ಹಸಿವು ಬಡತನ ಮತ್ತು ಹೂ ಮಾರುವ ಹುಡುಗಿ


Team Udayavani, Apr 26, 2017, 3:50 AM IST

25-AVALU-1.jpg

ಒಂದು ದಿನ ನಾನು ತುಮಕೂರಿನಿಂದ ನಮ್ಮ ಹಳ್ಳಿಗೆ ಹೊರಡುವಾಗ, ಗೌರಿಬಿದನೂರಿನ ಒಂದು ಸರ್ಕಲ್ಲಿನಲ್ಲಿ ನನ್ನ ಕಣ್ಣಿಗೆ ಬಿದ್ದಂಥ ದೃಶ್ಯವಿದು. ಅವಳ ಹೆಸರು ತಿಳಿಯದು, ನೋಡಲು ಬೆಳ್ಳಗೆ ಉದ್ದನೆ ಕೂದಲು, ತೆಳ್ಳನೆಯ ಮೈಕಟ್ಟು ಹೊಂದಿದ್ದಳು. ಕೈಯಲ್ಲಿ ಹೂ ಬುಟ್ಟಿ. ನಾನು ಹೇಳುತ್ತಿರುವುದು 2ನೇ ತರಗತಿ ಓದುತ್ತಿರುವ ಒಂದು ಹುಡುಗಿಯ ವಿಚಾರ. ಅವಳು ಪ್ರತಿದಿನ ರಾತ್ರಿ ಸರಿಸುಮಾರು 9.30ರ ತನಕ, ಅಂದರೆ ಅವಳ ಬುಟ್ಟಿಯಲ್ಲಿನ ಹೂವು ಖಾಲಿಯವವರೆಗೆ ಮನೆಗೆ ಹೋಗುವುದಿಲ್ಲವಂತೆ. 

ಆ ದಿನ ರಾತ್ರಿ ಸುಮಾರು 8.50ರ ಸಮಯ. ಯಾವುದೇ ಬಸ್ಸುಗಳಿರಲಿಲ್ಲ. ದಾರಿಯ ತುಂಬಾ ಬರೀ ಗಂಡಸರು, ಕುಡಿದವರು ಗಲಾಟೆ ಮಾಡುತ್ತಿದ್ದರು. ಎಲ್ಲರ ಮಧ್ಯದಲ್ಲಿ ಈ ಹುಡುಗಿ ಒಬ್ಬಳೇ ಇದ್ದಳು. ಅವಳನ್ನು ನೋಡಿ ನನಗೆ ಪಿಚ್ಚೆನಿಸಿತು. ಎಲ್ಲರ ಬಳಿ ಹೋಗಿ “ಅಂಕಲ್‌, ಹೂ ತಗೊಳ್ಳಿ’ ಎಂದು ಅಂಗಲಾಚುತ್ತಿದ್ದಳು. ಅಲ್ಲೊಬ್ಬ ವ್ಯಕ್ತಿ- “ದಿನಾ ನಿಂದು ಇದೇ ಗೋಳು. ಮಾಡೋಕೆ ಏನೂ ಕೆಲ್ಸಾ ಇಲ್ವಾ?’ ಎಂದು ಬೈದು ಕಳಿಸಿದನು. ನಂತರ ನನ್ನ ಬಳಿ ಒಂದು, “ಅಕ್ಕಾ, ಪ್ಲೀಸ್‌ ಹೂ ತಗೊಳ್ಳಿ’, ಎಂದಾಗ ಅವಳ ಕಣ್ಣಲ್ಲಿ ನೀರಿತ್ತು. ನಾನು ಏನೂ ಮಾತನಾಡದೆ 10 ರೂಪಾಯಿಗೆ ಹೂ ತಗೊಂಡೆ. ಆದರೆ ಅವಳು “ಅಕ್ಕ, ಎಲ್ಲವನ್ನೂ ತೆಗೆದುಕೊಳ್ಳಿ. ನಾನು ಬೇಗ ಮನೆಗೆ ಹೋಗ್ಬೇಕು’ ಅಂದಳು. ನಾನು ಇಷ್ಟು ಹೂನ ಅವಶ್ಯಕತೆ ನನಗಿಲ್ಲಮ್ಮ ಅಂದ ಕೂಡಲೇ ಮತ್ತೂಬ್ಬ ವ್ಯಕ್ತಿ ಬಂದು 100 ರೂಪಾಯಿ ಕೊಟ್ಟು ಬುಟ್ಟಿ¿åಲ್ಲಿದ್ದ ಅಷ್ಟೂ ಹೂವನ್ನು ತೆಗೆದುಕೊಂಡು ಹೇಳಿದರು- “ಈಗ ಹೋಗು ಮನೆಗೆ’. 

ನಾನು ಅವಳನ್ನು ತಡೆದು, “ಯಾಕೆ ಇಷ್ಟು ತಡರಾತ್ರಿಯಾದರೂ ಹೂ ಮಾರುತ್ತಿದ್ದೀಯಾ?’ ಎಂದು ಕೇಳಿದಾಗ “ಅಮ್ಮ ಕೊಟ್ಟ ಹೂವನ್ನು ಪೂರ್ತಿಯಾಗಿ ಮಾರಿಕೊಂಡು ಹೋಗದಿದ್ದರೆ ಮನೆಗೆ ಸೇರಿಸುವುದಿಲ್ಲ. ಇದರಿಂದ ಬಂದ ದುಡ್ಡಿನಿಂದಲೇ ನಾವು ಜೀವನ ನಡೆಸಬೇಕು. ನನ್ನ ವಿದ್ಯಾಭ್ಯಾಸವೂ ಹೂ ಮಾರಿದ ಹಣದಿಂದಲೇ ನಡೆಯಬೇಕು’ ಎಂದ ಹುಡುಗಿ ಹೂ ಖಾಲಿಯಾದ ಸಂತಸದಿಂದ ಮನೆಯ ಕಡೆಗೆ ಓಡುವವಳಂತೆ ನಡೆದುಹೋದಳುಗೋಡಿದಳು.

