ಮಂಗಳೂರು: ಮತದಾನದ ಮಹತ್ವ ತಿಳಿಸಲು ಬರುತ್ತಾರೆ ಜಿಲ್ಲೆಯ ಐಕಾನ್‌ಗಳು!

ಮತದಾನದ ಸಂದೇಶ ನೀಡಲು ರೂಪು ರೇಷೆಗಳು ಸಿದ್ಧಗೊಳ್ಳುತ್ತಿವೆ

Team Udayavani, Apr 3, 2023, 5:41 PM IST

ಮಂಗಳೂರು: ಮತದಾನದ ಮಹತ್ವ ತಿಳಿಸಲು ಬರುತ್ತಾರೆ ಜಿಲ್ಲೆಯ ಐಕಾನ್‌ಗಳು!

ಮಂಗಳೂರು: ಬುದ್ಧಿವಂತರ ಜಿಲ್ಲೆ, ಶಿಕ್ಷಣ ಕಾಶಿ ಎಂದೇ ಕರೆಯಲ್ಪಡುವ ದ.ಕ. ಜಿಲ್ಲೆಯ ಮಂಗಳೂರು ನಗರ ದಕ್ಷಿಣ ಅತೀ ಕಡಿಮೆ ಮತದಾನದ ಮೂಲಕ ಗುರುತಿಸಿಕೊಂಡ ಕ್ಷೇತ್ರ. ಅಪಾರ್ಟ್‌ಮೆಂಟ್‌ ಸಂಸ್ಕೃತಿಯಲ್ಲಿ ಬೆಳೆಯುತ್ತಿರುವ ನಗರ ಪ್ರದೇಶಗಳಲ್ಲಿ ಸುಶಿಕ್ಷಿತ ಮತದಾರರಲ್ಲಿ ಹೆಚ್ಚಿನವರು ಮತಗಟ್ಟೆಗಳೆದುರು ಸರತಿ ನಿಂತು ತಮ್ಮ ಹಕ್ಕು ಚಲಾಯಿಸಲು ಹಿಂದೇಟು ಹಾಕುತ್ತಿದ್ದಾರೆ ಎಂಬ ಅಂಶವೊಂದು ಇತ್ತೀಚೆಗೆ ಆರ್ಥಿಕ ಮತ್ತು ನೀತಿ ಕೇಂದ್ರ (ಐಎಸ್‌ಇಸಿ) ನಡೆಸಿರುವ ಅಧ್ಯಯನಗಳಿಂದ ಬಹಿರಂಗಗೊಂಡಿದೆ.

ಈ ಅಪಖ್ಯಾತಿಯಿಂದ ಜಿಲ್ಲೆಯನ್ನು ಹೊರತಂದು ಮತದಾರರೆಲ್ಲರೂ ತಮ್ಮ ಹಕ್ಕು ಚಲಾಯಿಸಲು ಪ್ರೇರಣೆ ನೀಡುವ ಸಲುವಾಗಿ ಜಿಲ್ಲಾ ಸ್ವೀಪ್‌ ಸಮಿತಿಯು ಜಿಲ್ಲೆಯ ಸಾಧಕ “ಐಕಾನ್‌’ಗಳಿಂದ ಮತದಾನದ ಹಬ್ಬಕ್ಕೆ ರಂಗೇರಿಸಲು ಸಿದ್ಧತೆ ನಡೆಸಿದೆ.

ಜಿಲ್ಲೆಯಲ್ಲಿ ಕಲೆ, ಸಮಾಜ ಸೇವೆ, ಕ್ರೀಡೆ, ಭಿನ್ನ ಸಾಮರ್ಥ್ಯ ಮೊದಲಾದ ಕ್ಷೇತ್ರಗಳಲ್ಲಿ ತಮ್ಮ ಸಾಧನೆ ಮೂಲಕ ಗುರುತಿಸಿಕೊಂಡಿರುವ ಐಕಾನ್‌ (ಜನಪ್ರಿಯರು)ಗಳಿಂದ ಮತದಾನದ ಮಹತ್ವದ ಜಾಗೃತಿ ಅಭಿಯಾನದ ರೂಪು ರೇಷೆಗಳನ್ನು ಸಿದ್ಧಪಡಿಸುತ್ತಿದೆ.

