ತರಕಾರಿ ಸ್ವಚ್ಛಗೊಳಿಸಲು ಬಂತು ಸರಳ ಯಂತ್ರ


Team Udayavani, Sep 19, 2022, 1:15 PM IST

14

ಧಾರವಾಡ: ಹೊಲದಲ್ಲಿ ಬೆಳೆದ ತರಕಾರಿಗಳನ್ನು ಸ್ವಚ್ಛಗೊಳಿಸಿ, ಮಾರುಕಟ್ಟೆಗೆ ಸಾಗಿಸುವುದೇ ಸವಾಲಿನ ಕೆಲಸ. ಇಂತಹ ಪರಿಸ್ಥಿತಿಯಲ್ಲಿ ತರಕಾರಿ ಬೆಳೆಗಾರರಿಗೆ ಸುಲಭ ವಿಧಾನವೊಂದನ್ನು ಕೃಷಿ ವಿವಿ ವಿದ್ಯಾರ್ಥಿಗಳ ಸ್ನೇಹ ತಂಡವು ಪರಿಚಯಿಸಿದೆ.

ಕೃಷಿ ಮೇಳದ ಮುಖ್ಯ ವೇದಿಕೆ ಬಳಿಯ ಮಳಿಗೆಯಲ್ಲಿ ಪ್ರಸ್ತುತಪಡಿಸಿರುವ ತರಕಾರಿ ತೊಳೆಯುವ ಯಂತ್ರ ಗಮನ ಸೆಳೆಯುತ್ತಿದೆ. ನಿಗದಿತ ಸಮಯಕ್ಕೆ ಆಳು ಸಿಗದೇ ಪರದಾಡಬೇಕಾದ ಸನ್ನಿವೇಶದಲ್ಲಿ ಈ ಯಂತ್ರ ಕೆಲಸವನ್ನು ಹಗುರಗೊಳಿಸಿದೆ.

ಒಬ್ಬರೇ 1 ಗಂಟೆಯಲ್ಲಿ ಅಂದಾಜು 2-3 ಕ್ವಿಂಟಲ್‌ ತರಕಾರಿ ಸ್ವಚ್ಛಗೊಳಿಸಬಹುದಾಗಿದೆ. ಮನೆಯಲ್ಲೇ ಈ ಸಾಧನವನ್ನು ಅತ್ಯಂತ ಕಡಿಮೆ ದರದಲ್ಲಿ ಸಿದ್ಧಪಡಿಸಬಹುದು. 60 ಸೆಂಮೀ ವ್ಯಾಸ, 120 ಸೆಂಮೀ ಎತ್ತರದ 1 ಡ್ರಮ್‌, ಸೈಕಲ್‌, ಕಟ್ಟಿಗೆಯ ಪಳಿಗಳು, ಬೇರಿಂಗ್‌ ಚಕ್ರಗಳು, ಪ್ಲಾಸ್ಟಿಕ್‌ ಶೀಟ್‌, ಸೈಕಲ್‌ ರಿಮ್‌, ರಬ್ಬರ್‌ ಪಟ್ಟಿ ಅಥವಾ ಟೈರ್‌, ಪ್ಲಾಸ್ಟಿಕ್‌ ಪೈಪ್‌ ಬೇಕಷ್ಟೆ. ಮೊದಲು ಡ್ರಮ್‌ನ ಬುಡ ಮುಚ್ಚಳ ಕೊರೆದು ತೆಗೆದು ಸುತ್ತಲೂ 1/2*30 ಸೀಳುಗಳನ್ನು ಹಾಕಬೇಕು.

ರಿಮ್‌ ಗಳನ್ನು ಡ್ರಮ್‌ನ ಎರಡು ತುದಿಗಳಲ್ಲಿ (10 ಸೆಂಮೀ ಬಿಟ್ಟು) ಜೋಡಿಸಿ, ರಬ್ಬರ್‌ ಪಟ್ಟಿಯನ್ನು ಡ್ರಮ್‌ನ ಮಧ್ಯಭಾಗದಲ್ಲಿ ಜೋಡಿಸಬೇಕು. ನಾಲ್ಕು ಪಳಿಗಳನ್ನು 100×65 ಸೆಂಮೀ ಅಳತೆಯಂತೆ, ಮೂಲೆಗಳಲ್ಲಿ 20 ಸೆಂಮೀ ಆಳಕ್ಕೆ ಹುಗಿದು ನಿಲ್ಲಿಸಬೇಕು. ನಂತರ ಎಲ್ಲ ಪಳಿಗಳಿಗೆ (ನೆಲದಿಂದ 20 ಸೆಂಮೀ ಎತ್ತರಕ್ಕೆ) ಬೇರಿಂಗ್‌ ಚಕ್ರ ಜೋಡಿಸಬೇಕು. ನಂತರ 40 ಸೆಂಮೀ ಅಂತರದಲ್ಲಿ ಹುಕ್‌ಗಳನ್ನು ಜೋಡಿಸಿ ಅವುಗಳಿಗೆ ಪ್ಲಾಸ್ಟಿಕ್‌ ಶೀಟ್‌ ಅಳವಡಿಸಬೇಕು.

