ರುಧೀರ ಕಣಿವೆ ಚಿತ್ರ ವಿಮರ್ಶೆ; ಕಣಿವೆಯಲ್ಲಿ ಹಾರರ್‌ ಅನುಭವ


Team Udayavani, Jan 1, 2023, 12:01 PM IST

rudhira kanive movie review

ಅದೊಂದು ನಿರ್ಜನ ಪ್ರದೇಶ. ಮನಮೋಹಕ ಪ್ರಾಕೃತಿಕ ಸೌಂದರ್ಯ ಮತ್ತು ಹೇರಳವಾದ ಸಂಪತ್ತನ್ನು ತನ್ನೊಳಗೆ ಹುದುಗಿಸಿಕೊಟ್ಟುಕೊಂಡ ಆ ಜಾಗದ ಹೆಸರು “ರುಧೀರ ಕಣಿವೆ. ಜನಸಾಮಾನ್ಯರು ಹೋಗಲು ಭಯಪಡುವ ಇಂಥ ಜಾಗದ ಮೇಲೆ ನಿಧಿ ಕಳ್ಳರ ಕಣ್ಣು ಬೀಳುತ್ತದೆ. “ರುಧೀರ ಕಣಿವೆ’ಯ ಒಡಲಿನಲ್ಲಿರುವ ಸಂಪತ್ತಿಗೆ ಕನ್ನ ಹಾಕಲು ತಂಡ ಕೂಡಾ ಸಿದ್ಧವಾಗುತ್ತದೆ. ಕಣಿವೆಯ ಒಡಲನ್ನು ಬಗೆಯಲು ಅಲ್ಲಿಗೆ ಹೋದವರಿಗೆ ಅನಿರೀಕ್ಷಿತ ಆಘಾತಗಳು ಒಂದರ ಹಿಂದೊಂದು ಎದುರಾಗುತ್ತದೆ. ಅಂತಿಮವಾಗಿ ಸಂಪತ್ತಿನ ಮೇಲೆ ಕಣ್ಣಿಟ್ಟು, “ರುಧೀರ ಕಣಿವೆ’ಗೆ ಕಾಲಿಟ್ಟವರ ಕಥೆ ಏನಾಗುತ್ತದೆ ಎಂಬುದೇ ಈ ವಾರ ತೆರೆಗೆ ಬಂದಿರುವ “ರುಧೀರ ಕಣಿವೆ’ ಸಿನಿಮಾದ ಕ್ಲೈಮ್ಯಾಕ್ಸ್‌.

ಬಹುತೇಕ ಹೊಸ ಪ್ರತಿಭೆಗಳೇ ಸೇರಿ ನಿರ್ಮಿಸಿರುವ “ರುಧೀರ ಕಣಿವೆ’ ಒಂದು ಹಾರರ್‌ ಕಂ ಥ್ರಿಲ್ಲರ್‌ ಶೈಲಿಯ ಸಿನಿಮಾ. ಇದರ ನಿಧಿ ಹುಡುಕಾಟದ ಜೊತೆಗೊಂದು ಪುನರ್ಜನ್ಮದ ಪ್ರೇಮಕಥೆಯನ್ನು ಜೋಡಿಸಿ ಚಿತ್ರವನ್ನು ತೆರೆಮೇಲೆ ತರಲಾಗಿದೆ. ಒಂದಷ್ಟು ಸಸ್ಪೆನ್ಸ್‌, ಥ್ರಿಲ್ಲರ್‌, ಹಾರರ್‌ ಅಂಶಗಳ ಜೊತೆಗೆ ಹಾಡು, ಡ್ಯಾನ್ಸ್‌, ಕಾಮಿಡಿ ಹೀಗೆ ಎಲ್ಲ ತರದ ಕಮರ್ಷಿಯಲ್‌ ಎಂಟರ್‌ ಟೈನ್ಮೆಂಟ್‌ ಪ್ಯಾಕೇಜ್‌ ಸಿನಿಮಾದಲ್ಲಿದೆ.

ಒಂದು ಪ್ರಯತ್ನವಾಗಿ ಚಿತ್ರತಂಡದ ಶ್ರಮವನ್ನು ಮೆಚ್ಚಬಹುದು. ಚಿತ್ರದ ನಿರೂಪO ಮತ್ತು ವೇಗ ಇನ್ನಷ್ಟು ಹೆಚ್ಚಾಗಿದ್ದರೆ, “ರುಧೀರ ಕಣಿವೆಯ’ ಥ್ರಿಲ್ಲಿಂಗ್‌ ಅನುಭವ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಗಳಿದ್ದವು. ನವ ಪ್ರತಿಭೆ ಕಾರ್ತಿಕ್‌, ನಾಯಕಿಯರಾದ ದಿಶಾ ಪೂವಯ್ಯ, ಅಮೃತಾ, ಅನುಭವಿ ಕಲಾವಿದರಾದ ಶೋಭರಾಜ್‌, ಬಲರಾಜವಾಡಿ, ಹನುಮಂತೇಗೌಡ ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ.