ಪಟ್ಲ, ಹಾಜಬ್ಬ, ರಾಜ್‌ ಬಿ. ಶೆಟ್ಟಿ
“ಮತದಾನಕ್ಕಿಂತ ಇನ್ನೊಂದಿಲ್ಲ- ನಾನು ಖಚಿತವಾಗಿ ಮತದಾನ ಮಾಡುವೆ’ ಎಂಬ ಆಶಯ ವಾಕ್ಯದೊಂದಿಗೆ ಯುವಕರು ಸೇರಿದಂತೆ ನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಮತದಾರರಿಗೆ ಮತದಾನದ ಮಹತ್ವವನ್ನು ಸಾರಲು ಪದ್ಮಶ್ರೀ ಹರೇಕಳ ಹಾಜಬ್ಬ, ಚಲನಚಿತ್ರ ನಟ ಹಾಗೂ ನಿರ್ದೇಶಕ ರಾಜ್‌ ಬಿ. ಶೆಟ್ಟಿ, ನಟಿ ಹಾಗೂ ನಿರೂಪಕಿ ಅನುಶ್ರೀ ಎಸ್‌., ಯಕ್ಷಗಾನ ಭಾಗವತ ಪಟ್ಲ ಸತೀಶ್‌ ಶೆಟ್ಟಿ, ಆಳ್ವಾಸ್‌ ಕಾಲೇಜಿನ ಮಕ್ಕಳ ಕಲ್ಯಾಣ ಅಧಿಕಾರಿ ಸಬಿತಾ ಮೊನಿಸ್‌ ಹಾಗೂ ನಟಿ ಸಂಗೀತಾ ಶೃಂಗೇರಿ ಅವರನ್ನು ಮತದಾನ ಜಾಗೃತಿಯ ಐಕಾನ್‌ಗಳನ್ನಾಗಿ ಗುರುತಿಸಲಾಗಿದೆ.

ಒಂದು ಮೊಟ್ಟೆಯ ಕಥೆಯ ಚಿತ್ರದ ಮೂಲಕ ರಾಜ್‌ ಬಿ. ಶೆಟ್ಟಿ ಖ್ಯಾತಿ ಪಡೆದಿದ್ದರೆ, ಕಿತ್ತಳೆ ಹಣ್ಣು ಮಾರಿ ತಮ್ಮ ಊರಿನಲ್ಲಿ ಶಾಲೆ ನಿರ್ಮಿಸಿ ಮಾದರಿಯಾಗಿರುವ ಹರೇಕಳ ಹಾಜಬ್ಬ ಪ್ರತಿಷ್ಠಿತ ಪದ್ಮಶ್ರೀ ಮೂಲಕ ದೇಶದ ಗಮನ ಸೆಳೆದವರು. ಅವಿಭಜಿತ ದ.ಕ. ಜಿಲ್ಲೆಯ ಪ್ರಮುಖ ಕಲೆಯಾದ ಯಕ್ಷಗಾನದಲ್ಲಿ ಮೇರುಸ್ತರದ ಭಾಗವತರಾಗಿ ಗುರುತಿಸಿಕೊಂಡಿರುವವರು ಸತೀಶ್‌ ಪಟ್ಲ. ಬೆಳ್ತಂಗಡಿಯ ಗರ್ಡಾಡಿಯವರಾದ ಸಬಿತಾ ಮೊನಿಸ್‌ ತಮ್ಮ ಕಾಲುಗಳಲ್ಲಿಯೇ ಪರೀಕ್ಷೆ ಬರೆದು ಸ್ನಾತಕೋತ್ತರ ಪದವಿ ಪೂರೈಸಿದವರು.

