ದಲಿತನನ್ನು ವಿವಸ್ತ್ರಗೊಳಿಸಿದ ಥಳಿಸಿದ ಸವರ್ಣೀಯರು:
Team Udayavani, Jan 19, 2017, 3:50 AM IST
ತುಮಕೂರು: ಸವರ್ಣೀಯ ಯುವತಿಯನ್ನು ಮಾತನಾಡಿಸಿದನೆಂಬ ಕಾರಣಕ್ಕೆ ದಲಿತ ಹುಡುಗನನ್ನು ವಿವಸ್ತ್ರಗೊಳಿಸಿ ಅಮಾನವೀಯವಾಗಿ ಥಳಿಸಿದ ಘಟನೆ ಇತ್ತೀಚೆಗೆ ಗುಬ್ಬಿಯಲ್ಲಿ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.
ಹಲ್ಲೆಗೊಳಗಾದ ಯುವಕ ಅಭಿಷೇಕ್ ಪ್ರಸ್ತುತ ಗುಬ್ಬಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಪೇಂಟರ್ ಆಗಿರುವ ಈತನನ್ನು ಗುಬ್ಬಿ ಸಮೀಪದ ತೋಟದ ಮನೆಗೆ ಕರೆದುಕೊಂಡು ಹೋದ ಗುಂಪು, ಅಲ್ಲಿ ಆತನನ್ನು ವಿವಸ್ತ್ರಗೊಳಿಸಿ “ಗುಬ್ಬಿಯ ಹುಡುಗಿಯರನ್ನು ಕೆಣಕಿದರೆ ಇದೇ ಗತಿ’ ಎಂದು ಬರೆದ ಸ್ಲೇಟ್ ಕೈಗೆ ನೀಡಿ ಪೋಟೋ ತೆಗೆದಿದೆ. ಬಳಿಕ ಥಳಿಸಿ ನಾನಾ ರೀತಿಯಲ್ಲಿ ಅವಮಾನ ಮಾಡಿದ್ದು ವಾಟ್ಸಾಪ್ಗ್ಳಲ್ಲಿ ಹರಿಬಿಟ್ಟಿದೆ.
10 ಮಂದಿ ವಿರುದ್ಧ ಪ್ರಕರಣ:
ಯುವಕನ ತಂದೆ ಗುಬ್ಬಿ ಠಾಣೆಯಲ್ಲಿ ದೂರು ನೀಡಿದ್ದು, ಯುವತಿಯ ತಂದೆ ಸೇರಿ 10 ಜನರ ಮೇಲೆ ಪ್ರಕರಣ ದಾಖಲಾಗಿದೆ. ಆರೋಪಿಗಳಾದ ಪ್ರಕಾಶ್, ಮಾರುತಿ, ರಮೇಶ್ ಅವರನ್ನು ಈಗಾಗಲೇ ಬಂಧಿಸಿದ್ದು, ಉಳಿದವರಿಗಾಗಿ ಹುಡುಕಾಟ ನಡೆಸಿದ್ದಾರೆ. ಸ್ಥಳಕ್ಕೆ ಡಿವೈಎಸ್ಪಿ ಚಿದಾನಂದ ಸ್ವಾಮಿ ಸೇರಿ ಹಲವು ಅಧಿಕಾರಿಗಳು ಭೇಟಿ ನೀಡಿದ್ದಾರೆ. ದಲಿತ ಪರ ಸಂಘಟನೆಗಳು ಘಟನೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿವೆ.
ದಲಿತ ಯುವಕನ ಮೇಲೆ ಹಲ್ಲೆ ನಡೆದಿದೆ. ಯುವತಿಯನ್ನು ಸದಾ ಮಾತನಾಡಿಸುತ್ತಿದ್ದ ಎನ್ನುವ ಕಾರಣದಿಂದ ಈ ಘಟನೆ ನಡೆದಿದ್ದು, ಈ ಸಂಬಂಧವಾಗಿ ಪ್ರಕರಣ ದಾಖಲಾಗಿದೆ. ಪ್ರಮುಖ 3 ಆರೋಪಿಗಳನ್ನು ಬಂಧಿಸಲಾಗಿದೆ. ಇನ್ನುಳಿದ ಆರೋಪಿಗಳನ್ನು ಶೀಘ್ರ ಬಂಧಿಸಲಾಗುವುದು.
-ಜಿ.ಬಿ. ಮಂಜುನಾಥ್, ಎಎಸ್ಪಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.