Congress ಗತಕಾಲದ ಅಧಿಕಾರದ ಮದ ಇನ್ನೂ ಹೋದಂತಿಲ್ಲ: ಹುಬ್ಬಳ್ಳಿಯಲ್ಲಿ CM Bommai
ಹತಾಶೆಯಿಂದ ಏನೇನೋ ಹೇಳಿಕೆ ನೀಡುತ್ತಿದ್ದಾರೆ....
Team Udayavani, Apr 28, 2023, 10:12 AM IST
ಹುಬ್ಬಳ್ಳಿ: ಕಾಂಗ್ರೆಸ್ ಗೆ ಗತಕಾಲದ ಅಧಿಕಾರದ ಮದ ಇನ್ನೂ ಹೋದಂತಿಲ್ಲ . ಜನರನ್ನು ಗುಲಾಮರಂತೆ ಕಂಡ ಕಾಂಗ್ರೆಸ್ ನಾಯಕರು ಅದೇ ಅಮಲಿನಲ್ಲಿ ಕೀಳುಮಟ್ಟದ ಪದ ಪ್ರಯೋಗಕ್ಕೆ ಮುಂದಾಗಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಕ್ರೋಶ ವ್ಯಕ್ತಪಡಿಸಿದರು.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಏನು ಮಾತನಾಡುತ್ತದ್ದೇವೆ ಎಂಬ ಸಣ್ಣ ಅರಿವಿಲ್ಲದೆ ಹೇಳಿಕೆ ನಿಡುತ್ತಿದ್ದಾರೆ. ಮಲ್ಲಿಕಾರ್ಜುನ ಖರ್ಗೆ, ಸಿದ್ಧರಾಮಯ್ಯನವರು ಸುಮಾರು 50 ವರ್ಷಗಳವರೆಗೆ ಸಾರ್ವಜನಿಕ ಜೀವನದಲ್ಲಿದ್ದವರು ಸಹ ಕೀಳುಮಟ್ಟದ ಪದಪ್ರಯೋಗಕ್ಕೆ ಮುಂದಾಗಿರುವುದು ಅವರಿಗೆ ಶೋಭೆ ತರದು.ಮೋದಿಯವರನ್ನು ಕಾಂಗ್ರೆಸ್ ನವರು ಹಿಂದೆ ಸಾವಿನ ವ್ಯಾಪಾರಿ, ಅವರ ಸಮಾಧಿ ಹುಡುಕುತ್ತೇವೆ ಎಂದಿದ್ದರು, ಇದೀಗ ವಿಷದ ಹಾವು ಎಂದಿದ್ದಾರೆ. ಮೋದಿಯವರನ್ನು ಅವರು ಕೀಳು ಶಬ್ದಗಳಲ್ಲಿ ಟೀಕಿಸಿದಾಗಲೆಲ್ಲ ಮೋದಿಯವರ ಜನಪ್ರಿಯತೆ ಹೆಚ್ಚುತ್ತಲೇ ಸಾಗಿದೆ. ಈ ಬಾರಿಯೂ ಜನರು ಕಾಂಗ್ರೆಸ್ ಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.
ವಿಧಾನಸಭೆ ವಿಪಕ್ಷ ನಾಯಕ ಸಿದ್ಧರಾಮಯ್ಯ ತಮ್ಮ ವಿರುದ್ಧ ವೈಯಕ್ತಿಕ ಟೀಕೆಗಿಳಿದ ಬಗ್ಗೆ ಪ್ರತಿಕ್ರಿಸಿದ ಸಿಎಂ. ಯಾವುದನ್ನು ಅವರು ತಮ್ಮ ಮತಬ್ಯಾಂಕ್ ಅಂದುಕೊಂಡಿದ್ದರೋ ಅದೇ ಛಿದ್ರಗೊಂಡಿದೆ. ಆ ಹತಾಶೆ ಯಿಂದ ನನ್ನ ವಿರುದ್ದ ವೈಯಕ್ತಿಕ ಟೀಕೆಗಿಳಿದಿದ್ದಾರೆ.
ಮೀಸಲು ಹೆಚ್ಚಳ, ಒಳಮೀಸಲಾತಿ ಜಾರಿಗೆ ಮುಂದಾದ ನನ್ನ ಕ್ರಮ ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ ವರ್ಗಗಳ ಮತಗಳು ಬಿಜೆಪಿ ಕಡೆವಾಲಿದ್ದು, ಕಾಂಗ್ರೆಸ್ ಮತಬ್ಯಾಂಕ್ ಛಿದ್ರಗೊಂಡಿದ್ದರ ನೋವು ಸಿದ್ಧರಾಮಯ್ಯ ಅವರನ್ನು ಕಾಡುತ್ತಿದೆ.ಜತಗೆ ಸಿದ್ಧರಾಮಯ್ಯನವರಿಗೆ ಡಿ.ಕೆ.ಶಿವಕುಮಾರ್ ವಿರುದ್ಧ ಪೈಪೋಟಿ ನಡೆಸಬೇಕಾಗಿದೆ.ಅವರಿಗಿಂತ ನಾನು ಮೇಲು ಎಂಬುದನ್ನು ತೋರಿಸಬೇಕಾಗಿದೆ. ಸಿದ್ಧರಾಮಯ್ಯ ವಿರುದ್ಧ 8 ಸಾವಿರ ಕೋಟಿ ರೂ.ಗಳ ಬಿಡಿಎ ಹಗರಣವಿದೆ. ವರಣಾದಲ್ಲಿ ಸೋಲಿನ ಭೀತಿಯೂ ಸಿದ್ಧರಾಮಯ್ಯನವರನ್ನು ಕಾಡುತ್ತಿದ್ದು ಅದಕ್ಕಾಗಿ ಹತಾಶೆಯಿಂದ ಏನೇನೋ ಹೇಳಿಕೆ ನೀಡುತ್ತಿದ್ದಾರೆ ಎಂದು ಸಿಎಂ ಆರೋಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli; ಜಾನುವಾರು ಮೇಯಿಸಲು ಹೋಗಿದ್ದ ಯುವಕ ಸಿಡಿಲು ಬಡಿದು ಸಾವು
CBI ಗೆ ಕೊಡುವ ಅಗತ್ಯವಿಲ್ಲ; ಅಂಜಲಿ ಪ್ರಕರಣ ಕೂಡ ಸಿಐಡಿಗೆ:ಡಾ.ಜಿ.ಪರಮೇಶ್ವರ್
Hubballi; ನೇಹಾ, ಅಂಜಲಿ ನಿವಾಸಗಳಿಗೆ ಡಾ.ಜಿ.ಪರಮೇಶ್ವರ್ ಭೇಟಿ
Hubli; ಅಂಜಲಿ ಕುಟುಂಬಸ್ಥರಿಗೆ ಸರ್ಕಾರ ಪರಿಹಾರ ಘೋಷಿಸಬೇಕು: ಶಂಕರ ಪಾಟೀಲ್ ಮುನೇನಕೊಪ್ಪ
Hubli: ರೌಡಿಶೀಟರ್ ಮೇಲೆ ಗ್ಯಾಂಗ್ ನಿಂದ ಹಲ್ಲೆ; ಪೊಲೀಸರಿಗೆ ಅವಾಜ್ ಹಾಕಿದ ರೌಡಿ