BJP ಭದ್ರ ಕೋಟೆಗಳೆಲ್ಲ ಈಗ ಬದಲಾಗುತ್ತವೆ: ಶಿವರಾಜ್ಕುಮಾರ್
ಪತ್ನಿ ಗೀತಾ ರೋಚಕ ಗೆಲುವು ಸಾಧಿಸುವುದರಲ್ಲಿ ಯಾವುದೇ ಸಂಶಯವಿಲ್ಲ
Team Udayavani, Mar 11, 2024, 9:22 PM IST
ದಾವಣಗೆರೆ: ದಾವಣಗೆರೆ, ಶಿವಮೊಗ್ಗ ಬಿಜೆಪಿಯ ಭದ್ರಕೋಟೆ ಎನ್ನುತ್ತಾರೆ. ಈಗ ಅದೆಲ್ಲ ಯಾವುದೂ ಇಲ್ಲ. ಭದ್ರ ಕೋಟೆಗಳಿದ್ದರೂ ಬದಲಾಗುತ್ತವೆ ಎನ್ನುವ ಮೂಲಕ ಚಿತ್ರನಟ ಡಾ| ಶಿವರಾಜ್ಕುಮಾರ್ ಪರೋಕ್ಷವಾಗಿ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಪತ್ನಿ ಗೀತಾ ಶಿವರಾಜ್ಕುಮಾರ್ ಗೆಲ್ಲುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಗೀತಾ ಶಿವರಾಜಕುಮಾರ್ ಅವರ ಚುನಾವಣೆ ಸಿದ್ಧತೆ ನಡೆದಿದೆ. ಶಿವಮೊಗ್ಗದಲ್ಲಿ ಇಬ್ಬರು ಮಾಜಿ ಮುಖ್ಯಮಂತ್ರಿಗಳ ಕುಟುಂಬಗಳ ಮಧ್ಯೆ ಚುನಾವಣೆ ನಡೆಯುತ್ತಿದೆ. ತಮ್ಮ ಪತ್ನಿ ಗೀತಾ ಶಿವರಾಜಕುಮಾರ್ ರೋಚಕ ಗೆಲುವು ಸಾಧಿಸುವುದರಲ್ಲಿ ಯಾವುದೇ ಸಂಶಯವೂ ಇಲ್ಲ ಎಂದರು.
ಶಿವಮೊಗ್ಗದಲ್ಲೇ ಜನಿಸಿರುವ ಗೀತಾಗೆ ತವರು ಜಿಲ್ಲೆ. ಹಾಗಾಗಿ ಶಿವಮೊಗ್ಗಕ್ಕೆ ಹೋಗಿ, ಬರುತ್ತಿರುತ್ತಾರೆ. ಅವರ ತಂದೆಬಂಗಾರಪ್ಪ ಅವರು ಮುಖ್ಯಮಂತ್ರಿಯಾಗಿದ್ದವರು. ಹಾಗಾಗಿ ಬಗ್ಗೆ ಸಾಕಷ್ಟು ಮಾಹಿತಿ, ಸಮಸ್ಯೆಗಳ ಬಗ್ಗೆಯೂ ಗೀತಾರಿಗೆ ಚೆನ್ನಾಗಿಯೇ ಗೊತ್ತಿದೆ ಎಂದು ತಿಳಿಸಿದರು.
ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಗೀತಾರಿಗೆ ಕ್ಷೇತ್ರದ ಅಭಿಮಾನಿ ದೇವರುಗಳ ಆಶೀರ್ವಾದ ಇರಲಿ. ಗೀತಾ ಶಿವರಾಜ್ಕುಮಾರ ರಾಜಕಾರಣಿಗಳ ಕುಟುಂಬದಿಂದ ಬಂದವರು. ನಮ್ಮ ಕುಟುಂಬಕ್ಕೂ ಸಹ ರಾಜಕಾರಣ ಹೊರತಾ ಗಿಲ್ಲ. ನಮ್ಮ ತಂದೆಯವರಿದ್ದಾಗ ರಾಜಕಾರಣಿಗಳು ಮನೆಗೆ ಬರುತ್ತಿದ್ದರು ಎಂದು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP ಮತ್ತೆ ಅಧಿಕಾರಕ್ಕೆ ಬಂದರೆ ದೇಶವನ್ನು 22 ಬಿಲಿಯನೇರ್ಗಳು ನಡೆಸುತ್ತಾರೆ: ರಾಹುಲ್
Election; ಮುಸ್ಲಿಮರಲ್ಲೂ ಮಿತ್ರರಿದ್ದಾರೆ, ನನ್ನ ವರ್ಚಸ್ಸಿಗೆ ಧಕ್ಕೆ ತರಲು ಯತ್ನ: ಪಿಎಂ
Mumbai; ಉದ್ಧವ್ ಬಣದ ಅಭ್ಯರ್ಥಿ ಅನಿಲ್ ದೇಸಾಯಿ ರ್ಯಾಲಿಯಲ್ಲಿ ಇಸ್ಲಾಮಿಕ್ ಧ್ವಜ ಹಾರಾಟ?
Varanasi; ಮೋದಿ ಬಳಿ ಕಾರಿಲ್ಲ, ಮನೆಯಿಲ್ಲ; ಪ್ರಧಾನಿ ಮೋದಿ ಬಳಿ ಇರುವ ಆಸ್ತಿಯೆಷ್ಟು ಗೊತ್ತಾ?
Loksabha Election; ನರೇಂದ್ರ ಮೋದಿ ಏನು ಜ್ಯೋತಿಷಿಯೇ…? ಪ್ರಿಯಾಂಕಾ ಗಾಂಧಿ ಪ್ರಶ್ನೆ
MUST WATCH
ಹೊಸ ಸೇರ್ಪಡೆ
ಮಗುವನ್ನು ಕಾರಿನಲ್ಲಿ ಬಿಟ್ಟು ಮದುವೆಗೆ ಹೋದ ಕುಟುಂಬ… ನೆನಪಾಗುವಷ್ಟರಲ್ಲಿ ಮಿಂಚಿತ್ತು ಕಾಲ
Hassan; ಕೆರೆಯಲ್ಲಿ ಈಜಲು ಹೋಗಿ ನೀರು ಪಾಲಾದ ನಾಲ್ವರು ಮಕ್ಕಳು
Anjali Ambigera Case; ಹುಬ್ಬಳ್ಳಿಯಲ್ಲಿ ಬಿಜೆಪಿ ಕಾರ್ಯಕರ್ತರಿಂದ ಪ್ರತಿಭಟನೆ
Bidar; ಯುವಕರ ಬದುಕು ಹಾಳು ಮಾಡಿದ ಕೀರ್ತಿ ಬಿಜೆಪಿಗೆ ಸಲ್ಲುತ್ತದೆ: ಈಶ್ವರ್ ಖಂಡ್ರೆ
Drugs ಮಾರಾಟ: ಮೂವರು ವಿದೇಶಿ ಪ್ರಜೆಗಳು ಸೇರಿ 8 ಮಂದಿ ಬಂಧನ