Gastroenteritis: ಹೊಟ್ಟೆಗೆ ಜ್ವರ ಬಂದರೆ…!


Team Udayavani, Oct 8, 2023, 8:34 AM IST

2-health

ಗ್ಯಾಸ್ಟ್ರೊಎಂಟರೈಟಿಸ್‌ ಎಂಬುದನ್ನು ಸರಳವಾಗಿ ಹೊಟ್ಟೆಯ ಜ್ವರ ಎಂಬುದಾಗಿಯೂ ಹೇಳಬಹುದು; ಇದು ಕರುಳಿನಲ್ಲಿ ಉಂಟಾಗುವ ವೈರಾಣು ಸೋಂಕಿನಿಂದ ಕಾಣಿಸಿಕೊಳ್ಳುತ್ತದೆ. ಸೋಂಕುಪೀಡಿತ ವ್ಯಕ್ತಿಯ ಸಂಪರ್ಕ ಅಥವಾ ಕಲುಷಿತ ನೀರು, ಆಹಾರದಿಂದ ಇದು ಹರಡುತ್ತದೆ. ಮಳೆಗಾಲದಲ್ಲಿ ಕೊಳಕು ನೀರು ಕುಡಿಯುವ ನೀರಿನ ಜತೆಗೆ ಸೇರಿಕೊಳ್ಳುವುದರಿಂದಾಗಿ ಸಾಮಾನ್ಯವಾಗಿ ಮಳೆಗಾಲದಲ್ಲಿ ಇದರ ಉಪದ್ರವ ಹೆಚ್ಚು.

ಸಾಮಾನ್ಯವಾಗಿ ಸರಿಯಾದ ಆರೈಕೆ ಒದಗಿಸಿದರೆ ಇದು ತಾನಾಗಿಯೇ ವಾಸಿಯಾಗುತ್ತದೆ. ಈ ಕಾಯಿಲೆಯ ಬಹಳ ಸಾಮಾನ್ಯವಾದ ಲಕ್ಷಣ ಎಂದರೆ ರಕ್ತಮಿಶ್ರಿತವಲ್ಲದ, ಆದರೆ ನೀರಾದ ಮಲವಿಸರ್ಜನೆಯ ಜತೆಗೆ ಹೊಟ್ಟೆ ತೊಳೆಸುವಿಕೆ ಮತ್ತು ವಾಂತಿ. ಇವುಗಳ ಜತೆಗೆ ಹೊಟ್ಟೆ ನೋವು ಮತ್ತು ಕರುಳು ಹಿಡಿದುಕೊಳ್ಳುವುದೂ ಇರಬಹುದು. ಕೆಲವರಲ್ಲಿ ಜ್ವರ ಕಾಣಿಸಿಕೊಳ್ಳಬಹುದು. ಆಗೀಗೊಮ್ಮೆ ತಲೆನೋವು ಮತ್ತು ಮೈಕೈ ನೋವು ಕೂಡ ಇರಬಹುದಾಗಿದೆ. ರೋಗಿಗಳು ಸಾಮಾನ್ಯವಾಗಿ ಒಂದೆರಡು ದಿನಗಳಲ್ಲಿ ಚೇತರಿಸಿಕೊಳ್ಳುತ್ತಾರೆ; ಆದರೆ ಕೆಲವೊಮ್ಮೆ ಲಕ್ಷಣಗಳು ಒಂದು ವಾರದವರೆಗೂ ಇರಬಹುದು.

