ಕಂಬಳ ವೀರ “ದೂಜೆ’ ಅಸ್ವಸ್ಥ; ಅಭಿಮಾನಿಗಳಲ್ಲಿ ಬೇಸರ… ವಾಮಾಚಾರದ ಶಂಕೆ
Team Udayavani, Mar 12, 2023, 7:00 AM IST
ಮಂಗಳೂರು: ಸರಣಿ ಪದಕಗಳ ಮೂಲಕ ಖ್ಯಾತಿ ಗಳಿಸಿರುವ ನಗರದ ಪದವು ಕಾನಡ್ಕ ಡೋಲ್ಫಿ ಡಿ’ಸೋಜಾ ಮತ್ತು ಡೆರಿಕ್ ಡಿ’ಸೋಜಾ ಸಹೋದರರ ಮಾಲಕತ್ವದ ಕಂಬಳದ ಕೋಣ “ದೂಜೆ’ ಅಸ್ವಸ್ಥಗೊಂಡಿದ್ದು, ವಾಮಾಚಾರ ಮಾಡಿರುವ ಬಗ್ಗೆ ಮಾಲಕರು ಶಂಕೆ ವ್ಯಕ್ತಪಡಿಸಿದ್ದಾರೆ.
“ದೂಜೆ’ ಮತ್ತು “ಎರ್ಮುಡೆ’ ಜೋಡಿ ಈ ಬಾರಿಯ ಕೂಟದಲ್ಲಿ ಕಕ್ಯೆಪದವಿನಲ್ಲಿ ಸೆಮಿಫೈನಲ್ವರೆಗೆ ಹೋಗಿದ್ದವು. ವೇಣೂರು, ಹೊಕ್ಕಾಡಿಗೋಳಿಯಲ್ಲಿ ದ್ವಿತೀಯ, ಅಡ್ವೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದವು. ಐಕಳ ಕಂಬಳದ ಸಂದರ್ಭ ಎರಡು ಕೂಡ ಅಸ್ವಸ್ಥಗೊಂಡವು. ಅದರಲ್ಲಿ “ಎರ್ಮುಡೆ’ ಬೇಗ ಚೇತರಿಸಿಕೊಂಡಿತ್ತು. ಆದರೆ “ದೂಜೆ’ಯ ಆರೋಗ್ಯ ಹದಗೆಡುತ್ತ ಬಂದಿತ್ತು. ಸದ್ಯ ಸ್ವಲ್ಪ ಚೇತರಿಸಿಕೊಳ್ಳುತ್ತಿದೆ. ದೂಜೆ 10 ವರ್ಷಗಳಲ್ಲಿ 68 ಪದಕಗಳನ್ನು ಗಳಿಸಿದೆ ಎಂದು ಡೋಲ್ಫಿ ತಿಳಿಸಿದ್ದಾರೆ.
ವಾಮಾಚಾರ ಪ್ರಯೋಗ?
“ದೂಜೆ’ಯನ್ನು ನೋಡಲು ನಿತ್ಯ ನೂರಾರು ಮಂದಿ ಬರುತ್ತಿದ್ದರು. ಕೆಲವರು ಹಣ್ಣು ಹಂಪಲು ಇತ್ಯಾದಿ ನೀಡುತ್ತಿದ್ದರು. ನಾವು ತಡೆಯುತ್ತಿರಲಿಲ್ಲ. ಆದರೆ ದೂಜೆಗೆ ಅದೇನಾಯಿತು ಎಂದು ಗೊತ್ತಿಲ್ಲ. ಇತ್ತೀಚೆಗೆ ಕೊಟ್ಟಿಗೆ ಸ್ವತ್ಛಗೊಳಿಸುವಾಗ ನೂಲು, ಭಸ್ಮ, ತಗಡು ಕೂಡ ಸಿಕ್ಕಿತ್ತು. ಅದರ ಜತೆ ಚೆನ್ನೈ-ಮಂಗಳೂರು ರೈಲಿನ ಟಿಕೆಟ್ ಕೂಡ ಇತ್ತು. ಯಾರು ಏನು ಮಾಡಿದ್ದಾರೋ ಗೊತ್ತಾಗುತ್ತಿಲ್ಲ. ತಪ್ಪು ಮಾಡಿದವರಿಗೆ ದೇವರೇ ಶಿಕ್ಷೆ ನೀಡುತ್ತಾರೆ ಎಂದು ಡೋಲ್ಫಿ ಹೇಳಿದ್ದಾರೆ.
