Holehonnur :ಬಸ್ ನಿಲ್ದಾಣದಲ್ಲೇ ಮಹಿಳೆಯ 81 ಗ್ರಾಂ ಚಿನ್ನಾಭರಣ ಮಾಯ!!
ನಾವು ಪೊಲೀಸರು ಎಂದು ಇಬ್ಬರಿಂದ ಕೃತ್ಯ... ಪೇಪರ್ ಬಿಚ್ಚಿ ನೋಡಿದಾಗ ಇದ್ದದ್ದು ಕಲ್ಲುಗಳು!!
Team Udayavani, Feb 29, 2024, 8:07 PM IST
ಹೊಳೆಹೊನ್ನೂರು: ಇಲ್ಲಿನ ಬಸ್ ನಿಲ್ದಾಣದಲ್ಲಿ ಖತರ್ನಾಕ್ ಗಳಿಬ್ಬರು ಮಹಿಳೆಯೊಬ್ಬರ 81 ಗ್ರಾಂ ಚಿನ್ನಾಭರಣವನ್ನು ಲೂಟಿ ಮಾಡಿದ ಘಟನೆ ಫೆ.27 ರಂದು ನಡೆದಿದೆ.
ಹಾರಹಳ್ಳಿಯ ಗೃಹಿಣಿ ಕುಸುಮ ಅರಹತೊಳಲು ಗ್ರಾಮಕ್ಕೆ ಹೋಗಲು ಶಿವಮೊಗ್ಗಕ್ಕೆ ಬಂದು ಕೈಮರ ಬಸ್ ನಿಲ್ದಾಣದಲ್ಲಿ ಬಸ್ ನಿಲ್ದಾಣದಲ್ಲಿ ಬಸ್ ಗಾಗಿ ಕಾಯುವಾಗ ಇಬ್ಬರು ಅಪರಿಚಿತರು ಬಂದು ನಾವು ಪೊಲೀಸರು ಎಂದು ಹೇಳಿಕೊಂದು, ಇಲ್ಲಿ ತುಂಬಾ ಕಳ್ಳರು ಇದ್ದಾರೆ. ಇಷ್ಟೊಂದು ಒಡವೆ ಹಾಕಿಕೊಂಡು ಬಂದಿದ್ದೀರಿ. ಒಡವೆಯನ್ನು ಬಿಚ್ಚಿ ಬ್ಯಾಗಲ್ಲಿ ಇಟ್ಟುಕೊಳ್ಳಿ ಎಂದಿದ್ದಾರೆ. ಆಗ ಮಹಿಳೆ ತನ್ನ ಕೊರಳಲ್ಲಿದ್ದ 43 ಗ್ರಾಂ. ಮಾಂಗಲ್ಯಸರ, ಚೈನು ಮತ್ತು ಇನ್ನೊಂದು 38 ಗ್ರಾಂ ನ ಸರ ಬಿಚ್ಚಿ ಕೊಟ್ಟಿದ್ದು, ಅಪರಿಚಿತರು ಈ ಪೇಪರಿಗೆ ಹಾಕಿ ಎಂದು ಮಡಚಿ ದುಂಡುಗೆ ಮಾಡಿ ಕೊಟ್ಟಿದ್ದಾರೆ.
ಅಹರತೊಳಲು ಕಡೆ ಬಸ್ಸನ್ನು ಹತ್ತಿ ಕುಸುಮ ಸರವನ್ನು ಕೊರಳಿಗೆ ಹಾಕಿ ಕೊಳ್ಳೋಣ ಎಂದು ಪೇಪರ್ ಬಿಚ್ಚಿ ನೋಡಿದಾಗ ಅದರಲ್ಲಿ ಬರೀ ಸಣ್ಣ ಸಣ್ಣ ಕಲ್ಲುಗಳು ಇರುವುದು ಕಂಡು ಗಾಬರಿಗೊಂಡಿದ್ದಾರೆ. ಎಲ್ಲಾ ಕಡೆ ನೋಡುವಷ್ಟರಲ್ಲಿ ಅಪರಿಚಿತರು ಪರಾರಿಯಾಗಿದ್ದಾರೆ. ಬ್ಯಾಗನ್ನೆಲ್ಲಾ ಹುಡುಕಾಡಿದರೂ ಸರಗಳು ಕಾಣಿಸಲಿಲ್ಲ.
