ಸಾಯಲೆಂದೇ ಹೂ ಬಿಟ್ಟ ಸೆಂಚುರಿ ಪಾಮ್‌


Team Udayavani, Feb 2, 2017, 12:04 PM IST

lalbagh.jpg

ಬೆಂಗಳೂರು: ದೀಪ ನಂದಿ ಹೋಗುವ ಮುನ್ನ ಜೋರಾಗಿ ಉರಿಯುತ್ತದೆ ಎಂಬ ಗಾದೆ ಮಾತು ಅಕ್ಷರಶಃ “ಸೆಂಚೂರಿ ಪಾಮ್‌’ ಮರಕ್ಕೆ ಅನ್ವಯಿಸುತ್ತದೆ. ಸೆಂಚೂರಿ ಪಾಮ್‌ ಮರ ಹೂವು ಬಿಟ್ಟು ಸುಂದರವಾಗಿ ಕಂಗೊಳಿಸುತ್ತಿದೆ ಎಂದರೆ ಆ ಮರಕ್ಕೆ ಅದುವೇ ಕೊನೆಗಾಲ. ಹೌದು. ನಗರದಲ್ಲಿ ಬೇರೆಲ್ಲೂ ಕಾಣ  ಸಿಗದ ಈ ಸೆಂಚೂರಿ ಪಾಮ್‌ ಮರ ಸಸ್ಯಕಾಶಿ ಲಾಲ್‌ಬಾಗ್‌ನಲ್ಲಿ ಮಾತ್ರ ಇದೆ.

ಹೆಸರೇ ಹೇಳುವಂತೆ ಈ ಮರದ ಆಯಸ್ಸು ನೂರು ವರ್ಷ. ಲಾಲ್‌ ಬಾಗ್‌ನಲ್ಲಿ ಈ ಜಾತಿಯ ಸುಮಾರು 15 ಮರಗಳಿದ್ದು ಈಗ ಬ್ಯಾಂಡ್‌ಸ್ಟಾಂಡ್‌, ಲಾಲ್‌ಬಾಗ್‌ ನಿರ್ದೇಶಕ ಕಚೇರಿ ಮತ್ತು ಕೃಂಬಿಗಲ್‌ ಹಾಲ್‌ ಸಮೀಪವಿರುವ ಮೂರು ಸೆಂಚೂರಿ ಪಾಮ್‌ ಮರಗಳು  ಹೂವು ಬಿಟ್ಟಿವೆ. ಒಂದೆಡೆ ಹೂವು ಕಂಡು ಸಂತಸವಾದರೆ, ಮತ್ತೂಂದೆಡೆ ಮರಗಳ ಅವಸಾನ ಪರಿಸರ ಪ್ರೇಮಿಗಳಲ್ಲಿ ನಿರಾಸೆ ಮೂಡಿಸುತ್ತದೆ.

ತಮ್ಮ ಜೀವಿತಾವಧಿಯಲ್ಲಿ ಕೇವಲ ಒಂದು ಬಾರಿ ಮಾತ್ರ ಹೂವು ಬಿಟ್ಟರು ಅದು ವರ್ಷವಿಡೀ ಮರದಲ್ಲಿ ಕಂಗೊಳಿಸುತ್ತದೆ. ಹಳದಿ ಮಿಶ್ರಿತ ತಿಳಿ ಬಣ್ಣದ ಹೂವುಗಳ ಗೊಂಚಲು ನೋಡಲು ಬಲು ಆಕರ್ಷಣೀಯ. ಮರದ ತುಂಬಾ ಹೂವಿದ್ದು, ಗಾಳಿಗೆ ಉದುರಿದ ಪುಷ್ಪಗಳು ಹೂವಿನ ಹಾಸಿಗೆಯನ್ನೇ ಹಾಸಿದಂತೆ ಕಂಗೊಳಿಸಿ ಸೆಳೆಯುತ್ತವೆ. ಆದರೆ, ನಂತರ ಮರದ ಅವಸಾನ ಪ್ರಾರಂಭವಾಗುತ್ತದೆ. 

