Bank ಸಾಲದ ನೋಟೀಸ್ ಗೆ ಕಂಗೆಟ್ಟ ಹುಲಿಯಪುರ ರೈತ ಆತ್ಮಹತ್ಯೆ
Team Udayavani, Dec 27, 2023, 10:15 PM IST
ಕುಷ್ಟಗಿ: ಬ್ಯಾಂಕಿನ ಸಾಲದ ನೋಟೀಸ್ ಕಿರುಕುಳಕ್ಕೆ ಮನನೊಂದ ರೈತ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ಅಸ್ವಸ್ಥನಾಗಿದ್ದ ರೈತನೋರ್ವ ಚಿಕಿತ್ಸೆ ಫಲಿಸದೇ ಮೃತಪಟ್ಟಿರುವ ಪ್ರಕರಣ ತಾಲೂಕಿನ ಹುಲಿಯಪುರ ಗ್ರಾಮದಲ್ಲಿ ನಡೆದಿದೆ.
ಹುಲಿಯಪುರ ಗ್ರಾಮದ ರೈತರ ಕಲ್ಲಪ್ಪ ಹನಮಪ್ಪ ಕತಿಗೇರ(42) ಮೃತ ರೈತ ಎಂದು ಗುರುತಿಸಲಾಗಿದೆ. ಹುಲಿಯಪುರ ಸೀಮಾದ ಸ.ನಂ.12 ರಲ್ಲಿ 2 ಎಕರೆ 14 ಗುಂಟೆ ಜಮೀನು ಇದ್ದು, ಬೆಳೆ ಸಾಲವಾಗಿ ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕಿನಲ್ಲಿ 2ಲಕ್ಷ ಸಾಲ ಹಾಗೂ ಎಲ್ & ಟಿ ಗುಂಪಿನಲ್ಲಿ 1.20 ಲಕ್ಷ ರೂ. ಸಾಲ ಮಾಡಿದ್ದ. ಹಿರೇಮನ್ನಾಪೂರ ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕಿನಿಂದ ಕಳೆದ 6 ತಿಂಗಳಲ್ಲಿ ಸಾಲದ ಹಣ ಮರು ಪಾವತಿಗೆ ಮೂರು ನೋಟೀಸ್ ಬಂದಿತ್ತು. ಮನಸ್ಸಿಗೆ ಹಚ್ಚಿಕೊಂಡು ಕುಡಿತ ಆರಂಭಿಸಿದ್ದ. ಸಾಲ ತೀರಿಸುವುದು ಹೇಗೆ? ಚಿಂತೆಯಲ್ಲಿ ರೈತ ಕಲ್ಲಪ್ಪ ಕತಿಗೇರ ಡಿ.24 ರಂದು, ಮನನೊಂದು ಅಲಸಂದಿಗೆ ಸಿಂಪಡಿಸುವ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ಅಸ್ವಸ್ಥನಾಗಿದ್ದ. ನಂತರ ಕಲ್ಲಪ್ಪನನ್ನು ಗಂಗಾವತಿ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಡಿ.27 ರಂದು ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದು ತಾವರಗೇರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸ್ತ್ರೀ ಶಕ್ತಿ ಗುಂಪಿನ ಸದಸ್ಯೆಯರಿಗೆ ಬ್ಯಾಂಕ್ ಸಿಬ್ಬಂದಿಗಳಿಂದ ಕಿರುಕುಳ, ಪ್ರತಿಭಟನೆ
ಕುಕನೂರು: ಸೌಕರ್ಯವಿಲ್ಲದೇ ಹಮಾಲರ ಕಾಲೋನಿ ಅನಾಥ!
3ನೇ ಸೆಮಿಸ್ಟರ್ ಸಮಾಜಶಾಸ್ತ್ರ ಪರೀಕ್ಷೆಗೆ 1ನೇ ಸೆಮಿಸ್ಟರ್ ಪ್ರಶ್ನೆ ಪತ್ರಿಕೆ ವಿತರಣೆ
Gangavathi ಖಾಸಗಿ ಶಾಲೆಗಳಿಂದ ಪ್ರವೇಶ ನೆಪದಲ್ಲಿ ಲಕ್ಷಾಂತರ ರೂ.ವಸೂಲಿ ಖಂಡಿಸಿ ಪ್ರತಿಭಟನೆ
ದೋಟಿಹಾಳ: ಬೆಂಕಿಯಿಂದ ಬಾಣಲೆಗೆ ಬಿದ್ದ ಕುಟುಂಬ; ಸಂತ್ರಸ್ತರ ಅಳಲು