ನಂತರ ಡ್ರಮ್‌ ಅನ್ನು 4 ಪಳಿಗಳ ನಡುವೆ, ಬೇರಿಂಗ್‌ ಚಕ್ರಗಳ ಮೇಲೆ ರಿಮ್‌ ಬರುವಂತೆ ಕೂಡಿಸಬೇಕು. ಪೈಪ್‌ನ ಮೇಲೆ 5 ಸೆಂಮೀ ಅಂತರದಲ್ಲಿ ಸಾಲಾಗಿ ಸಣ್ಣ ರಂಧ್ರಗಳನ್ನು ಮಾಡಿ ಡ್ರಮ್‌ ಮೇಲ್ಭಾಗದಲ್ಲಿ ಅಳವಡಿಸಬೇಕು. ಬಳಿಕ ಸೈಕಲ್‌ ಹಿಂದಿನ ಚಕ್ರವು ರಬ್ಬರ್‌ ಪೆಟ್ಟಿಗೆ ತಾಕುವಂತೆ ನಿಲ್ಲಿಸಿದರೆ ಚಕ್ರದ ಜತೆಗೆ ಡ್ರಮ್‌ ಸಹ ತಿರುಗಲಿದೆ.

ಮೊದಲು ಬೋರ್‌ವೆಲ್‌ ಅಥವಾ ಮೋಟರ್‌ ನಿಂದ ನೀರು ಹಾಯಿಸಬೇಕು. ನಂತರ ತರಕಾರಿಗಳನ್ನು (20 ಕೆಜಿ) ಡ್ರಮ್‌ನಲ್ಲಿ ಹಾಕಿ, ಡ್ರಮ್‌ನ ಎರಡೂ ಕಡೆಗೆ ಪ್ಲಾಸ್ಟಿಕ್‌ ಶೀಟ್‌ನಿಂದ ಮುಚ್ಚಿ ನಿಧಾನವಾಗಿ ಸೈಕಲ್‌ ತುಳಿತಬೇಕು. ಆಗ ತರಕಾರಿಗಳಿಗೆ ರಭಸವಾಗಿ ನೀರು ಸಿಂಪರಣೆ ಆಗಿ ಸ್ವಚ್ಛವಾಗಲಿವೆ.

ಟಾಪ್ ನ್ಯೂಸ್

CM Siddaramaiah ನನ್ನ ಮಗ ಮೃತಪಟ್ಟಾಗ ಮೋದಿ,ಸುಷ್ಮಾ ಸಹಾಯ ಮಾಡಿಲ್ಲ

CM Siddaramaiah ನನ್ನ ಮಗ ಮೃತಪಟ್ಟಾಗ ಮೋದಿ,ಸುಷ್ಮಾ ಸಹಾಯ ಮಾಡಿಲ್ಲ

19

Malpe ಬೀಚ್‌: ಸಮುದ್ರ ಪಾಲಾಗತ್ತಿದ್ದ ಬಾಲಕನ ರಕ್ಷಣೆ

18

Kaup: ಕೆಲಸಕ್ಕಾಗಿ ಬಂದಿದ್ದ ಯುವತಿ ನಾಪತ್ತೆ

20-one-plus

One Plusನ ಹೊಸ ಫೋನ್ ನಾರ್ಡ್ ಸಿಇ4: ಏನೇನಿದೆ ಇದರಲ್ಲಿ?