ಆದರೆ ಸಣ್ಣ ಮಕ್ಕಳು ಮತ್ತು ವಯೋವೃದ್ಧರಲ್ಲಿ ಹಾಗೂ ರೋಗ ನಿರೋಧಕ ಶಕ್ತಿಯು ದುರ್ಬಲವಾಗಿರುವವರಲ್ಲಿ ಈ ಹೊಟ್ಟೆಯ ಜ್ವರವು ಅಪಾಯಕಾರಿಯಾಗಿದ್ದು, ಲಕ್ಷಣಗಳು ಕಾಣಿಸಿಕೊಳ್ಳಲಾರಂಭಿಸಿದ ತತ್‌ಕ್ಷಣ ವೈದ್ಯಕೀಯ ಆರೈಕೆಯನ್ನು ಪಡೆದುಕೊಳ್ಳಬೇಕು. ಲಕ್ಷಣಗಳು ತೀವ್ರವಾಗಿದ್ದು, ಸೂಕ್ತವಾದ ಆರೈಕೆಯನ್ನು ಪಡೆಯದೆ ಇದ್ದಲ್ಲಿ ಅದರಿಂದ ಮೂತ್ರಪಿಂಡ ವೈಫ‌ಲ್ಯ, ರಕ್ತದೊತ್ತಡ ಕಡಿಮೆಯಾಗುವಂತಹ ಪ್ರಾಣಾಪಾಯಕಾರಿ ಸಮಸ್ಯೆಗಳು ತಲೆದೋರಬಹುದಾಗಿದೆ. ಮಲದಲ್ಲಿ ರಕ್ತ, ವಾಂತಿಯಾಗುವುದು, ನಿರ್ಜಲೀಕರಣದ ಲಕ್ಷಣಗಳು (ಬಾಯಾರಿಕೆ ಹೆಚ್ಚುವುದು, ಮೂತ್ರ ವಿಸರ್ಜನೆ ಕಡಿಮೆಯಾಗುವುದು, ಗಾಢ ಬಣ್ಣದ ಮೂತ್ರ) ಇತ್ಯಾದಿ ಎಚ್ಚರಿಕೆಯ ಲಕ್ಷಣಗಳು ಕಾಣಿಸಿಕೊಂಡರೆ ಅಥವಾ ಬೇಧಿ ಒಂದೆರಡು ದಿನಗಳಿಗಿಂತ ಹೆಚ್ಚು ಕಾಲ ಇದ್ದಲ್ಲಿ ತತ್‌ಕ್ಷಣ ವೈದ್ಯಕೀಯ ಆರೈಕೆಗೆ ಒಳಗಾಗಬೇಕು.

ಈ ಅನಾರೋಗ್ಯದ ಸಮಯದಲ್ಲಿ ಆರೈಕೆಯ ಪ್ರಧಾನ ವಿಧಾನವೆಂದರೆ ಸಾಕಷ್ಟು ನೀರು ಕುಡಿಯುವ ಮೂಲಕ ದೇಹದಲ್ಲಿ ನೀರಿನಂಶ ಕುಸಿಯದಂತೆ ಕಾಪಾಡಿಕೊಳ್ಳುವುದು ಮತ್ತು ಜೀರ್ಣಗೊಳ್ಳಲು ಸುಲಭವಾದ ಲಘು-ಮೃದು ಆಹಾರ ಸೇವನೆ. ಕಾಫಿ, ಹಾಲು, ಸೋಡಾ ಪಾನೀಯಗಳು, ಮಸಾಲೆ ಹಾಗೂ ಎಣ್ಣೆಪದಾರ್ಥಗಳ ಸೇವನೆ ಕಡಿಮೆ ಮಾಡಿ. ಶಕ್ತಿಯ ತತ್‌ಕ್ಷಣದ ಮೂಲವಾಗಬಲ್ಲ ಹಣ್ಣಿನ ರಸಗಳು, ಪ್ರೊಬಯೋಟಿಕ್ಸ್‌ ಮೂಲವಾಗಿರುವ ಮಜ್ಜಿಗೆಯನ್ನು ಸೇವಿಸಬಹುದು. ಚೇತರಿಸಿಕೊಳ್ಳುವ ತನಕ ಸಾಕಷ್ಟು ವಿಶ್ರಾಂತಿ ಪಡೆಯಿರಿ ಮತ್ತು ದೇಹ ದಣಿಯುವಂತಹ, ದೇಹ ದಂಡಿಸುವ ಕೆಲಸಗಳಲ್ಲಿ ತೊಡಗಬೇಡಿ.