36ರ ಹರೆಯದ ಸಬಿತಾ ಅವರು ತಮ್ಮ ಕಾಲುಗಳ ಮೂಲಕವೇ ಮತದಾನದ ಹಕ್ಕನ್ನು ಚಲಾಯಿಸುತ್ತಿರುವ ಜಿಲ್ಲೆಯ ಪ್ರಮುಖ ಐಕಾನ್‌. ಅನುಶ್ರೀ ನಟನೆಯ ಜತೆಯಲ್ಲೇ ದೃಶ್ಯ ಮಾಧ್ಯಮದಲ್ಲಿ ನಿರೂಪಕಿಯಾಗಿ ಗುರುತಿಸಿಕೊಂಡಿದ್ದರೆ, ಸಂಗೀತಾ ಅವರು ಸೌಂದರ್ಯ ಸ್ಪರ್ಧೆ, ನಟಿಯಾಗಿ ಮಾತ್ರವಲ್ಲದೆ, ಕ್ರೀಡಾ ಪಟುವಾಗಿಯೂ ಗುರುತಿಸಿಕೊಂಡವರು. ಇವರೆಲ್ಲರೂ ತಮ್ಮ ಪ್ರತಿಭೆ, ತಮ್ಮದೇ ಆದ ಮೇರು ವ್ಯಕ್ತಿತ್ವದ ಮೂಲಕ ಜಿಲ್ಲೆಯ ಐಕಾನ್‌ಗಳಾಗಿದ್ದು, ಇವರ ಮೂಲಕ
ಮತದಾನದ ಮಹತ್ವ ಸಾರುವುದು ಸ್ವೀಪ್‌ನ ತಂತ್ರವಾಗಿದೆ. ಮತದಾನದ ಮಹತ್ವವನ್ನು ಒಳಗೊಂಡ ಇವರ ಮಾತುಗಳು ವೀಡಿಯೋ, ಆಡಿಯೋ ಸಂದೇಶಗಳ ಮೂಲಕ ಸಾಮಾಜಿಕ ಜಾಲತಾಣಗಳು ಹಾಗೂ ಜನನಿಬಿಡ ಪ್ರದೇಶಗಳಲ್ಲಿ ಪ್ರಸಾರಮಾಡುವ ನಿಟ್ಟಿನಲ್ಲಿ ಪ್ರಕ್ರಿಯೆಗಳು ನಡೆಯುತ್ತಿದ್ದು, ಈ ನಿಟ್ಟಿನಲ್ಲಿ ಜಿಲ್ಲಾ ಸ್ವೀಪ್‌ ತಂಡ ಕಾರ್ಯಪ್ರವೃತ್ತವಾಗಿದೆ.

ಜಿಲ್ಲೆಯ ಪ್ರಮುಖ ಐಕಾನ್‌ಗಳ ಮೂಲಕ ಮತದಾನದ ಸಂದೇಶ ನೀಡಲು ರೂಪು ರೇಷೆಗಳು ಸಿದ್ಧಗೊಳ್ಳುತ್ತಿವೆ. ಗ್ರಾಮಾಂತರ ಪ್ರದೇಶಗಳಲ್ಲಿ ಮಾತ್ರವಲ್ಲದೆ, ಮತದಾನದ ದೂರ ಉಳಿಯುವ ಯುವ ಹಾಗೂ ನಗರದ ಮತದಾರನ್ನು ಮತಗಟ್ಟೆಗಳಿಗೆ ಸೆಳೆಯುವ ಉದ್ದೇಶದಿಂದ ಸ್ವೀಪ್‌ ಹಮ್ಮಿ ಕೊಂಡಿರುವ ಹಲವು ಕಾರ್ಯಕ್ರಮ ಗಳಲ್ಲಿ ಇದು ಒಂದಾಗಿದೆ.
ಡಾ| ಕುಮಾರ, ದ.ಕ. ಜಿಲ್ಲಾ ಸ್ವೀಪ್‌ ಮುಖ್ಯಸ್ಥ
ಹಾಗೂ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ

 

ಟಾಪ್ ನ್ಯೂಸ್

20-one-plus

One Plusನ ಹೊಸ ಫೋನ್ ನಾರ್ಡ್ ಸಿಇ4: ಏನೇನಿದೆ ಇದರಲ್ಲಿ?

