ಭಾರತಕ್ಕೆ ಸುಲ್ತಾನ್ ಆಫ್ ಜೋಹರ್ ಕಪ್
ಆಸ್ಟ್ರೇಲಿಯ ವಿರುದ್ಧ ಗೆಲುವು
Team Udayavani, Oct 29, 2022, 11:06 PM IST
ಜೋಹರ್ ಬಹ್ರು (ಮಲೇಷ್ಯಾ): ಎರಡು ಬಾರಿಯ ಚಾಂಪಿಯನ್ಸ್ ಭಾರತವು ತೀವ್ರ ಪೈಪೋಟಿಯಿಂದ ಸಾಗಿದ ಫೈನಲ್ ಹೋರಾಟದಲ್ಲಿ ಬಲಿಷ್ಠ ಆಸ್ಟ್ರೇಲಿಯವನ್ನು ಪೆನಾಲ್ಟಿ ಶೂಟೌಟ್ನಲ್ಲಿ 5-4 ಅಂತರದಿಂದ ಸೋಲಿಸಿ ಸುಲ್ತಾನ್ ಆಫ್ ಜೋಹರ್ ಕಪ್ ಪ್ರಶಸ್ತಿಯನ್ನು ಗೆದ್ದುಕೊಂಡಿದೆ. ಭಾರತವು ಐದು ವರ್ಷಗಳ ಬಳಿಕ ಈ ಪ್ರಶಸ್ತಿಯನ್ನು ಗೆದ್ದುಕೊಂಡಿದೆ.
ನಿಗದಿತ ಅವಧಿಯ ಆಟದ ವೇಳೆ ಭಾರತ ಮತ್ತು ಆಸ್ಟ್ರೇಲಿಯ 1-1 ಗೋಲಿನಿಂದ ಸಮಬಲ ಸ್ಥಾಪಿಸಿತ್ತು. ಪ್ರಶಸ್ತಿ ನಿರ್ಣಯಿಸಲು ನಡೆದ ಪೆನಾಲ್ಟಿ ಶೂಟೌಟ್ನಲ್ಲಿಯೂ ಉಭಯ ತಂಡಗಳು 3-3 ಸಮಬಲ ಸಾಧಿಸಿದ್ದವು. ಇದರಿಂದ ಪ್ರಶಸ್ತಿ ನಿರ್ಣಯಿಸಲು ಸಡನ್ ಡೆತ್ ಅಳವಡಿಸಲಾಯಿತು. ಇದರಲ್ಲಿ ಭಾರತ ಜಯಭೇರಿ ಬಾರಿಸಿತು.
ಭಾರತದ ಉತ್ತಮ್ ಸಿಂಗ್ ಶೂಟೌ ಟ್ನಲ್ಲಿ ಎರಡು ಗೋಲು ಹೊಡೆದರು. ಇದರಲ್ಲಿ ಸಡನ್ ಡೆತ್ನಲ್ಲಿ ಹೊಡೆದ ಗೋಲು ಸೇರಿದೆ. ಅವರಲ್ಲದೇ ವಿಷ್ಣುಕಾಂತ್ ಸಿಂಗ್, ಅಂಕಿತ್ ಪಾಲ್, ಸುದೀಪ್ ಚಿರ್ಮಾಕೊ ಭಾರತ ಪರ ಗೋಲು ಹೊಡೆದ ಆಟಗಾರರಾಗಿದ್ದಾರೆ.
ಶೂಟೌಟ್ ಬಳಿಕ ಸಡನ್ ಡೆತ್ನಲ್ಲಿ ವಿಷ್ಣುಕಾಂತ್ ಗೋಲು ಹೊಡೆಯಲು ವಿಫಲರಾಗಿದ್ದರು. ಹರ್ಟ್ ಲಿಯಮ್ ಕೂಡ ಗೋಲು ಹೊಡೆಯಲಿಲ್ಲ. ಉತ್ತಮ್ ಗೋಲು ಹೊಡೆದ ಕಾರಣ 4-3 ಮುನ್ನಡೆ ಪಡೆಯಿತು. ಇದನ್ನು ಬರ್ನ್ಸ್ 4-4 ಸಮಬಲ ಮಾಡಿದರು. ಆಬಳಿಕ ಸುದೀಪ್ ಗೋಲು ಹೊಡೆದು 5-4 ಮುನ್ನಡೆ ಸಾಧಿಸಿದರು. ನಿರ್ಣಾಯಕ ಪ್ರಯತ್ನದಲ್ಲಿ ಬ್ರೂಕ್ಸ್ ಜೋಶುವ ಗೋಲು ಹೊಡೆಯಲು ವಿಫಲರಾದ ಕಾರಣ ಭಾರತ ಜಯಭೇರಿ ಬಾರಿಸಿ ಸಂಭ್ರಮಿಸಿತು.