ರೋಗ ಬಂದ ಬಳಿಕ ಚಿಕಿತ್ಸೆ ಪಡೆದುಕೊಳ್ಳುವುದಕ್ಕಿಂತ ರೋಗ ಬಾರದಂತೆ ತಡೆಯುವುದೇ ಅತ್ಯಂತ ಸೂಕ್ತ. ಹಾಗಾಗಿ ಊಟ-ಉಪಾಹಾರ ಸೇವಿಸುವುದಕ್ಕೆ ಮುನ್ನ ಕೈಗಳನ್ನು ಚೆನ್ನಾಗಿ ತೊಳೆದುಕೊಳ್ಳುವುದು, ಕುದಿಸಿ ಆರಿಸಿದ ನೀರನ್ನೇ ಕುಡಿಯುವುದು, ಆಹಾರವನ್ನು ಸರಿಯಾಗಿ ಬೇಯಿಸಿ, ಕುದಿಸಿ ಸೇವಿಸುವಂತಹ ವೈಯಕ್ತಿಕ ನೈರ್ಮಲ್ಯ ಕ್ರಮಗಳನ್ನು ಪಾಲಿಸುವುದು ಉತ್ತಮ.

-ಡಾ| ಅನುರಾಗ್‌ ಶೆಟ್ಟಿ,

ಮೆಡಿಕಲ್‌ ಗ್ಯಾಸ್ಟ್ರೊಎಂಟರಾಲಜಿ,

ಕೆಎಂಸಿ ಆಸ್ಪತ್ರೆ, ಡಾ| ಬಿ.ಆರ್‌. ಅಂಬೇಡ್ಕರ್‌ ವೃತ್ತ, ಮಂಗಳೂರು

(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಗ್ಯಾಸ್ಟ್ರೊಎಂಟರಾಲಜಿ ವಿಭಾಗ, ಕೆಎಂಸಿ ಆಸ್ಪತ್ರೆ, ಮಂಗಳೂರು)

