ಚಿಗುರು ಟೂರಿಸಂನ “ಮ್ಯಾಂಗೋ’ವರ್‌


Team Udayavani, Apr 8, 2017, 5:08 PM IST

655555.jpg

ಅಂಗಡಿಯಲ್ಲಿ, ಗಾಡಿಯಲ್ಲಿ, ಮಾಲ್‌ನಲ್ಲಿ, ಮಾರ್ಕೆಟಿನಲ್ಲಿ… ಎಲ್ಲಿ ನೋಡಿದ್ರೂ ಮಾವು ಮಾವು ಮಾವು! ಇಡೀ ರಾಜಧಾನಿ ಈಗ ಮ್ಯಾಂಗೋವರ್‌ನಲ್ಲಿದೆ. ಬಾದಾಮ್‌, ರಸಪುರಿ ಎನ್ನುತ್ತಾ ವೈವಿಧ್ಯ ಮಾವನ್ನು ಸವಿಯಲು ರಾಜಧಾನಿ ಮಂದಿ ಹಾತೊರೆಯುತ್ತಲೇ ಇದ್ದಾರೆ. ಆದರೆ, ಹೀಗೆ ಹಂಬಲಿಸುತ್ತಿರುವ ಎಲ್ಲರಿಗೂ ಒಂದೇ ಗೊಂದಲ. ಇದರಲ್ಲಿ ಆರ್ಗಾನಿಕ್‌ ಯಾವುದು? ಕೆಮಿಕಲ್‌ ಸಿಂಪಡಿಸಿದ ಮಾವು ಯಾವುದು?

ಇದನ್ನು ತಿಳಿದುಕೊಳ್ಳಲು, ಆರ್ಗಾನಿಕ್‌ ಮಾವನ್ನೇ ಪಡೆಯಲು ನೀವು “ಮ್ಯಾಂಗೋ ಟ್ರಿಪ್‌’ ಹೊಡೆಯಲೇಬೇಕು. ಅಲ್ಲಿ ನಿಮಗೆ ಕೆಮಿಕಲ್‌ಯುಕ್ತ ಮಾವಿನ ಹಣ್ಣು ಕಣ್ಣಿಗೇ ಬೀಳುವುದಿಲ್ಲ. ರಾಸಾಯನಿಕ ಸಿಂಪಡಿಸಿದ ಹಣ್ಣಾಗಿದ್ದರೆ ಒಂದು ಕಡೆ ಹಸಿರು, ಅಲ್ಲಲ್ಲಿ ಕೆಂಪು- ಹಳದಿ ಬಣ್ಣ ಇರುತ್ತದೆ. ಆದರೆ, ಅಂಥ ಹಣ್ಣುಗಳನ್ನು ಇಲ್ಲಿ ಕಾಣಲು ಸಾಧ್ಯವೇ ಇಲ್ಲ. ಬೆಂಗಳೂರಿನ ಹೊರವಲಯದಲ್ಲಿರುವ ಚಿಗುರು ಫಾರ್ಮ್ ಪ್ರತಿವರ್ಷದ ಏಪ್ರಿಲ್‌- ಮೇನಲ್ಲಿ “ಮ್ಯಾಂಗೋ ಟೂರಿಸಂ’ ಆಯೋಜಿಸುತ್ತದೆ. ಒಂದು ತಾಸಿನಲ್ಲಿ ನೀವು ತಾಜಾ ಮಾವಿನ ಹಣ್ಣುಗಳನ್ನು ಕಿತ್ತುಕೊಂಡು, ಮನೆಗೆ ವಾಪಸಾಗಬಹುದು!

ಏನಿದು ಮ್ಯಾಂಗೋ ಟೂರಿಸಂ?

