Rain ಕರಾವಳಿಯ ವಿವಿಧೆಡೆ ಗುಡುಗು ಸಹಿತ ಉತ್ತಮ ಮಳೆ
Team Udayavani, Nov 25, 2023, 11:26 PM IST
ಉಡುಪಿ/ ಕುಂದಾಪುರ/ಮಂಗಳೂರು: ಕರಾವಳಿ ಕೆಲವು ಕಡೆಗಳಲ್ಲಿ ಶನಿವಾರವೂ ಗುಡುಗು-ಸಿಡಿಲು ಸಹಿತ ಮಳೆಯಾಗಿದೆ.
ಉಡುಪಿ, ಮಣಿಪಾಲ, ಮಲ್ಪೆ, ಪರ್ಕಳ, ಕುಂದಾಪುರ ನಗರ, ಕೋಟೇಶ್ವರ, ಬೀಜಾಡಿ, ಗೋಪಾಡಿ, ತೆಕ್ಕಟ್ಟೆ,ಬಸ್ರೂರು, ಬಿದ್ಕಲ್ಕಟ್ಟೆ, ಹಾಲಾಡಿ, ಗೋಳಿಯಂಗಡಿ, ಬೆಳ್ವೆ, ಅಮಾಸೆಬೈಲು, ಸಿದ್ದಾಪುರ, ಹೊಸಂಗಡಿ, ಶಂಕರನಾರಾಯಣ, ತಲ್ಲೂರು, ಹೆಮ್ಮಾಡಿ, ಗಂಗೊಳ್ಳಿ, ತ್ರಾಸಿ ಮತ್ತಿತರ ಕಡೆಗಳಲ್ಲಿ ಭಾರೀ ಮಳೆಯಾಗಿದೆ. ಸಂಜೆ ವೇಳೆ ಸುರಿದ ಮಳೆಯಿಂದಾಗಿ ಕೆಲಸ ಮುಗಿಸಿ ಮನೆಗೆ ತೆರಳಲು ಸಂಕಷ್ಟ ಪಡುವಂತಾಯಿತು.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು, ಉಪ್ಪಿನಂಗಡಿ, ವಿಟ್ಲ, ಬಂದಾರು, ಬೆಳ್ತಂಗಡಿ, ಕಡಿರುದ್ಯಾವರ, ಸಂಪ್ಯ, ಪುತ್ತೂರು, ಬಂಟ್ವಾಳ ತಾಲೂಕಿನ ವಿವಿಧೆಡೆ ಉತ್ತಮ ಮಳೆಯಾಗಿದೆ.
ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆಯಂತೆ ನ. 26ರ ಬೆಳಗ್ಗಿನ ವರೆಗೆ ಎಲ್ಲೋ ಅಲರ್ಟ್ ಘೋಷಿಸಲಾಗಿದೆ.
ಮುಂದಿನ 2 ದಿನಗಳ ಕಾಲ ಸಾಧಾರಣ ಮಳೆ, ಮೋಡದಿಂದ ಕೂಡಿದ ವಾತಾವರಣ ಇರುವ ಸಾಧ್ಯತೆ. ಶನಿವಾರ ಮಂಗಳೂರಿನಲ್ಲಿ 33.6 ಡಿ.ಸೆ. ಗರಿಷ್ಠ ಉಷ್ಣಾಂಶ ಮತ್ತು 24.2 ಡಿ.ಸೆ. ಕನಿಷ್ಠ ಉಷ್ಣಾಂಶ ದಾಖಲಾಗಿ ವಾಡಿಕೆಗಿಂತ ತಲಾ 1 ಡಿ.ಸೆ. ಹೆಚ್ಚು ಇತ್ತು.
ಕೃಷಿಗೆ ಅಡ್ಡಿ
ಕರಾವಳಿಯ ಕೆಲವೆಡೆಗಳಲ್ಲಿ ಇನ್ನೂ ಕೂಡ ಮುಂಗಾರು ಹಂಗಾಮಿನ ಕಟಾವು ಕಾರ್ಯ ಮುಗಿಯದೇ ಇರುವುದರಿಂದ ಮಳೆಯಿಂದಾಗಿ ರೈತರು ತೊಂದರೆ ಅನುಭವಿಸುವಂತಾಗಿದೆ. ಕಟಾವು ಮುಗಿದ ಕಡೆಗಳಲ್ಲಿ ಹಿಂಗಾರು ಹಂಗಾಮಿನಲ್ಲಿ ನೆಲಗಡಲೆ (ಶೇಂಗಾ) ಬೀಜ ಬಿತ್ತನೆಗೆ ಮುಂದಾಗುವ ವೇಳೆಯೇ ಮಳೆ ಬರುತ್ತಿರುವುದು ಸಹ ಅಡ್ಡಿಯಾಗಲಿದೆ. ಬಿತ್ತನೆಗೆ ಒಣ ಭೂಮಿ ಇದ್ದಷ್ಟು ಉತ್ತಮ. ಆದರೆ ಆಗಾಗ್ಗೆ ಬರುತ್ತಿರುವ ಮಳೆ ಯಿಂದಾಗಿ ಗದ್ದೆಗಳಲ್ಲಿ ತೇವಾಂಶ ಇರುವುದರಿಂದ ಬಿತ್ತನೆ ಮತ್ತಷ್ಟು ವಿಳಂಬ ಆಗಬಹುದು ಎನ್ನುವ ಆತಂಕ ರೈತರದ್ದಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ದೊಡ್ಡಣ್ಣಗುಡ್ಡೆ: ಕ್ಷೇತ್ರದಲ್ಲಿ ಬ್ರಹ್ಮಕಲಾಶೋತ್ಸವದ ಪೂರ್ವಭಾವಿ ಕಾರ್ಯಕ್ರಮ ಸಂಪನ್ನ
Sandalwood: ರಿಷಿ ಖುಷಿ!: ಅಕೌಂಟ್ಗೆ ಮತ್ತೊಂದು ಚಿತ್ರ ತ್ತೊ
Raichur: ಗೇಟ್ ಹಾರಿ ಕಳವು ಮಾಡಿದ ಮಹಿಳೆ; ಸಿಸಿ ಕ್ಯಾಮರಾದಲ್ಲಿ ದೃಶ್ಯ ಸೆರೆ
Chitradurga: ಮಳೆಯಿಂದ ವಿದ್ಯುತ್ ಕಡಿತ; ಮೊಬೈಲ್ ಬ್ಯಾಟರಿಯ ಬೆಳಕಿನಲ್ಲೇ ರೋಗಿಗೆ ಚಿಕಿತ್ಸೆ
Shiradi Ghat: ಶಿರಾಡಿ ಘಾಟ್ ನಲ್ಲಿ ಭೀಕರ ಅಪಘಾತ; ಬಂಟ್ವಾಳ ಮೂಲದ ತಾಯಿ ಮಗ ದುರ್ಮರಣ