Ayodhya ತಲುಪಿದ ಮೊದಲ ರಾಮಸ್ತಂಭ; ಹಂಪಿಯಲ್ಲೂ ಒಂದು ಸ್ತಂಭ ಸ್ಥಾಪನೆ
ರಾಜಸ್ಥಾನದ ಮರಳುಗಲ್ಲಿನಲ್ಲಿ ಕೆತ್ತಲಾಗಿರುವ ಸ್ತಂಭ
Team Udayavani, Oct 3, 2023, 12:33 AM IST
ಲಕ್ನೋ: ಭಗವಾನ್ ಶ್ರೀರಾಮ ವನವಾಸಕ್ಕೆ ತೆರಳಿದ ಮಾರ್ಗಗಳೆಂದು ಗುರುತಿಸಲಾಗಿರುವ “ರಾಮ್ ವನ್ ಗಮನ್ ಮಾರ್ಗ’ಗಳಲ್ಲಿ ಪ್ರತಿಷ್ಠಾಪಿ ಸಲು ಯೋಜಿಸಿರುವ ರಾಮಸ್ತಂಭಗಳ ಪೈಕಿ ಮೊದಲ ಸ್ತಂಭವು ಸೋಮವಾರ ಉತ್ತರ ಪ್ರದೇಶದ ಅಯೋಧ್ಯೆಯ ಕರಸೇವಕಪುರಕ್ಕೆ ತಲುಪಿದೆ.
40 ವರ್ಷಗಳ ಸುದೀರ್ಘ ಸಂಶೋಧನೆಯ ಬಳಿಕ ಅಯೋಧ್ಯೆ ಯಿಂದ – ರಾಮೇಶ್ವರದ ವರೆಗೆ ರಾಮ ಸಂಚರಿಸಿದ 290 ಪ್ರದೇಶಗಳನ್ನು ಗುರುತಿಸಲಾಗಿದ್ದು, ಈ ಎಲ್ಲ ಪ್ರದೇಶಗಳಲ್ಲೂ ಒಂದೊಂದು ರಾಮಸ್ತಂಭವನ್ನು ಪ್ರತಿಷ್ಠಾಪಿಸಲು ಯೋಜಿಸಲಾಗಿದೆ.
ಇದಕ್ಕಾಗಿ ರಾಜಸ್ಥಾನದ ಗುಲಾಬಿ ಮರಳುಗಲ್ಲಿನಲ್ಲಿ ಈ ಸ್ತಂಭಗಳನ್ನು ಕೆತ್ತನೆ ಮಾಡಿ ತರಲಾಗುತ್ತಿದೆ. ಅಂಥ ಮೊದಲನೇ ಸ್ತಂಭ ಕರಸೇವಕಪುರಕ್ಕೆ ಆಗಮಿಸಿದೆ. ಶೀಘ್ರದಲ್ಲೇ ಅಯೋ ಧ್ಯೆಯ ಮಣಿ ಪರ್ವತದಲ್ಲಿ ಈ ಸ್ತಂಭವನ್ನು ಸ್ಥಾಪಿಸಲಾಗುತ್ತದೆ. ಈ ರೀತಿಯ ಸ್ತಂಭಗಳು ಪ್ರತಿಷ್ಠಾಪಿಸ ಲ್ಪಡುವ ಪ್ರದೇಶಗಳಲ್ಲಿ ಕರ್ನಾಟಕದ ಹಂಪಿಯೂ ಸೇರಿರಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
32 ಕೋಟಿ ರೂ. ಅಕ್ರಮ ಹಣ ಪತ್ತೆ: ಜಾರ್ಖಂಡ್ ಸಚಿವ ಆಲಂಗೀರ್ ಸೆರೆ
INDIA ಒಕ್ಕೂಟಕ್ಕೆ ಬಾಹ್ಯ ಬೆಂಬಲವಿದೆ ಆದರೆ ಎಡಪಕ್ಷಗಳು ಹೊರಗಿರಲಿ: ಮಮತಾ
ರಾಜಸ್ಥಾನ ತಾಮ್ರ ಗಣಿಯಲ್ಲಿ ಲಿಫ್ಟ್ ಕುಸಿತ: ಹಿರಿಯ ಅಧಿಕಾರಿ ಮೃತ್ಯು, 15 ಮಂದಿಗೆ ಗಾಯ
ದೇವಸ್ಥಾನಕ್ಕೆ ಹೋಗುತ್ತಿದ್ದ ಮಹಿಳೆಯ 2.73 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿದ ಕಳ್ಳರು
CAA ಅಡಿಯಲ್ಲಿ ಮೊದಲ ಬಾರಿಗೆ 14 ಜನರಿಗೆ ಭಾರತೀಯ ಪೌರತ್ವ ಪ್ರಮಾಣಪತ್ರ ವಿತರಣೆ