Ayodhya: ರಾಮಮಂದಿರಕ್ಕೆ ಉ.ಪ್ರ.ಸಚಿವರು, ಶಾಸಕರ ಭೇಟಿ
ಸಿಎಂ ಯೋಗಿ, ಡಿಸಿಎಂಗಳು ಹಾಗೂ ಸದನದ ಸ್ಪೀಕರ್ಗಳೂ ಪ್ರವಾಸದಲ್ಲಿ ಭಾಗಿ
Team Udayavani, Feb 12, 2024, 12:15 AM IST
ಲಕ್ನೋ: ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಸರಕಾರದ ಸಚಿವರು ಮತ್ತು 325 ಶಾಸಕರು ರವಿವಾರ ಅಯೋಧ್ಯೆ ರಾಮಮಂದಿರಕ್ಕೆ ತೆರಳಿ, ಬಾಲಕ ರಾಮನ ದರ್ಶನ ಪಡೆದಿದ್ದಾರೆ. ಸಚಿವರು, ಶಾಸಕರು ಬರುವ ಹಾದಿಯಲ್ಲಿ ಅಯೋಧ್ಯೆಯ ಜನರು ಹೂವಿನ ಮಳೆಗರೆವ ಮೂಲಕ ಅದ್ದೂರಿ ಸ್ವಾಗತ ಕೋರಿದ್ದಾರೆ.
ಮಂದಿರಕ್ಕೆ ಭೇಟಿ ನೀಡಿದವರ ಪೈಕಿ ಬಿಜೆಪಿ, ಮಿತ್ರ ಪಕ್ಷಗಳ ಸದಸ್ಯರು ಮಾತ್ರವಲ್ಲದೇ, ಕಾಂಗ್ರೆಸ್, ಬಿಎಸ್ಪಿ, ಎಸ್ಬಿಎಸ್ಪಿ, ಆರ್ಎಲ್ಡಿ ಸದಸ್ಯರೂ ಇದ್ದರು. ಉತ್ತರ ಪ್ರದೇಶ ವಿಧಾನಸಭೆಯ ಸ್ಪೀಕರ್ ಸತೀಶ್ ಮಹಾನಾ ಹಾಗೂ ವಿಧಾನ ಪರಿಷತ್ತಿನ ಅಧ್ಯಕ್ಷ ಕುನ್ವರ್ ಮಾನವೇಂದ್ರ ಸಿಂಗ್ ಕೂಡ ಪ್ರವಾಸದಲ್ಲಿ ಭಾಗಿಯಾಗಿದ್ದರು. ಮಂದಿರ ಭೇಟಿ ಬಳಿಕ 14 ನಿಮಿಷಗಳ ವೀಡಿಯೋವನ್ನು ಸಿಎಂ ಯೋಗಿ ಟ್ವಿಟರ್ನಲ್ಲಿ ಹಂಚಿಕೊಂಡಿದ್ದು, ಅದರಲ್ಲಿ ಎಲ್ಲ ಶಾಸಕರು, ಸಚಿವರು ರಾಮ ಭಜನೆ ಹಾಡುತ್ತಿರುವುದನ್ನು ಕಾಣಬಹುದಾಗಿದೆ.
ಗೈರಾದ್ ಎಸ್ಪಿ ವಿರುದ್ಧ ಕಿಡಿ: ಪ್ರಮುಖ ವಿಪಕ್ಷ ಸಮಾಜವಾದಿ ಪಕ್ಷವು ಮಂದಿರ ಭೇಟಿಗೆ ಸರಕಾರ ನೀಡಿದ್ದ ಆಹ್ವಾನವನ್ನು ತಿರಸ್ಕರಿಸಿತ್ತು. ಈ ಕುರಿತಂತೆ ಡಿಸಿಎಂಗಳಾದ ಮೌರ್ಯ ಮತ್ತು ಪಾಠಕ್ ಕಿಡಿ ಕಾರಿದ್ದು, ಸಮಾಜವಾದಿ ಪಕ್ಷವು ರಾಮ ಭಕ್ತರ ಮೇಲೆ ಗುಂಡು ಹಾರಿಸಿ ಎಂದು ಈ ಹಿಂದೆ ಹೇಳಿತ್ತು. ಇದೀಗ ಮಂದಿರ ದರ್ಶನಕ್ಕೂ ಗೈರಾಗಿದೆ. ಇದೆಲ್ಲ ಅವರ ಓಲೈಕೆ ರಾಜಕಾರಣದ ಭಾಗ ಎಂದಿ ದ್ದಾರೆ. ಈ ನಡುವೆ ಕಾಂಗ್ರೆಸ್ ಶಾಸಕರು ಎಸ್ಪಿ ನಿಲುವನ್ನು ಸಮರ್ಥಿಸಿ, ದೇಗುಲ ಭೇಟಿ ವೈಯಕ್ತಿಕ. ಒತ್ತಾಯಿಸು ವುದು ಸರಿಯಲ್ಲ ಎಂದಿದ್ದಾರೆ.
ಇಂದು ಕೇಜ್ರಿವಾಲ್, ಭಗವಂತ್ ಭೇಟಿ
ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಪಂಜಾಬ್ ಸಿಎಂ ಭಗವಂತ್ ಮಾನ್ ಸೋಮವಾರ ರಾಮ ಮಂದಿರಕ್ಕೆ ಭೇಟಿ ನೀಡಲಿದ್ದಾರೆ. ಕೇಜ್ರಿವಾಲ್ಗೆ ಮಂದಿರ ಉದ್ಘಾಟನೆಗೆ ಆಹ್ವಾನವಿತ್ತು. ಆದರೆ ಸಮಾರಂಭದ ಬಳಿಕ ಕುಟುಂಬ ಸಮೇತ ಭೇಟಿ ನೀಡುವುದಾಗಿ ಹೇಳಿದ್ದರು. ಇದೀಗ ಇಬ್ಬರು ನಾಯಕರು ಕುಟುಂಬದ ಜತೆಗೆ ಭೇಟಿ ನೀಡಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ
ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು
ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ
ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್ಪಟೇಲ್ ಹೇಳಿಕೆ
ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ
ಹೊಸ ಸೇರ್ಪಡೆ
Gundmi Toll Plaza ಸ್ಥಳೀಯರಿಗೆ ಟೋಲ್ ಬರೆ; ಟೋಲ್ಗೆ ಮುತ್ತಿಗೆ; ರಸ್ತೆ ತಡೆ ಪ್ರತಿಭಟನೆ
Election data ಏರಿಕೆ ಬಗ್ಗೆ ಪ್ರತಿಕ್ರಿಯಿಸಿ: ಇಸಿಗೆ ಸುಪ್ರೀಂ
D.K. ಜಿಲ್ಲೆಯಲ್ಲಿ ಗುಡುಗು ಸಹಿತ ಉತ್ತಮ ಮಳೆ; ಇನ್ನೂ ನಾಲ್ಕು ದಿನ “ಎಲ್ಲೋ ಅಲರ್ಟ್’
Malpe ದೋಣಿಗಳು ಢಿಕ್ಕಿಯಾಗಿ ಮುಳುಗಡೆ; ಐವರು ಮೀನುಗಾರರ ರಕ್ಷಣೆ
Chhattisgarh; ನಿಲ್ಲದ ನಕ್ಸಲ್ ಬೇಟೆ: ಓರ್ವನ ಹತ್ಯೆ