Kushtagi: 200 ಮೀಟರ್ ಭೂಮಿ ಬಿರುಕು; ಯಾವುದೇ ಕ್ಷಣದಲ್ಲಿ ಒಡೆಯುವ ಸಾದ್ಯತೆ ಇದೆ
Team Udayavani, Nov 19, 2023, 12:32 PM IST
ಕುಷ್ಟಗಿ: ತಾಲೂಕಿನ ಮನ್ನೇರಾಳ ಕೆರೆಯ ಒಡ್ಡು ಪ್ರದೇಶದಲ್ಲಿ 200 ಮೀಟರ್ ಬಿರುಕು ಕಾಣಿಸಿಕೊಂಡಿದ್ದು, ಯಾವುದೇ ಕ್ಷಣದಲ್ಲಿ ಒಡೆಯುವ ಸಾದ್ಯತೆ ಇದೆ ಎಂದು ಜಿ.ಪಂ. ಮಾಜಿ ಸದಸ್ಯ ನೇಮಣ್ಣ ಮೇಲಸಕ್ರಿ ಕಳವಳ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಕುಷ್ಟಗಿ ಹಳೆಯ ಪ್ರವಾಸಿ ಮಂದಿರದಲ್ಲಿ ತುರ್ತು ಸುದ್ದಿಗೋಷ್ಠಿಯಲ್ಲಿ ವಿಷಯ ಪ್ರಸ್ತಾಪಿಸಿದ ಅವರು, 2007 ರಲ್ಲಿ 25 ಎಕರೆ ವಿಸ್ತೀರ್ಣ ಪ್ರದೇಶದಲ್ಲಿ ಸಣ್ಣ ನೀರಾವರಿ ಇಲಾಖೆ ಅಂತರ್ಜಲ ವೃದ್ದಿಗೆ ಜಿನಗು ಕೆರೆ ನಿರ್ಮಿಸಿದೆ. ಕಳದ 2009 ರ ಮಹಾ ಮಳೆಗೆ ಮೊದಲ ಬಾರಿಗೆ ಕೆರೆ ಭರ್ತಿಯಾಗಿತ್ತು.
ಈ ಸಂದರ್ಭದಲ್ಲಿ ಕೆರೆ ಅಲ್ಲಲ್ಲಿ ಬಸಿ ಕಾಣಿಸಿಕೊಂಡಿದ್ದರೂ ಸಣ್ಣ ನೀರಾವರಿ ಇಲಾಖೆ ತಲೆ ಕೆಡಿಸಿಕೊಂಡಿಲ್ಲ. ಕೆಲ ತಿಂಗಳ ಹಿಂದೆ ಕೆರೆ ತುಂಬುವ ಯೋಜನೆಯಲ್ಲಿ ಮನ್ನೇರಾಳ ಕೆರೆಗೆ ಕೃಷ್ಣಾ ನದಿ ನೀರು, ಪೈಪಲೈನ್ ಮೂಲಕ ಹರಿಸಲಾಗಿದೆ.
ಬರಗಾಲದ ಈ ಸಂದರ್ಭದಲ್ಲಿ ಕೆರೆಗೆ ನೀರು ತುಂಬಿಸಿರುವುದು ಅಂತರ್ಜಲ ಸ್ಥಿರತೆಯಿಂದ ರೈತರಿಗೆ ಅನಕೂಲವೇ ಆಗಿದೆ. ಆದರೆ ಸದರಿ ಕೆರೆ ಒಡೆಯುವ ಅಪಾಯವಿದೆ. ಯಾವುದೇ ಕ್ಷಣಗಳಲ್ಲಿ ಒಡೆಯುವ ಸಾದ್ಯತೆಯ ವದಂತಿಗಳು ಉಭಯ ಗ್ರಾಮದ ಗ್ರಾಮಸ್ಥರನ್ನು ನಿದ್ದೆಗೆಡಿಸಿದೆ.