ಒಂದು ಕ್ಷಣಕ್ಕೆ ಮನಸ್ಸಿನಲ್ಲಿ ಒಂಥರಾ ನೋವು. ಅಷ್ಟು ಚಿಕ್ಕವಳು, ರಾತ್ರಿ ಒಂಭತ್ತೂವರೆಯವರೆಗೆ ಬಸ್‌ ನಿಲ್ದಾಣದಲ್ಲಿ ಹೂ ಮಾರುವುದು, ಅದೂ ಅಲ್ಲಿ ಹೆಚ್ಚಾಗಿ ಕುಡುಕರು, ಪುಂಡರು ಇರುವ ಸ್ಥಳ. ಇದೆಲ್ಲ ಗೊತ್ತಿದ್ದರೂ ಆಕೆ ನಿರ್ಲಿಪ್ತಳಂತೆ ಹೂ ಮಾರುತ್ತಿದ್ದುದನ್ನು ಕಂಡಾಗ, ಯಾರಿಂದ ಬೇಕಾದರೂ, ಯಾವ ಹೊತ್ತಿನಲ್ಲಿ ಬೇಕಾದರೂ, ಎಂಥ ಕೆಲಸವನ್ನಾದರೂ ಮಾಡಿಸುವ ಶಕ್ತಿ ಹಸಿವು ಮತ್ತು ಬಡತನಕ್ಕಿದೆ ಎಂದುಕೊಂಡೆ.

ತ್ರಿವೇಣಿ ಎಚ್‌. ಜಿ., ಗೌರಿಬಿದನೂರು

ಟಾಪ್ ನ್ಯೂಸ್

1-wdsad

I.N.D.I.A ಕೂಟದಲ್ಲಿ ವರ್ಷಕ್ಕೆ ಒಬ್ಬರನ್ನು ಪ್ರಧಾನಿಯನ್ನಾಗಿಸಲು ಚಿಂತನೆ: ಅಣ್ಣಾಮಲೈ

1-wwwqe

HSC PARALI; ಲಕ್ಷದ್ವೀಪದಿಂದ ಮಂಗಳೂರಿಗೆ ಆಗಮಿಸಿದ ಹೈ ಸ್ಪೀಡ್ ಪರಲಿ

1-qweqweq

CNG ಇಂಧನ ನಿರಂತರ ಪೂರೈಕೆಗೆ ಕೇಂದ್ರಕ್ಕೆ ಯಶ್ ಪಾಲ್ ಸುವರ್ಣ ಮನವಿ

ಸಿ.ಟಿ.ರವಿ

Belagavi; ಪ್ರಜ್ವಲ್ ಪ್ರಕರಣವು ಚುನಾವಣೆಗೆ ಪ್ರಭಾವ ಬೀರುತ್ತದೆ: ಸಿ.ಟಿ.ರವಿ

1-wqqweqwe

BJP 200 ಸೀಟು ದಾಟುವುದು ಕಷ್ಟ: ಗೋವಾದಲ್ಲಿ ಶಶಿ ತರೂರ್

1-aaa

Prajwal Revanna ವಿದೇಶಕ್ಕೆ ತೆರಳಲು ಕ್ಲಿಯರೆನ್ಸ್ ಕೇಳಿಲ್ಲ: ವಿದೇಶಾಂಗ ಸಚಿವಾಲಯ

BJP 2

UP; ಬ್ರಿಜ್ ಭೂಷಣ್ ಪುತ್ರನನ್ನು ಕಣಕ್ಕಿಳಿಸಿದ ಬಿಜೆಪಿ: ರಾಯ್ ಬರೇಲಿಯಿಂದ ಸಚಿವ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Kamalapur: ಜಾತಿ ನಿಂದನೆ ಕೇಸ್‌ಗೆ ಹೆದರಿ ಯುವಕ ಆತ್ಮಹತ್ಯೆ

Kamalapur: ಜಾತಿ ನಿಂದನೆ ಕೇಸ್‌ಗೆ ಹೆದರಿ ಯುವಕ ಆತ್ಮಹತ್ಯೆ

1-wqqwqw

Congress ಸರಕಾರದಿಂದ ದಲಿತರ ಮತ ಮತ್ತು ಯೋಜನೆ ದುರುಪಯೋಗ: ನಾರಾಯಣಸ್ವಾಮಿ

1-wdsad

I.N.D.I.A ಕೂಟದಲ್ಲಿ ವರ್ಷಕ್ಕೆ ಒಬ್ಬರನ್ನು ಪ್ರಧಾನಿಯನ್ನಾಗಿಸಲು ಚಿಂತನೆ: ಅಣ್ಣಾಮಲೈ

1-wwwqe

HSC PARALI; ಲಕ್ಷದ್ವೀಪದಿಂದ ಮಂಗಳೂರಿಗೆ ಆಗಮಿಸಿದ ಹೈ ಸ್ಪೀಡ್ ಪರಲಿ

Gujjadi: ಆವರಣವಿಲ್ಲದ ಬಾವಿಗೆ ಬಿದ್ದು ವ್ಯಕ್ತಿ ಸಾವು

Gujjadi: ಆವರಣವಿಲ್ಲದ ಬಾವಿಗೆ ಬಿದ್ದು ವ್ಯಕ್ತಿ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.