ಆಭರಣಗಳನ್ನು ಬಿಚ್ಚಿಸಿ ಪೇಪರ್ ನಲ್ಲಿ ಹಾಕುವ ರೀತಿ ನಟನೆ ಮಾಡಿ ಮಹಿಳೆಗೆ ಮೋಸ ಮಾಡಿರುವ ಬಗ್ಗೆ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಒಟ್ಟು 3,28,000 ರೂ. ಮೌಲ್ಯದ 81 ಗ್ರಾಂ ಚಿನ್ನಾಭರಣವನ್ನ ಪೊಲೀಸರಂತೆ ನಟಿಸಿ ವಂಚಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಅವ್ಯವಸ್ಥೆ… ಕಾಶಿಯಲ್ಲಿ ಕಾಲು ಸಂಕ- ಬಟ್ಟೆ ಒಗೆಯುವ ಕಲ್ಲಾಗಿದೆ ಕೆಳದಿ ಸಾಮ್ರಾಜ್ಯದ ಶಾಸನ
Shivamogga:ಮಳೆ ಬಂತೆಂದು ಖುಷಿಪಡುತ್ತಿದ್ದ ರೈಲು ಪ್ರಯಾಣಿಕರಿಂದಲೇ ಹಿಡಿಶಾಪ!
Gopal Krishna Belur ಯಾರಿಂದಲೂ ರಾಜ್ಯ ಸರ್ಕಾರ ಅಲ್ಲಾಡಿಸಲು ಆಗಲ್ಲ
Shimoga; ಪ್ಲಾಸ್ಟಿಕ್ ನುಂಗಿದ್ದ ಹಾವು ರಕ್ಷಣೆ
BJPಯಲ್ಲಿ ನನಗೆ ಅನ್ಯಾಯವಾದಾಗ ರಘುಪತಿ ಭಟ್ ಸ್ಪರ್ಧೆ ಬೇಡ ಅಂದಿದ್ದರು: ಆಯನೂರು
MUST WATCH
ಹೊಸ ಸೇರ್ಪಡೆ
Davangere: ಮರ ಬಿದ್ದು ಕಾರು ಜಖಂ; ಚಾಲಕ ಪ್ರಾಣಾಪಾಯದಿಂದ ಪಾರು
ದೊಡ್ಡಣ್ಣಗುಡ್ಡೆ: ಕ್ಷೇತ್ರದಲ್ಲಿ ಬ್ರಹ್ಮಕಲಾಶೋತ್ಸವದ ಪೂರ್ವಭಾವಿ ಕಾರ್ಯಕ್ರಮ ಸಂಪನ್ನ
Sandalwood: ರಿಷಿ ಖುಷಿ!: ಅಕೌಂಟ್ಗೆ ಮತ್ತೊಂದು ಚಿತ್ರ ತ್ತೊ
Raichur: ಗೇಟ್ ಹಾರಿ ಕಳವು ಮಾಡಿದ ಮಹಿಳೆ; ಸಿಸಿ ಕ್ಯಾಮರಾದಲ್ಲಿ ದೃಶ್ಯ ಸೆರೆ
Chitradurga: ಮಳೆಯಿಂದ ವಿದ್ಯುತ್ ಕಡಿತ; ಮೊಬೈಲ್ ಬ್ಯಾಟರಿಯ ಬೆಳಕಿನಲ್ಲೇ ರೋಗಿಗೆ ಚಿಕಿತ್ಸೆ