ಸ್ವಾಮಿ ಛಾಯಾಗ್ರಹಣ “ರುಧೀರ ಕಣಿವೆ’ಯ ಅಂದವನ್ನು ತೆರೆಮೇಲೆ ಹೆಚ್ಚಿಸಿದೆ. ಸಂಕಲನ ಮತ್ತು ಹಿನ್ನೆಲೆ ಸಂಗೀತ ಕಡೆಗೆ ಚಿತ್ರತಂಡ ಇನ್ನಷ್ಟು ಗಮನ ಕೊಡಬಹುದಿತ್ತು. ಒಟ್ಟಾರೆ “ರುಧೀರ ಕಣಿವೆ’ ಹೊಸಬರ ಪ್ರಯತ್ನವಾಗಿದ್ದು, ಕಣಿವೆಗೆ ಕನ್ನ ಹಾಕಲು ಹೋಗುವವರ ಹಾರರ್‌-ಥ್ರಿಲ್ಲರ್‌ ಜರ್ನಿ ಹೇಗಿರಲಿದೆ ಎಂಬುದನ್ನು ತಿಳಿಯುವ ಕುತೂಹಲವಿದ್ದರೆ, ವಾರಾಂತ್ಯದಲ್ಲಿ ಒಮ್ಮೆ “ರುಧೀರ ಕಣಿವೆ’ಯ ಕಡೆಗೆ ಮುಖ ಮಾಡಬಹುದು

ಜಿ. ಎಸ್‌ ಕಾರ್ತಿಕ ಸುಧನ್

ಟಾಪ್ ನ್ಯೂಸ್

1-jagan

Jagan ಮೋದಿಗೆ ದೂರು, ಸುಪ್ರೀಂ ಮೊರೆ: ನಾಯ್ಡು ವಿರುದ್ಧ ಕ್ರಮ ಏಕೆ ಕೈಗೊಳ್ಳಬಾರದು?

congress

Maharashtra ಮುಂದಿನ ಸಿಎಂ ಕಾಂಗ್ರೆಸ್ಸಿಗ: ಬಾಳಾ ಸಾಹೇಬ್‌ ಥೋರಾಟ್‌

Lok Adalat: 35.84 ಲಕ್ಷ ಪ್ರಕರಣ ಇತ್ಯರ್ಥ

Lok Adalat: 35.84 ಲಕ್ಷ ಪ್ರಕರಣ ಇತ್ಯರ್ಥ

gold 2

FATF; ಭಾರತದ ಚಿನ್ನೋದ್ಯಮ ಮೂಲಕ ಉಗ್ರರಿಗೆ ನೆರವು

1-uu

‘U-WIN’ ಪೋರ್ಟ್‌ಲ್‌ಗೆ ಅಕ್ಟೋಬರ್‌ನಲ್ಲಿ ಚಾಲನೆ

MASIDI

Fiscal Crisis: ಅಯೋಧ್ಯೆ ಮಸೀದಿ ಟ್ರಸ್ಟ್‌ ಸಮಿತಿಗಳ ವಿಸರ್ಜನೆ

ಭಕ್ತರ ನಂಬಿಕೆಗೆ ದ್ರೋಹ ಬಗೆದವರಿಗೆ ಶಿಕ್ಷೆಯಾಗಲಿ

ಭಕ್ತರ ನಂಬಿಕೆಗೆ ದ್ರೋಹ ಬಗೆದವರಿಗೆ ಶಿಕ್ಷೆಯಾಗಲಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Shalivahana Shake Movie Review

Shalivahana Shake Movie Review: ಟೈಮ್‌ ಲೂಪ್‌ ಕಥೆಯ ʼಶಾಲಿವಾಹನ ಶಕೆ’

Vikasa Parva Movie Review

Vikasa Parva Movie Review: ಜೀವನ ಪಾಠದ ‘ವಿಕಾಸ ಯಾತ್ರೆ’

kaalapatthar

Kaalapatthar movie review: ಶಿಲೆಯ ಸುತ್ತದ ಸೆಳೆತವಿದು..

Ronny

Ronny Movie Review: ಬಣ್ಣದ ಕನಸಿಗೆ ರಕ್ತ ಲೇಪನ

ibbani tabbida ileyali movie review

Ibbani Tabbida Ileyali Review; ತಾಜಾ ಪ್ರೀತಿಯ ಭಾವ ಲಹರಿ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

1-jagan

Jagan ಮೋದಿಗೆ ದೂರು, ಸುಪ್ರೀಂ ಮೊರೆ: ನಾಯ್ಡು ವಿರುದ್ಧ ಕ್ರಮ ಏಕೆ ಕೈಗೊಳ್ಳಬಾರದು?

Mysuru Dasara ಉದ್ಘಾಟಕರಾಗಿ ಪ್ರೊ| ಹಂಪನಾ: ಮೈಸೂರಿನಲ್ಲಿ ಮುಖ್ಯಮಂತ್ರಿ ಘೋಷಣೆ

Mysuru Dasara ಉದ್ಘಾಟಕರಾಗಿ ಪ್ರೊ| ಹಂಪನಾ: ಮೈಸೂರಿನಲ್ಲಿ ಮುಖ್ಯಮಂತ್ರಿ ಘೋಷಣೆ

congress

Maharashtra ಮುಂದಿನ ಸಿಎಂ ಕಾಂಗ್ರೆಸ್ಸಿಗ: ಬಾಳಾ ಸಾಹೇಬ್‌ ಥೋರಾಟ್‌

Lok Adalat: 35.84 ಲಕ್ಷ ಪ್ರಕರಣ ಇತ್ಯರ್ಥ

Lok Adalat: 35.84 ಲಕ್ಷ ಪ್ರಕರಣ ಇತ್ಯರ್ಥ

gold 2

FATF; ಭಾರತದ ಚಿನ್ನೋದ್ಯಮ ಮೂಲಕ ಉಗ್ರರಿಗೆ ನೆರವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.