ಶ್ರೀಲಂಕಾದ ರಾಷ್ಟ್ರೀಯ ಮರ ಇದು: ಶ್ರೀಲಂಕಾ ಮೂಲದ ಈ ಮರಗಳು ಪಾಮ್‌ ಜಾತಿಗೆ ಸೇರಿದವು. ಸುಮಾರು 80 ರಿಂದ 100 ವರ್ಷ ಆಯಸ್ಸು. ಈ ಮರ ನಿಜಕ್ಕೂ ಸಸ್ಯಶಾಸ್ತ್ರದ ಅದ್ಭುತ ಎಂದು ವರ್ಣಿಸಲಾಗಿದೆ. ಸುಮಾರು 50ರಿಂದ 75 ಅಡಿಗಳವರೆಗೆ ಬೆಳೆಯುವ ಸೆಂಚುರಿ ಪಾಮ್‌ ಶ್ರೀಲಂಕಾದ ರಾಷ್ಟ್ರೀಯ ಮರ. ಇದರ ವೈಜ್ಞಾನಿಕ ಹೆಸರು ಕೊರಿಫಾ ಅಂಬ್ರಾಕ್ಯುಲಿಫೆರಾ. ಇಷ್ಟೊಂದು ವೈವಿಧ್ಯಮಯವಾದ ಮರಗಳನ್ನು ಲಾಲ್‌ಬಾಗ್‌ನಲ್ಲಿ ನೂರಾರು ವರ್ಷಗಳ ಹಿಂದೆಯೇ ಬೆಳೆಸಲಾಗಿದ್ದು, ಮೂರು ಮರಗಳಿಗೆ ಶತಾಯಸ್ಸು. 

ಲಾಲ್‌ಬಾಗ್‌ನಲ್ಲಿ ಸುಮಾರು 15 ಸೆಂಚೂರಿ ಪಾಮ್‌ ಗಿಡಗಳಿವೆ. ಅವುಗಳನ್ನು ಸೀತಾಳೆ ಎಂದು ಕೂಡ ಕರೆಯುತ್ತಾರೆ. ನೋಡಲು ತಾಳೆ ಮರದಂತೆ ಕಂಡರೂ ಅತ್ಯಂತ ವಿಶಿಷ್ಟವಾದ ಮರ. ಗೊಂಚಲು ಗೊಂಚಲು ಹೂವು ಬಿಟ್ಟು ಸೆಳೆಯುವ ಈ ಮರ ನಂತರ ಸಾಯುತ್ತದೆ ಎನ್ನುವುದೇ ವಿಪರ್ಯಾಸ. ಇಂತಹ ವಿಶಿಷ್ಟ ಗಿಡಗಳನ್ನು ಲಾಲ್‌ಬಾಗ್‌ನಲ್ಲಿ ಕಾಣಬಹುದು.
-ಚಂದ್ರಶೇಖರ್‌, ಉಪ ನಿರ್ದೇಶಕ, ಲಾಲ್‌ಬಾಗ್‌.

* ಸಂಪತ್‌ ತರೀಕೆರೆ

ಟಾಪ್ ನ್ಯೂಸ್

1-wqqewqeq

Hubli; ಜನರಲ್ಲಿ ಪೊಲೀಸರ ಬಗ್ಗೆ ನಂಬಿಕೆ ಹೋಗಿದೆ: ಎಡಿಜಿಪಿ ಹಿತೇಂದ್ರ

1-qweeqw

Kundapura; ತಾಯಿಯ ಶವದೊಂದಿಗೆ 72 ಗಂಟೆ ಕಳೆದಿದ್ದ ಪುತ್ರಿಯೂ ವಿಧಿವಶ!

