಿಲ್ಲ. 2020 ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ನಾಯಕರ ನಿರ್ದೇಶನದ ಮೇರೆಗೆ ನಿತೀಶ್ ಕುಮಾರ್ ಬಿಹಾರದ ಜನಾದೇಶವನ್ನು ಲೂಟಿ ಮಾಡಿದರು. ಬಿಹಾರದ ಜನರು ತೇಜಸ್ವಿ ಯಾದವ್ ಅವರಿಗೆ ಜನಾದೇಶ ನೀಡುತ್ತಾರೆ ಮತ್ತು ಅವರು 2025 ರಲ್ಲಿ ಅಧಿಕಾರಕ್ಕೆ ಬರುತ್ತಾರೆ ಎಂದರು.
ಜಗದಾನಂದ್ ಸಿಂಗ್ ಹೇಳಿಕೆಗೆ ಸಾಮಾಜಿಕ ತಾಣಗಳಲ್ಲಿ ಸಂಘ ಪರಿವಾರದ ಬೆಂಬಲಿಗರು ವ್ಯಾಪಕ ಆಕ್ರೋಶ ಹೊರ ಹಾಕಿದ್ದು, ಬಿಹಾರ ಸೇರಿ ದೇಶದೆಲ್ಲೆಡೆ ಹೊಸ ಚರ್ಚೆಗೆ ಕಾರಣವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Shivamogga: ಬಸ್ ನಿಲ್ದಾಣದ ಬಳಿಯ ಮೊಬೈಲ್ ಅಂಗಡಿಯಲ್ಲಿ ಅಗ್ನಿ ಅವಘಡ… ಅಪಾರ ಸೊತ್ತು ನಾಶ
Tragedy: ತನ್ನ ಅಪಾರ್ಟ್ಮೆಂಟ್ನಲ್ಲೇ ನೇಣಿಗೆ ಶರಣಾದ ಭೋಜ್ಪುರಿ ನಟಿ… ಕಾರಣ ನಿಗೂಢ
B.Y. Raghavendra: ಕಾಂಗ್ರೆಸ್ನವರ ಬಳಿ ಗ್ಯಾರಂಟಿ ಅಡ್ವಾನ್ಸ್ ಹಣ ಕೇಳಿ: ಬಿವೈಆರ್
Gayatri Siddeshwar: ಕೈ ಸರ್ಕಾರದ ಗ್ಯಾರಂಟಿ ತಾತ್ಕಾಲಿಕ; ಗಾಯಿತ್ರಿ
Kannur: ಕಾರು – ಲಾರಿ ನಡುವೆ ಭೀಕರ ಅಪಘಾತ; ಒಂದೇ ಕುಟುಂಬದ ಐವರು ದುರ್ಮರಣ