16-

Chikkaballapur: ಕೃಷಿ ಹೊಂಡದಲ್ಲಿ ಈಜಲು ಹೋಗಿ ಇಬ್ಬರು ವಿದ್ಯಾರ್ಥಿಗಳು ಸಾವು

13

Gangolli: ಮಹಿಳೆಗೆ ಬೈಕ್‌ ಢಿಕ್ಕಿ; ಗಾಯ

HDK ಹೇಳುತ್ತಿದ್ದದ್ದು ಪ್ರಜ್ವಲ್‌ ಪೆನ್‌ಡ್ರೈವ್‌ ಇರಬೇಕು: ಜಮೀರ್‌

HDK ಹೇಳುತ್ತಿದ್ದದ್ದು ಪ್ರಜ್ವಲ್‌ ಪೆನ್‌ಡ್ರೈವ್‌ ಇರಬೇಕು: ಜಮೀರ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪ್ರಜ್ವಲ್ ಪ್ರಕರಣವನ್ನು ವೈಯಕ್ತಿಕ ಎಂದ ಅಮಿತ್ ಶಾ ಕ್ಷಮೆ ಕೇಳಬೇಕು: ಸುಪ್ರಿಯಾ ಶ್ರಿನೇಟ್

ಪ್ರಜ್ವಲ್ ಪ್ರಕರಣವನ್ನು ವೈಯಕ್ತಿಕ ಎಂದ ಅಮಿತ್ ಶಾ ಕ್ಷಮೆ ಕೇಳಬೇಕು: ಸುಪ್ರಿಯಾ ಶ್ರಿನೇಟ್

hdk

Hubli; ಅಧಿಕಾರ-ಹಣದ ದುರಹಂಕಾರ ಬಹಳ ದಿನ ಉಳಿಯುವುದಿಲ್ಲ..: ಡಿಕೆ ವಿರುದ್ಧ ಎಚ್ಡಿಕೆ ಗುಡುಗು

Hubli; ಕುಮಾರಸ್ವಾಮಿ ಎದುರೇ ಕಾಂಗ್ರೆಸ್ – ಜೆಡಿಎಸ್ ಕಾರ್ಯಕರ್ತರ ನಡುವೆ ಮಾರಾಮಾರಿ

Hubli; ಕುಮಾರಸ್ವಾಮಿ ಎದುರೇ ಕಾಂಗ್ರೆಸ್ – ಜೆಡಿಎಸ್ ಕಾರ್ಯಕರ್ತರ ನಡುವೆ ಮಾರಾಮಾರಿ

ಪ್ರಜ್ವಲ್ ರೇವಣ್ಣ ಸಂಸದರಾಗಿರುವುದು ಕಾಂಗ್ರೆಸ್ ನಾಯಕರಿಂದಲೇ… :ಆರ್. ಅಶೋಕ್

ಪ್ರಜ್ವಲ್ ರೇವಣ್ಣ ಸಂಸದರಾಗಿರುವುದು ಕಾಂಗ್ರೆಸ್ ನಾಯಕರಿಂದಲೇ… :ಆರ್. ಅಶೋಕ್

Neha ಹತ್ಯೆ ಪ್ರಕರಣ ಮುಚ್ಚಿ ಹಾಕುವ ಯತ್ನ ನಡೆಯುತ್ತಿದೆ: ಸರಕಾರದ ವಿರುದ್ಧ ಆರ್.ಅಶೋಕ್ ಕಿಡಿ

Neha ಹತ್ಯೆ ಪ್ರಕರಣ ಮುಚ್ಚಿ ಹಾಕುವ ಯತ್ನ ನಡೆಯುತ್ತಿದೆ: ಸರಕಾರದ ವಿರುದ್ಧ ಆರ್.ಅಶೋಕ್ ಕಿಡಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

CM Siddaramaiah ನನ್ನ ಮಗ ಮೃತಪಟ್ಟಾಗ ಮೋದಿ,ಸುಷ್ಮಾ ಸಹಾಯ ಮಾಡಿಲ್ಲ

CM Siddaramaiah ನನ್ನ ಮಗ ಮೃತಪಟ್ಟಾಗ ಮೋದಿ,ಸುಷ್ಮಾ ಸಹಾಯ ಮಾಡಿಲ್ಲ

19

Malpe ಬೀಚ್‌: ಸಮುದ್ರ ಪಾಲಾಗತ್ತಿದ್ದ ಬಾಲಕನ ರಕ್ಷಣೆ

18

Kaup: ಕೆಲಸಕ್ಕಾಗಿ ಬಂದಿದ್ದ ಯುವತಿ ನಾಪತ್ತೆ

20-one-plus

One Plusನ ಹೊಸ ಫೋನ್ ನಾರ್ಡ್ ಸಿಇ4: ಏನೇನಿದೆ ಇದರಲ್ಲಿ?

16-

Chikkaballapur: ಕೃಷಿ ಹೊಂಡದಲ್ಲಿ ಈಜಲು ಹೋಗಿ ಇಬ್ಬರು ವಿದ್ಯಾರ್ಥಿಗಳು ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.