ಟಾಪ್ ನ್ಯೂಸ್

1-wqeqwewqe

IPL;ಇನ್ನು ಪ್ಲೇ ಆಫ್ ಪೈಪೋಟಿ ತೀವ್ರ: ರಾಜಸ್ಥಾನ್ ವಿರುದ್ಧ ಚೆನ್ನೈಗೆ ಜಯ

Heavy Rain ಕಾಫಿನಾಡಿನಲ್ಲಿ ವರುಣಾರ್ಭಟಕ್ಕೆ ಮೂರು ಬಲಿ; ಮೂವರಿಗೆ ಗಂಭೀರ ಗಾಯ

Heavy Rain ಕಾಫಿನಾಡಿನಲ್ಲಿ ವರುಣಾರ್ಭಟಕ್ಕೆ 3ನೇ ಬಲಿ; ಮೂವರಿಗೆ ಗಂಭೀರ ಗಾಯ

Sagara ಅಡಿಕೆ ಕಳ್ಳತನ; ಹಳ್ಳಿಗಳಲ್ಲಿ ಗಸ್ತು ಹೆಚ್ಚಿಸಲು ಮನವಿ

Sagara ಅಡಿಕೆ ಕಳ್ಳತನ; ಹಳ್ಳಿಗಳಲ್ಲಿ ಗಸ್ತು ಹೆಚ್ಚಿಸಲು ಮನವಿ

18

Delhi: ದಿಲ್ಲಿಯ 2 ಆಸ್ಪತ್ರೆಗಳಿಗೆ ಬಾಂಬ್ ಬೆದರಿಕೆ ಇ-ಮೇಲ್: ಮುಂದುವರೆದ ಶೋಧ

17

Baratang‌ Island: ಬಾರಾತಂಗ್‌ ಎಂಬ ಬೆರಗು

Chikmagalur: ಒಂಟಿ ಸಲಗ ಸಾವು; ವಿದ್ಯುತ್ ಹರಿಸಿ ಕೊಂದ ಆರೋಪ

Chikmagalur: ಒಂಟಿ ಸಲಗ ಸಾವು; ವಿದ್ಯುತ್ ಹರಿಸಿ ಕೊಂದ ಆರೋಪ

15

Crime: ರಾಡ್‌ನಿಂದ ಹಲ್ಲೆ ಮಾಡಿ ಪತ್ನಿಯ ಬರ್ಬರ ಹತ್ಯೆ; ಆರೋಪಿ ಪತಿ ಪರಾರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7-hand-hygien-day

World Hand Hygiene Day: ಸ್ವಚ್ಛ ಕೈಗಳ ಶಕ್ತಿ: ಕೈಗಳ ನೈರ್ಮಲ್ಯಕ್ಕೆ ಮಾರ್ಗದರ್ಶಿ

6-health

Health: ಗೌಟ್‌: ಹಾಗೆಂದರೇನು? ಕಾರಣ ಏನು? ನಿಯಂತ್ರಣ ಹೇಗೆ?

5-asthama

Asthma ಕುರಿತಾದ ಶಿಕ್ಷಣದಿಂದ ಸಶಕ್ತೀಕರಣ; ಜಾಗತಿಕ ಅಸ್ತಮಾ ದಿನ 2024: ಮೇ 7

7-knee

Knee: ಮೊಣಗಂಟು ಸಮಸ್ಯೆ: ನಿಮ್ಮ ರೋಗಿಗಳಿಗೆ ಅರ್ಥ ಮಾಡಿಕೊಳ್ಳಲು ಸಹಾಯ ಮಾಡುವುದು ಹೇಗೆ?

6-Fibromyalgia

Fibromyalgia: ಫೈಬ್ರೊಮಯಾಲ್ಜಿಯಾ ಜತೆಗೆ ಜೀವನ

MUST WATCH

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

ಹೊಸ ಸೇರ್ಪಡೆ

1-wqeqwewqe

IPL;ಇನ್ನು ಪ್ಲೇ ಆಫ್ ಪೈಪೋಟಿ ತೀವ್ರ: ರಾಜಸ್ಥಾನ್ ವಿರುದ್ಧ ಚೆನ್ನೈಗೆ ಜಯ

Heavy Rain ಕಾಫಿನಾಡಿನಲ್ಲಿ ವರುಣಾರ್ಭಟಕ್ಕೆ ಮೂರು ಬಲಿ; ಮೂವರಿಗೆ ಗಂಭೀರ ಗಾಯ

Heavy Rain ಕಾಫಿನಾಡಿನಲ್ಲಿ ವರುಣಾರ್ಭಟಕ್ಕೆ 3ನೇ ಬಲಿ; ಮೂವರಿಗೆ ಗಂಭೀರ ಗಾಯ

Sagara ಅಡಿಕೆ ಕಳ್ಳತನ; ಹಳ್ಳಿಗಳಲ್ಲಿ ಗಸ್ತು ಹೆಚ್ಚಿಸಲು ಮನವಿ

Sagara ಅಡಿಕೆ ಕಳ್ಳತನ; ಹಳ್ಳಿಗಳಲ್ಲಿ ಗಸ್ತು ಹೆಚ್ಚಿಸಲು ಮನವಿ

18

Delhi: ದಿಲ್ಲಿಯ 2 ಆಸ್ಪತ್ರೆಗಳಿಗೆ ಬಾಂಬ್ ಬೆದರಿಕೆ ಇ-ಮೇಲ್: ಮುಂದುವರೆದ ಶೋಧ

17

Baratang‌ Island: ಬಾರಾತಂಗ್‌ ಎಂಬ ಬೆರಗು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.