ಭಾರತ ಪರ ಸಂದೀಪ್ 13ನೇ ನಿಮಿಷದಲ್ಲಿ ಫೀಲ್ಡ್ ಗೋಲು ಹೊಡೆದು ಭಾರತಕ್ಕೆ ಮುನ್ನಡೆ ಒದಗಿಸಿದ್ದರು. 28ನೇ ನಿಮಿಷದಲ್ಲಿ ಜಾಕ್ ಹೊಲ್ಲಾಡ್ ಗೋಲು ಹೊಡೆದು ಸಮಬಲ ಸ್ಥಾಪಿಸಿದ್ದರು.
ಭಾರತ ಈ ಪ್ರಶಸ್ತಿಯನ್ನು 2013 ಮತ್ತು 2014ರಲ್ಲಿ ಜಯಿಸಿದ್ದರೆ 4 ಬಾರಿ ಫೈನಲಿಗೇರಿದ ಸಾಧನೆ ಮಾಡಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
RCBvsCSK; ಧೋನಿಯ 110 ಮೀ ಸಿಕ್ಸ್ ಕಾರಣದಿಂದ ನಾವು ಗೆದ್ದೆವು..: ಕಾರ್ತಿಕ್ ಹೇಳಿದ್ದೇನು
Man of the match ಪ್ರಶಸ್ತಿ ಸಿಗಬೇಕಾಗಿದ್ದು ನನಗಲ್ಲ…: ಫಾಫ್ ಡುಪ್ಲೆಸಿಸ್ ಹೀಗಂದಿದ್ಯಾಕೆ?
IPL ಇಂದು ಲೀಗ್ ಪಂದ್ಯಗಳಿಗೆ ತೆರೆ: KKR vs RR ಟೇಬಲ್ ಟಾಪರ್ಗಳ ಸೆಣಸಾಟ
T20 ವಿಶ್ವಕಪ್: ಮೇ 25ರಂದು ಭಾರತದ ಬಹುತೇಕ ಆಟಗಾರರ ಮೊದಲ ತಂಡ ನ್ಯೂಯಾರ್ಕ್ಗೆ
IPL ವಿಚಿತ್ರ; ಎಲ್ಲ ಪಂದ್ಯ ಮುಗಿದ ಬಳಿಕ ನಾಯಕ ಪಾಂಡ್ಯಗೆ ಒಂದು ಪಂದ್ಯ ನಿಷೇಧ!
MUST WATCH
ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ
ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು
ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ
ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್ಪಟೇಲ್ ಹೇಳಿಕೆ
ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ
ಹೊಸ ಸೇರ್ಪಡೆ
Borderline Personality Disorder: ಬಾರ್ಡರ್ಲೈನ್ ಪರ್ಸನಾಲಿಟಿ ಡಿಸಾರ್ಡರ್
Election; ಮೋದಿ ನೇತೃತ್ವದ ‘ನವ ಭಾರತ’ಕ್ಕೆ ಮದರಸಾಗಳ ಅಗತ್ಯವಿಲ್ಲ: ಹಿಮಂತ ಬಿಸ್ವಾ ಶರ್ಮಾ
ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಲೋಕಾರ್ಪಣೆಗೊಂಡಿದೆ ನೂತನ ಡಾ|ರಾಮದಾಸ್ ಎಂ.ಪೈ ಬ್ಲಾಕ್
Air India Express ವಿಮಾನದ ಇಂಜಿನ್ ನಲ್ಲಿ ಬೆಂಕಿ; ಬೆಂಗಳೂರಿನಲ್ಲಿ ತುರ್ತು ಭೂಸ್ಪರ್ಶ
Pregnancy: ಗರ್ಭಧಾರಣೆಯ ಭಾವನಾತ್ಮಕ ಅಂಶಗಳು