ಚಿಗುರು ಫಾರ್ಮ್ನ ಮಾವಿನ ತೋಟಕ್ಕೆ ಹೋಗಲು ಇರುವ ಅವಕಾಶವಿದು. ಅಲ್ಲಿಗೆ ನೀವು ನಿಮ್ಮ ಕುಟುಂಬದೊಟ್ಟಿಗೆ ಪ್ರವೇಶ ನೀಡಬಹುದು. ನಿಮ್ಮೊಂದಿಗೆ ಒಬ್ಬ ಗೈಡ್‌ ಅನ್ನೂ ನೀಡಲಾಗುತ್ತದೆ. ನಿಮಗಿಷ್ಟ ಬಂದ ಯಾವ ಮಾವಿನ ಹಣ್ಣನ್ನಾದರೂ ಕಿತ್ತುಕೊಳ್ಳುವ ಸ್ವಾತಂತ್ರÂ ನಿಮಗಿರುತ್ತೆ. ಹಾಗೆ ಕಿತ್ತ ಹಣ್ಣುಗಳನ್ನು ಬುಟ್ಟಿಗೆ ಹಾಕಿಕೊಂಡು, ಚೆನ್ನಾಗಿ ತೊಳೆದು, ಮನೆಗೆ ತರಬಹುದು. ಒಟ್ಟು ಹಣ್ಣನ್ನು ತೂಕ ಮಾಡಿ, ನಿರ್ದಿಷ್ಟ ಶುಲ್ಕವನ್ನು ಚಿಗುರು ಫಾರ್ಮ್ನವರಿಗೆ ನೀಡಬೇಕಾಗುತ್ತೆ.

ಮಾವೊಂದೇ ಅಲ್ಲ!

ಈ ಮ್ಯಾಂಗೋ ಟೂರಿಸಂನಲ್ಲಿ ಬೇರೆ ಹಣ್ಣಿನ ಗೊಂಚಲಿಗೂ ನೀವು ಕೈಹಾಕಬಹುದು. ತೋಟದಲ್ಲಿನ ಚಿಕ್ಕು, ಚೆರ್ರಿ, ರೋಸ್‌ ಆ್ಯಪಲ್‌, ಕಿತ್ತಳೆ ಹಣ್ಣುಗಳೂ ಇಷ್ಟವಾದರೆ ಅವನ್ನೂ ಕಿತ್ತುಕೊಳ್ಳಬಹುದು. ಇದಕ್ಕೂ ಅಗತ್ಯ ಶುಲ್ಕ ಪಾವತಿಸಬೇಕಾಗುತ್ತೆ.

ಎಲ್ಲವೂ ಆರ್ಗಾನಿಕ್‌

ಇಲ್ಲಿ ಬೆಳೆದ ಹಣ್ಣುಗಳಿಗೆ ಕೆಮಿಕಲ್‌ ಸಿಂಪಡಿಸುವುದಿಲ್ಲ. ರಾಸಾಯನಿಕ ಹಾಕಿಯೂ ಹಣ್ಣಿನ ಗಿಡಗಳನ್ನು ಬೆಳೆಸುವುದಿಲ್ಲ. ಸಂಪೂರ್ಣ ಸಾವಯವ ಮಾದರಿಯಲ್ಲಿ ಹಣ್ಣಿನ ಮರಗಳನ್ನು ಬೆಳೆಸಲಾಗಿದೆ. ಹೀಗಾಗಿ, ಹಣ್ಣು ತಿಂದರೆ ಕೆಮಿಕಲ್ಸ್‌ನಿಂದ ಆರೋಗ್ಯಕ್ಕೆ ಸೈಡ್‌ಎಫೆಕ್ಟ್ ಆಗುತ್ತೆಂಬ ಆತಂಕವನ್ನು ಬದಿಗಿಟ್ಟು ನೀವಿಲ್ಲಿಗೆ ಭೇಟಿ ನೀಡಬಹುದು. 

ನೀವು ಶೂ ಧರಿಸಿದ್ದರೆ, ತೋಟದಲ್ಲಿ ಓಡಾಡುವಾಗ ಪಾದರಕ್ಷೆ ಮಣ್ಣಾಗುತ್ತೆಂಬ ದಿಗಿಲೂ ಬೇಡ. ತೋಟದೊಳಗೆ ಅಷ್ಟು ಚೆನ್ನಾಗಿ ರಸ್ತೆಗಳನ್ನು ನಿರ್ಮಿಸಲಾಗಿದೆ. ಒಳ್ಳೆಯ ಗಾಳಿ ನಿಮ್ಮ ದೇಹ ಮತ್ತು ಮನಸ್ಸಿಗೆ ಉಲ್ಲಾಸವನ್ನು ತಂದುಕೊಡುತ್ತೆ. 