ಕೆಲವು ದಿನಗಳ ಹಿಂದೆ ಕೆರೆಯ ಒಡ್ಡು ಪ್ರದೇಶದಲ್ಲಿ 200 ಮೀಟರ್ ಬಿರುಕು ಕಾಣಿಸಿಕೊಂಡಿದ್ದು ಭಯ ಇನ್ನಷ್ಟು ಜಾಸ್ತಿಯಾಗಿದೆ. ಮನ್ನೇರಾಳ ಹಾಗೂ ಸೇಬಿನಕಟ್ಟಿ ಗ್ರಾಮಗಳಲ್ಲಿ ಆತಂಕ ಮನೆ ಮಾಡಿದ್ದು ಕೆರೆ ಒಡೆದರೆ ಇನ್ನೇನು ಕಾದಿದೆ ಎನ್ನುವ ಆತಂಕದ ಮದ್ಯೆ ಜನ ಬದುಕುವಂತಾಗಿದೆ.
ಮೊದಲೇ ಈ ಕೆರೆ ನಿರ್ಮಾಣ ಗುಣಮಟ್ಟದಿಂದ ಕೂಡಿಲ್ಲ. ಹೀಗಾಗಿ ಕೆರೆ ಭಧ್ರವಾಗಿಲ್ಲ. ಇಂತಹ ಅಭದ್ರ ಕೆರೆಗೆ ಕೆರೆ ಸಾಮಾರ್ಥ್ಯ ಪರೀಕ್ಷಿಸಿಸದೇ ಕೃಷ್ಣಾ ನೀರು ಹರಿಸಿರುವುದು ನೀರಿನ ಒತ್ತಡಕ್ಕೆ ಕೆರೆ ಒಡೆಯುವ ಸಾದ್ಯತೆಗಳಿದ್ದು, ತುರ್ತಾಗಿ ಕೆರೆಯ ಒಡ್ಡು ಪ್ರದೇಶದಲ್ಲಿ ಒಡ್ಡಿನ ತಡೆಗೋಡೆ ನಿರ್ಮಿಸಿ, ಮನ್ನೇರಾಳ, ಸೇಬಿನಕಟ್ಟಿ ಜನ, ಜಾನುವಾರು, ಬೆಳೆ ಹಾನಿ, ಜೀವ ಹಾನಿ, ಭೂಮಿಯ ಫಲವತ್ತತೆ ಆತಂಕ ದೂರ ಮಾಡಬೇಕೆಂದು ನೇಮಣ್ಣ ಮೇಲಸಕ್ರಿ ಆಗ್ರಹಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kushtagi:ಬಹಿರ್ದೆಸೆಗೆ ಕುಳಿತ ಇಬ್ಬರ ಬಲಿ ಪಡೆದ ಶೌಚಾಲಯದ ಗೋಡೆ
Koppal; ಟ್ರ್ಯಾಕ್ಟರ್ ಗೆ ಖಾಸಗಿ ಬಸ್ ಢಿಕ್ಕಿ: ಸ್ಥಳದಲ್ಲೇ ನಾಲ್ವರ ಸಾವು
Prajwal Revanna ಬಂಧನಕ್ಕೆ ಕೇಂದ್ರ ಸರಕಾರದಿಂದ ಅಸಹಕಾರ: ಸಚಿವ ತಂಗಡಗಿ
Kushtagi: ಪಟ್ಟಣದ ಹೊರವಲಯದಲ್ಲಿ ನಿಲ್ಲಿಸಿದ್ದ ಟಿಪ್ಪರ್ ಕಳವು
ಸ್ತ್ರೀ ಶಕ್ತಿ ಗುಂಪಿನ ಸದಸ್ಯೆಯರಿಗೆ ಬ್ಯಾಂಕ್ ಸಿಬ್ಬಂದಿಗಳಿಂದ ಕಿರುಕುಳ, ಪ್ರತಿಭಟನೆ