Viral Video: ಬಿಟ್ಟೋಗ್ಬೇಡಾ…ಮಾವುತ ಬಿಟ್ಟು ಹೋಗದಂತೆ ಪುಟ್ಟ ಮಗುವಿನಂತೆ ರಚ್ಚೆ ಹಿಡಿದ ಆನೆ
ಮಾವುತ ಹೇಗಾದರೂ ಮಾಡಿ ಹೊರಡಬೇಕೆಂದು ಬೈಕ್ ಏರಿ ಕುಳಿತುಕೊಳ್ಳುತ್ತಾನೆ.
Team Udayavani, Sep 29, 2023, 3:52 PM IST
ನವದೆಹಲಿ: ಪ್ರಾಣಿಗಳು ಮಾನವನ ಜತೆ ಉತ್ತಮ ಬಾಂಧವ್ಯ ಹೊಂದಿರುವ ಘಟನೆ ಬಗ್ಗೆ ಓದಿರುತ್ತೀರಿ. ಅದೇ ರೀತಿ ತನ್ನ ಪ್ರೀತಿಯ ಮಾವುತ ಮತ್ತು ಆನೆಯ ನಡುವಿನ ಬಾಂಧವ್ಯದ ಕುರಿತು ಸೆರೆಯಾದ ಈ ವೈರಲ್ ವಿಡಿಯೋದ ಎಲ್ಲರ ಹೃದಯವನ್ನು ಗೆದ್ದಿದೆ.
ಇದನ್ನೂ ಓದಿ:CBFC ವಿರುದ್ಧ ನಟ ವಿಶಾಲ್ ಲಂಚ ಆರೋಪ: ತನಿಖೆಗೆ I&B ಸಚಿವಾಲಯ ಆದೇಶ
ವೈರಲ್ ವಿಡಿಯೋದಲ್ಲಿ ಮಾವುತ ಬೈಕ್ ಏರಿ ಹೊರಡಲು ಸಿದ್ಧವಾಗುತ್ತಿದ್ದಂತೆಯೇ ಆನೆ ಓಡಿ ಬಂದು ತನ್ನ ಸೊಂಡಿಲಿನಿಂದ ಆತನನ್ನು ಮುದ್ದಾಡಿ ಬಿಟ್ಟು ಹೋಗದಂತೆ ತಡೆಯುತ್ತದೆ. ಕೊನೆಗೆ ಮಾವುತ ಬೈಕ್ ನಿಂದ ಕೆಳಗಿಳಿದಾಗ ಆನೆ ಮಾವುತನನ್ನು ಸೊಂಡಿಲಿನಿಂದ ಬಿಗಿದಪ್ಪಿಕೊಳ್ಳುತ್ತದೆ. ಮಾವುತ ಕೂಡಾ ಅದನ್ನು ಪ್ರೀತಿಯಿಂದ ಮೈದಡವಿ, ಸಂತೈಸುತ್ತಾನೆ. ಹಿಂದೆ-ಮುಂದೆ ಓಡಾಡಿ ಆನೆ ಸಂತಸ ವ್ಯಕ್ತಪಡಿಸುತ್ತದೆ.
ಏತನ್ಮಧ್ಯೆ ಮಾವುತ ಹೇಗಾದರೂ ಮಾಡಿ ಹೊರಡಬೇಕೆಂದು ಬೈಕ್ ಏರಿ ಕುಳಿತುಕೊಳ್ಳುತ್ತಾನೆ. ತಕ್ಷಣವೇ ಓಡಿಬಂದ ಆನೆ…ಮಾವುತನನ್ನು ತಡೆದು, ಆತನನ್ನು ಬೈಕ್ ನಿಂದ ಹಿಂದಕ್ಕೆ ಸರಿಸುವ ವಿಡಿಯೋ ನಿಜಕ್ಕೂ ಹೃದಯಸ್ಪರ್ಶಿಯಾಗಿದೆ.
ಈ ವಿಡಿಯೋವನ್ನು ಐಆರ್ ಎಎಸ್(Indian Railway accounts service) ಅಧಿಕಾರಿ ಅನಂತ್ ರುಪಾನ್ಗುಡಿ ಅವರು ಎಕ್ಸ್ ನಲ್ಲಿ ಶೇರ್ ಮಾಡಿಕೊಂಡಿದ್ದು, ಇದು ಆನೆ ಮತ್ತು ಮಾವುತನ ನಡುವಿನ ಬಾಂಧವ್ಯ ಎಂದು ಕ್ಯಾಪ್ಶನ್ ನೀಡಿದ್ದರು.
