ಮಿದುಳು ಕ್ಯಾನ್ಸರ್ ಚಿಕಿತ್ಸೆ ಭಾರತೀಯ ವೈದ್ಯೆತಂಡ ಕೊಡುಗೆ
Team Udayavani, May 20, 2023, 7:26 AM IST
ವಾಷಿಂಗ್ಟನ್: ಮಿದುಳಿನ ಕ್ಯಾನ್ಸರ್ಗೆ ಗುರಿಯಾಗಿರುವ ರೋಗಿಗಳಿಗೆ ನೀಡುವ ಚಿಕಿತ್ಸೆಗೆ ಬಹುದೊಡ್ಡ ಸಹಾಯ ಒದಗಿಸುವಂಥ ಆವಿಷ್ಕಾರವನ್ನು ಭಾರತ ಮೂಲದ ವೈದ್ಯೆ ನೇತೃತ್ವದ ಅಮೆರಿಕ ವೈದ್ಯರ ತಂಡ ಪತ್ತೆಹಚ್ಚಿದ್ದು, ಈ ಆವಿಷ್ಕಾರ ರೋಗಿಗಳ ಜೀವ ಉಳಿಸುವಲ್ಲಿ ಸಹಾಯವಾಗಲಿದೆ ಎಂದು “ನೇಚರ್” ಜರ್ನಲ್ನಲ್ಲಿ ಪ್ರಕಟಿಸಲಾಗಿದೆ.
ವರದಿಗಳ ಪ್ರಕಾರ ಭಾರತದ ಕೇರಳ ಮೂಲದ ವೈದ್ಯೆಯಾದ ಸರಿತಾ ಕೃಷ್ಣಾ ಅವರ ನೇತೃತ್ವದಲ್ಲಿ ಸ್ಯಾನ್ಫ್ಯಾನ್ಸಿಸ್ಕೋ ಮೆಡಿಕಲ್ ಸೆಂಟರ್ ಹಾಗೂ ಯೂನಿವರ್ಸಿಟಿ ಆಫ್ ಕ್ಯಾಲಿಫೋರ್ನಿಯಾದ ವಿಜ್ಞಾನಿಗಳು ಸಂಶೋಧನೆಯೊಂದನ್ನು ಕೈಗೊಂಡಿದ್ದಾರೆ. ಆ ಪ್ರಕಾರ ಕ್ಯಾನ್ಸರ್ಗೆ ಗುರಿಯಾಗಿರುವ ಮಿದುಳಿನ ಜೀವಕೋಶಗಳು ಇತರೆ ಆರೋಗ್ಯಕರ ಜೀವಕೋಶಗಳೊಂದಿಗೆ ಸಂಪರ್ಕಸಾಧಿಸಬಲ್ಲವು. ಈ ರೀತಿ ಸಂಪರ್ಕ ಸಾಧಿಸಿದರೆ ರೋಗಿಯ ಮಿದುಳಿನ ಕ್ಯಾನ್ಸರ್ ಉಲ್ಬಣಗೊಳ್ಳುವ ಜತೆಗೆ ಆತನ ಅರಿವಿನ ಶಕ್ತಿ ವೇಗವಾಗಿ ನಷ್ಟವಾಗುವುದಲ್ಲದೇ ಬೇಗ ಸಾವಿನ ಅಂಚಿಗೆ ನೂಕಬಲ್ಲದಂತೆ.
ಆದರೆ, ಈ ಕ್ಯಾನ್ಸರ್ಪೀಡಿತ ಹಾಗೂ ಆರೋಗ್ಯಕರ ಜೀವಕೋಶಗಳ ಸಂಪರ್ಕವನ್ನು ಸಾಮಾನ್ಯವಾಗಿ ಬಳಕೆಮಾಡುವ ಆ್ಯಂಟಿ-ಸೀಜರ್ ಡ್ರಗ್ ಗುಣಪಡಿಸಬಲ್ಲದು ಎಂದು ಸಂಶೋಧಕರ ತಂಡ ಪತ್ತೆ ಹಚ್ಚಿದೆ. ಈ ಚಿಕಿತ್ಸೆ ವಿಧಾನವು ಮಿದುಳಿನ ಕ್ಯಾನ್ಸರ್ನಲ್ಲಿ ಅತೀ ಅಪಾಯಕಾರಿ ಎನ್ನಲಾಗುವ ಗ್ಲಿಯೋಬ್ಲಾಸ್ಟೋಮಾ ರೋಗಕ್ಕೆ ತುತ್ತಾದ ರೋಗಿಗಳ ಜೀವಿತಾವಧಿ ವೃದ್ಧಿಸಲು ಸಹಾಯವಾಗಲಿದೆ ಎನ್ನಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Thai model: ಒಂದು ವರ್ಷದಿಂದ ನಾಪತ್ತೆಯಾಗಿದ್ದ ಥಾಯ್ ಮಾಡೆಲ್ ಶವ ಬಹ್ರೈನ್ ನಲ್ಲಿ ಪತ್ತೆ!
Report; 2023ರಲ್ಲಿ 28.2 ಕೋಟಿ ಜನರಿಗೆ ತೀವ್ರ ಆಹಾರ ಬಿಕ್ಕಟ್ಟು
India VISA ನೀತಿ ಬಗ್ಗೆ ಅಲ್ಲಿನ ಸರಕಾರ ಮಾತನಾಡಲಿ: ಅಮೆರಿಕ
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