Breach Of Privacy….; ಐಪಿಎಲ್ ಪ್ರಸಾರಕರ ವಿರುದ್ಧ ರೇಗಾಡಿದ ರೋಹಿತ್ ಶರ್ಮಾ

Breach Of Privacy….; ಐಪಿಎಲ್ ಪ್ರಸಾರಕರ ವಿರುದ್ಧ ರೇಗಾಡಿದ ರೋಹಿತ್ ಶರ್ಮಾ

13-doctor

Health: ಸದಾ ಎಚ್ಚರದಿಂದಿರಿ: ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ

Basavakalyana; ಬ್ಯಾಂಕ್ ಗೆ ಜಮೆ ಮಾಡಲು ತಂದಿದ್ದ 1.37 ಲಕ್ಷ ರೂ‌ ಎಗರಿಸಿದ ಖದೀಮ

Basavakalyana; ಬ್ಯಾಂಕ್ ಗೆ ಜಮೆ ಮಾಡಲು ತಂದಿದ್ದ 1.37 ಲಕ್ಷ ರೂ‌ ಎಗರಿಸಿದ ಖದೀಮ

12-

Heat Weather: ಹಬೆಯಾಡುತ್ತಿರುವ ವಸುಂಧರೆ

11-candle

UV Fusion: ಆಯಸ್ಸು ಅಳಿಯುವ ಮುನ್ನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Crime: ಜಗಳ ವೇಳೆ ತಳ್ಳಿದಾಗ ವಿದ್ಯುತ್‌ ತಂತಿ ಮೇಲೆ ಬಿದ್ದ ಯುವಕ ಸಾವು: 2 ಆರೋಪಿಗಳ ಬಂಧನ

Crime: ಜಗಳ ವೇಳೆ ತಳ್ಳಿದಾಗ ವಿದ್ಯುತ್‌ ತಂತಿ ಮೇಲೆ ಬಿದ್ದ ಯುವಕ ಸಾವು: 2 ಆರೋಪಿಗಳ ಬಂಧನ

7

ಇನ್‌ಸ್ಪೆಕ್ಟರ್‌ ಹೆಸರಲ್ಲಿ ಸುಲಿಗೆ: ಬೆಸ್ಕಾಂ ಎಂಜಿನಿಯರ್‌ ಸೆರೆ

Bengaluru: 14 ಲಕ್ಷ ರೂ. ಒಡವೆ ಕದಿದ್ದ ಬಾಲಕ ವಶಕ್ಕೆ

Bengaluru: 14 ಲಕ್ಷ ರೂ. ಒಡವೆ ಕದಿದ್ದ ಬಾಲಕ ವಶಕ್ಕೆ

Bengaluru: ಬೆದರಿಸಲು ನೇಣಿಗೆ ಕೊರಳೊಡ್ಡಿದ ಪತಿ ದಿಢೀರ್‌ ಕುಣಿಕೆ ಬಿಗಿದು ಸಾವು

Bengaluru: ಬೆದರಿಸಲು ನೇಣಿಗೆ ಕೊರಳೊಡ್ಡಿದ ಪತಿ ದಿಢೀರ್‌ ಕುಣಿಕೆ ಬಿಗಿದು ಸಾವು

Fraud: ಗೃಹ ಸಚಿವರ ಆಪ್ತ ಎಂದು ನಂಬಿಸಿ ಹಲವರಿಗೆ ವಂಚನೆ

Fraud: ಗೃಹ ಸಚಿವರ ಆಪ್ತ ಎಂದು ನಂಬಿಸಿ ಹಲವರಿಗೆ ವಂಚನೆ

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

1-qweqwe

Kushtagi: ಸಿಡಿಲಿಗೆ ಬಿತ್ತನೆ ಕಾರ್ಯ ನಿರತ ರೈತ ಬಲಿ

1-wqqewqeq

Hubli; ಜನರಲ್ಲಿ ಪೊಲೀಸರ ಬಗ್ಗೆ ನಂಬಿಕೆ ಹೋಗಿದೆ: ಎಡಿಜಿಪಿ ಹಿತೇಂದ್ರ

1-qweeqw

Kundapura; ತಾಯಿಯ ಶವದೊಂದಿಗೆ 72 ಗಂಟೆ ಕಳೆದಿದ್ದ ಪುತ್ರಿಯೂ ವಿಧಿವಶ!

1-aaa

Kaup: ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

Davanagere; ಭಾರೀ ಮಳೆಗೆ ನೆಲಕಚ್ಚಿದ ಭತ್ತದ ಬೆಳೆ

Davanagere; ಭಾರೀ ಮಳೆಗೆ ನೆಲಕಚ್ಚಿದ ಭತ್ತದ ಬೆಳೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.