ಪುನೀತರಾದವರ ಅಪ್ಪುಗೆ ಡ್ಯಾನ್ಸ್ ಬೇಬಿ ಡ್ಯಾನ್
Team Udayavani, Mar 31, 2017, 11:02 AM IST
ಈಗ ಇಲ್ಲಿ ಹೇಳಹೊರಟಿರುವ ವಿಷಯ, ಚಂದ್ರಶೇಖರ್ ಅವರದ್ದು. ಯಾವ ಚಂದ್ರಶೇಖರ್ ಅಂದರೆ, ಚಿತ್ರೀಕರಣಕ್ಕೆ ಕಾರುಗಳನ್ನು ಸರಬರಾಜು ಮಾಡುತ್ತಿರುವ ಚಂದ್ರಶೇಖರ್. ಅವರಿಗೆ ಸಿನಿಮಾ ರಂಗ ಗೊತ್ತು. ಆದರೆ, ನಿರ್ಮಾಣ ಗೊತ್ತಿಲ್ಲ. ಇದು ಅವರ ಮೊದಲ ಪ್ರಯತ್ನ. ಅಂದಹಾಗೆ, ಇವರ ನಿರ್ಮಾಣದ ಚಿತ್ರಕ್ಕೆ “ಅಪ್ಪುಗೆ’ ಎಂದು ನಾಮಕರಣ ಮಾಡಲಾಗಿದೆ. ಇತ್ತೀಚೆಗೆ ಚಿತ್ರದ ಆಡಿಯೋ ಸಿಡಿ ಬಿಡುಗಡೆ ಮಾಡಲಾಯಿತು.
ಹೆಸರೇ ಸೂಚಿಸುವಂತೆ ಇದು ಮಕ್ಕಳ ಚಿತ್ರ. ಕಿಶೋರ್ಶೆಟ್ಟಿ ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಬರೆದು ನಿರ್ದೇಶನ ಮಾಡಿದ್ದಾರೆ. “ಇದೊಂದು “ಡ್ಯಾನ್ಸ್’ ಕುರಿತ ಕಥೆ. ಇದರೊಂದಿಗೆ ಮಕ್ಕಳು ತಪ್ಪು ದಾರಿ ಹಿಡಿದರೆ, ಎಂಥೆಂಥಾ ಸಮಸ್ಯೆಗಳು ಎದುರಾಗುತ್ತವೆ ಎಂಬುದನ್ನಿಲ್ಲಿ ಹೇಳಲಾಗಿದೆ. ಮಕ್ಕಳು ಮತ್ತು ಪೋಷಕರು ನೋಡಬೇಕಾದ ಸಿನಿಮಾವಿದು. ಬಹುತೇಕ ಬೆಂಗಳೂರು ಸುತ್ತಮುತ್ತ ಚಿತ್ರೀಕರಿಸಲಾಗಿದೆ. ಚಿತ್ರೀಕರಣ ಸಮಯದಲ್ಲಿ ಸುಮಾರು 1500 ಚಿಣ್ಣರು ಭಾಗವಹಿಸಿದ್ದು ಚಿತ್ರದ ಮತ್ತೂಂದು ವಿಶೇಷ
ಎನ್ನುವ ನಿರ್ದೇಶಕರು, “ಚಿತ್ರದಲ್ಲಿ 11 ಹಾಡುಗಳಿವೆ. ಆ ಪೈಕಿ ಸ್ವತ್ಛತೆ, ಪೌರಕಾರ್ಮಿಕರು, ಆಂಜನೇಯ, ರೈತ, ಯೋಧರಿಗೆ ಸಂಬಂಧಿಸಿದ ಗೀತೆಗಳಿವೆ’ ಎನ್ನುತ್ತಾರೆ ಕಿಶೋರ್ಶೆಟ್ಟಿ.