16-

Chikkaballapur: ಕೃಷಿ ಹೊಂಡದಲ್ಲಿ ಈಜಲು ಹೋಗಿ ಇಬ್ಬರು ವಿದ್ಯಾರ್ಥಿಗಳು ಸಾವು

13

Gangolli: ಮಹಿಳೆಗೆ ಬೈಕ್‌ ಢಿಕ್ಕಿ; ಗಾಯ

HDK ಹೇಳುತ್ತಿದ್ದದ್ದು ಪ್ರಜ್ವಲ್‌ ಪೆನ್‌ಡ್ರೈವ್‌ ಇರಬೇಕು: ಜಮೀರ್‌

HDK ಹೇಳುತ್ತಿದ್ದದ್ದು ಪ್ರಜ್ವಲ್‌ ಪೆನ್‌ಡ್ರೈವ್‌ ಇರಬೇಕು: ಜಮೀರ್‌

15-hunsur

Hunsur: ಕುಡಿತದ ಚಟಕ್ಕೆ ಯುವಕ ಬಲಿ

Koppala; ಸಿಎಂ ಸಿದ್ದರಾಮಯ್ಯ ಎದುರೇ ಸ್ಪೋಟಗೊಂಡ ಗಂಗಾವತಿ ಕಾಂಗ್ರೆಸ್ ಬಣ ಬಡಿದಾಟ

Koppala; ಸಿಎಂ ಸಿದ್ದರಾಮಯ್ಯ ಎದುರೇ ಸ್ಪೋಟಗೊಂಡ ಗಂಗಾವತಿ ಕಾಂಗ್ರೆಸ್ ಬಣ ಬಡಿದಾಟ

12

Karkala: ಹಿಮ್ಮುಖ ಚಲಿಸಿದ ಟಿಪ್ಪರ್‌; ಸ್ಕೂಟರ್‌ ಜಖಂ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mangaluru ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಿನ್ನು ಮೌನ! ಇಲ್ಲಿದೆ ಕಾರಣ

Mangaluru ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಿನ್ನು ಮೌನ! ಇಲ್ಲಿದೆ ಕಾರಣ

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು

Ullal: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆಗೆ ಶರಣು

Ullal: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆಗೆ ಶರಣು

“ಕೃಷಿ ರಕ್ಷಣೆಗಾಗಿ ಆಯುಧ ಹಿಂಪಡೆಯಿರಿ’: ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌

“ಕೃಷಿ ರಕ್ಷಣೆಗಾಗಿ ಆಯುಧ ಹಿಂಪಡೆಯಿರಿ’: ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌

Dakshina Kannada ಚೆಕ್‌ಪೋಸ್ಟ್‌ ಕಾರ್ಯ ನಿರ್ವಹಣೆಗೆ ಡಿಸಿ ಸೂಚನೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

20-one-plus

One Plusನ ಹೊಸ ಫೋನ್ ನಾರ್ಡ್ ಸಿಇ4: ಏನೇನಿದೆ ಇದರಲ್ಲಿ?

16-

Chikkaballapur: ಕೃಷಿ ಹೊಂಡದಲ್ಲಿ ಈಜಲು ಹೋಗಿ ಇಬ್ಬರು ವಿದ್ಯಾರ್ಥಿಗಳು ಸಾವು

13

Gangolli: ಮಹಿಳೆಗೆ ಬೈಕ್‌ ಢಿಕ್ಕಿ; ಗಾಯ

HDK ಹೇಳುತ್ತಿದ್ದದ್ದು ಪ್ರಜ್ವಲ್‌ ಪೆನ್‌ಡ್ರೈವ್‌ ಇರಬೇಕು: ಜಮೀರ್‌

HDK ಹೇಳುತ್ತಿದ್ದದ್ದು ಪ್ರಜ್ವಲ್‌ ಪೆನ್‌ಡ್ರೈವ್‌ ಇರಬೇಕು: ಜಮೀರ್‌

15-hunsur

Hunsur: ಕುಡಿತದ ಚಟಕ್ಕೆ ಯುವಕ ಬಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.