“ದೂಜೆ’ ದರ್ಶನಕ್ಕಿಲ್ಲ ಅವಕಾಶ
ವಾಮಾಚಾರ ಸಾಧ್ಯತೆಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಕೂಡ ಚರ್ಚೆಯಾಗುತ್ತಿದೆ. ದೂಜೆಯನ್ನು ನೋಡಲು ಸದ್ಯ ಮಾಲಕರು ಹೊರಗಿನ ಯಾರಿಗೂ ಅವಕಾಶ ನೀಡುತ್ತಿಲ್ಲ. ಗೇಟಿಗೆ ಸಿಸಿ ಕೆಮರಾ ಕೂಡ ಅಳವಡಿಸಲು ನಿರ್ಧರಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
D.K. ಜಿಲ್ಲೆಯಲ್ಲಿ ಗುಡುಗು ಸಹಿತ ಉತ್ತಮ ಮಳೆ; ಇನ್ನೂ ನಾಲ್ಕು ದಿನ “ಎಲ್ಲೋ ಅಲರ್ಟ್’
Naturals Ice Cream; ಬಾಲ್ಯದ ಹಣ್ಣಿನ ಸಖ್ಯ ಬದುಕಿನ ಗುರಿಯ ಗಿರಿಯ ಮುಟ್ಟಿಸಿತು
Mangaluru ಫಾತಿಮಾ ರಲಿಯಾ ಸಹಿತ ಆರು ಮಂದಿಗೆ ಸ್ವಾಭಿಮಾನಿ ಪುಸ್ತಕ ಪ್ರಶಸ್ತಿ
Surathkal ಶಬರಿಮಲೆ ಯಾತ್ರೆ ಸಂದರ್ಭ ಹೃದಯಾಘಾತದಿಂದ ಸಾವು
Fake CBI ಅಧಿಕಾರಿಗಳ ಬಲೆಯಿಂದ ಸಂಗೀತ ಕಲಾವಿದ ಪಾರು
MUST WATCH
ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ
ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು
ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ
ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್ಪಟೇಲ್ ಹೇಳಿಕೆ
ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ
ಹೊಸ ಸೇರ್ಪಡೆ
Gundmi Toll Plaza ಸ್ಥಳೀಯರಿಗೆ ಟೋಲ್ ಬರೆ; ಟೋಲ್ಗೆ ಮುತ್ತಿಗೆ; ರಸ್ತೆ ತಡೆ ಪ್ರತಿಭಟನೆ
Election data ಏರಿಕೆ ಬಗ್ಗೆ ಪ್ರತಿಕ್ರಿಯಿಸಿ: ಇಸಿಗೆ ಸುಪ್ರೀಂ
D.K. ಜಿಲ್ಲೆಯಲ್ಲಿ ಗುಡುಗು ಸಹಿತ ಉತ್ತಮ ಮಳೆ; ಇನ್ನೂ ನಾಲ್ಕು ದಿನ “ಎಲ್ಲೋ ಅಲರ್ಟ್’
Malpe ದೋಣಿಗಳು ಢಿಕ್ಕಿಯಾಗಿ ಮುಳುಗಡೆ; ಐವರು ಮೀನುಗಾರರ ರಕ್ಷಣೆ
Chhattisgarh; ನಿಲ್ಲದ ನಕ್ಸಲ್ ಬೇಟೆ: ಓರ್ವನ ಹತ್ಯೆ