“ಚಿತ್ರದಲ್ಲಿ ತಂದೆ, ತಾಯಿ ಪುನೀತ್ ರಾಜ್ಕುಮಾರ್ ಅವರ ಅಭಿಮಾನಿಗಳು. ತಮಗೆ ಗಂಡು ಮಗು ಆಗುತ್ತೆ ಎಂದು ಆಸೆ ಪಟ್ಟಿರುತ್ತಾರೆ. ಆದರೆ, ಅವರಿಗೆ ಹೆಣ್ಣು ಮಗು ಹುಟ್ಟುತ್ತದೆ. ಆ ಮಗುವಿಗೆ ಅಪ್ಪುಗೆ ಎಂದು ನಾಮಕರಣ ಮಾಡುತ್ತಾರೆ. ಆ ಹುಡುಗಿ ಏನೆಲ್ಲಾ ಸಾಧನೆ ಮಾಡುತ್ತೆ ಎಂಬುದರ ಸುತ್ತ ಸಿನಿಮಾ ಸಾಗಲಿದೆ’ ಎನ್ನುವ ನಿರ್ದೇಶಕರು.ಕ್ಲೈಮ್ಯಾಕ್ಸ್ನಲ್ಲಿ ಬಾಲನಟಿ ಬೇಬಿ ಲಕ್ಷ್ಮೀಶ್ರೀಯನ್ನು ಅಪ್ಪಿಕೊಳ್ಳುವ ದೃಶ್ಯವಿದೆ. ಅದನ್ನು ಪುನೀತ್ ರಾಜ್ಕುಮಾರ್ ಅವರಿಂದ ಮಾಡಿಸಬೇಕೆಂಬ ಬಯಕೆ ಚಿತ್ರತಂಡದ್ದು.
ಅದೇ ಆಶಾಭಾವನೆಯಲ್ಲಿದೆ ಚಿತ್ರತಂಡ. ಬೇಬಿ ಲಕ್ಷೀಶ್ರೀ, ಮಾಸ್ಟರ್ ಸದ್ವಿನ್ ಶೆಟ್ಟಿ ಮುಖ್ಯ ಪಾತ್ರಧಾರಿಗಳು. ಕಿಂಗ್ ಮೋಹನ್, ಕಿಶೋರ್ ವಸಿಷ್ಠ ಇತರರು ನಟಿಸಿದ್ದಾರೆ. ಚಂದನ್ಶೆಟ್ಟಿ ಸಂಗೀತವಿದೆ. ಆಡಿಯೋ ಸಿಡಿ ಬಿಡುಗಡೆ ವೇಳೆ ನಟ ಶ್ರೀನಗರ ಕಿಟ್ಟಿ,
ಸಿಂಧುಲೋಕನಾಥ್, ಬಿ.ಕೆ.ಶ್ರೀನಿವಾಸ್ ಇತರರು ಆಗಮಿಸಿ ಶುಭ ಹಾರೈಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kannada Cinema; ನಮ್ ಜನ, ನಮ್ ಸಿನಿಮಾ… ತಗ್ಗಿದ ಪ್ಯಾನ್ ಇಂಡಿಯಾ ಕ್ರೇಜ್
Kangaroo; ಥ್ರಿಲ್ಲರ್ ಹಾದಿಯಲ್ಲಿ ಆದಿತ್ಯ ಹೆಜ್ಜೆ ಗುರುತು
Sandalwood; ಟ್ರೆಂಡ್ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ
Sandalwood; ‘ಫಾರೆಸ್ಟ್’ನಲ್ಲಿ ಚಿಕ್ಕಣ್ಣ & ಟೀಂ
Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ
MUST WATCH
ಹೊಸ ಸೇರ್ಪಡೆ
IPL ; ಲಕ್ನೋ ವಿರುದ್ಧ ಕೆಕೆಆರ್ ಗೆ 98 ರನ್ ಜಯ; ಅಂಕಪಟ್ಟಿಯಲ್ಲಿ ಅಗ್ರ ಸ್ಥಾನ
Ullal ತೊಕ್ಕೊಟ್ಟು; ಕಾರು ಅಪಘಾತ: ವಿದ್ಯಾರ್ಥಿಗಳು ಪಾರು
Davanagere; ಟೈರ್ ಸಿಡಿದು ಸೇತುವೆ ಮೇಲಿಂದ ಉರುಳಿದ ಕಾರು:ಇಬ್ಬರು ಮೃತ್ಯು
Ullal Beach ಸಮುದ್ರ ಪಾಲಾಗುತ್ತಿದ್ದ ವಿದ್ಯಾರ್ಥಿಯ ರಕ್ಷಣೆ
Bailur ಉಮಿಕ್ಕಳ ಬೆಟ್ಟದಲ್ಲಿ ಬೆಂಕಿ ಅವಘಡ; ಪರಶುರಾಮ ಥೀಮ್ಪಾರ್ಕ್ ಸುರಕ್ಷಿತ