\
The bonding between the elephant and it’s caretaker – it won’t just let him go! ❤️ #elephants #bonding @Gannuuprem pic.twitter.com/AOkTmi7ceJ
— Ananth Rupanagudi (@Ananth_IRAS) September 27, 2023
ವಿಡಿಯೋಕ್ಕೆ ನೂರಾರು ಮಂದಿ ಕಮೆಂಟ್ ವ್ಯಕ್ತಪಡಿಸಿದ್ದಾರೆ. ನೋಡಿ ಆನೆ ಎಷ್ಟು ಸೌಮ್ಯವಾಗಿ ವರ್ತಿಸುತ್ತಿದೆ. ತಾನು ಬಲಿಷ್ಠ ಎಂದು ಗೊತ್ತಿದ್ದರೂ ಕೂಡಾ ಮಾವುತನ ಬಗೆಗಿನ ಅದರ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದು ನೆಟ್ಟಿಗರೊಬ್ಬರು ಅಭಿಪ್ರಾಯವ್ಯಕ್ತಪಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಅಪಘಾತದಿಂದ ತೀವ್ರ ಗಾಯ: ಆಂಬ್ಯುಲೆನ್ಸ್ ಬರುವವರೆಗೆ ಸೆಲ್ಫಿಗೆ ಪೋಸ್ ಕೊಟ್ಟ ಯುವತಿಯರು.!
Cat ರಕ್ಷಣೆಗೆ ಭಾರೀ ಕಾರ್ಯಾಚರಣೆ ; ಕೊನೆಗೆ ಆಗಿದ್ದೆ ಬೇರೆ!: ವೈರಲ್ ವಿಡಿಯೋ ನೋಡಿ
5 ರೂಪಾಯಿ ಕುರ್ಕುರೆ ತಂದುಕೊಡಲಿಲ್ಲ ಎನ್ನುವ ಕಾರಣಕ್ಕೆ ಪತಿಗೆ ಡಿವೋರ್ಸ್ ಕೊಟ್ಟ ಪತ್ನಿ.!
Rahul Gandhi: ಶೀಘ್ರದಲ್ಲೇ ಮದುವೆಯಾಗಲಿದ್ದೇನೆ… ಅಭಿಮಾನಿಯ ಪ್ರಶ್ನೆಗೆ ರಾಹುಲ್ ಉತ್ತರ
Video: ಮತದಾನ ಮಾಡಲು ಸರತಿ ಸಾಲಿನಲ್ಲಿ ನಿಂತಿದ್ದ ಮತದಾರನಿಗೆ ಶಾಸಕನಿಂದ ಕಪಾಳಮೋಕ್ಷ
MUST WATCH
ಹೊಸ ಸೇರ್ಪಡೆ
Ragini Dwivedi; ಸಂಜು ಜೊತೆ ರಾಗಿಣಿ ಡ್ಯಾನ್ಸ್ ; ಮಂಗ್ಲಿ ಹಾಡಿಗೆ ಭರ್ಜರಿ ಸ್ಟೆಪ್
YouTube ನಲ್ಲಿ ಹೊಂದಿಸಿ ಬರೆಯಿರಿ; ಉಚಿತವಾಗಿ ನೋಡಿ, ಇಷ್ಟವಾದರೆ ಕಾಸು ಹಾಕಿ…
ಕಾಂಗ್ರೆಸ್ ಸರ್ಕಾರ ಶಿಕ್ಷಣ ಕ್ಷೇತ್ರವನ್ನು ಹಾಳು ಮಾಡುತ್ತಿದೆ:ವಿ.ಪ. ಸದಸ್ಯ ಎಸ್.ವಿ. ಸಂಕನೂರ
Politics: ರಾಜ್ಯ ಸರ್ಕಾರ ಎಲ್ಲ ರಂಗಗಳಲ್ಲಿ ವಿಫಲ; ವರ್ಷದ ಸಾಧನೆ ಶೂನ್ಯ; ಬೊಮ್ಮಾಯಿ ಟೀಕೆ
ಪಂಚಮಸಾಲಿ ಮೀಸಲಾತಿ ಹೋರಾಟದಲ್ಲಿ ಸರ್ಕಾರದ ಪರ ಮೃದು ಧೋರಣೆ ಇಲ್ಲ: ಮೃತ್ಯುಂಜಯ ಸ್ವಾಮೀಜಿ