ಚಿಗುರು ಫಾರ್ಮ್ ಎಲ್ಲಿದೆ?
ನೈಸ್‌ ರಸ್ತೆ, ಕನಕಪುರ ರೋಡ್‌ ಜಂಕ್ಷನ್‌ನಿಂದ ಕೇವಲ 45 ಕಿ.ಮೀ. ದೂರದಲ್ಲಿದೆ. ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದಿಂದ ದಕ್ಷಿಣಕ್ಕೆ ಹೋದರೆ ಬಿಳಿಕಲ್‌ ಫಾರೆಸ್ಟ್‌ ಬಳಿ ಚಿಗುರು ಫಾರ್ಮ್ ಸಿಗುತ್ತದೆ. 2015ರಿಂದ ಇಲ್ಲಿ ಆರ್ಗಾನಿಕ್‌ ಫಾರ್ಮ್ ನಿರ್ಮಾಣಗೊಂಡಿದೆ.

ಎಷ್ಟು ತಾಸು?
1 ಗಂಟೆಯಲ್ಲಿ ಇಡೀ ತೋಟ ಸುತ್ತಾಟ

ಏಕೆ ಹೋಗಿ ಅಂದ್ರೆ…
– ಸಾವಯವ ಮಾವಿನ ಹಣ್ಣಿಗಾಗಿ
– ಬೇಸಿಗೆಯಲ್ಲಿ ತೋಟದ ತಂಪಿನಲ್ಲಿ ಕಳೆಯಲು
– ಮಾಲ್‌ ಸುತ್ತುವ ಫ್ಯಾಮಿಲಿಗೆ ತೋಟ ಸುತ್ತಿದ ಅನುಭವ
– ಫ್ರೆಶ್‌ ಗಾಳಿ, ಒಂದು ಜಾಲಿ ಟ್ರಿಪ್‌ಗಾಗಿ.

ಸಂಪರ್ಕ: ಮೊ. 9845258575
ವೆಬ್‌ಸೈಟ್‌:  www.chigurufarm.com

ಟಾಪ್ ನ್ಯೂಸ್

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

ಕಾಂಗ್ರೆಸ್‌ಗೆ ಶಾಕ್: ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಕ್ಷಯ್ ಕಾಂತಿ ಬಾಮ್

ಕಾಂಗ್ರೆಸ್‌ಗೆ ಶಾಕ್: ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಕ್ಷಯ್ ಕಾಂತಿ ಬಾಮ್

Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ

Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ

laxmi-hebbalkar

Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ‌ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್

Bengaluru: ಇನ್‌ಸ್ಟಾದಲ್ಲಿ ಯುವತಿ ನಗ್ನ ಫೋಟೋ ವೈರಲ್‌; ಅಪರಿಚಿತನ ಮೇಲೆ ಕೇಸು

Bengaluru: ಇನ್‌ಸ್ಟಾದಲ್ಲಿ ಯುವತಿ ನಗ್ನ ಫೋಟೋ ವೈರಲ್‌; ಅಪರಿಚಿತನ ಮೇಲೆ ಕೇಸು

Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ

Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bachuilar-of-coro

ಬ್ಯಾಚುಲರ್‌ ಆಫ್ ಕೊರೊನಾ

niffa-kanna

ನಿಫಾ ಕನ್ನಡಿಯಲ್ಲಿ ಕೊರೊನಾ ಬಿಂಬ

yava-sama

ಯಾವ ಸಮಸ್ಯೆಯೂ ಶಾಶ್ವತವಲ್ಲ…

mole

ಮೊಳೆ ಕೀಳುವ ಸೈನಿಕರು

hiriyarige

ಹಿರಿಯರಿಗೆ ಟೆರೇಸೇ ಪಾರ್ಕು, ಮೈದಾನ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

ಕಾಂಗ್ರೆಸ್‌ಗೆ ಶಾಕ್: ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಕ್ಷಯ್ ಕಾಂತಿ ಬಾಮ್

ಕಾಂಗ್ರೆಸ್‌ಗೆ ಶಾಕ್: ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಕ್ಷಯ್ ಕಾಂತಿ ಬಾಮ್

Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ

Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ

Davanagere; ಸಮಾವೇಶ ನಡೆದ ಮೈದಾನ ಸ್ವಚ್ಛಗೊಳಿಸಿದ ಗಾಯಿತ್ರಿ ಸಿದ್ದೇಶ್ವರ

Davanagere; ಸಮಾವೇಶ ನಡೆದ ಮೈದಾನ ಸ್ವಚ್ಛಗೊಳಿಸಿದ ಗಾಯಿತ್ರಿ ಸಿದ್ದೇಶ್ವರ

laxmi-hebbalkar

Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ‌ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.