ಕುಷ್ಟಗಿ: ಗೂಡಂಗಡಿಯಲ್ಲಿ ಕಳ್ಳತನ ಮಾಡಿದ್ದ ಕಳ್ಳನ ಬಂಧನ
Team Udayavani, Jan 26, 2023, 3:03 PM IST
ಕುಷ್ಟಗಿ: ಕುಷ್ಟಗಿ- ಇಲಕಲ್ ರಾಷ್ಟ್ರೀಯ ಚತುಷ್ಪಥ ಹೆದ್ದಾರಿ ವಣಗೇರಾ ಟೋಲ್ ಬಳಿಯ ಗೂಡಂಗಡಿಯೊಂದರಲ್ಲಿ 30 ಸಾವಿರ ರೂ. ಎಗರಿಸಿದ್ದ ಕಳ್ಳನನ್ನು ಸಿಸಿ ಟಿವಿ ನೆರವಿನಿಂದ ಕುಷ್ಟಗಿ ಪೊಲೀಸರು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಜಿ.ಜಿ.ಹಳ್ಳಿಯ ಸಯ್ಯದ್ ಬಾಬು ಭಾಷು ಸಾಬ್ ಗಾರ್ಲ ಕಳ್ಳತನ ಮಾಡಿದ ವ್ಯಕ್ತಿ ಎಂದು ಗುರುತಿಸಲಾಗಿದೆ.
ಹೆದ್ದಾರಿ ಟೋಲ್ ಬಳಿ ಅಮರೇಶ ಗೋತಗಿ ಅವರ ಗೂಡಂಗಡಿಯಲ್ಲಿ ಕಳೆದ ಜ.4 ರಂದು ಈ ಪ್ರಕರಣವಾಗಿದ್ದು, ಆ ಅಂಗಡಿಯಲ್ಲಿರುವ ಸಿಸಿ ಟಿವಿ ಸಹಾಯದಿಂದ ಕಳ್ಳನನ್ನು ಪತ್ತೆ ಹಚ್ಚುವುದು ಸುಲಭವಾಗಿದೆ.
ಸಯ್ಯದ್ ಬಾಬು ಭಾಷು ಸಾಬ್ ಗಾರ್ಲ ಕ್ಯಾಂಟರ್ ಲಾರಿ ಚಾಲಕನಾಗಿದ್ದು, ಎಳನೀರು ಲೋಡ್ ನೊಂದಿಗೆ ಕುಷ್ಟಗಿ ವಣಗೇರಾ ಟೋಲ್ ಮೂಲಕ ಹೋಗುವಾಗ ಲಾರಿ ನಿಲ್ಲಿಸಿದ್ದ. ಅಲ್ಲಿ ಗ್ರಾಹಕ ಸೋಗಿನಲ್ಲಿ ಟೋಲ್ ಹತ್ತಿರದ ಗೂಡಂಗಡಿ ಶೆಟ್ರಸ್ ಸದ್ದು ಮಾಡಿದ್ದ. ಆಗ ಯಾರು ಇಲ್ಲದಿರುವುದು ಗಮನಿಸಿ, ಮೊಬೈಲ್ ಟಾರ್ಚ್ ಸಹಾಯದಿಂದ 30 ಸಾವಿರ ರೂ. ಹಾಗೂ 15 ಸಿಗರೇಟ್ ಪ್ಯಾಕ್ ಕಳವು ಮಾಡುವ ದೃಶ್ಯಾವಳಿಗಳು ಸಿಸಿ ಟಿವಿ ಪುಟೇಜ್ ನಲ್ಲಿ ದಾಖಲಾಗಿತ್ತು.
ಸಿಪಿಐ ನಿಂಗಪ್ಪ ರುದ್ರಪ್ಪಗೋಳ ಅವರ ಮಾರ್ಗದರ್ಶನದ ಮೇರೆಗೆ ಪಿಎಸೈ ಮೌನೇಶ ರಾಠೋಡ್ ಚಾಲಕ, ಕಳ್ಳನನ್ನು ಬಂದಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಕುಷ್ಟಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Koppala; ಸಿಎಂ ಸಿದ್ದರಾಮಯ್ಯ ಎದುರೇ ಸ್ಪೋಟಗೊಂಡ ಗಂಗಾವತಿ ಕಾಂಗ್ರೆಸ್ ಬಣ ಬಡಿದಾಟ
ಬಿಜೆಪಿ ಸುಳ್ಳು ಉತ್ಪಾದನೆ ಮಾಡುವ ಫ್ಯಾಕ್ಟರಿ: ಸಿಎಂ ಸಿದ್ದರಾಮಯ್ಯ
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ
Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ
China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ
MUST WATCH
ಹೊಸ ಸೇರ್ಪಡೆ
“Siddaramaiah- H.D. Revanna ನಡುವೆ ಒಪ್ಪಂದಕ್ಕೆ ಎಫ್ಐಆರ್ ಹಾಕಲಿಲ್ಲವೇ?’
Fazal ur Rehman; ಭಾರತ ಸೂಪರ್ಪವರ್, ನಾವು ಭಿಕ್ಷೆ ಬೇಡುತ್ತಿದ್ದೇವೆ: ಪಾಕಿಸ್ಥಾನ ಸಂಸದ
Home Minister ಅಮಿತ್ ಶಾಗೆ ವಕೀಲ ದೇವರಾಜೇಗೌಡ ಪತ್ರ: ವೈರಲ್
H. D. Kumaraswamy ನನ್ನ ಬಳಿ ಇರುವುದು ಡಿಕೆಶಿ ಭ್ರಷ್ಟಾಚಾರದ ಮಾಹಿತಿ
Uber Cup Badminton: ಚೀನಾ ವಿರುದ್ಧ ಭಾರತಕ್ಕೆ 5-0 ಸೋಲು